ಪ್ರಾರಂಭ ಪದದ ಹುಡುಕು

(33) (56) (44) (18) (15) (4) (1) (0) (77) (59) (0) (17) (2) (2) ಅಂ (17) ಅಃ (17) (153) (1) (50) (3) (1) (24) (1) (60) (0) (0) (0) (0) (4) (0) (0) (57) (1) (61) (19) (190) (112) (4) (110) (47) (178) (46) (74) (0) (25) (96) (216) (2) (177) (136) (0)
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ -ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ 1ಒಡಲ ಜಾಗಟೆಯ ಮಾಡಿ ಮಿಡಿವಗುಣಿ ನಾಲಗೆಯ ಮಾಡಿಒಡನೆ ಢಣ ಢಣ ಢಣ ಢಣ ಎಂದುಕುಣಿದು ಚಪ್ಪಳಿಕ್ಕುತ 2ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದುಕಂತುಪಿತ ಪುರಂದರವಿಠಲ ಪರದೈವವೆಂದು 3
--------------
ಪುರಂದರದಾಸರು
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3
--------------
ಪುರಂದರದಾಸರು
ಡಿಂಗುಡಿಂಗಾಯ್ತು ಶ್ರೀಹರಿಸೇವೆ ಪ.ರಂಗರಾಯನ ಚರಣಂಗಳ ಸೇವಿಪಡಿಂಗರಿಗೆಲ್ಲ ಸುಮಂಗಲವಾಯ್ತು 1ಎಲ್ಲಿ ಪೋದರು ಭಯವಿಲ್ಲದ ತೆರನಾಯ್ತುಫುಲ್ಲನಾಭನ ದಯದಲ್ಲಿದ್ದ ಕಾರಣ 2ಬದ್ಧವಾಗಿಹ ದಾರಿದ್ರಾವಸ್ಥೆಯಛಿದ್ರಿಸಿ ಹರಿದಯವಿದ್ದ ಕಾರಣದಿಂದ 3ಏನಾರಾಗಲಿ ಎಂತಾದರಿನ್ನೇನುಶ್ರೀನಿವಾಸನು ದಯ ತಾನೆ ಗೈದರಿಂದ 4ಮಾರಜನಕಲಕ್ಷ್ಮೀನಾರಾಯಣನೊಳುತೂರಿಯಾನಂದಕೆ ಸೇರಿದ್ದ ಕಾರಣ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಡೊಂಕುಬಾಲದ ನಾಯಕರೆನೀವೇನೂಟವ ಮಾಡಿದಿರಿ || ಪ.ಕಣಕ ಕುಟ್ಟುವಲ್ಲಿಗೆ ಹೋಗಿ |ಹಣಿಕಿ ಹಣಿಕಿ ನೋಡುವಿರಿ ||ಕಣಕ ಕುಟ್ಟೋ ಒನಕಿಲಿಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 1ಹುಗ್ಗಿ ಮಾಡುವಲ್ಲಿಗೆ ಹೋಗಿ |ತಗ್ಗಿ ಬಗ್ಗಿ ನೋಡುವಿರಿ ||ಹುಗ್ಗಿ ಮಾಡುವ ಸವಟಿಲಿ ಬಡಿದರೆ |ಕುಂಯ್ ಕುಂಯ್ ರಾಗವ ಮಾಡುವಿರಿ 2ಹಿರಿಯ ಬೀದಿಯಲಿ ಓಡುವಿರಿ |ಕರಿಯ ಬೂದಿಯಲಿ ಹೊರಳುವಿರಿ ||ಪುರಂದರವಿಠಲರಾಯನ ಈಪರಿಮರೆತು ಸದಾ ನೀವು ತಿರುಗುವಿರಿ 3
--------------
ಪುರಂದರದಾಸರು