ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ವಿಬುಧರ ಸಂಗವೆ ಮಹಾಪ್ರಮೋದ ದುರ್ಲಭ ಜ್ಞಾನಿಯ ನಿಜಾತ್ಮಬೋಧ ಭಾಗ್ಯವಿದೇ ಬಹುಜನ್ಮದ ಪುಣ್ಯ ಯೋಗ್ಯರಬೋಧಾ ದೊರಕುವುದಣ್ಣ ಬೋಗ್ಯದಿ ಲಂಪಟನಾದವಗಿನ ಅಗ್ಗದಿ ಸಿಗುವದೆ ಸಜ್ಜನರನ್ನಾ ಸ್ವರ್ಗದಿ ಸಿಗದಿಹ ಸಂತರ ಬೋಧ ದುರ್ಲಭ ಜ್ಞಾನಿಯ ನಿಜಾತ್ಮಬೋಧ 1 ಉಪದೇಶದಿ ಈ ಭವವನು ಕಡಿವಾ ಬಾಧೆಯ ಸುಡುವಾ ಮುಕುತಿಯ ಕೊಡುವಾ ಹೃದಯದೊಳಿರುವಾ ಆತ್ಮಸ್ವರೂಪ ಜ್ಞಾನದಿ ತಿಳುಹಿನಿ ಮೋದವ ಕೊಡುವಾ ಸ್ವಾನು ಭವಾನಂದಾನ್ವಿತರೂಪ ಸನ್ನುತ ಶಂಕರಗುರುಸ್ವರೂಪ2
--------------
ಶಂಕರಭಟ್ಟ ಅಗ್ನಿಹೋತ್ರಿ
ಹರಿ - ಹರರು ಸರಿಯೆಂಬ ಅರಿಯದಜ್ಞಾನಿಗಳು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಹರನ ಹೃದಯದೊಳಿರುವ ಹರಿಯ ತಾವರಿಯರು ಪ.ಶರಧಿ ಮಥನದಲಂದುಸಿಂಧುಸುತೆ ಬಂದಾಗ |ಹರಿ - ಹರ -ವಿರಂಚಿ ಮೊದಲಾದ ಸುರರ ||ನೆರೆ ಒರೆದು ನೋಡಿ ಶಂಕೆಯ ಬಿಟ್ಟು ಸಿರಿದೇವೀಹರಿಸರ್ವಪರನೆಂದು ಮಾಲೆ ಹಾಕಿದಳು1ಹರಿನಾಮ ಕ್ಷೀರವದು ಹರನಾಮ ನೀರು ಅದು |ಕ್ಷೀರ ನೀರೊಂದಾದುದಂತೆ ಇಹುದು ||ಒರೆದಾಡಿ ಪರತತ್ತ್ವವರಿಯದಾನರ ತಾನು |ಹರಿ- ಹರರು ಸರಿಯೆಂದು ನರಕಕೆಳಸುವನು2ಕ್ಷೋಣಿಯೊಳು ಬಾಣನ - ತೋಳುಗಳ ಕಡಿವಾಗ |ಏಣಾಂಕಧರ ಬಾಗಿಲೊಳಗೆ ಇರಲು |ಕಾಣರೇ ಜನರೆಲ್ಲಹರಿ ಪರನು ತಾನೆಂದು |ಪೂರ್ಣಗುಣ ಪುರಂದರವಿಠಲನೇ ಪರನು 3
--------------
ಪುರಂದರದಾಸರು