ಒಟ್ಟು 85 ಕಡೆಗಳಲ್ಲಿ , 3 ದಾಸರು , 81 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನುಭವ ಬಾರಾಮಾಸ ) ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ ಮಾನವ ಜನು ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ | ದೊರಯದು ಪರಮಾರ್ಥ | ಶ್ಲೋಕ 1 ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ | ಗುರು ಮಹಿಪತಿ ಸಾರಿದ ಬೋಧವಾ | ಪದ ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ | ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ ಸಾಧು ಸಂತರಾ | ಅವರ ಚರಣಾರವಿಂದಾ | ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ | ಮೋಟ ಮರ ನಿಲುಲುಂದಾ | ಶ್ಲೋಕ 2 ಮೆರೆವ ಅವಯವದೊಳು ಉತ್ತು ಮಂಗದಿ ನಿಂದು | ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು | ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು | ಪದ ಮಾಸ ಶೂನ್ಯವೇ ನೋಡು ಶ್ರವಣವೇ | ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ | ಹವಣದಿ ಸಂತರ ಮುಖದಿಂದಾ ಅನುಸರಣಿಂದಾ | ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ ವಾರ್ತರಿಯಾ | ಆಲಿಸಿದೇ ಸುಖ ಬಡುತಾ | ಶ್ಲೋಕ 3 ಕುಂಡಲ ವಿಟ್ಟಿಹಾ | ಹರಿ ಕಥಾಮೃತ ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ | ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ | ನೀಚ ವೃತ್ತಿಗೆ ಬಿದ್ದು | ಶ್ಲೋಕ 4 ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ | ಇಂಗಿತ್ಹೇಳಿದ ಮಹಿಪತಿ ನಂದನಾ | ಪದ ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ | ಸನ್ನುತ ಶ್ರೀಹರಿ ನಾಮವಾ ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ | ಆಡಿಬರಡಾದೆ ನೆಲಿಗೆ | ಶ್ಲೋಕ 5 ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ | ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ | ನರಾಧಮಾನೇ ಮಾವನ ಮುಖವೋ ನೃಪಮಾಯ ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ ಸ್ವಾಮಿ ಸುಖವೋ ಪದ ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ | ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ | ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು | ಮೈಯ್ಯ ಮರ್ತೆನು ಚಲಿಸಿ ಶ್ಲೋಕ 6 ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ | ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ | ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು | ನೂಕಿದನು ಇದರಿಂದಾ | (ತನಗಿಂದ ದೀನದುರ್ಬಲರನು ಕಂಡು ಹೊಡೆವನು | ಹೋಗಾಡಿದ ನಿಜಾನಂದ ) ಶ್ಲೋಕ 7 ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ | ಶ್ಲೋಕ 8 ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ ಪದ ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು | ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ ನಾನು ಕೊಳಲಿಲ್ಲಾÀ ಸುಖ ಬಡಲಿಲ್ಲಾ | ದೋಷದನ್ನವ ಉಂಡು ವಡಲನು ನಾನು ಹೊರೆದನು ಬಯಸುತ ಜಿವ್ಹ ಸ್ವಾದಾ ಶ್ಲೋಕ 9 ವಿದತವಾದ ರಸ್ನಾವ ಉಂಬನು | ಮುದದಿ ತತ್ವದ ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ ಮಂದನಾ | ಇದನು ಸಾರಿದ ಮಹಿಪತಿ ನಂದನಾ | ಪದ ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ | ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ | ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು | ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ | ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು | ಶ್ಲೋಕ 10 ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ ಪದ ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ | ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ | ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ ಶ್ಲೋಕ 11 ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ ಮಾಡಲು ಬಳುಕುವಾ | ಮನುಜಪಾದವೋ ಪಾದವೋಮಂದನಾ | ಅನುವ ಸಾರಿದ ಪದ ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ | ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ ಶ್ಲೋಕ 12 ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ | ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ | ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ | ಪಿಂತಿನ ತಪ್ಪವ ನೋಡದೇ ತಡ ಮಾಡದೇ | ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ ಸಾರಥಿ | ನಾಮ ಬಿಡದೆ ಕೊಂಡಾಡಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅನುಭವ ಸ್ವಸಿದ್ಧವೊ ಅನುದಿನ ಶ್ರುತಿ ಖೂನ ಹೇಳುವ ಙÁ್ಞನವು ಧ್ರುವ ಗುಣಗುಣಕ್ಕೆ ಅಣುರೇಣು ವ್ಯಾಪಕ್ಕೆ ಜನವನ ಸ್ಥಾನ ಸುಸ್ಥಾನಕ್ಕೆ ಮನೋನ್ಮನಕ್ಕೆ ಙÁ್ಞನ ವಿಙÁ್ಞನಕ್ಕೆ ತಾನೆ ತಾನಾಗಿಹ್ಯದಕ್ಕೆ 1 ಅಖಿಳ ಭುವನಕ್ಕೆ ಸಕಲ ಸನ್ಮತಕ್ಕೆ ಪ್ರಕಟಗುಚಿತ ಪ್ರತ್ಯಕ್ಷಕ್ಕೆ ಶುಕಾದಿ ಮುನಿಗಳ ಮುಗುಟಮಣಿಯಾಗುದಕ್ಕೆ ಭಕ್ತವತ್ಸಲಾಗಿಹುದಕ್ಕೆ 2 ಇಹಪರ ಸಾಧನಕ್ಕೆ ಬಾಹ್ಯಾಂತರ ದೊರೆವುದಕ್ಕೆ ಸಾಹ್ಯಮಾಡುವ ಸಹಕಾರಕ್ಕೆ ಮಹಿಪತ್ಯುದ್ದೇಶಕ್ಕೆ ಸ್ವಹಿತ ಸುಪಥಕೆ ಶ್ರೇಯ ಸುಖದೋರುವಾಶ್ರಯಕ್ಕೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅರಿಕುಕೊಳ್ಳಿರೈಯ್ಯಾ ನೀವು ಹರಿಯ ನಾಮಾವೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ಧ್ರುವ ಒಳ್ಳೆಒಳ್ಳೆವರು ಬಂದು ಕೇಳಿರೊ ನೀವಿನ್ನು ತಿಳದುಕೊಳ್ಳಿ ಇದಕೆ ಬೀಳುವದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದುನೋಡಿ ಕಣ್ಣು ಕೊಳಲರಿಯದವನ ಬಾಯಾಗ ಬೀಳುದು ಮಣ್ಣು 1 ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ತುಂಬಿ ತುಳಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ 2 ಇಹಪರ ನಾರ್ಥಕಿದೆ ಕೇಳಿರೋ ನೀವೆಲ್ಲ ದೇಹ ಅಭಿಮಾನಿಗಿದು ಸಾದ್ಯವಾಗುವುದಿಲ್ಲ ಸೋಹ್ಯವರಿತು ಸೂರೆಗೊಂಡು ಮಹಿಮ ತಾನೆ ಬಲ್ಲಗುಹ್ಯವಾಕ್ಯ ತಿಳಿದುನೋಡಿ ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅಲ್ಲೇನಿಲ್ಲೇನು ಮತ್ತಿಲ್ಲೇನು ಪ ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೆವೆ ಯೋಗ್ಯ ನೋಡಿರೈ ಭಕುತಿಗೆ | ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ | ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ | ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ ಆವಗಿರುವ ಕೂಡಿಕೊಂಡು ಹರಿಯ ದಾಸರಾ 1 ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ | ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು | ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ | ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2 ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ | ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು | ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ | ದೊಳನವನ ನಲುವ ಗುರುಮಹಿಪತಿ ಪ್ರೀಯನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂಥಾದೆಲ್ಲದೆ ತಾಂ ನೋಡಿ ಸತ್ಸಂಗದಸುಖಾ ಇಂಥಾ ಅಂಥಿಂಥವರಿಗಿಂಥಾದೈಲ್ಲದೆ ನೋಡಿ ಧ್ರುವ ಒಂದೊಂದುಪರಿ ಕೇಳಿಸುವ ಹ ನ್ನೊಂದರ ಮ್ಯಾಲಿನ್ನೊಂದರ ಘೋಷ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಧೀಂ ಮಿಡುಗತಿಹ್ಯ ಆನಂದಸುಖ 1 ಉದಯಾಸ್ತಿಲ್ಲದೆ ಬೆಳಗಿನ ಪ್ರಭೆಯು ತುದಿಮೊದಲಿಲ್ಲದೆ ತುಂಬಿತು ಪೂರ್ಣ ಬುಧಜನರನುದಿನ ಸೇವಿಸುತಿಹ್ಯ ಸದಮಲವಾದ ಸದಾ ಸವಿಸುಖ2 ವಿಹಿತ ವಿವೇಕದ ಅನುಭವಗೂಡಿ ಬಾಹ್ಯಾಂತ್ರದ ಘನದೋರುತಲಿಹ್ಯ ಸ್ವಹಿತಸುಖದ ಸುಧಾರಸಗರೆವ ಮಹಿಪತಿಗುರು ಕರಣದ ಕೌತುಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ 1 ಭಕ್ತಿವೈರಾಗ್ಯೊಲಿಹೂಡಿ ನಿತ್ಯಙÁ್ಞನಾಗ್ನಿ ಒಡಗೂಡಿ ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ2 ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಸುಪಥನೋಡಿ ಸ್ವಹಿತ ಸಾಧು ಜನರ ಸುಸನ್ಮತ ವೇದಾಂತದ ಸುಸಾರಬೋಧವ್ಹೇಳಿದ ವಸ್ತು ಭಗವದ್ಗೀತಾ ಸಂದಿಸೀಹ್ಯದÀು ಸದೋದಿತ ಭೇದಿಸಿ ನೋಡಲು ತನ್ನೊಳಗ ತಾಂ ದೋರುತಿದೆ ಸಿದ್ದಾಂತ 1 ಮಮೈವಾಂಶೋ ಜೀವಲೋಕೇ ಜೀವಭೂತ ಸನಾತನ ಃ ಸ್ವಾಮಿ ಹೇಳಿದ್ದ ತಿಳಿಯಲಿಕ್ಕೆ ಆತ್ಮಾನುಸಂಧಾನದ ಖೂನ ನೇಮದಿಂದಲಿ ಹೇಳಿದ ಮಾತಿಗೆ ಮುಟ್ಟಿದನೊಬ್ಬರ್ಜುನ ತುಂಬೇದ ವಿಶ್ವದಿ ಪರಿಪೂರ್ಣ 2 ಏಕಾಂಶೇನ ಸ್ಥಿತೋ ಜಗತ ವೆಂಬ ವಾಕ್ಯದನುಭವ ಸೇವಿಸಿದೊಬ್ಬ ಶುಕದೇವ ನಾಲ್ಕುಶೂನ್ಯವು ಮೆಟ್ಟಿನೋಡಲು ಭಾಸುತಿದೆ ಸುಮನದೈವ ತಾನಾಗೀ ಹ್ಯದು ಜೀವ 3 ಜಾನಾತಿ ಪುರುಷೋತ್ತಮಂ ಮನುಷ್ಯರೊಳಗಧಮಾಧಮಾ ಕ್ರಮತಿಳಿದವನೆ ಪರಮಯೋಗಿ ಆತನೇ ಉತ್ತಮೋತ್ತಮಾ ತಾಂ ಕೇಳಿ ನಿಜಾಧ್ಯಾತ್ಮಾ 4 ` ಹರಿ ಃ ಓಂ ತತ್ಸದಿತಿ ' ವೆಂಬ ನಿಜ ತಿಳಯಬೇಕಿದೆ ಮುಖ್ಯ ಏಳುನೂರು ಶ್ಲೋಕದವಾಕ್ಯ ತ್ವರ ತಾಂ ತಿಳಿಯದು ಒಂದೇ ಮಾತಿನ ಬ್ರಹ್ಮಾದಿಕರಿಗಾಟಕ್ಯ ತರಳಮಹಿಪತಿಗಿದೆ ಸೌಖ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1 ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2 ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3 ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4 ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನುಮಾಡಿದಿ ಬಂದು ಈ ನರದೇಹದಿ | ಜ್ಞಾನ ಸಾಧನ ಹೇಳು ಪ ಭವ | ಕಾನನವಿಡಿದೆಲ್ಲೋ ಅ.ಪ ಮಾನವ ಜನುಮದಿ | ನಿನ್ನ ತಂದನಲ್ಲೋ ಪ್ರಾಣೀ | ಪನ್ನಗಶಯನನ ಘನ್ನ ವಿಶ್ವಾಸದ | ಲಿನ್ನು ವಿರಹಿತಾದೆಲ್ಲೋ ಪ್ರಾಣಿ 1 ಕಂಡಪಥಕ ಹರಿದಂಡಲೆಯದೆನೆಲೆ | ಗೊಂಡವರೊಳು ಕೂಡೋ ಪ್ರಾಣಿ | ಖಂಡಿಸಿ ಸಂಶಯ ಪುಂಡರೀಕಾಕ್ಷನ | ಕೊಂಡಾಡುತ ಬಾಳೋ ಪ್ರಾಣಿ 2 ಹಿಂದಿನ ಮರವಿಗೆ ಇಂದಿಗೆ ನೀರೆರಿ | ಮುಂದ ಸ್ವಹಿತ ನೋಡೋ ಪ್ರಾಣಿ | ತಂದೆ ಮಹಿಪತಿ ನಂದನ ಪ್ರಭುದಯ | ದಿಂದ ಸಾರ್ಥಕ ಮಾಡೋ ಪ್ರಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು | ಮನವ ವುನ್ಮನಮಾಡೀ | ಘನಸುಖದೊಳುಕೂಡಿ | ಆನಂದದೊಳಗಿಹನು ಪ ಬಹುಮಾತವನಾಡಾ | ಮೌನವಹಿಡಿದುಕೂಡಾ | ಸಹಜದಿ ನುಡಿವಂದಾ | ನಾಡಿದ ರದರಿಂದಾ | ಸ್ವಹಿತದ ಸುಖನೋಡಾ 1 ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ | ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ | ಅರಿಸುಖ ಸಮವೆಲ್ಲಾ 2 ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ ಸಾಧುರ ವೇಷದಿ | ಉದರವ ಹೊರೆಯುತಾ | ಬೋಧಿಸುವದಲ್ಲಾ 3 ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು | ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ | ಧ್ಯಾಸದಿ ಬೆರೆತಿಹನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿಧ್ರುವ ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1 ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2 ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಗುರುನಾಥತ್ರಯಗುಣಾತೀತ ಧ್ರುವ ಭಾನುಕೋಟಿ ಸುಪ್ರಭೆಯ ಅನುದಿನಕ್ಷಯ ಘನಮಹಿಮರ ಹೃದಯ ಆನಂದೋದಯ ಅನಾಥರಿಗೆ ಆಶ್ರಯ ನೀನಹುದೊನÀಮ್ಮಯ 1 ದೇಶಿಕÀರಿಗೆ ನೀ ದೇವ ಲೇಸಾಗಿ ಕಾವ ಋಷಿ ಮುನಿಗಳ ಸಂಜೀವ ವಾಸವಾಗಿವ್ಹ ವಿಶ್ವಾತ್ಮನಹುದೊ ಶ್ರೀದೇವ ಭಾಸುತಲಿವ್ಹ ಭಾಷೆಯ ಪಾಲಿಸುವ ಈಶ ನೀನೆ ಕೇಶವ 2 ಬಾಹ್ಯಾಂತ್ರ ನೀ ಸದೋದಿತ ಗುಹ್ಯಗುರುತು ಶ್ರೀಹರಿ ನೀನೆ ಸಾಕ್ಷಾತನಹುದೊ ಸ್ವಹಿತ ಇಹಪರ ನೀನು ದಾತಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು