ಮಧ್ವಾಚಾರ್ಯರು
ಮಧ್ವಮುನಿರಾಯ ಭಕ್ತೋದ್ಧಾರನೆ ಪ
ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ
ತಾಮಸರ ಮುರಿದು ಚೂ
ಡಾಮಣಿಯ ಸ್ವಾಮಿಗಿತ್ತೆ 1
ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್-
ನಾಮವ ಹೊಂದಿಸಿ ಕೃಷ್ಣನ
ಪ್ರೇಮಕೆ ನೀ ಪಾತ್ರನಾದೆ 2
ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ
ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ
ಅಪ್ಪ ಗುರುರಾಮ ವಿಠಲನ
ತಪ್ಪಾದೆ ಪೂಜಿಸುತಿರ್ಪ 3