ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿ ಬಾರದೇಕೋ ನಿನ್ನ ಕಂದನ ಮ್ಯಾಲೆ ಪ ಶರಣು ನಿನ್ನ ಚರಣ ಸೇವೆಯೊಳಿರಿಸೊಯೆನ್ನನೂ ಅ.ಪ ಅರುಹುಯೆಂಬೋದೆನ್ನಾ ಮನದೊಳ್ ಇರಿಸಿ ಪಾಲಿಸೈ 1 ತರವೆ ನಿನ್ನ ಕರದೊಳಿಂದು ಬಿರುದು ಹೋಲಿಸೈ 2 ಪರಮಗುರುವು ತುಲಶಿರಾಮ ಧೊರೆಯೊಳಿರುವೆನೈ 3 ಇರಿಸಿ ಪಾಲಿಸೆಂದು ಬಂದು ಮೊರೆಯ ನಿಟ್ಟನೈ 4
--------------
ಚನ್ನಪಟ್ಟಣದ ಅಹೋಬಲದಾಸರು