ಸಂಜೀವ ಬಾ ಈಗ ನಿನ್ನ ಲಾಹ
ಭಾವವ ತೋರಿ ನೀಡೆನಗೆ ಭೋಗ ಪ.
ಜಾನಕಿವರ ರಾಮ ರಾಜೇಂದ್ರನಡಿಯ ಸೇ-
ವಾನು ಸಂಧಾನದಿ ಪಯೋನಿಧಿಯ ದಾಟಿ ದು-
ರ್ಮಾನಿ ದಶಕಂಧರನ ಧಿಕ್ಕರಿಸಿ ವನಸಹಿತ
ದಾನವರನೆಲ್ಲ ನುಗ್ಗಿಸಿ ಮುದ್ರಿಕೆಯ
ಮಾನನಿಧಿಗಿತ್ತು ವಂದಿಸಿದೆ ಮಣಿವರವ
ಶ್ರೀನಿವಾಸನ ಪಾದಕರ್ಪಿಸುತ ನಲಿದೆ 1
ಕಟ್ಟಾಜ್ಞೆಯಿಂದ ಕಂಗೆಟ್ಟ ನೃಪವರನು ದಯಾ-
ದೃಷ್ಟಿಯಿಂದಲಿ ನೋಡಿ ದುಷ್ಟ ಬಾರ್ಹದ್ರಥನ
ಮೆಟ್ಟಿ ಕಿಮ್ಮೀರ ಬಕ ಧಾರ್ತರಾಷ್ಟ್ರಾದಿಗಳ
ಕುಟ್ಟಿ ಗದೆಯಿಂದ ಪುಡಿಗೈದೆ ಕ್ರೋಧವಶ
ರಟ್ಟುಳಿಯ ನಡುಗಿಸುತ ಹ್ಯೊದೆ ವಾ-
ಶಿಷ್ಟ ಕೃಷ್ಣಾನಂದನನೆ ತಾತ್ಸರವ್ಯಾಕೆ ಬರಿದೆ2
ಭಾಗೀರಥೀ ಜನಕ ಭಕ್ತಜನ ಭಯಮೋಕ
ನಾಗಗಿರಿನಾಥನನು ನೆಲೆದೋರು ಗತಶೋಕ
ಶ್ರೀಗುರುವರಾನಂದತೀರ್ಥಾರ್ಯನೀ ಪರಿಯ
ನಿಖಿಳ ಪುರುಷಾರ್ಥ ನಿನ್ನಡಿಗೆ
ಬಾಗಿ ಬೇಡುವೆನಯ್ಯ ಭಾರತಕೃತಾರ್ಥ 3