ಒಟ್ಟು 11 ಕಡೆಗಳಲ್ಲಿ , 8 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಾಹನಆವಾಹನೋಪಚಾರವು ನಿನಗೆ ವಿಭುವೆಆವರಣರಹಿತ ಪರಿಪೂರ್ಣ ಚಿತ್ಸುಖವೆ ಪಹೃದಯಕಮಲದಿ ನೆನೆದು ಪೂಜಿಸುವೆನೆಂದು ಮತ್ತೊದಗಿ ಬಿಂಬದೊಳಿಳುಹಿಯರ್ಚಿಸುವೆನೆಂದುಇದಿರಾಗಿ ನಿಲ್ಲು ಸ್ಥಾಪಿತನಾಗು ಹತ್ತಿರಿರುಹದುಳುನಾಗೆಂದೆನೀ ತಪ್ಪನೆಣಿಸದೆ ಸಲಹು 1ಅಣುಮಹತ್ಪರಿಪೂರ್ಣ ವಾಸುದೇವನೆ ನಿನ್ನಗಣಿಸಿ ನೆಲೆಗಾಣವೀ ಶ್ರುತಿಗಳೆಂಬುದನುಮನದೊಳೆಣಿಸುತಲಿಹೆನು ಸರ್ವರೊಳು ಸಮಬುದ್ಧಿಯನು ಪಾಲಿಸೆಂದು ಬೇಡುವೆನು ಜಗದೀಶಾ 2ಪರಿಪೂರ್ಣನೆಂಬ ಭಾವದಿ ಮನವು ನಿಲದಾಗಿ ಗುರಿಗೈದು ನಿನ್ನ ಮಂಗಳ ಮೂರುತಿಯನುಪರಿಪರಿಯಲುಪಚರಿಸಿ ಸ್ಥಿರಗೈವೆನೀ ಮನವತಿರುಪತಿಯೆ ಸ್ಥಿರವಾಸ ಶ್ರೀ ವೆಂಕಟೇಶಾ 3ಓಂ ಯಮುನಾವೇಗಸಂಹಾರಿಣೇ ನಮಃ
--------------
ತಿಮ್ಮಪ್ಪದಾಸರು
ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ನವನೀತ ತಸ್ಕರಾಯ ಜಯಮಂಗಳಂ ಪವಮಾನ ವಂದಿತಾಯ ಶುಭಮಂಗಳಂ ಪ ವಿಶ್ವ ಪರಬ್ರಹ್ಮ ಅಚ್ಯುತಾಯ ಶರನಿಧಿ ಮಂದಿರಾಯ ಜಯಮಂಗಳಂ ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ ಸಿರಿದೇವಿ ಅರಸಾಯ ಶುಭಮಂಗಳಂ 1 ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ ಶೇಷರಾಜ ಶಯನಾಯ ಶುಭಮಂಗಳಂ 2 ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ ಚಾಣೂರ ಮರ್ಧನಾಯ ಶುಭಮಂಗಳಂ 3 ವಿಶ್ವ ಕುಟುಂಬಿ ಪಾಲಾಯ ವಿಷ್ಣು ಸರ್ವೋತ್ತಮಾಯ ಜಯ ಮಂಗಳಂ ಶಿಷ್ಯ ಜನ ವರದಾಯ ಸಿದ್ಧ ಪ್ರಸಿದ್ಧ ರೂಪಾಯ ಮುಷ್ಟಿಕಾ ಸುರವಧಾಯ ಶುಭಮಂಗಳಂ 4 ಬಂಧು ಬಂಧನಾಯಾ ಮಹಸಿಂಧು ನರ ರಕ್ಷಕಾಯ ಸಿಂಧುರಾಜಾ ಹರಣಾಯ ಜಯಮಂಗಳಂ ವೃಂದಾವನ ಸಂಚಾರಾಯ ವಿಜಯವಿಠ್ಠಲರೇಯಾಯ ಮಾಧವ ದೇವಾಯ ಶುಭಮಂಗಳಂ5
--------------
ವಿಜಯದಾಸ
ಭಾವೀ ಸಮೀರ ಶ್ರೀವಾದಿರಾಜರು ಕಾಯ ಕಾಯ ಬೇಕಯ್ಯ ಪ ಕಾಯ ಬೇಕೈ | ವಿಪ ಅಹಿಪ ಸುರಪಾದಿ ವಂದ್ಯವೆ |ವಿಪುಲ ಪಾಪಾಳಿಗಳ ಹರಿಸೀ | ಸುಪಥ ಸದ್ಗತಿಗೆನ್ನ ಒಯ್ದು ಅ.ಪ. ಗೌರಿದೇವಿಯ ಉದರಸಂಭವನೆ | ಹಯಾಸ್ಯನಂಘ್ರಿಸರಸಿರುಹದಲಿ ಮಧುಪ ನೆನಿಸಿದನೆ ||ದ್ವಾರಕಾದಿ ಕ್ಷೇತ್ರ ಚರಿಸುತ | ಥೋರ ಹಿಮಗಿರಿ ಸೇತುಯಾತ್ರೆಯಸಾರಿ ಸತ್ತೀರ್ಥ ಪ್ರಬಂಧವ | ಧೀರ ನೀ ರಚಿಸುತ್ತ ಮೆರೆದೆಯೊ 1 ಲಕ್ಷಿಸುತ್ತಲಿ ಮಾತೆ ಬಿನ್ನಪವ | ಮಹ ಭಾರತಸ್ಥಲಕ್ಷಪದ ಬಹು ಕ್ಲಿಷ್ಟವೆನಿಸೂವ ||ಲಕ್ಷಣದಿ ಸದ್ಯುಕ್ತ ಪದಗಳ | ಈಕ್ಷಿಸುತ ಅವಕರ್ಥ ಪೇಳುತಲಕ್ಷಸದ್ದಾಭರಣ ಮಾಲಿಕೆ | ಲಕ್ಷ್ಮಿಪತಿ ಹಯಾಸ್ಯಗರ್ಪಿತ 2 ಸೇವಿಸುತ್ತಿಹ ವಿಪ್ರನಾದವನ | ಕೌಟಿಲ್ಯ ಕಂಡುತೀವ್ರದಿಂದಲಿ ಶಾಪವಿತ್ತವನ ||ಭಾವ ತಿಳಿದು ಬೊಮ್ಮರಾಕ್ಷಸ | ಭಾವತಾಳೆಂದೆನುತ ಪೇಳಲುತೀವ್ರ ಯಾಚಿಸೆ ಕ್ಷಮೆಯ ಮಂತ್ರವ | ಆವ ಆಕಾಮ್ಮೈವ ನೊರೆದೆ 3 ಮರಳಿ ಉತ್ತರ ಯಾತ್ರೆಯಲ್ಲಿರಲು | ಗುರು ವಾದಿರಾಜರಅರಿಯದಲೆ ತನ್ಮಂತ್ರ ಪೇಳಲು ||ಒರೆದರೂ ರಂಡೇಯ ಮಗ ನೀ | ನಿರುತಿರುವೆನ ಸ್ನಾತ ಕಾರ್ತಿಕಮರಳಿ ಮಾಘಾಷಾಢ ವಿಶಿಖದಿ | ಹರಿಯಿತೂ ನಿನ ಶಾಪವೆಂದರು 4 ಆತುಗುರುಪದ ಕ್ಷಮೆಯ ಪ್ರಾರ್ಥಿಸಲು | ಗುರುರಾಜರಾಗಭೂತ ರಾಜನು ನೀನೆ ಎನ್ನುತಲು ||ಖ್ಯಾತಿ ಪೊಂದುತ ಭಾವಿರುದ್ರನೆ | ಪೊತ್ತು ಎನ್ನಯ ಮೇನೆ ಮುಂಗಡೆಕೌತುಕವ ತೋರುತ್ತ ಮೆರೆವುದು | ಪೋತ ಭಾವದಿ ತಮಗೆ ಎಂದರು 5 ಕಾಕು ಶೈವನ ಖಂಡಿಸುತ್ತಲಿಆಕೆವಾಳರ ಪೊರೆದು ದಶಮತಿ | ತೋಕನೆಂದೆನಿಸುತ್ತ ಮೆರೆದೇ 6 ಭೂವಲಯದೊಳು ಕಾರ್ಯ ಪೂರೈಸಿ | ಬದರಿಯಿಂದಲಿಭಾವಿ ಶಿವನಿಂ ಪ್ರತಿಮೆ ರಥತರಿಸೀ ||ದೇವ ಗೃಹ ಸಹ ವಿರುವ ವಿಗ್ರಹ | ತ್ರೈವಿಕ್ರಮನ ಸಂಸ್ಥಾಪಿಸುತ್ತಭಾವ ಭಕ್ತಿಯಲಿಂದ ಉತ್ಸವ | ತೀವರದಿ ರಚಿಸುತ್ತ ಮೆರೆದೆ 7 ಹಂಚಿಕಿಂದಲಿ ಪೂರ್ವರಚಿತೆನ್ನ | ವೃಂದಾವನಂಗಳುಪಂಚ ಸಂಖ್ಯೆಯಲಿಂದ ಮೆರೆವನ್ನೆ ||ಮುಂಚೆಯೇ ಸ್ಥಾಪಿತವು ಎನ್ನುವ | ಪಂಚರೂಪೀ ವ್ಯಾಸ ಸಮ್ಮುಖಸಂಚುಗೊಳಿಸೀ ಸ್ಥಾಪಿಸುತ್ತ | ಕೊಂಚವಲ್ಲದ ಕಾರ್ಯ ರಚಿಸಿದೆ 8 ಯುಕ್ತಿಮಲ್ಲಿಕೆ ರುಕ್ಮೀಣೀಶ ಜಯ | ಗುರ್ವರ್ಥ ದೀಪಿಕೆಮತ್ತೆ ಪರಿಪರಿ ಶಾಸ್ತ್ರ ಗ್ರಂಥಗಳ ||ವಿಸ್ತರಿಸಿ ಭುವನದಲಿ ಮೆರೆದೆ | ಉತ್ತಮೋತ್ತಮ ದೇವ ದೇವನುಕರ್ತೃ ಶ್ರೀಹಯ ಮುಖನು ಎನ್ನುತ | ವತ್ತಿ ಪೇಳುತ ವ್ಯಾಪ್ತಿಸಾರಿದೆ 9 ಶಿಷ್ಟ ಜನ ಸಂಸೇವ್ಯ ಧೀವರನೆ | ಶಮದಮಾನ್ವಿತಕಷ್ಟಹರ ಕಾರುಣ್ಯ ಸಾಗರನೇ ||ಕುಷ್ಟ ಅಪಸ್ಮಾರ ರೋಗದ | ಅಟ್ಟುಳಿಯ ಕಳೆಯುತ್ತ ಮೃತ್ತಿಕೆಸುಷ್ಠುಸೇವನೆಯಿಂದ ಭಕ್ತರ | ಇಷ್ಟವನೆ ಸಲಿಸುತ್ತ ಮೆರೆವೆ 10 ಹಯಾಸ್ಯ ವಾಹನ | ಬಿಡದೆ ಏರುತ ಸಾರ್ದೆ ಹರಿಯನು 11
--------------
ಗುರುಗೋವಿಂದವಿಠಲರು
ಮಧ್ವಾರ್ಯ - ಮಧ್ವಾರ್ಯ ಪ ಅದ್ವೈತಾರಣ್ಯ | ಪ್ರಧ್ವಂಸಾನಲ ಅ.ಪ. ಬಡವರು ಎನಿಸಿದ | ನಡುಮನೆ ದ್ವಿಜನಲಿಸಡಗರದಲಿ ಜನ | ಮೃಡನುತ ಗುರುವೇ 1 ಬಾಲನೆ ವೃಷಭನ | ಬಾಲ ಪಿಡಿದು ದೇ ವಾಲಯ ವನದಲಿ | ಲೀಲೆಯ ತೋರ್ದೆ2ಹಸು ಕೂಸಾಗಿಯೆ | ಬಿಸಿ ಹುರುಳಿ ಮೆದ್ದೆವೃಷ ವಿಕ್ರಯಿ ಋಣ | ತಿದ್ದಿದೆ ಬೀಜದಿ 3ಅಚ್ಚ್ಯುತ ಪ್ರೇಕ್ಷರಿಂ | ತಚ್ಚತುರಾಶ್ರಮಸ್ವೇಚ್ಛೇಲಿ ಸ್ವೀಕರ | ಕೃಛ್ರಾದ್ಯಾಚರ 4 ಇಷ್ಟ ಸಿದ್ದಿಗತ | ಭ್ರಷ್ಟ ವಿಷಯಗಳಎಷ್ಟೊ ತೋರಿ ಸುವಿ | ಶಿಷ್ಟನು ಎನಿಸಿದೆ 5 ಬೋಧ ಬದರಿಯಲಿಸಾದರ ಸ್ವೀಕೃತ | $ಗಾಧ ಭಾಷ್ಯಕೃತ 6 ಮೂಲ ಮೂರು ಹತ್ತು | ಏಳು ಗ್ರಂಥಗಳುಲೀಲೆಯಿಂದ ಕೃತ | ಶೀಲ ಸುಜನರಿಗೆ 7 ನಾನೆ ದೇವನೆಂ | ದ್ಹೀನ ಮಾಯಿಗಳಗೋಣು ಮುರಿದು ಸು | ಜ್ಞಾನವನಿತ್ತೆಯೊ8 ಏಕ ವಾಕ್ಯದಿಂ | ದೈತ್ಯವನಳಿಯುತಏಕ ಮೇವ ಹರಿ | ಏಕಾತ್ಮನೆಂದೇ 9 ಬುದ್ಧ್ಯಾಬ್ಧಿಯು ಬರೆ ಗೆದ್ದು | ವಾದದಲಿಅದ್ವೈತವ ಮುರಿ | ದದ್ವಿತೀಯ ಗುರು 10 ಕುಸುಮ ಫಲ | ನಿತ್ತು ತೋರ್ದೆ ನಿಜ 11 ಗೋಪಿ ಚಂದನದಿ | ಶ್ರೀಪ ಗೋಪ ಬರೆಶ್ರೀಪತಿ ಸ್ಥಾಪಿತ | ಆಪುರಿ ಉಡುಪಲಿ 12 ಅಷ್ಟಯತಿಗಳಿಂ | ಕೃಷ್ಣ ಪೂಜೆಗಳಸುಷ್ಠು ಗೈಯ್ಯಲೇ | ರ್ಪಟ್ಟಿತು ನಿನ್ನಿಂ13 ಐತರೇಯ ಸುವಿ | ನೀತರೆನಿಪ ತವಛಾತ್ರರಿಗಾಗಿಯೆ | ಕೂತು ಪೇಳ್ದೆ ಗುರು14 ಶೇಷ ಮುಖ್ಯರಾ | ಕಾಶದಿ ನಿಂತುಪದೇಶವ ಕೇಳುತ | ತೋಷವ ಪಟ್ಟರು 15 ತಕಿಟ ತಕಿಟವೆಂ | ದುತ್ಕಟ ನಾಟ್ಯದಿಪ್ರಕಟ ಹರ್ಷ ಸ್ತ್ರೀ | ನಿಕರಾವಳಿಯಿಂ16 ದೇವ ತತಿಯು ತಮ | ದೇವ ವಾದ್ಯದಿಂಪೂವ ಮಳೆಯ ಗರೆ | ಆವೃತನದರಿಂ 17 ಕೃತ ಕಾರ್ಯನೆ ತವ | ಸ್ತುತಿಯಗೈಯ್ಯ ಸುರತತಿಯ ಬದರಿ ಪುರ | ಗತ ನೆಂದೆವಿಸಿದೆ 18 ವ್ಯಾಸಾತ್ಮನು ಗುರು | ಗೋವಿಂದ ವಿಠಲನದಾಸ ಹೃದಯದವ | ಕಾಶದಿ ಭಾಸಿಸು 19
--------------
ಗುರುಗೋವಿಂದವಿಠಲರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ. ವಾರಿಜಾಕ್ಷ ವರಗುಣಾಕರ ವಾರಿಜಾಕ್ಷಿ ವರದಾಯಕ ಸನ್ನುತ ನಾರದಾದಿ ಮುನಿವಂದಿತ ಪದಯುಗ ಅ.ಪ. ಸುಂದರಾಂಗ ಸುಕಲಾನ್ವಿತ ನಿಭಚರಣ ಕಟಿಶೋಭಿತ ವ್ಯಾಳಸ- ಬಂಧನಾಬ್ಧಿ ಶತಕೋಟಿಸದೃಶ ಕಿರಣ ಚಂದನಾಂಗಾರ್ಚಿತ ಸುಮನೋಹರ ಮಂದಹಾಸ ಮಹಿಮಾಂಬುಧಿಚಂದಿರ 1 ಕಂಬುಗ್ರೀವ ಕಮನೀಯ ಕರಾಂಬುರುಹ ಪಾಶಾಂಕುಶಧರ ವರ ಶಂಬರಾರಿಜಿತುತನಯ ಮಧುರಗೇಹ ಜಂಭಭೇದಿವಂದಿತ ಅತ್ರಿವಂದಿತ ಲಂಬೋದರ ವಿಘ್ನಾಂಬುಧಿ ಕುಂಭಜ 2 ಚಾರುಭಾರ ಕನ್ಯಾಪುರವರ ನಿಲಯ ಮೃಕಂಡುಜದ ಮುನಿವರ ಸಾರಮಂತ್ರಸ್ಥಾಪಿತ ಮಂಗಲ ಕೆರೆಯ ವರಕಪಿತ್ಥಫಲೋರಸಭುಂಜಿತ ಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶಿವಶಿವ ಜಯಜಯ ಶಿವ ಸರ್ವೋತ್ತಮಕಾಯ ಶಿವ ದೂರಿಕೃತಮಾಯ ಶಿವಶರಣಾಗತಪ್ರಿಯ ಪ ಸನಕಾದಿ ಮುನಿಹೃದಯ ವನಜಸ್ಥಾಪಿತಸೂರ್ಯ ದನುಜ ವಿಮರ್ದನ ವೀರ್ಯ ಸುಗುಣನಿರಾಕೃತ ಕೋಪ 1 ಚಾಪ ನಿಗಮಾಗೋಚರ ರೂಪ ಜಗದಂತಃಸ್ಥಿತದೀಪ ಸುಗುಣನಿರಾಕೃತ ಕೋಪ 2 ಪರಮಪಾವನ ಕಾಮಹರ ಕಕುದ್ಗಿರಿಧಾಮವರ ಗಂಗಾಧರನಾಮ ತಿರುಪತೀಶ್ವರ ಪ್ರೇಮ 3
--------------
ತಿಮ್ಮಪ್ಪದಾಸರು
ಸ್ವಾ'ುಲಾಲೀ ತುಲಸೀ ರಾಮಲಾಲೀಪ್ರೇಮತುಲಸೀನಳಿನಾಕ್ಷಧಾಮ ಲಾಲೀ ಪಪ್ಲವಂಗಾಷಾಢಬಹುಳದಶಿ'ುಭಾರ್ಗ' ಲಾಲೀಭು'ಯವತಾರ ಸಾಯಂತ್ರಂ ಮೃಗಶಿರಯುತ ಲಾಲೀ 1ವೇಂಕಟಲಕ್ಷಾಂಬೋದರಪಯೋಧಿಸೋಮ ಲಾಲೀಪಂಕಜಲೋಚನ ಪ್ರಥಮಾಶ್ರಮವ್ರತನೇಮ ಲಾಲೀ 2ಸಿದ್ಧವಟಾ'ರ್ಭವ ವೈಷ್ಣವ ದೇವ ಲಾಲೀ ಇದ್ದರತುಲಸೀಕುಲಕೊಂಡಾರ್ಯಪ್ರಿಯಸುತ ಲಾಲೀ 3ಸಕಲಾಗಮ ಶಾಸ್ತ್ರಾರ್ಥಪರಿಶ್ರಮಸೇಯು ಲಾಲೀಶುಕವಾಗಝ ಸಂಶೋಭಿತ ಚರಿತ ಸತ್ಕ' ಲಾಲೀ 4ಶಮದಮಸದ್ಗುಣ ಶಾಂತಪ್ರತಿಭಸೂನೃತ ಲಾಲೀತೆಮಲಕನೆಪ್ಪುಡು ತಾರಕಮಂತ್ರುಪದೇಶಿ ಲಾಲೀ 5ಶ್ರೀಮದಹೋಬಿಲಸ್ವಾ'ುಯತೀಂದ್ರಸೇವಕ ಲಾಲೀಕೋಮಲಭಾತಕ'ಜನವಂದಿತ ಕೌಶಲ ಲಾಲೀ6ರಾಮಕೃಷ್ಣಪರಬ್ರಹ್ಮಮಹೋತ್ಸವರುಚಕೃತ ಲಾಲೀನೇಮರ'ತಮೂರ್ಖಾದಿಪತಿತೋದ್ಧಾರ ಲಾಲೀ 7ತವಗುಣಜಿತಕೇಯೂರಸತ್ವಾಭರಣ ಲಾಲೀಸುವರ್ಣಮಣಿಮಯಭೂಷಣ ಸ್ವಾರ್ಥತ್ಯಾಗ ಲಾಲೀ 8ಪುರಪುರಭಜನಾಗಾರಾ ಗಣಿತಸ್ಥಾಪಿತ ಲಾಲೀಪರಮೋದಾರಪರ ಚಿಂತನ ಕರುಣಾಕರ ಲಾಲೀ 9ಧರಮ'ಸೂರ್ಪುರವರ ಪ್ರಭುಪೂಜಿತ ಸ್ಮರಜಿತಲಾಲೀತಿರುರಾಮೋತ್ಸವ ತುಲಸೀವನಪ್ರತ್ಟಿತ ಲಾಲೀ 10ದುರಿತನಗಾಸಿನಿ ಸುಮತಮುಖ ಧಾರ್ಮಿಕಲಾಲೀಭರತಪುರಿಯರ್ಚಾವತಾರ ಭಾ'ಕ ಲಾಲೀ 11ಆಧಾರಭ್ರೂಮಧ್ಯಾಂತರ್ಬ' ವೇದ್ಯ ಲಾಲೀಖೇದಮೋದರ'ತ ಬ್ರಹ್ಮಾನಂದ ಲಾಲೀ 12ಪುತ್ತಡಿಗುರುಧರಲಕ್ಷ್ಮಿ ಸಂಪದ್ಯುಕ್ತ ಲಾಲೀಚಿತ್ತುಅಚಿತ್ತೀಶ್ವರ ತತ್ವತ್ರಯ ಶೇ ಲಾಲೀ 13ಸಿರಿಮುಳುಬಾಗಲಸನ್ನಿಧಿ ಸ್ಥಾಪನಚೇಯು ಲಾಲೀಧರರಂಗಸ್ವಾ'ುದಾಸ ಜೀವೋದ್ಧಾರಕ ಲಾಲೀ 14
--------------
ಮಳಿಗೆ ರಂಗಸ್ವಾಮಿದಾಸರು
ಭಾಪು ಹರಿಮತನೆ ಪ.ಭಾಪು ಹರಿಮತಸ್ಥಾಪಿತನೆ ಮೂರುರೂಪಿನಲಿ ಬಂದು ಶ್ರೀಪತಿಯು ಮೆಚ್ಚುವಾ ಪರಾಕ್ರಮ ವ್ಯಾಪಿಸಿದೆ ಭಾರತೀಪತೆ ತೇ ನಮೊ ಅ.ಪ.ಆದಿಯಲಿ ಅಂಜನಾದೇವಿಯ ಮಂಗಳೋದರದಿ ಪುಟ್ಟಿ ಶ್ರೀದ್ಯುಮಣಿಕುಲಮೇದಿನೀಶನ ಪಾದಕೆರಗಿ ಅಂಬೋಧಿದಾಟ್ಯಾಜÕದಿಆ ದಶಾಸ್ಯನ ಲಂಕಾ ದಹಿಸಿ ಜಾನಕೀದೇವಿಯ ಸುದ್ದಿ ಶ್ರೀಧರಗರುಹಿಯೋಧ ಬಾಧಿತರಾದ ಕಪಿಚೇತನದಾಯಕ ತೇ ನಮೊ 1ತುಂಗಗಿರಿ ಶತಶೃಂಗಕೃತ ಸುವಜ್ರಾಂಗ ಅಗ್ನಿಜಾಸಂಗಮತ್ತನೃಪಂಗಳನು ಭುಜದಿಂ ಗೆಲಿದು ಯಜÕ ಸಂಗ್ರಹವ ಪೂರಿಸಿಸಂಗಡಿಸಿದರಿ ಸಂಗರವ ಪೊಕ್ಕುಸಿಂಗಗರ್ಜನೆಯಿಂ ಗದೆಯ ಕೊಂಡುಭಂಗಿಸಿದೆಯೊ ಯುಗ್ಮಾಂಗ ಕೃಷ್ಣ ಸೇವಾಂಗೀಕೃತ ತೇ ನಮೊ 2ತುಚ್ಛರಿಳೆಯೊಳು ಪೆಚ್ಚಿ ಬಗೆ ಬಗೆಕುಚ್ಛಿತಾರ್ಥ ವಿರಚ್ಚಿಸ್ಯಾತ್ಮಗೆಅಚ್ಚುತೈಕ್ಯವ ಉಚ್ಚರಿಸುತಿರೆ ಸ್ವಚ್ಛ ಯತಿರೂಪದಿಮಚ್ಚರಿಪರನು ಕೊಚ್ಚಿ ತಂತ್ರಸಾರಾರ್ಚನೆಯಭೇದ ನಿಶ್ಚೈಸಿದೆ ಶಿರಿಸಚ್ಚಿದಾತ್ಮ ಶ್ರೀವತ್ಸ ಪ್ರಸನ್ವೆಂಕಟೇಚ್ಛಮತ ತೇ ನಮೊ 3
--------------
ಪ್ರಸನ್ನವೆಂಕಟದಾಸರು
ವಾರಣವದನ ತ್ರೈಲೋಕ್ಯಸುಮೋಹನ ವಾರಣವದನ ಪ.ವಾರಿಜಾಕ್ಷ ವರಗುಣಾಕರವಾರಿಜಾಕ್ಷಿ ವರದಾಯಕಸನ್ನುತನಾರದಾದಿ ಮುನಿವಂದಿತ ಪದಯುಗ ಅ.ಪ.ಸುಂದರಾಂಗ ಸುಕಲಾನ್ವಿತ ನಿಭಚರಣಕಟಿಶೋಭಿತ ವ್ಯಾಳಸ-ಬಂಧನಾಬ್ಧಿ ಶತಕೋಟಿಸದೃಶ ಕಿರಣಚಂದನಾಂಗಾರ್ಚಿತ ಸುಮನೋಹರಮಂದಹಾಸ ಮಹಿಮಾಂಬುಧಿಚಂದಿರ 1ಕಂಬುಗ್ರೀವಕಮನೀಯಕರಾಂಬುರುಹಪಾಶಾಂಕುಶಧರವರಶಂಬರಾರಿಜಿತುತನಯ ಮಧುರಗೇಹಜಂಭಭೇದಿವಂದಿತ ಅತ್ರಿವಂದಿತಲಂಬೋದರ ವಿಘ್ನಾಂಬುಧಿಕುಂಭಜ2ಚಾರುಭಾರ ಕನ್ಯಾಪುರವರನಿಲಯಮೃಕಂಡುಜದ ಮುನಿವರಸಾರಮಂತ್ರಸ್ಥಾಪಿತ ಮಂಗಲ ಕೆರೆಯವರಕಪಿತ್ಥಫಲೋರಸಭುಂಜಿತಧೀರ ಲಕ್ಷ್ಮೀ ನಾರಾಯಣಸಖಸುತ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ