ತೋರು ನಿಮ್ಮ ಪಾದಕುಸುಮ
ಮಾರನಯ್ಯಾಪಾರಮಹಿಮ ಪ
ಧರೆಯ ಭೋಗದಾಸೆ ತೊರೆಸಿ
ನಿರುತವಾದ ಮಾರ್ಗ ಹಿಡಿಸಿ
ಕರುಣಿಸು ಎನ್ಹøದಯಕಮಲಕೆ
ಕರೆ ತತ್ತ್ವಜ್ಞಾನ ಅಮೃತ1
ಕವಿದುಕೊಂಡಜ್ಞಾನಕತ್ತಲು
ಜವದಿಹಾರಿಸಿ ಎನ್ನಯ
ಭವದ ಬಂಧನ ದೂರಮಾಡಿ
ಜವನಭಯನಿರ್ಬೈಲು ಎನಿಸು 2
ಮಯಾಮೋಹದೊಳಗೆ ಮುಳುಗಿ
ಪೋಯಿತೆನ್ನಯ ಅರ್ಧವಯವು
ಕಾಯಜಪಿತ ಸ್ವಾಮಿ ಶ್ರೀರಾಮ
ನೋಯಿಸದೆ ನಿಜಪಥಕೆ ಹಚ್ಚೆನ್ನ 3