ಏಕೆ ದಯ ಬಾರದೋ ಶ್ರೀಕಾಂತ ನಿನಗೆ
ಲೋಕನಾಯಕ ಎಷ್ಟು ಬೇಡಲೋ ಪ
ಜೋಕೆಯಿಂ ಸಾಕುವರದಾರೋ ಅ.ಪ
ನಿನ್ನ ಮನವಿನ್ನೆಷ್ಟು ಕಠಿಣವೋ
ಮುನ್ನ ಮಾರುತಿಯೊಡನೆ ಮಸಗಿದೆ
ಎನ್ನೊಳಗೆ ನಿರ್ದಯೆಯೊಳಿರುವುದು
ಚೆನ್ನವಲ್ಲವೊ ಇನ್ನು ಚೆನ್ನಿಗ 1
ಕಾಣೆನೇ ಸುಧನ್ವನಂ ಕೊಲೆ
ಜಾಣ ತನವನು ತೋರ್ದನಿನ್ನನು
ಬಾಣ ತ್ರಾಣವನಣುಗನೆನ್ನೊಳು
ಮಾಣು ಶಿವಧನುಭಂಗನಿಪುಣ2
ಮಕ್ಕಳನು ಹಡೆದವರು ಒಮ್ಮನ
ದಕ್ಕರೆಯ ಬೀರುತ್ತ ಸಲಹರೆ
ಮಕ್ಕಳಾಟಿಕೆ ಮಾಡುವೊಡೆ ನೀ
ದಕ್ಕುವರೆ ನಿನ್ನಡಿಯ ದಾಸರು 3
ಸರ್ವಶಕ್ತನು ಆದರೇಂ ಫಲ
ಸರ್ವದಾ ಭಕ್ತರಿಗೆ ಕಷ್ಟವೆ
ನಿರ್ವಿಕಲ್ಪನೆ ಮರ್ಮವೇತಕೆ
ಧರ್ಮವ್ರತ ಪೊರೆ ಜಾಜಿಕೇಶವ 4