ಒಟ್ಟು 303 ಕಡೆಗಳಲ್ಲಿ , 52 ದಾಸರು , 244 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಳವು ಕಲಿಸಿದರ್ಯಾರೊ ನಿನಗೆ ಕಂಜನಾಭನೆ ಪ ಕೇರಿಕೇರಿ ಮನೆಗಳಲ್ಲಿ ಕ್ಷೀರ ಗಡಿಗೆಯನೋಡಿವರೇನಲ್ಲಿ ಚೋರತನವ ನೀ ಕಲಿತಿಹುದೆಲ್ಲಿ ಜಾರನೆನಿಸಿಕೊಂಬುವುದು ಕೇಳಿ ಬಲ್ಲೆ 1 ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ ಚಟ್ಟಿಗಿಯ ಒಡೆದಾಕಳ ಕಣ್ಣಿ ಕಟ್ಟಿ ಜುಟ್ಟ ಇವರÀ ಮನೆ ಹೆಣ್ಣಿ ಗಿಟ್ಟು ಮಾಡುವರೆ ಕಣ್ಣು ಸೊನ್ನಿ2 ಬಡವರ ಮನೆ ಅನ್ನದಲಿಷ್ಟು ತುಡುಗುತನವ ನೀ ಮಾಡುವುದೆಷ್ಟು ಪಿಡಿಯರವರು ಬರುವುದತಿ ಸಿಟ್ಟು ಹಿಡಿದು ಹಾಕೋರು ನಿನಗೊಂದು ಪೆಟ್ಟು3 ಕಡೆದ ಬೆಣ್ಣೆ ಕಾಸಿದ ತುಪ್ಪ ಕೊಡುವೆನ್ಹಾಲು ನೀ ಕುಡಿಯದಲ್ಯಾಕೊ ಮಡದಿಯರ ಸರಿ ನಿನಗೇನು ಬೇಕೊ ವಾಕು 4 ಬಣ್ಣದ್ವಲ್ಲಿ ಛಾದರ ಹೊದ್ದು ಅಣ್ಣ ರಾಮರಲ್ಲ್ಯಾಡದೆ ಇದ್ದು ಹೆಣ್ಣು ಮಕ್ಕಳುಡುವ ಸೀರೆ ಕದ್ದು ಇನ್ನು ಮರನೇರುವುದೇನು ಮುದ್ದು 5 ನಂದಗೋಪನ ಮುಂದ್ಹೇಳಿ ಸಿಟ್ಟು ಇಂದು ಬಡಿಸುವೆ ಭೀಮೇಶ ಕೃಷ್ಣ ಮಂದಿ ಮಕ್ಕಳೊಳಗೆ ನೀನೆ ಶ್ರೇಷ್ಠ ಹಾ- ಗೆಂದು ಬೇಡಿ ಕೊಂಬುವುದೊ ನೀಡಿಷ್ಟ6
--------------
ಹರಪನಹಳ್ಳಿಭೀಮವ್ವ
ಎಲ್ಲ್ಯಾಡಿಲ್ಲಿಗೆ ಬಂದನೆ ಈತನು ಕೌ- ಸಲ್ಯಾದೇವಿಯ ಕಂದನೆ ಎಲ್ಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯೆ ಕಂದ ಫÀುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ ಪ ಸನಕಾದಿ ಸುರರ್ವಂದಿತ ಮಾಣಿಕ್ಯ ರತ್ನ ಪದಕ ಪಚ್ಛದಿ ಭೂಷಿತ ಜನಕ ಜಾನ್ಹವಿ ಜಾನಕಿ ರಾಮರಿಬ್ಬರು ವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆಲ್ಯಾಡಿಲ್ಲಿಗೆ ಬಂದನೆ 1 ನಾಸಿಕ ಭಂಗ ಮಾಡಿ ಮಾರೀಚನ್ವಧೆ ಮಂಡೋದರೀಪತಿ ಮರ್ದಕನಾಗಿದ್ದ ಬಂದಯೋಧ್ಯವನಾಳಿ ಭಕ್ತರ ಸಲಹೊ ದಾತ್ಯೆಲ್ಲ್ಯಾಡಿಲ್ಲಿಗೆ ಬಂದನೆ 2 ಬಿಲ್ಲುಪಿಡಿದು ನಿಂತನೆ ಭೀಮೇಶಕೃಷ್ಣ ಬಲ್ಲಿದ ಬಲವಂತನೆ ಕಲ್ಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ- ವಲ್ಯದಾಯಕ ಸೀತಾವಲ್ಲಭೆಂದೆನಿಸುವೋನೆಲ್ಲಾಡಿಲ್ಲಿಗೆ ಬಂದನೆ 3
--------------
ಹರಪನಹಳ್ಳಿಭೀಮವ್ವ
ದಿಕ್ಕೆಯಿಲ್ಲ ನಮ್ಮ ಕಡೆಗೆ ಸೊಕ್ಕಿ ಬಂದರಾರೆರು ಚಿಕ್ಕ ಮನುಷ ಕೆಂಚೆಗೌಡ ಠಕ್ಕ ಮುನಿಯ ಭಾವಬಿರಿಯ ಬೆಂಕಿಯಂತೆ ತೋರ್ಪನೊಬ್ಬ ಪರಶುರಾಮನು ಪ ಆನೆಯಲ್ಲಿ ತೇಜಿಯಿಲ್ಲ ಸೇನೆ ಬಹಳವಾಗಿಯಿಲ್ಲ ಹೀನಗೆಟ್ಟು ದಂಡು ಬಂದು ಮಾನಗೊಂಡು ಹೆಣ್ಣುಗಳನು ಭಾನು ಮುಟ್ಟಲೆತ್ತಿ ಆಸಿಯ ದೀನ ಬೇಕು ಬೇಡೆಂದೆಂಬರಿಲ್ಲ 1 ಮನೆಗಳನ್ನು ಹೊಕ್ಕು ಚಾರುವರಿದು ಕೊಟ್ಟ ಕಣ್ಣಿಯ ಸೂರೆಮಾಡಿ ಕಟ್ಟಿಕೊಂಡು ತೆರೆದ ಮನೆಯ ಸುಟ್ಟು ದಾರಿದೆಗೆದು ಹೋಗುವಾಗ ಧೀರರಾಗಿ ನಿಲ್ಲಿರೆಂದು ಎಂಬವರೊಬ್ಬರಿಲ್ಲ ವೋ 2 ಯಾವಜನರ ದಂಡು ಗಂಟು ಹಣದಾಸೆಗಾಗಿ ಮಾಡಿ ದಾವ ಕಡೆಗೆ ಬರುವರೆಂದು ಸೋವ ನೋಡು ತಲ್ಲಿತಮ್ಮ ಜೀವ ದೊಳಗೆ ಜೀವ ವಿಲ್ಲದಾಗಿ ಜನರುಬಾಯಬಿಡಲು ಕೋವಿ ಕತ್ತಿ ಎಂಬುದೊಂದು ಶಬ್ದವಿಲ್ಲ ನಮ್ಮ ಕಡೆಗೆ 3 ಬೀಸಿ ಬೀಸಿ ಕತ್ತಿಯನ್ನು ಸಾಸವನ್ನು ತೋರಿರೋರ ದಾಸೆಗಾಗಿ ಕಂಡ ಜನರ ಮೋಸದಿಂದ ಕಡಿದುಕೊಚ್ಚಿ ಲೇಸುಗಾಣದಾಗಿ ಮತ್ತೆ ಭಾಸೆಯಿಂದ ತಮ್ಮ ತಾವೆ ಮಾರ್ಗವಿಡಿಯೆ4 ಕೆಟ್ಟು ಪ್ರಜೆಯು ನಾಶವಾಗಿ ಸುಟ್ಟು ಮನೆಯು ಮಾರುಬಿದ್ದು ನಿಟ್ಟು ಹಾಳುಸುರಿಯೆ ಪ್ರಜೇಯು ಹೊಟ್ಟೆಗಿಲ್ಲ ದಳಲುತಿಹುದು ಸೃಷ್ಟಿ ಗೊಡೆಯನಾದ ಲಕ್ಷ್ಮೀರಮಣ ಬಲ್ಲನೆಲ್ಲವನ್ನು 5
--------------
ಕವಿ ಪರಮದೇವದಾಸರು
ವಾರಿಜನಾಭನ ವನಜಾಂಘ್ರಿಗಳಿಗೆ ಕರವ ಕೊಂಡಾಡುವೆ ಪದವ 1 ದೇವದೈತ್ಯರು ಕೂಡಿ ಪಾಲಾಂಬುಧಿಯಲ್ಲಿ ಮೇರು ಮಂದರವ ಕಡೆಗೋಲು ಮಾಡಿದರು2 ವಾಸುಕಿ ಶರಧಿ ಮಧ್ಯದಲಿ ಹರಿ ಕೂರುಮನಾಗಿ ಮಂದರವನೆತ್ತಿದನು3 ಕಾಲಕೂಟ ವಿಷವಾಯು ಪಾನಮಾಡುತಲಿ ಮಹದೇವ ಕೋಪದಿ ನುಂಗಿ ನೀಲಕಂಠೆನಿಸೆ 4 ಕೌಸ್ತುಭ ಕಾಮಧೇನು ಸುರತರುವು ಹಸ್ತಿ ತೇಜಿಯು ಕಲ್ಪವೃಕ್ಷ ಸುಧೆ ಉದಿಸೆ 5 ಸಿಂಧು ಮಥನವ ಮಾಡಲು ಶ್ರೀದೇವಿ ಜನಿಸೆ ಮಂದಾರಮಾಲೆ ಕೈಯಿಂದಲಿ ಪಿಡಿದು 6 ಅರ್ಕಚಂದ್ರರ ಕಾಂತಿಗಧಿಕಾದ ಮುಖವು ದಿಕ್ಕು ದಿಕ್ಕಿಗೆ ಮಿಂಚಿನಂತೆ ಹೊಳೆಯುತಲಿ 7 ವಜ್ರಾಭರಣವು ಕಾಲಗೆಜ್ಜೆ ಸರಪಳಿಯು ಮಲ್ಲಿಗೆ ಕುಸುಮಗಳೊಂದೊಂದ್ಹೆಜ್ಜೆಗುದುರುತಲಿ 8 ಕುಡಿಹುಬ್ಬು ಕಡೆಗಣ್ಣ ನೋಡುತಲಿ ನಡೆದು ಬಂದಳು ತಾ ಬಡನಡುವಿನ ಒಯ್ಯಾರಿ 9 ಅತಿಹಾಸ್ಯಗಳಿಂದ ದೇವತೆಗಳ ಮಧ್ಯೆ ಈ ಪತಿ ಎಲ್ಲಿಹನೋ ತಾ 10 ಅರ್ಕನ್ವಲ್ಲೆನೆ ಅಗ್ನಿಯಂತೆ ಸುಡುತಿರುವನ ಶಕ್ರನ ಒಲ್ಲೆ ಮೈಯೆಲ್ಲ ಕಣ್ಣವಗೆ 11 ಸೋಮನ ಒಲ್ಲೆ ಕಳೆಗುಂದಿ ತಿರುಗುವನ ಪಾವನ ನಮ್ಮ ಗಾಳಿರೂಪದವನ12 ರುದ್ರನ್ವಲ್ಲೆನೆ ರುಂಡಮಾಲೆ ಹಾಕುವನ ಮುದಿಹದ್ದಿನಂದದಲಿ ಗರುಡ ಹಾರ್ಯಾಡುವನಲ್ಲೆ 13 ಶೇಷನ ಒಲ್ಲೆ ವಿಷದ ದೇಹದವನ ಗ- ಣೇಶನ್ವಲ್ಲೆನೆ ಡೊಳ್ಳು ಹೊಟ್ಟೆ ಗಜಮುಖನ 14 ಬ್ರಹ್ಮ ನಾಲಕು ಮೋರೆಗುಮ್ಮನಂತಿರುವ ಯಮ- ಧರ್ಮನ ಒಲ್ಲೆ ನಿಷ್ಕರುಣ ಘಾತಕನ 15 ಸುರಜನರ ನೋಡಿ ಗಾಬರ್ಯಾಗುವೆನು 16 ಮಂದ ಹಾಸ್ಯಗಳಿಂದ ಮಾತನಾಡುತಲಿ ಇಂದಿರೆಪತಿ ಪಾದಾರವಿಂದ ನೋಡುತಲಿ 17 ಗುಣದಲಿ ಗಂಭೀರ ಮಣಿಕೋಟಿತೇಜ ಎಣಿಕಿಲ್ಲದ ಚೆಲುವ ನೋಡೆನ್ನ ಪ್ರಾಣನಾಥ 18 ಹದಿನಾಲ್ಕು ಲೋಕ ತನ್ನುದರದಲ್ಲಿರುವ ಪದುಮಾಕ್ಷಗ್ವನಮಾಲೆ ಮುದದಿಂದ್ಹಾಕುವೆನು 19 ಕರ ವೈಜಯಂತಿ ಸರ ಮಣಿ ನಾ ಇರುತಿರೆ ವಕ್ಷಸ್ಥಳವು 20 ಶ್ಯಾಮವರ್ಣನ ಮುದ್ದು ಕಾಮನಜನಕ ಪ್ರೇಮದಿಂದ್ವೊಲಿವೆ ನಾ ಕಾಮಿಸಿ ಹರಿಯ 21 ಕಮಲಮುಖಿ ಬ್ಯಾಗ ಕಮಲಾಕ್ಷನ್ನ ನೋಡಿ ಕಮಲಮಾಲೆಯ ತಾ ಕಂದರದಲ್ಹಾಕಿದಳು 22 ಅಂಗನೆ ರಚಿಸಿ ತಾ ನಿಂತಳು ನಗುತ 23 ರತ್ನ ಮಂಟಪ ಚಿನ್ನ ಚಿತ್ರ ಪೀಠದಲಿ ಲಕ್ಷ್ಮೀನಾರಾಯಣರು ಒಪ್ಪಿ ಕುಳಿತಿರಲು 24 ಸಾಗರರಾಜ ತನ್ನ ಭಾಗೀರಥಿ ಕೂಡಿ ಸಿರಿ ಧಾರೆಯನೆರೆದ 25 ಅಚ್ಚುತ ಲಕುಮಿಗೆ ಕಟ್ಟಿದ ನಗುತ 26 ಮೇಲು ಕರಿಮಣಿ ಮಂಗಳ ಸೂತ್ರವ ಪಿಡಿದು ಶ್ರೀ ಲೋಲ ಲಕುಮಿಗೆ ತಾ ಕಟ್ಟಿದ ನಗುತ 27 ವಂಕಿ ಕಂಕಣ ಮುತ್ತಿನ ಪಂಚಾಳಿಪದಕ ಪಂಕಜಮುಖಿಗೆ ಅಲಂಕರಿಸಿದರು 28 ಸರಿಗೆ ಸರಗಳು ನಾಗಮುರಿಗೆ ಕಟ್ಟಾಣಿ ವರಮಾಲಕ್ಷುಮಿಯ ಸಿರಿಮುಡಿಗೆ ಮಲ್ಲಿಗೆಯ 29 ನಡುವಿನ್ವೊಡ್ಯಾಣ ಹೊಸ ಬಿಡಿಮುತ್ತಿನ ದಂಡೆ ಸಿರಿ ಪರಮಾತ್ಮನ ತೊಡೆಯಲ್ಲೊಪ್ಪಿರಲು 30 ಇಂದಿರೆ ಮುಖವ ಆ- ನಂದ ಬಾಷ್ಪಗಳು ಕಣ್ಣಿಂದಲುದುರಿದವು 31 ರಂಗನ ಕಂಗಳ ಬಿಂದು ಮಾತ್ರದಲಿ ಅಂಗನೆ ತುಳಸಿ ತಾನವತರಿಸಿದಳು32 ಪಚ್ಚದಂತ್ಹೊಳೆವೊ ಶ್ರೀ ತುಳಸಿ ದೇವಿಯರ ಅಚ್ಚುತ ತನ್ನಂಕದಲ್ಲಿ ಧರಿಸಿದನು 33 ಮಂಗಳಾಷ್ಟಕ ಹೇಳುತ ಇಂದ್ರಾದಿ ಸುರರು ರಂಗ ಲಕ್ಷುಮಿಗೆ ಲಗ್ನವ ಮಾಡಿಸಿದರು 34 ಅಂತರಿಕ್ಷದಿ ಭೇರಿನಾದ ಸುರತರುವು ನಿಂತು ಕರೆದಿತು ದಿವ್ಯ ಸಂಪಿಗೆ ಮಳೆಯ 35 ಲಾಜಾಹೋಮವ ಮಾಡಿ ಭೂಮವನುಂಡು ನಾಗಶಯನಗೆ ನಾಗೋಲಿ ಮಾಡಿದರು 36 ಸಿಂಧುರಾಜನ ರಾಣಿಗೆ ಸಿಂಧೂಪವನಿತ್ತು ಗಜ ಚೆಂದದಿ ಬರೆದು 37 ಚೆಲುವೆ ನೀ ಬೇಕಾದರೆ ಹಿಡಿಯೆಂದನು ರಂಗ 38 ಅಚ್ಚುತ ಎನ್ನಾನೆ ಲೆಕ್ಕಿಲ್ಲದ್ಹಣವ ಕೊಟ್ಟರೆ ಕೊಡುವೆನೆಂದಳು ಲಕ್ಷುಮಿ ನಗುತ 39 ತುಂಬಿ ಮರದ ಬಾಗಿನವ ಸಿರಿ ತಾ ಋಷಿಪತ್ನೇರನೆ ಕರೆದು40 ತುಂಬಿ ಮರದ ಬಾಗಿನವ ಹರದಿ ಕೊಟ್ಟಳು ತಾ ಋಷಿಪತ್ನೇರನೆ ಕರೆದು 41 ಕುಂದಣದ್ಹೊನ್ನಕೂಸಿನ ತೊಟ್ಟಿಲೊಳಿಟ್ಟು ಕಂದನಾಡಿಸಿ ಜೋಜೋ ಎಂದು ಪಾಡಿದರು42 ಕರಿ ಎಂದನು ರಂಗ 43 ಸುರದೇವತೆಗಳಿಗೆ ಸುಧೆ ಎರೆಯಬೇಕಿನ್ನು ಕರಿ ಎಂದಳು ಲಕ್ಷ್ಮಿ 44 ಹೆಣ್ಣನೊಪ್ಪಿಸಿಕೊಟ್ಟು ಚಿನ್ನದಾರತಿಯ ಕರ್ನೆ(ನ್ಯ?) ಸರಸ್ವತಿ ಭಾರತಿ ಬೆಳಗಿದರಾಗ 45 ಈರೇಳು ಲೋಕದೊಡೆಯನು ನೀನಾಗೆಂದು ಬಹುಜನರ್ಹರಸ್ಯೆರೆದರು ಮಂತ್ರಾಕ್ಷತೆಯ 46 ಪೀತಾಂಬರಧಾರಿ ತನ್ನ ಪ್ರೀತ್ಯುಳ್ಳಜನಕೆ ಮಾತುಳಾಂತಕ ಮಾಮನೆ ಪ್ರಸ್ತ ಮಾಡಿದನು 47 ಸಾಲು ಕುಡಿಎಲೆ ಹಾಕಿ ಮೇಲು ಮಂಡಿಗೆಯ ಹಾಲು ಸಕ್ಕರೆ ಶಾಖ ಪಾಕ ಬಡಿಸಿದರು 48 ಎಣ್ಣೋರಿಗೆ ಫೇಣಿ ಪರಮಾನ್ನ ಶಾಲ್ಯಾನ್ನ ಸಣ್ಣಶ್ಯಾವಿಗೆ ತುಪ್ಪವನ್ನು ಬಡಿಸಿದರು 49 ಏಕಾಪೋಶನ ಹಾಕಿದ ಶೀಕಾಂತಾಮೃತವ ಆ ಕಾಲದಿ ಸುರರುಂಡು ತೃಪ್ತರಾಗಿಹರು 50 ಅಮೃತ ಮಥನವ ಕೇಳಿದ ಜನಕೆ
--------------
ಹರಪನಹಳ್ಳಿಭೀಮವ್ವ
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ 1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ಶ್ರೀಪತಿ
ಸಿರಿನಲ್ಲ ಕೇಳುತಲೆನ ಸೊಲ್ಲ ಬಾರೊ ಬಾರೆನುತಲಿ ಭಕ್ತವತ್ಸಲನೆ ಬಾರಿ ಬಾರಿಗೆ ನಿನ್ನ ಬೇಡಿಕೊಂಬುವೆನು ಪ ಕಡಲೊಳು ಮುಣಿಗಜಗ್ವೇದವ ತರುವ ಕ್ಷೀರಾಂಬುಧಿ ಕಡೆವ ಕಡು ಕ್ರೋಡರೂಪದಿ ಬೇರನೆ ಕಡಿವ ಅಸುರನ ಒಡಲೊಡೆವ ಬಡವನಾಗ್ಯಜ್ಞ ಶಾಲೆಗೆ ನಡೆವ ಕೊಡಲಿಯನೆ ಪಿಡಿವ ಹೊಡೆದ್ಹತ್ತು ಶಿರ ಕಾಳಿ ಮಡುವ್ಹಾರಿ ತ್ರಿಪುರರ ಮಡದೇರನ್ವೊಲಿಸ್ವಾಜಿ ಹಿಡಿದೇರೋಡಿಸುವನೆ 1 ಕಣ್ಣು ತೆರೆದೆವೆಯಿಕ್ಕದಲೆ ನೋಡಿ ಬೆನ್ನಲಿ ಗಿರಿ ಹೂಡಿ ಮಣ್ಣುಕೆದರುತಲವನ ದಾಡೆ ಕರುಳ್ಹಾರವ ಮಾಡಿ ಸಣ್ಣ ತ್ರಿಪಾದ ದಾನವ ಬೇಡಿ ಮನ್ನಿಸಿ ತಪ ಮಾಡಿ ಅ- ದಧಿ ಬೆಣ್ಣೆಗಳನು ಕದ್ದು ಹೆಣ್ಣುಗಳನೆ ಕೆಡಿಸ್ಹಯವನ್ನೇರಿ ಮೆರೆವನೆ 2 ನಾರುತ್ತ ಮೈಯ ನೀರೊಳಗಿರುವ ಮಂ- ದಾರವನ್ಹೊರುವ ಕ್ವಾರೆ (ಕೋರೆ?)ಯಲಿ ಧರೆಯ ಮ್ಯಾಲಕೆ ತರುವ ಕರಿ (ಕರೆಯೆ?) ಕಂಬದಿ ಬರುವ ಘೋರ ತ್ರಿವಿಕ್ರಮನಾಗಿ ತೋರುವ ತಾಯಿಯ ಶಿರ ತರಿವ ನಾರ್ವಸ್ತ್ರಬಿಗಿದುಟ್ಟ ಭೀಮೇಶಕೃಷ್ಣನೆ ಭಂಗ ಮಾಡಿ ತುರುಗವೇರಿ3
--------------
ಹರಪನಹಳ್ಳಿಭೀಮವ್ವ
1. ಗಜೇಂದ್ರಮೋಕ್ಷ ನಾರಾಯಣ ಎನ್ನಿರೊ ನಾರಾಯಣ ಎನ್ನಿ ನಾರದಾದ್ಯಖಿಳ ಮುನಿವಿನುತಾಯ ಪಾಹಿಮಾಂ ಘೋರ ಭವದುಃಖ ಸಂಹಾರಾಯ ಪ ಪಾಂಡುದೇಶದೊಳು ಇಂದ್ರದ್ಯುಮ್ನನೆಂಬ ಭೂ ಮಂಡಲಾಧಿಪನು ವೈರಾಗ್ಯದಲಿ ಹರಿಪಾದ ಪುಂಡರೀಕಧ್ಯಾನಪರನಾಗಿತಪಸಿಲಿರೆಚಂಡತಾಪಸನಗಸ್ತ್ಯಾ ಹಿಂಡು ಶಿಷ್ಯರ ಬೆರೆಸಿ ಬರಲು ಸತ್ಕರಿಸದಿರೆ ಕಂಡು ಗಜಯೋನಿಯೊಳು ಜನಿಸು ಪೋಗೆಂದು ಉ- ತಾ ಶುಂಡಾಲನಾದನರಸ 1 ಕ್ಷೀರಸಾಗರ ತಡದೊಳೈವತ್ತು ಯೋಜನ ವಿ- ಸ್ತಾರದಿಂದಿರುವ ತ್ರಿಕೂಟಾದ್ರಿ ಶೃಂಗತ್ರಯದಿ ರಾರಾಜಿತ ತಾಮ್ರರಚಿತ ಕಾಂಚನದಿಂದ ಮೇರುಸಮ ಗಂಭೀರದಿ ಪಾರಿಜಾತಾಂಭೋಜ ತುಳಸಿ ಮಲ್ಲಿಗೆ ಜಾಜಿ ಸೌರಭಗಳಶ್ವತ್ಥ ಚೂತ ಪುನ್ನಾಗ ಜಂ ವಾರಣೀಂದ್ರನು ಮೆರೆದನು 2 ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲಾ ಕಾನನವು ತೊಳಲುತ್ತ ಬೇಸಿಗೆಯ ಬಿಸಲಿನಲಿ ಕಂಡಿತು ಪಾನಾಭಿಲಾಷೆಯಿಂದ ನಾನಾ ಪ್ರಕಾರದಿಂ ಜಲಕ್ರೀಡೆಯಾಡುತಿರೆ ಏನಿದೆತ್ತಣ ರಭಸವೆಂದುಗ್ರಕೋಪದಿಂ ನೆಗಳು ಏನೆಂಬೆನಾಕ್ಷಣದೊಳು 3 ಒತ್ತಿ ಹಿಡಿದೆಳೆವುತಿರೆ ಇದೆತ್ತಣಯದೆನುತ ಮತ್ತೆ ಇಭರಾಜನೌಡೆತ್ತಿ ಫೀಳಿಡುತ ಎಳೆ ಸೆಳೆದುದು ಬಿಡದೆ ನೆಗಳವು ಇತ್ತಂಡವಿತ್ತು ಕಾದಿತ್ತು ಸಾವಿರ ವರುಷ ಪೊತ್ತರಿಸಿತ್ತೇನೆಂಬೆ ಮತ್ತಾ ಗಜೇಂದ್ರಂಗೆ ಚಿಂತಿಸುತ ಮತ್ತ್ಯಾರು ತನಗೆನುತಲಿ 4 ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ ದಿಂ ದಿವ್ಯಜ್ಞಾನದಿಂ ಕಣ್ತೆರೆದು ಕೈಮುಗಿದು ಮುಕುಂದ ಮುನಿವೃಂದವಂದ್ಯಾ ಇಂದಿರಾರಮಣ ಗೋವಿಂದ ಕೃಷ್ಣ ಭಕ್ತರ ಬಂಧು ಕರುಣಾಸಿಂಧು ತಂದೆ ಸಲಹೆನ್ನ ನಾ ಮಾಯಾಪ್ರಬಂಧದಿ ನೆಗಳಿನಿಂ 5 ಪರಮಾತ್ಮ ಪರಮೇಶ ಪರಿಪೂರ್ಣ ಪರಾತ್ಪರ ಉರುತರ ಪರಂಜ್ಯೋತಿ ಪರಮಪಾವನ ಮೂರ್ತಿ ಪರಮೇಷ್ಠಿ ಪರಮಪುರುಷಾ ನಿರುಪಮ ನಿಜಾನಂದ ನಿರ್ಭಯ ನಿರಾವರಣ ನಿರಂಜನ ನಿರಾಧಾರ ನಿರವೇದ್ಯ ನಿಶ್ಯಂಕ ನಿತ್ಯನೈಮಿತ್ಯಕಾ ನೀ ಸಲಹೆನ್ನನೆಂದಾನೆ 6 ಗುಪಿತ ಕಂಠಧ್ವನಿಯೊ ಳಂತರಾತ್ಮಕನ ನೆನೆವುತ್ತಳುತ್ತಿರಲಿತ್ತ ಕರುಣದಿಂದಾಕ್ಷಣದೊಳನಂತಶಯನದೊಳೆದ್ದನು ಸಂತವಿಸಿ ಸಿರಿಮುಡಿಯ ಗರುಡವಾಹನನಾಗಿ ಚಿಂತೆಬೇಡವೆನುತ ಅಭಯ ಹಸ್ತ ಕೊಡುತ ಶ್ರೀ ದಂತಿವದನನ ನೆಗಹಿದಾ 7 ನೆಗಳ ಬಾಯನು ಚಕ್ರದಲಿ ಸೀಳಿ ಕರಿವರನ ಉಗುವ ಕರುಣದಿಂ ಮೈದಡಹಲ್ಕೆ ಗಜಜನ್ಮ ಕುಂಡಲದಿಂದ ಮಿಗೆ ಶೋಭಿಸುತಲೆಸೆದನು ವಿಗಡ ದೇವಲ ಋಷಿಯ ಶಾಪದಲಿ ಬಿದ್ದಿಳೆಗೆ ಮಿಗೆನಕ್ರನಾಗಿ ಹೂಹೂ ಎಂಬ ಗಂಧರ್ವ ಅಮರರೊಲುಮೆಗೆ ನೆರೆದನೋಲೈಸುತ 8 ಮಣಿಮಯ ಕಿರೀಟಕುಂಡಲ ಹಾರ ಪದಕ ಕಂ ಕಣ ಕೌಸ್ತುಭೋಜ್ವಲ ಸುಗಂಧ ಭೂಷಣ ಹಸ್ತ ಪಾಣಿಯಾ ಶಂಖಚಕ್ರಾಬ್ಜಧ್ವಜ ಕಸ್ತೂರಿ ತಿಲಕ ಪ್ರಣವ ತಾಕಿದನು [ಝಣ ಝಣಿತನೂ]ಪುರ[ದ] ದಂತ ಪಂಕ್ತಿಯ ಕೃಪೆ ಸಿರಿ ಮೊಗದ ಪೀತಾಂಬರದಾಲಂಕೃತದ ಸುರಸಿದ್ಧ ಸಾಧ್ಯ ಸಂದಣಿಯೊಳಗೆ ಮೆರೆದನು 9 ಹರಿಯನುತಿಗೈದಂಘ್ರಿಗೆರಗಲಾಕ್ಷಣದಲಿ ಭರದಿಂದಲೆತ್ತಿ ಕೇಳ್ಮಗನೆನ್ನನೀ ಶರಧಿ ಗಿರಿಶೃಂಗತ್ರಯ ಸಪ್ತದ್ವೀಪದಲಿ [ಧರಣಿದೇವಿ] ವರಲಕ್ಷ್ಮಿಯೊಳು ಗರುಡ ಶೇಷ ನಾರದ ಪ್ರಹ್ಲಾದ ಧ್ರುವ ರೊಲು ಸಿರಿವತ್ಸ ಶಂಖ ಚಕ್ರಾವತಾರದಲಿ ಸ್ಮರಿಸುವವರ ಕಾಯ್ವೆನೆಂದಾ 10 ಆವನಿದನುದಯ ಕಾಲದೊಳೆದ್ದು ಭಕ್ತಿಯಿಂ ಭಾವಶುದ್ಧಿಯಲಿ ಭಜನೆಯ ಮಾಳ್ಪ ಜನರಿಗ ಫಾವಳಿಯ ಪರಿಹರಿಸಿ ನರಜನ್ಮವನು ಕಳೆದು ಪರಿಶುದ್ಧರಾದಹರೆಂ- ದಾ ವಾಸುದೇವನಾಜ್ಞಾಪಿಸಿದ ಗಜೇಂದ್ರ ಸಹಿ ತಾ ವಿಹಂಗಾಧಿಪನನೇರಿ ಬಿಜಯಂಗೈದ ಆ ವೈಕುಂಠಪತಿಯ ನಂಬಿದ ಸೇವಕರಿಗೇನಿದು ಚೋದ್ಯವೇ11
--------------
ಬೇಲೂರು ವೈಕುಂಠದಾಸರು
(ಇ) ಆತ್ಮನಿವೇದನೆಯ ಕೃತಿಗಳು ಇದನಾದರು ಕೊಡದಿದ್ದರೆ ನಿನ್ನ ಪದಸೇವೆಗೆ ಜನರೊದಗುವರೆ ಪ ದೊರೆತನವಾಗಬೇಕೆನಲಿಲ್ಲ ಬಲು ಸಿರಿತನವನು ವಾಂಛಿಸಲಿಲ್ಲ ಪರಿಭೋಗದ ಸ್ಪøಹೆ ಎನಗಿಲ್ಲ ನಿನ್ನ ಸ್ಮರಣೆಯೊಂದಿತ್ತರೆ ಸಾಕಲ್ಲ 1 ಅನ್ನವಸ್ತ್ರವ ಕೇಳುವದಿಲ್ಲ ಒಳ್ಳೆ ಚಿನ್ನ ಬಣ್ಣವ ಕೊಡು ಎನಲಿಲ್ಲ ಹೆಣ್ಣು ಮಣ್ಣಿನೊಳಗಾಸೆ ಎನಗಿಲ್ಲ ಪರಿ ಪೂರ್ಣ ನೀನೊಲಿದರೆ ಸಾಕಲ್ಲ 2 ಸುರರ ಭೋಗದಿ ಮನವೆನಗಿಲ್ಲ ಪುಲಿ ಗಿರಿದೊರೆ ಬಲ್ಲೆ ನೀನಿದನೆಲ್ಲ 3
--------------
ವೆಂಕಟವರದಾರ್ಯರು
(ಇ) ಲಕ್ಷ್ಮೀದೇವಿ ಏನೆಂದು ವರಿಸಿದೆಯೆ ಹರಿಯ ಲಕುಮಿ ತಾಯೇ ಪ ಆನಂದಪ್ರದನೆಂದು ಭ್ರಮಿಸಿದೆಯಾ ಶ್ರೀಯೇ ಅ.ಪ. ಮಕ್ಕಳನು ಹೆರುವ ಮನದಭಿಲಾಷೆಯಿಂದೇನೆಹೊಕ್ಕುಳಲಿ ಬ್ರಹ್ಮನನು ಪಡೆದು ಕುಳಿತನು ತಾನೆರಕ್ಕಸರ ಕಂಡೊಡನೆ ಹೆಣ್ಣಾಗಿ ನಿಲ್ಲುವನೆ ಅಕ್ಕ ಇಂಥವನೊಡನೆ ಸರಸವೆಂತಾಡುವೆಯಾ 1 ತಾನು ಸೇವೆಯಕೊಂಡು ಮಾನವನು ಪಡೆಯದೇದೀನನಂದದಿ ಭಕ್ತಜನ ಸೇವೆಗೆಳಿಸುವನೂಆನೆ ಕರೆದೊಡೆ ನಿನ್ನ ಬಿಟ್ಟೋಡಲಿಲ್ಲೇನೆಜ್ಞಾನಿಗಿಂತ ನೀನವಗೆ ಹೆಚ್ಚಿನವಳೇನೆ 2 ಮುದಿಋಷಿಯ ಕರೆತಂದು ಒದೆಸಿಕೊಂಡವನೆಹದನ ಬಂದೊಡನೆ ಬಹುರೂಪ ಧಾರಕನಮದುವೆಯಾದರು ತನ್ನ ಗುಟ್ಟನ್ನು ಕೊಡದವನಗದುಗಿನೊಡೆಯ ಶ್ರೀ ವೀರನಾರಾಯಣನ 3
--------------
ವೀರನಾರಾಯಣ
3. ನೀತಿಬೋಧೆ ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ. ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1 ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2 ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3 ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4 ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5
--------------
ಶ್ರೀಪಾದರಾಜರು
ಅಟ್ಟು ಇಕ್ಕದವರ ಮನೆಯ ಪ ಅಟ್ಟು ಇಕ್ಕದವರ ಮನೆ ಪಾಯಸ ಕಜ್ಜಾಯವಅಟ್ಟರೇನು ಅಡದಿದ್ದರೇನು ಅ ನಿಚ್ಚಣಿಗೆ ದೋಟಿಗೆ ನಿಲುಕದ ಹಣ್ಣಿನ ವೃಕ್ಷನಿಚ್ಚ ನಿಚ್ಚವು ಬಾಗಿ ಫಲವಾದರೇನುಔಚಿತ್ಯ ವಿದ್ಯೆಯನರಿಯದ ದೊರೆ ತಾನುಮೆಚ್ಚಿದರೇನು ಮೆಚ್ಚದಿದ್ದರೇನು 1 ದಾರಿದ್ರ್ಯಕ್ಕೊದಗದ ದ್ರವ್ಯ ಪದಾರ್ಥದಏರಿ ಇದ್ದರೇನು ಪರ್ವತವಿದ್ದರೇನುಶರೀರ ಸೌಖ್ಯ ಶಮನಕ್ಕಾಗದ ಹೆಣ್ಣುಊರಲಿದ್ದರೇನು ತೌರೂರಲಿದ್ದರೇನು 2 ಬಣಗು ದೈವಗಳಿಗೆಶರಣೆಂದರೇನು ಶರಣೆನದಿದ್ದರೇನು 3
--------------
ಕನಕದಾಸ
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಏಳು ಜ್ಞಾಪಿತೋ ಬಕುಲಾವಾಕ್ಯಾಚ್ಛುಕ ಜೀವಾನು ಮೋದಿತಃ ಭೂಪೇನ ನಿಶ್ಚಿತೋ ಮಾಯಾದ್ವಿಪಹಾ ಯೋವರೋ ಹರಿಃ ವಚನ ಅರಸಿ ತನ್ನ ತೊಡೆಯಲಿರುವ ಪರಿಯು ಮಾತಾಡಿದಳು ಕೊರವಿ ಮಾತಿನರಗಿಳಿಯೆ ನೀನು ಅರಸಿ ಮಾತಿಗೆ ಬಾಯ ತೆರೆದು ಮಾತಾಡದಲೆ ಪರಮಗಂಭೀರ ಳಾಗಿರುವ ಪದ್ಮಾವತಿಯ ಕರಪಿಡಿದು ಏಕಾಂತ ದಲಿ ಕೇಳಿದಾಗ ಪರಮ ಅಂತ:ಕರಣೆ ಪರವಶದಿ ಆಗ 1 ರಾಗ:ಭೈರವಿ ಅಟತಾಳ ನಾ ಕೊಡಲೋಪ ಪ್ರೀತಿಯ ಮಗಳೆ ನಿನ್ನ ಮಾತಿಗೆ ಹೊರ್ತಿಲ್ಲ ಖ್ಯಾತೀಲೆ ವೇಂಕಟನಾಥ ನೆಂತೆನಿಪಗೆ ಅ.ಪ ಅರಸಗೆ ಪೇಳಲ್ಯೊ ನಾ ಬಲ್ಲಂಥ ಹಿರಿಯರ ಕೇಳಲ್ಯೊ ಸರಿ ಬಂದವರ ನೋಡಿಕಳಹಲ್ಯೊ 1 ಮಂದಿಯ ಕೇಳಲ್ಯೋ ನಾ ಕೊಡಲಾರದೆ ಜರಿಯಲÉ್ಯೂೀ 2 ಮಿತ್ರೇರ ಸಂಗತಿಯೋ ಅದು ಮಿಥ್ಯವೋ 3 ವಚನ ಕಾಮಜನಕರ ಸ್ಮರಿಸುತಲೆ ಜನರಮುಂದ್ಹೇಳುವದಕನು ಬಂದದÀು ತಾನೆ ಅನು ಅಪಹಾಸ್ಯವನು ಒಬ್ಬರನೋವು ತನಗೆಂಬುವದÀು ಹೇಳುವದಕನುಮಾನವ್ಯಾಕೆ 1 ರಾಗ:ನೀಲಾಂಬರಿ ಭಿಲಂದಿತಾಳ ಪತಿ ಅವನ ಸರಿಯಿಲ್ಲವನಿಯೊಳಗ ಅವನೇ ಜಗಜ್ಜೀವನನೆ ಪ ಮಂಜುಳಮಾತಿಗೆ ರಂಜ ಪಾದ ಕಂಜಕೆ ಅರ್ಪಿಸು ಅಂಜುವದ್ಯಾಕಮ್ಮ ಅಂಜನಾದ್ರೀಶಗೆ ಅಂಜಲುಬೇಡ ನಿರಂಜನೆ ಭಯಭಂಜನೆ 1 ಹೂವಿನ ತೋಟಕೆ ಪೋಗಲು ಚಿತ್ತಪಲ್ಲಟವಾಗಿ ನೀಟಾಗಿ ನಿರ್ಮಿಸಿ ಆಟವಮಾಡುವ ಕಪಟ ನಾಟಕನೆ 2 ಭೂಷಣ ಉರದಲ್ಲಿ ಶ್ರೀವತ್ಸವು ಚಲ್ವಿಕೆ ನೋಡಲು ಎಲ್ಲ ಜ್ಯೋತಿಗಳವನಲ್ಲಿ ನಿವಾಳಿಸಿ ಚಲ್ಲವುದು ಅಲ್ಲೇನಿಲ್ಲೆಂದು ಮತ್ತೆಲ್ಲಿ ಹಂಬಲಿಸದೆ ಅಲ್ಯವಗರ್ಪಿಸು ಆಹ್ಲಾದದಿಂದಲ್ಲೇ ಬಲ್ಲಿದನಾಂತಾದ್ರಿಯಲ್ಲಿರುವ ಎನ್ನೊಲ್ಲಭನೆ ಪ್ರಾಣದೊಲ್ಲಭನೆ 3 ವಚನ ಮಗಳಿಗÉಂದಳು ನಾ ನಿನ್ನ ಜಗ ಗಗನ ರಾಜನ ರಾಣಿ ಸುಗುಣ ಬಕುಲಾ ಬರುವರ ಕೂಡಿ ಬರುವಳಾ ಅಗಸಿಯೊಳಗೆ 1 ಹೊರಳಿ ನೋಡಿದ ಬರುವಳಿವಳ್ಯಾರೆಂದು ಕೊರವಿ ಕರೆಸಿದಳು ಬೇಗ ಸರಸಿ- ಎಂದು ಸುರಿಸಿ ಅಮೃತದ ವಾಣಿ ಬೆರೆಸಿ ಸ್ನೇಹವ ಮತ್ತೆ ತರಿಸಿ ರತ್ನದಪೀಠ ಇರಿಸಿ ಕೂಡೆಂದು ಕುಳ್ಳಿರಿಸಿ ಕೇಳಿದಳಾಗ ಹರುಷದಿಂದಾ2 ರಾಗ:ಗೌರಿ ಆಟತಾಳ ಲಲನೆ ನೀ ದಾರಮ್ಮ ಹೆಸರೇನು? ಶೇಷಾ ಚಲವಾಸಿ ಬಕುಲಾವತಿ ನಾನು 1 ಎಲ್ಲಿಗ್ಹೋಗುವೆ ಮುಂದೆ ನೀನು? ತಿಳಿ ಇಲ್ಲಿಗೆ ಬಂದೆ ನೇಮಿಸಿ ನಾನು 2 ನಿನ್ನ ಮನದ ಕಾರ್ಯಗಳೇನು? ಮುಖ್ಯ ಕನ್ಯಾರ್ಥಿಯಾಗಿ ಬಂದೆನು ನಾನು 3 ದಾವಾತ ವರನಾಗಿರುವನು?ದಿವ್ಯ ದೇವ ನೆಂದೆನಿಸುವ ತಿಳಿ ನೀನು4 ಕೃಷ್ಣವೇಣಿಯೆ ಅವನ್ಹೆಸರೇನು? ಶ್ರೀ ಕೃಷ್ಣನೆಂದೆನಿಸುವ ತಿಳಿ ನೀನು5 ತಾಯಿ ತಂದೆಗಳೆಂಬುವರಾರು?ತಿಳಿ ದೇವಕಿ ವಸುದೇವರು ಅವರು 6 ಚಂದಾಗಿ ಕುಲದಾವದ್ಹೇಳಮ್ಮ ಶುಭ ಚಂದ್ರಮನ ಕುಲಕೇಳಮ್ಮ 7 ಶ್ರೇಷ್ಠವಾಗಿಹ ಗೋತ್ರದಾವದು?ವಾ ಶಿಷ್ಠ ನಾಮಕವಾಗಿರುತಿಹುದು 8 ನಕ್ಷತ್ರ ಪೇಳು ಪನ್ನಗವೇಣಿ ಶ್ರವಣ ನಕ್ಷತ್ರ ತಿಳಿ ರಾಜನ ರಾಣಿ 9 ವಿದ್ಯೆಯಿಂದ ಹ್ಯಾಂಗಿರುವ? ಬ್ರಹ್ಮ ವಿದ್ಯೆಯಿಂದಲಿ ಗಮ್ಯ ಎನಿಸುವ 10 ಧನವಂತನೇನಮ್ಮ ಗುಣನಿಧಿಯೇ? ಬಹು ಧನವಂತರಾಗುವರವನಿಂದೆ 11 ಕಣ್ಣುಮೂಗಿಲೆ ಹ್ಯಾಗಿರುವವ?ಕೋಟಿ ಮನ್ಮಥ ಲಾವಣ್ಯ ಎನಿಸುವ 12 ಹೆಣ್ಣಿನ ಮನಸೀಗೆ ಬಂದೀತೇ? ಅವನ ಕಣ್ಣಿಲಿ ಕಂಡರೆ ತಿಳಿದೀತೆ 13 ಅದಾವು ದಿವಸೆಷ್ಟು ಪೇಳಮ್ಮಾ?ಇಪ್ಪ- ತ್ತೈದರ ಮೇಲಿಲ್ಲ ತಿಳಿಯಮ್ಮ 14 ಚಿಕ್ಕಂದು ಮದುವೆ ಇಲ್ಯಾಕಮ್ಮ?ಅವನ ತಕ್ಕ ಹೆಂಡತಿ ಇರುತಿಹಳಮ್ಮ 15 ಮುಖ್ಯಳಿರಲು ಮದುವ್ಯಾಕಮ್ಮ?ತಿಳಿ ಮಕ್ಕಳಿಲ್ಲದ ಕಾರಣವಮ್ಮ 16 ನೇಮದಿಂದಿರುತಿಹ ತಾನೆಲ್ಲಿ ತಿಳಿ ಶ್ರೀಮದನಂತಾದ್ರಿಯಲಿ 17 ರಾಗ:ಯರಕಾಲ ಕಾಂಬೋದಿ ಭಿಲಂದಿತಾಳ ಕಾಂತನ ಮುಂದ್ಹೇಳಿದಳೇ ಅಂತರಂಗದೊಳು ಚಿಂತೆ ಮಾಡಲು ಬೇಡ ಕೇಳು ಸಂತೋಷದ ಸುದ್ದಿ 1 ಕೊರವಿ ಬಂದಿದ್ದಳು ಮರಗುತ ಮಲಗಿದ ಕೊರವಿ ಕಾಲ್ಗುಣದಿ 2 ಪರಿ ಕೊರವಿ ನಾಡ ಸಖಿಯರ ಕೂಡಿ ಪ್ರೌಢ ಪುರುಷನ 3 ಪ್ರಾಕೃತ ಪುರುಷನಲ್ಲ ಜ್ವರಮಗಳಿಗೆ ಬಂತೆಂದು ಕಾಮಜ್ವರವಂತೆ ಕೇಳು 4 ನಾಶಾವಾಯಿತು ಇನ್ನು ನಿತ್ಯನಿವಾಸಿಯೆನಿಸುವ ಅವಗೆ ತೋಷದಿ ಕೊಟ್ಟರೆ ಜ್ವರ ನಿಶ್ಯೇಷ ಹೋಗುವದು 5 ಎನ್ನ ಮನೆಯಲಿ ಚೆನ್ನಾಗಿ ಪೇಳುವಳು ಚೆನ್ನಿಗವನನ್ಯಾರೆಂದು 6 ಪೇಳುವಳು ಇನ್ಯಾತಕೆ ಸಂಶಯ ಮಾಡಿನ್ನು ಶುಭಶೀಘ್ರಾ 7 ವಚನ ಸಂಭ್ರಮದಿ ಆನಂದವೆಂಬ ತುಂಬ ರೋಮಗಳುಬ್ಬಿ ರಂಭೆ ಪೂರ್ವದ ಪುಣ್ಯ ಎಂಬುವರು ಮುಕ್ತ ಬಹಳ ಗಂಭೀರ ಅಂಬುಜೋದ್ಬವ ಪಿತನ ತುಂಬಿ ಕುಳಿತದ್ದು ಕಣ್ಣುತುಂಬ ನೋಡೇನು ಎಂದು ಅಂಬುಜಾಕ್ಷಿ 1 ಆಕಾಶಪರಿವೃಡನು ಕ್ಲೇಶದ ಮಗಳಿದ್ದಲ್ಲೆ ನಡೆದು ಒಡೆದು ಆಡಿದನು ಹರುಷ ಹಿಡಿಯಲಾಗದು ನಿನ್ನೊಳು ನೀನೆ ಮಿಡುಕಿ ಬೇಡ ಎನ್ಹಡೆದವ್ವನೆ ನೀನು ಮೂಡಲಗಿರಿ ಒಡೆಯ ವೇಂಕಟಪತಿಗೆ ಕೊಡುವೆ ನಿನ್ನ 2 ಶುಭ ಪತ್ರವನು ಕೊಟ್ಟು ಬೃಹಸ್ಪತಿಯು ವೃತ್ರಾರಿ ಧರಿತ್ರೀಯಲ್ಲೀ ಪೃಥ್ವೀಶ ತಾನು ನತಿಸಿ ವಿಧಿಯುಕ್ತ ಪೂಜೆ ಉತ್ತಮನೆ ನೀ ಕೇಳು ಸತ್ಯ ನಿತ್ಯ ನೀನೆ 3 ಪನ್ನಗಾಚಲದಲ್ಲಿ ನಿನ್ನ ಅನುಮತಿಯಿಂದ ಬಿನ್ನಹದ ನುಡಿ ಕೇಳಿ ಮನಸಿಗೆ ಹರುಷ ಪೇಳುವೆ ಕೇಳು ಚನ್ನಾಗಿ 4 ನಿತ್ಯ ಅವನ ಆ ವಿಸ್ತಾರವೆಲ್ಲ ಪಂಚಕೋಶದಲಿ ಇಲ್ಲಿರುವ ಅವನೇ ಶ್ರೀ ಶುಕಾಚಾರ್ಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಒಂಬತ್ತು ಶ್ರೀ ವಾಣೀಭಾರತೀ ಗೌರೀ ಶಚೀಭಿಃಸ್ನಾಪಿತೋವತಾತ್| ಕುಚೀರಾಲ್ಲಬ್ಧ ವಿತ್ತೋರ್ಚನ್ ವಿಪ್ರಾನ್ ಲಕ್ಷ್ಮೀಪ್ರಿಯಂಶರಃ|| ವಚನ ಪರಮೇಷ್ಠಿ ಮಾಡಿದನು ಸರಸ್ವತಿಯು ಮೊದಲಾದ ಶೃಂಗರಿಸಿಕೊಂಡರು ತಾವು ವರನಾಗಿ ಶೋಭಿಸಿದ ವರ ಹರುಷದಲಿ ನಾಲ್ಕು ವರಕಲಶಗಳನಿಟ್ಟು ವರ ರತ್ನ ಸುರಗಿಯನು ಸುತ್ತಿ ಶ್ರೀಹರಿಗೆ ಸುರರೊಡೆಯ ಬೇಗಿನ್ನು ಮಜ್ಜನ ಮಾಡು ಹರಿಯೆ ನೀನು 1 ರಾಗ:ನೀಲಾಂಬರಿ ಆದಿತಾಳ ಕೇಳೀ ಕಂದಗಂದನು ಶೋಕ ದಲಿ ನೊಂದು ಮನದಲಿ1 ಹಿರಿಯರೆಂಬವರಾರೆನಗೆ ಹರುಸವರಾರಿಲ್ಲ ಅಕ್ಕರವಿಲ್ಲಾ 2 ಅಕ್ಕರದಿಂದ ಪೂಸೆ ಹಿಕ್ಕಿ ಎರೆಯುವದಕ್ಕೆ ಅಕ್ಕ ತಂಗಿಯರಾರಿಲ್ಲ ಅಕ್ಕರವಿಲ್ಲಾ 3 ಬಿಡದ ಕರ್ಮಕ್ಕೆ ಮಾಡುವದು ಬಿಡುವದೆ ಇದು 4 ತಂದೆ ತಾಯಿಗಳಿಲ್ಲದೆ ನೊಂದು ಬಳಲಿದೆ 5 ವಚನ ಎಂದಿಗಾದರು ನಿನಗೆ ತಂದೆ ಬರುವರು ಮಂದಿ ಚಂದೇನೊ ನಿನಗೆ ಇದು ಎಂದಿಗಗಲದೆ ನಿನ್ನ ಸಂದೇಹವ್ಯಾಕೆ ನಗುತ ಮುಂದಿರುವ ತನ್ನ ನೋಟದಿಂದ ನೋಡಿದನು 1 ತಿಳಿದು ತರಸಿದಳು ತೈಲವನು ಹರುಷದಲೆದ್ದು ತಿಳಿದು ತ್ವರದಿ ವರರತ್ನ ಪೀಠದಲ್ಲಿ ಹರಿಣಾಕ್ಷಿ ತಾ ಬಂದು ಸರಸಾದಸಂಪಿಗೆಯ ಹರಸಿದಳು ಹೀಗೆ2 ಮಂಡಿತನೆ ಭಕ್ತರಿಗುದ್ದಂಡ ವರ ಸಂತತಿ ಉದ್ದಂಡ ನಾಯಕನೆ ಭೂಮಂಡ ಕೂಡಿಕೊಂಡು ನಿನ್ನ ಈ ಲೇಪಿಸಿದಳಾ ಜಗದ್ವಾಪಕನ ಎರೆವಳು ತಾಪಿತೋ ದಕÀದಿ ಸಂತಾಪ ಹಾರಕಳು 3 ಗಂಧಪರಿಮಳದಿಂದ ಚಂದಾಗಿ ತಿರೆ ತಂದಳಾರತಿದೇವಿ ಚಂದದಾರತಿ ಒಡಗೂಡಿ ಮುಕುಂದನ ಫಣಿಗೆ ಆರತಿ ಬೆಳಗಿ ಮುಂದೆ ಮತ್ತೆರ ಸುಂದರಾಂಗಿಯು ತನ್ನ ಹರಿವಾಣದ್ಹಿಂದಿಟ್ಟು ಎತ್ತಿ ಕಲಶವೃಂದದಿಂದೋ ಕುಳಿಯ ಚಂದಾಗಿ ಎರೆವಳಾನಂದದಲ್ಲಿ ಸುಂದರಿಯರಿಂದ ಕೂಡಿ 4 ಮೈವರಿಸಿ ಸುತ್ತ ವಸ್ತ್ರ ಪೀತಾಂಬರವ ಬಹುಭಕ್ತಿಯಲಿ ಗಿರಿಜೆ ಸುತ್ತ ಕೇಶಗಳೆಲ್ಲ ತನ್ನ ಪುತ್ರಿ ಭಾಗೀ ಮೆಟ್ಟಿ ಪತ್ನಿಯಳ ಉತ್ತಮಾಸನದಲ್ಲಿ ಹತ್ತಿಕುಳಿತ5 ರಾಗ:ನೀಲಾಂಬರಿ ಆದಿತಾಳ ಎಲ್ಲರು ಬಂದರು ಬಹು ಉಲ್ಹಾಸದಿಂದಲ್ಲೆ ಅವನ ಚಲ್ವಿಕೆಯ ನೋಡುತಲೆ ಅಲ್ಲೆ ಕುಳಿತರು 1 ಚಂದದ ಚಾಮರಗಳ ಪಿಡಿದರು 2 ಕೊಟ್ಟಳು ವಿಚಿತ್ರದ ಕನ್ನಡಿ3 ಚೆನ್ನಾಗಿ ಹಚ್ಚಿಕೊಂಡ ಚನ್ನಿಗ ತಾನು 4 ಮುದದಿಂದ್ಹೀಗೆಂದಳು ಸೊಸೆಗೆ ಮುದು ಮಗನಿಗೆ ಕುಂಕುಮ ಹಚ್ಚು ಮದಗಜಗಮನೆ 5 ಫಣಿಗೆ ತಿದ್ದಿ ಕುಂಕುಮ ವನ್ನಿಟ್ಟಳು ಮುದ್ದು ಸುರಿಯುತ 6 ಮುಂದಲ್ಲೆ ಕುಬೇರಕೊಟ್ಟ ಚಂದದಾಭರಣಗಳಿಟ್ಟು ಸಂಧ್ಯಾನು- ಷ್ಠಾನವ ವಿಧಿಯಿಂದ ಮಾಡಿದ 7 ಪುಣ್ಯಾಹ ವಾಚನಕೆ ಕುಳಿತಾ ಪುಣ್ಯಾತ್ಮನು ತಾನು 8 ಒಡಗೂಡಿ ಕುಳಿತಳಲ್ಲೆ ಸಡಗರದಿಂದ 9 ಮತ್ತಲ್ಲೆ ವಶಿಷ್ಠ ಮುನಿಯು ಮುತ್ತಿನ ರಾಸಿಗಳಿಂದ ಉತ್ತಮ- ಗದ್ದಿಗೆಯ ಬರೆದ ಕ್ಲಪ್ತದಿಂದಲಿ 10 ವಿಧಿಯಿಂದ ಮಾಡಿಸಿದನÀು ವಿಧಿಸುತ ತಾನು11 ಸಂಭ್ರಮದಿಂದಲ್ಲೆ ಕೊಟ್ಟ ತಾ ಬ್ರಹ್ಮದೇವ 12 ದೇವಾಧಿದೇವಗೆ ಕೊಟ್ಟರಾ ವೇಳೆಯಲ್ಲಿ 13 ಮುತ್ತಿನ ಅಕ್ಷತೆ ಇಟ್ಟು ಮುತ್ತೈದೆರಲ್ಲೆ 14 ನುಡಿದ ಕುಲದೇವಿ ಯಾವಕೆ ನಿನಗೆ ಶ್ರೀನಾಥಪೇಳೋ 15 ಹಲವು ಕಾಲದಲ್ಲಿ ಎನ್ನ ಕುಲಪುರೋಹಿತನಾದ ಮೇಲೆ ಕುಲದೇವಿ ಯಾವಕೆ ಅರಿಯೆ ಮುನಿನಾಥ ನೀನು 16 ಕುಲಪುರೋಹಿತ ನೆನಿಸುವೆನೊ ಶ್ರೀನಾಥನಿನಗೆ17 ಕುಲದೇವಿ ಎನಗೆ ಉಂಟು ಮುನಿನಾಥ ಕೇಳೊ 18 ಯಾವರೂಪ ದಿಂದೆಸೆವಳು ಶ್ರೀನಾಥ ಪೇಳೊ19 ವೃಕ್ಷರೂಪದಿಂದ ಅಮಿತಾದ ಫಲಕೊಡುವಳಯ್ಯ ಮುನಿನಾಥ ಕೇಳೊ20 ವೃಕ್ಷ ಎಲ್ಲಿ ಇರು ತಿಹುದು ಪೇಳೋ ಶ್ರೀನಾಥ ನೀನು 21 ಇರುತಿಹುದು ವೃಕ್ಷ ಮುನಿನಾಥ ಕೇಳೊ 22 ಸಹಿತ ತ್ವರದಿ ನಡೆದ ಕುಲದೇವಿಯ ಕರೆವುದಕೆ 23 ವಚನ ಕ್ರಮದಿಂದ ಪೂಜಿಸುತ ದಯಮಾಡು ನಮಗೆ ಕುಲ ಅಮಿತ ಕಾರ್ಯವನು ಕ್ರಮ 'ಶಮಿಶಮಮೇ' ಎಂತೆಂಬ ಮಾಡಿ ಕುಲದೇವತೆಯಾ ಮಾಡಿ ನುಡಿದವು ಆಗ ಸೂರಾಡುತಲೆ ಬಂದ ಗಾಢನೆ ಸ್ನೇಹ ಸಂರೂಢನಾಗಿ 1 ವರಹದೇವನೆ ಎನ್ನವರ ಧರಣಿದೇವಿಯ ಕೂಡಿ ಸರಸಾಗಿ ಎಲ್ಲರಿಗೆ ಹರಿಯೆ ನೀನು ಹರಿ ಅಂದಮಾತಿಗೆ ಆ ಹಿರಿಯಳೆಂತೆಂದು ತಿಳಿ ಎನ್ನ ಇರುವೆ ಕೃಷಿ ಕಾರ್ಯದಲಿ ನಿರತನಾಗಿ 2 ಎಲ್ಲ ಈ ಪರಿಕೇಳಿ ಫುಲ್ಲನಾಭನು ಅವನ ಒಲಿದಾಜ್ಞೆಯ ಕೊಂಡು ಉಲ್ಲಾಸಬಟ್ಟು ಮನದಲ್ಲಿ ಕುಲದೇವತೆಯ ಅಲ್ಲಿ ಸ್ಥಾಪನೆ ಮಾಡಿ ನಿಲ್ಲದಲೆ ಸ್ವಸ್ಥಾನದಲಿ ಬರುತಾ ರಮಾ ವಲ್ಲಭನು ನುಡಿದನಾಗಲೆ ಈ ಪರಿಯು ಎಲ್ಲರ್ಹೊರಡಿರಿ ಇನ್ನು ಸುಳ್ಳ್ಯಾಕೆ ತಡ ದೂರದಲ್ಲೆ ಇರುತಿಹದು ಬಲ್ಲಿ ದಾಕಾಶಪುರ ಇಲ್ಲಿದ್ದ ಬಾಲಕರು ಎಲ್ಲ ವೃದ್ಧರು ಮತ್ತೆ ಮೆಲ್ಲಗ್ಹೋಗಲಿ ಮುಂದೆ ನಿಲ್ಲದಲೆ ಸಾಗಿ3 ತನ್ನ ತಂದೆಯ ವಚನವನ್ನು ಕೇಳೀಪರೀ ಮುನ್ನ ನುಡಿ ದನು ಬ್ರಹ್ಮ ಪುಣ್ಯಪುರುಷನೆ ಕೇಳು ಪುಣ್ಯಾಹ ವಾಚನವ ಚೆನ್ನಾಗಿ ನೀ ಮಾಡಿ, ಮುನ್ನ ಆಕುಲದೇವಿಯನ್ನು ಸ್ಥಾಪನೆಮಾಡಿ, ಉಣ್ಣದಲೆ ಪೋಗುವುದುಚಿತವಲ್ಲಾ ಸಣ್ಣ ಬಾಲರು ಮತ್ತೆ ಹೆಣ್ಣು ಮಕ್ಕಳು ದೇಹಹಣ್ಣಾಗಿ ಇರುವ ಬಹು ಪುಣ್ಯ ಶೀಲರು ಮತ್ತೆ ನೀನ್ನ ಕುಲ ಬಾಂಧವರು ಮಾನ್ಯ ಮುನಿಗಳು ಎಲ್ಲ ಉಣ್ಣದಲೆ ಹಸಿವೆಯಲ್ಲಿ ಬಣ್ಣಗೆಟ್ಟಿಹರು 4 ತನ್ನ ತನಯನ ವಚನವನ್ನು ಕೇಳೀ ಪರಿಯಮುನ್ನ ಶ್ರೀಹರಿನುಡಿದ ಎನ್ನ ಪುತ್ರನೆ ಕೇಳು ಎನ್ನ ಕಾರ್ಯಕೆ <ಈಔಓಖಿ ಜಿಚಿ
--------------
ಅನಂತಾದ್ರೀಶ - ಕಥನಕಾವ್ಯಗಳು