ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶನ ಭಜಿಸೋ ಹೇ ಮನಸೆ ನೀ ಕುಂದುವ ಜಗಮಾಯದಂದಕ್ಕೆ ಮೋಹಿಸದೆ ಪ ಅರಿವಿನೀಸಮಯವ ಅರಲವ ಕಳೆಯದೆ ಹರಿಶರಣರವಚನ ಶ್ರವಣ ಮಾಡುತ ನೀ 1 ಮನುಷ್ಯ ಜನುಮದ ಫಲವ ನೆನೆಸೀನಿಜಜ್ಞಾನದಿ ವನಜನಾಭನ ಕತೆ ಮನನಮಾಡನುದಿನ 2 ಹೇಸಿಕೆಸಂಸಾರ ನಾಶನೆಂದರಿದು ನೀ ಶ್ರೀಶ ಶ್ರೀರಾಮನ ನಿಜಧ್ಯಾಸದಿಟ್ಟೆಡೆಬಿಡದೆ 3
--------------
ರಾಮದಾಸರು
ಈಸಬೇಕು ಇದ್ದು ಜಯಿಸಬೇಕುಹೇಸಿಕೆಸಂಸಾರದಲ್ಲಿ ಲೇಶ ಆಶೆ ಇಡದ ಹಾಗೆಪ.ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳುಸ್ವಾಮಿರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ 1ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿಮೀರಿ ಆಶೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ 2ಮಾಂಸದಾಶೆಗೆ ಮತ್ಸ್ಯವು ಸಿಲುಕಿ ಹಿಂಸೆ ಪಟ್ಟಪರಿಯೊಳುಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ 3
--------------
ಪುರಂದರದಾಸರು
ವಾಸುದೇವನ ಗುಣೋಪಾಸನೆತಾರಕxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಹೇಸಿಕೆಸಂಸಾರ ಮಾರಕವೋ ಪಕ್ಲೇಶದ ಭವದೊಳಾಯಾಸಿ ಬಡದೆಹರಿದಾಸರ ದಾಸ ನೀನಾಗೋ ಭವನೀಗೋ ಅ.ಪಥಳಥಳ ದೇಹವ ತೊಳೆದು ನಾಮವಹಚ್ಚಿಛಳಿಗಂಜದೆ ನಿತ್ಯಜಲದಿ ಮುಳುಗಿಕರ್ಮಒಳಗೆ ಹೊರಗೆ ಎಲ್ಲಾ ಹೊಳೆವ ಹರಿಯಮೂರ್ತಿತಿಳಿಯದೆ ಯಮನಿಗೆ ಸಿಲುಕುವೆಯಲ್ಲೋ 1ಡೊಂಬನಂದದಿ ಡಾಂಬಿಕ ಕರ್ಮದ ಆ -ಅಂಬರಹಾಸಿಟ್ಟು ಕುಂಭದಿ ನೀರೆರೆದುಬಿಂಬನುಂಡನು ತೆಗಿ ಎಂಬುವಿಯಲ್ಲೋ 2ಕರ್ತಶಾಸ್ತ್ರಾರ್ಥತ್ವದ ಅರ್ಥ ತಿಳಿಯದೆ ಜೀವ -ಅತ್ತಣದ್ವಾರ್ತೆಯ ಮರೆತಿರುವೀ 3ಒಡೆಯನೆನುತನಿತ್ಯಪೊಡವಿತಳದಿ ಬಹುಧೃಢಮನದಲಿ ನೇಮಹಿಡಿದು ಮಾಡಿದಕರ್ಮಜಡಜನಾಭನಪಾದದೃಢ ಮಾಡಲೊಲ್ಲೆ4ಪ್ರೀತಿಯಾಗುವಕರ್ಮವ್ರಾತಮಾಡದೆನೀಗಿ5
--------------
ಗುರುಜಗನ್ನಾಥದಾಸರು