ಪ್ರಾರಂಭ ಪದದ ಹುಡುಕು

(33) (56) (44) (18) (15) (4) (1) (0) (77) (59) (0) (17) (2) (2) ಅಂ (17) ಅಃ (17) (153) (1) (50) (3) (1) (24) (1) (60) (0) (0) (0) (0) (4) (0) (0) (57) (1) (61) (19) (190) (112) (4) (110) (47) (178) (46) (74) (0) (25) (96) (216) (2) (177) (136) (0)
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು
ಹೇಳಲಾಗದು ತತ್ವ ಹೇಳಲಾಗದು ಜ್ಞಾನಖೂಳಮೂಳರಾದ ಕುಹಕಿಗಳಿಗೆಪನಾರುತಿಹ ತೊಗಲನು ಕಡಿದನಾಯಿ ಮುಖದ ಮುಂದೆದಾರವಟ್ಟದಲಿ ತುಪ್ಪವ ನೀಡಲು ಅರಿವುದೆಘೋರಸಂಸಾರ ವಿಷಗಟ್ಟಾಗಿ ಹಿಡಿದವಗೆಸಾರಬೋಧೆಯನರಿಯಲು ತಿಳಿಯುವುದೇ1ಗೊಜ್ಜಲ ತೃಣವನು ತಿಂಬ ಗಾರ್ಧಭನ ಮುಂದೆಸಜ್ಜಿಗೆಯ ತಂದಿಡಲಿಕೆ ಅದನರಿವುದೆಲಜ್ಜೆಯಹ ನಾನಾ ಮೋಹ ಪಾಶಲಿಪ್ಪರಿಗೆಸಜ್ಜನ ಶಾಸ್ತ್ರವನೊರೆಯಲದು ತಿಳಿವುದೇ2ದೊಡ್ಡಕ್ಕಚ್ಚನೆ ಕುಡಿವ ಗೊಡ್ಡೆಮ್ಮೆಯ ಮುಂದಕೆಲಡ್ಡುಗೆಯ ತಂದಿಡಲಿಕೆ ಅದನು ತಿಳಿವುದೇದಡ್ಡ ಬುದ್ಧಿಯು ಬಲಿತು ದೊಡ್ಡನಾದವಗೆದೊಡ್ಡ ಚಿದಾನಂದ ಬ್ರಹ್ಮವು ತಿಳಿವುದೇ3
--------------
ಚಿದಾನಂದ ಅವಧೂತರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು
ಹೇಳೆಕಾಮಿನಿರಂಗಗೆ ಬುದ್ಧಿಯಹೇಳೆಕಾಮಿನಿರಂಗಗೆಪ.ಹೇಳಿದಂದದಿಕೇಳಿಕಾಲಿಗೆರಗುವಳಮ್ಯಾಲೆ ಕೋಪಿಸಿಕೊಂಡು ಬಾಲೇರ ನೆರೆವಂಗೆ ಅ.ಪ.ತನ್ನ ಮೈಗಂಪು ಕಸ್ತೂರಿಗಿಂದಧಿಕ ಕಂಡೆತನ್ನಧರದ ರಸಾಮೃತಗಿಂತ ಸವಿದುಂಡೆತನ್ನ ದಂತದ ಘಾಯಕೆ ಅಂಜದೆಕರಜನ್ನಟ್ಟಿಸಲು ಕುಚಕ್ಕೆ ಸುಂದರಿಯರನ್ನು ಮೆಚ್ಚಿದ ದಾನಕ್ಕೆ ಇನಿಯಳಿರೆಅನ್ಯರ ಮೋಹಿಪಗೆ ಕಲಿಮಾನವಗೆ 1ಸ್ನೇಹ ನೋಟಕೆ ಮೆಚ್ಚಿ ಸುಖಭಾರ ತನಗಿತ್ತೆಬಾ ಹೆಣ್ಣೆ ಎನಲು ಭಾಗ್ಯಾಂಬುಧಿಗೊಶವಾದೆತಾ ಹೊನ್ನಾಸೆಗೆ ಮಂಚದಿ ಘಾತಿಸಿದರೆನೇಹಿಯ ಬೆರದೆಕೆಲದಿಕರಾಳ ಚೇಷ್ಟೆಗೆನೇಹದಾರದಲೊಪ್ಪಿದೆ ಎನ್ನನು ಬಿಟ್ಟುಬಾಹು ಜೋರಿನಬುದ್ಧವಾಜಿಯಲ್ಲೇರ2ಚಪಲತೆಯಲ್ಲಿಕಪಟವಿದ್ಯದಲಿ ಭೂಪಕುಪಿತಾಶಾಯಿಲ್ಲ ಹೆಜ್ಜೆ ಹೆಜ್ಜೆಗೆ ಕಥೆಯಿಲ್ಲನೃಪಕೃಷ್ಣ ಸಲಹೆಂದರೆ ಎನ್ನಿಂದಾದಅಪರಾಧ ಕ್ಷಮಿಸೆಂದರೆ ಪ್ರಸನ್ವೆಂಕಟಕೃಪಿ ಧರ್ಮಿಯೆಂದರೆ ಇದಕೆ ತಾವಿಪರೀತ ತಿಳುಹನಂತೆ ಹಾಗಲ್ಲಂತೆ 3
--------------
ಪ್ರಸನ್ನವೆಂಕಟದಾಸರು
ಹೊಡೆಯೊ ನಗಾರಿ ಮೇಲೆ ಕೈಯ |ಆನಂದಮದವೇರಿ ಗಡಗಡ ಪ.ಮೃಡಸಖನಪಾದ ಬಿಡದೆ ಭಜಿಂಸರಫ |ಬಿಡಿಸಿ ಕಾಯ್ವ ಜಗದೊಡೆಯ ಶ್ರೀ ಹರಿಯೆಂದು 1ವೇದಗಮ್ಯ ಸಕಾಲಾರ್ತಿನಿವಾರಕ |ಮೋದವೀವ ಮಧುಸೂದನ ದೊರೆಯೆಂದು 2ಗಾನಲೋಲ ತನ್ನ ಧ್ಯಾನಿಸುವರನೆಲ್ಲ |ಮಾನದಿಂದ ಕಾಯ್ವ ಶ್ರೀನಿಧಿ ಪರನೆಂದು 3ನಿಷ್ಠೆಯಿಂದಲಿ ಮನಮುಟ್ಟಿ ಭಜಿಸುವರ |ಕಷ್ಟವ ಕಳೆವ ಶ್ರೀ ಕೃಷ್ಣನು ಪರನೆಂದು 4ಈ ಪೃಥಿವಿಯೊಳಗೆ ವ್ಯಾಪಕನಾಗಿಪ್ಪ |ಶ್ರೀಪತಿ ಪುರಂದರವಿಠಲನು ಧಣಿಯೆಂದು 5
--------------
ಪುರಂದರದಾಸರು
ಹೊಂದು ಹೊಂದು ಹರಿಪಾದಹೊಂದು ಮನವೆ ಪ.ಮಾತುಳನಚಂದನಪ್ರೀತಿಲಿ ಕೊಟ್ಟು ಮನಸೋತವಳ ಅಂಗಪುನೀತ ಮಾಡಿದನಂಘ್ರಿ 1ಅಜಮಿಳ ಸಹಜ ತನುಜನ ಕರೆಯಲಾಗಿನಿಜ ಭಟರಟ್ಟಿದ ಸುಜನೇಶನಂಘ್ರಿಯ 2ಹೊಂದಿದರವಗುಣ ಕುಂದುನೋಡದೆಹೊರೆವತಂದೆ ಪ್ರಸನ್ವೆಂಕಟೇಂದ್ರನ ಅಂಘ್ರಿಯ 3
--------------
ಪ್ರಸನ್ನವೆಂಕಟದಾಸರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು
ಹೊರ ಹೋಗಿ ಆಡದಿರೊ ಹರಿಯೆ-|ಎನ್ನ ದೊರೆಯೆ ಪಮನೆಯೊಳಗಾಡುವುದೆ ಚೆಂದ - ನೆರೆ-|ಮನೆಗಳಿಗೇಕೆ ಪೋಗುವೆಯೊ ಮುಕುಂದ ||ವನಿತೆಯರು ಮೋಹದಿಂದ - ನಿನ್ನ |ಮನವಸಹರಿಸಿಕೊಂಬುವರೋ ಗೋವಿಂದ 1ಏನು ಬೇಡಿದರೂ ನಾ ಕೊಡುವೆ-ಕೆನೆ-|ಬೆಣ್ಣೆ ಕಜ್ಜಾಯವ ಕೈಯೊಳಗಿಡುವೆ ||ನಿನ್ನ ಗುಣಗಳನು ಕೊಂಡಾಡುವೆ - ನಿನಗೆ |ಚಿನ್ನ ರನ್ನದ ಅಲಂಕಾರಗಳಿಡುವೆ 2ಹೊಲಸು ಮೈಯವನೆನ್ನುವರೊ-ದೊಡ್ಡ |ಕುಲಗಿರಿಯನ್ನು ಪೊತ್ತವನೆನ್ನುವರೊ ||ಬಲುಕೇಶದವನೆನ್ನುವರೊ-ಆ |ಎಳೆಯನನೆತ್ತಿದ ಕುರೂಪಿಯೆಂಬುವರೊ 3ಭಿಕ್ಷೆಬೇಡಿದೆ ಎಂಬುವರೊ-ಭೂಮಿ |ರಕ್ಷಿಪ ರಾಯರ ಕದಡಿದೆಯೆಂಬುವರೊ ||ಲಕ್ಷ್ಮಿಯ ಕಳೆದೆಯೆಂಬುವರೊ-------ವೈ-|ಲಕ್ಷಣ ಬೆಣ್ಣೆಯ ಕದ್ದೆಯೆಂಬುವರೊ 4ಮಾನಬಿಟ್ಟವನೆನ್ನುವರೊ-ಮಹಾ |ಹೀನರ ಬೆನ್ನಟ್ಟಿ ಹೋದನೆಂಬುವರೊ ||ದಾನವವೈರಿಯೆಂಬುವರೊ-ಸುರ-|ರಾನತ ಪುರಂದರವಿಠಲನೆಂಬುವರೊ 5
--------------
ಪುರಂದರದಾಸರು
ಹೊರಿಯೊ ವಿಪಗಮನ ಮಂಗಳಶರಧಿಜಾರಮಣ ಪ.ಸುರಕಾರ್ಯಕೆ ಪಕ್ಷ ಶಾರ್ವರಿಚರವರ ಶಿಕ್ಷಧರಣಿಜ ಹರ ಸತ್ರಾಜಿತಜಾವರಶರಣಾಗತಭಟದುರಿತವಿದೂರ1ಪೌಂಡ್ರಕವೈರಿ ನಿಜ ಕೃಷ್ಣಪಾಂಡವರ ತಾರಿಶುಂಡಾಲಚಾಣೂರ ಸಂಹಾರಿಖಾಂಡವವನ ದಹಕಾರಿ 2ವಿದುರೋದ್ಧವ ಪೋಷಸುಖತೀರ್ಥಹೃದಮಾನಸ ಹಂಸಪದುಮನಾಭ ಪ್ರಸನ್ವೆಂಕಟೇಶಪಾಹಿಸದಮಲಸದನ ಕ್ಷೀರಾರ್ಣವಶಾಯಿ 3
--------------
ಪ್ರಸನ್ನವೆಂಕಟದಾಸರು
ಹೊಲೆಯ ಹೊರಗಹನೆ ಊರೊಳಗಿಲ್ಲವೆಸಲೆ ಶಾಸ್ತ್ರವನು ತಿಳಿದು ಬಲ್ಲವರು ನೋಡಿ ಪ.ಭಾಳದಲಿ ಭಸಿತ ಭಂಡಾರವಿಡದವ ಹೊಲೆಯಕೇಳಿ ಸಲೆ ಶಾಸ್ತ್ರವನು ತಿಳಿಯದವ ಹೊಲೆಯಆಳಾಗಿ ಅರಸರಿಗೆ ಕೈಮುಗಿಯದವ ಹೊಲೆಯಸೂಳೆಯರ ಕೊಡುವಾತನೇ ಶುಧ್ಧ ಹೊಲೆಯ 1ಇದ್ದ ಧನ ದಾನ - ಧರ್ಮವ ಮಾಡದವ ಹೊಲೆಯಕದ್ದು ತನ್ನೊಡಲ ಹೊರೆವಾತನೇ ಹೊಲೆಯಬದ್ಧವಹ ನಡೆ - ನುಡಿಗಳಿಲ್ಲದಿದ್ದವ ಹೊಲೆಯಮದ್ಧಿಕ್ಕಿ ಕೊಲುವವನೆ ಮರಳು ಹೊಲೆಯ 2ಆಶೆಯನು ತೋರಿ ಭಾಷೆಗೆ ತಪ್ಪುವವ ಹೊಲೆಯಲೇಸು ಉಪಕಾರಗಳನರಿಯದವ ಹೊಲೆಯಮೋಸದಲಿ ಪ್ರಾಣಕ್ಕೆ ಮುನಿಯುವವನೇ ಹೊಲೆಯಹುಸಿಮಾತನಾಡುವವನೇ ಸಹಜ ಹೊಲೆಯ3ಕೊಂಡ ಋಣವನು ತಿರುಗಿ ಕೊಡಲರಿಯದವ ಹೊಲೆiÀುಭಂಡ ಮಾತುಳಾಡುವವನೆ ಹೊಲೆಯಗಂಡ - ಹೆಂಡಿರ ನಡುವೆ ಭೇದಗೈವವ ಹೊಲೆಯಹೆಂಡರಿಚ್ಚೆಗೆ ನಡೆವ ಹೇಡಿ ಹೊಲೆಯ 4ಪರಧನಕೆ ಪರಸತಿಗೆ ಅಳುಪಿದವನೇ ಹೊಲೆಯಗುರು ಹಿರಿಯರನು ಕಂಡು ಎರಗದಿದ್ದವ ಹೊಲೆಯಅರಿತು ಆಚಾರವನು ಮಾಡದಿದ್ದವ ಹೊಲೆಯಪುರಂದರವಿಠಲನನು ನೆನೆಯದವ ಹೊಲೆಯ 5
--------------
ಪುರಂದರದಾಸರು
ಹೊಲೆಯ ಹೊಲತಿ ಇವರವರಲ್ಲಹೊಲಗೇರಿಯೊಳು ಹೊಲೆಯ ಹೊಲತಿಯಿಲ್ಲ ಪ.ಸತಿಯಳ ವಶನಾಗಿಜನನಿ - ಜನಕರಿಗೆಅತಿ ನಿಷ್ಟುರ ನುಡಿವವ ಹೊಲೆಯಸುತರ ಪಡೆದು ವಾರ್ಧಿಕ್ಯ ಮದವೇರಿಪತಿದ್ಟೇಷ ಮಾಡುವಳೆ ಹೊಲತಿ 1ಗುರುಗಳಲ್ಲಿ ವಿದ್ಯೆಗಳನು ಕಲಿತುಹಿರಿಯರ ಬಳಲಿಸುವವ ಹೊಲೆಯಪರಪುರಷಗೊಲಿದು ತನ್ನ ಪುರುಷನವಿರಸವ ಮಾಡುವ ಕುಲಕೇಡಿತೆ ಹೊಲತಿ 2ಒಡೆಯನನ್ನವನುಂಡು ಅಡಿಗಡಿಗೆ ಬಾಯ್ಬಿಡದೆ ತರ್ಕಿಸುವ ಜಡ ಹೊಲೆಯಬಡತನ ಬಂದರೆ ಪುರುಷನ ರಚ್ಚೆಗೆಬಿಡದೆ ತಹಳೆ ಶುದ್ಧ ಹೊಲತಿ 3ನೂರೊಂದು ಕುಲ ಕುಂಬಿಪಾಕಕಟ್ಟುವಪರನಾರಿಯಲ್ಲಿ ವೀರ್ಯವಿಟ್ಟವ ಹೊಲೆಯಆರೊಳು ಕಲಹಾಪಸ್ಮಾರಿ ದುರ್ಮುಖಿಯು - ಕಠೋರಕುಮತಿ ಶುದ್ಧ ಹೊಲತಿ 4ಅಜನುತ ಪುರಂದರವಿಠಲನ ದಾಸರಭಜನೆಯ ದಾರಿಯ ಬಿಟ್ಟವ ಹೊಲೆಯನಿಜವರ್ಯರಾದ ಸಜ್ಜನರ ಪಾದಪದ್ಮವಭಜಿಸದಿರುವಳೆ ಶುದ್ಧ ಹೊಲತಿ 5
--------------
ಪುರಂದರದಾಸರು
ಹೋಗಿ ನೋಡುವ ಬನ್ನಿರಿ ಶ್ರೀ ಜಗದೀಶನಿಗೆಶ್ರೀನಿವಾಸನ ಸಾಗಿ ನೋಡುವ ಬನ್ನಿ ಬಾಗಿ ಪದ |ನಲಿಸದಿನೀಗಿಭವಕೇರಿದಿಭೋಗಿಶಯನಯೋಗಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಪರಮಭಕ್ತರಪಾಲನಸವ್ಯಸೂಕರಧರಣಿ ಜಯವರನ ||ಕೊರಳೊಳುಕೌಸ್ತುಭಶ್ರೀ ವತ್ಸಲಾಂಛನ |ಕರಿವರ ಭಯನಾಶನ || ಅಘಶೋಷಣ1ಕಾಮಕೋಟಿ ತೇಜನ ಅನಂತ ಜನ ಕಾಮಿತ ಫಲ ಪೂರ್ಣನ |ವಾಮಕರದಿ ಅಕ್ಷಮಾಲಾಧರಸಂಭ್ರಮಪೂರಿತ ಶೀಲನ | ಶ್ರೀ ಲೋಲನ2ವಕ್ಷಸ್ಥಳದಿ ಶಿರಿಯ ಧರಿಸಿಹ ನಿಜ........... |ಮೋಕ್ಷ.................ಲಕ್ಷ ಅಲಕ್ಷ ವಿಲಕ್ಷ ಸುಲಕ್ಷ ನಿಲಕ್ಷ ||ಸಾಕ್ಷೀ ಹರಿಯ ಮುರಾರಿಯ3ನೀಲಮೇಘಶ್ಯಾಮನ ಸುಜನರ ಅನುಕೂಲ ಸರಡಿಗಿವಾಸನ|ಕಾಲಕರ್ಮಾತೀತಕಲಿಮಲಜಲ್ಪ | ನಿರ್ಮೂಲ |ನಾಶನ ಪಾವನ || ಶ್ರೀ ದೇವನ4ಪಂಕಜೋದ್ಭವನಯ್ಯನ ಮುನಿಜನಹೃತ್ಪಂಕಜಆಳ್‍ರೂಪನ ಶಂಖಚಕ್ರಧರಕಟಿಪೀತಾಂಬರಶಂಕರಾಂತರಂಗನ | ಸುಸಂಗನ5
--------------
ಜಕ್ಕಪ್ಪಯ್ಯನವರು
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗದುಶ್ಚಿತ್ತ ವೃತ್ತಿಯನೀಗಿನಿಶ್ಚಿತನಾಗಿಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ 1ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀನಳಿನನೇತ್ರನ್ನ ನಾಮಾವಳಿಗಳಿಂದಸಲೆ ಅವನಂಘ್ರಿಕಮಲಕರ್ಪಿಸದೆ ಸದಾಲಲನೆಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ2ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆಅತಿಥÀರೊಳೀತನ ನಂಟನೆಂದರೆಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆಗತಿಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ3
--------------
ಪ್ರಸನ್ನವೆಂಕಟದಾಸರು
ಹ್ಯಾಂಗಾದರು ದಾಟಿಸೊ ಭವಾಬ್ಧಿಯಹ್ಯಾಂಗಾದರು ದಾಟಿಸೊ ಪ.ಗಂಗಾಜನಕನಾ ನಿನ್ನವನೆಂದುಹ್ಯಾಂಗಾದರು ದಾಟಿಸೊ ಅ.ಪ.ನಗುತ್ತಾದರು ಉಂಡೆ ಅಳುತ್ತಾದರು ಉಂಡೆಬಗೆ ಬಗೆ ದುರ್ಜನ್ಮ ಸುಖದು:ಖವತಗೆ ಬಗೆ ನಿರಯದಿ ಹೊರಳ್ಯಾಡುವನ ತಂದುಮಿಗಿಲಾದ ದೇಹವನಿತ್ತೆ ಇನ್ನೆಲೆ ಕೃಷ್ಣ 1ತಿಳಿದಾದರು ಮಾಡಿ ತಿಳಿಯದಾದರು ಮಾಡಿಹಲವು ದೋಷದ ರಾಶಿ ಒದಗಿಸಿದೆಬಲುತಪ್ಪು ನೋಡದೆ ನಾಮಾಮೃತವನಿತ್ತುಸಲಹುವ ಮನಬಲ್ಲ ಎಲ ಎಲೋ ಮುಕುಂದ 2ಮಂದಮತಿಯುಗ್ರಾಹ ಅಂಧ ಕೂಪದಿ ಬಿದ್ದುಎಂದಿಗುಭೋಗಭೋಗಿಸಲಾಪೆನೆತಂದೆ ಪ್ರಸನ್ನವೆಂಕಟಪತಿಗೊಲಿದುನಿಂದೆನ್ನ ಛಿದ್ರವನೆಣಿಸುವರೆ ರಂಗ 3
--------------
ಪ್ರಸನ್ನವೆಂಕಟದಾಸರು
ಹ್ಯಾಗಾಹದು ಭವರೋಗಿಗಾರೋಗ್ಯಮ್ಯಾಗೆ ಮ್ಯಾಗಪಥÀ್ಯವಾಗುತಿದೆ ಕೃಷ್ಣ ಪ.ಗುಜ್ಜುಗಿರಿವ ಆಶಾಲಕ್ಷಣ ಚಳಿಲಜ್ಜೆಗೆಡಿಸುತಿವೆ ಗದಗದಿಸಿವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದಗಜ್ಜರಿಕಾಯಿ ದಣಿಯೆ ಮೆಲುವವಗೆ 1ಮೊರಮೊರಸು ಮೂರ್ಪರಿ ಜ್ವರ ದಾಹದಿನಿರಸನ ರಸನಾಯಿತಿದರೊಳಗೆಅರಿಕಿಲ್ಲದಹ ಗಾರಿಗೆ ಕಾಮನಹರಿಬದನೆಕಾಯುಂಬುವಗೆ 2ಕಾಮಿನಿನೋಟದ ಕಾಮಾಲೆಯಾಯಿತುನೇಮದಿ ಸೊಬ್ಬೇರಿತು ಮೈಯಪ್ರೇಮದ ಚಕ್ಷುದೋಷ್ಯಾತರಲೈದದುಕಾಮತಪ್ತ ವರೇಣ್ಯವಗೆ 3ನಮ್ಮದು ನಮ್ಮದು ಕೋ ಕೋ ಎನ್ನುತಕೆಮ್ಮಿಗೆ ಖುಳಖುಳಸಿತುಕಾಯಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯಹೆಮ್ಮೂಲಂಗಿಯ ತಿನುವವಗೆ 4ಜಗಸಟೆಯೆಂಬಗೆ ಸಂಗ್ರಹಣಿಯು ಅವನಿಗೆ ಪಾಂಡಿತ್ಯ ಪಾಂಡುರೋಗವಿಗಡಕುತರ್ಕ ಚಿಕಿತ್ಸದಿ ನೂಕುನುಗ್ಗೆ ತೊಂಡೆಕಾಯಿ ಸವಿವವಗೆ 5ಅಂಜದೆ ಸಲ್ಲದ ನಿಷಿಧಗÀಳುಂಡರೆನಂಜೇರದೆ ಬಿಡುವುದೆ ಬಳಿಕಾಕಂಜಾಕ್ಷನ ಬಿಟ್ಟಿತರ ಸುರಾಸುರರೆಂಜಲು ಮೈಲಿಗೆ ಬಿಡದವಗೆ 6ಹೃದ್ರೋಗವು ಹೋಗುವುದೆ ನಿಂಬ ಹರಿದ್ರದ ಹುಡಿ ತಲೆಗೊತ್ತಿದರೆನಿದ್ರಿಲ್ಲದೆಕರಪಂಜಲಿ ಕುಣಿದರೆರುದ್ರದುರಿತಹೊಡೆಯದೆ ಬಿಡುವುದೆ7ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತುಅಂತ್ಯೌಪದ ಯಮಪುರದೊಳಗೆಎಂತಾದರೆ ಮಾಡಿಸಿ ಕೊಂಡಳುತಿಹಭ್ರಾಂತ ಕಳಿಂಗದ ಪ್ರಿಯದವಗೆ 8ಮನ್ವಂತರ ಕಲ್ಪಾಂತರ ಈ ಕ್ಲೇಶಾನ್ವಯವೆಗ್ಗಳಭೋಗಿಸುತ ಪ್ರಸನ್ವೆಂಕಟಪತಿಗುರುಮಧ್ವೇಶಧನ್ವಂತ್ರಿಯ ಪದ ವಿಮುಖನಿಗೆ 9
--------------
ಪ್ರಸನ್ನವೆಂಕಟದಾಸರು