ಒಟ್ಟು 25 ಕಡೆಗಳಲ್ಲಿ , 14 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ಬಂದಾರು ದೇವತೆಗಳುವೃಂದಾವು ದುಷ್ಟ ಜನರಿಂದಾಲೆ ಭೂಮಿ ನೊಂದಾಳುಎಂದುಸುರಿತಾ ಪ ಕಂದರ್ಪತಾತ ನಿನಗೊಂದಿಸಿ ಬೇಡುವೆನು ಛಂದಾದಸೂರ್ಯಸುತನಾಮಂದಿರದೋಳ್ ಜನಿಸಿ ನಂದಾದಿ ಗೋಕುಲದಿ ನಿಂದಾತ್ಮಲೀಲೆ ತೋರೊ ಅ.ಪ. ಅಂದಾಡಿದೂತ ಸುರವೃಂದಾರ ವಾಕ್ಯಗಳ ಕಿವಿಯಿಂದಾಲೆಕೇಳಿ ಹರಿಯುಛಂದಾದಿ ನೀವುಗಳು ಮುಂದಾಗಿ ಜನಿಸುವದು ಹಿಂದಾಗಿನಾ ಜನಿಸುವೇಅಂದಾಡಿದಂಥ ಹರಿ ಸುಂದರಾ ಮಾತವನು ತಂದಾನುಬ್ರಹ್ಮ ಮನದೀಇಂದ್ರಾದಿಗಳಿಗೆಲ್ಲ ಅವನಂದದ್ದು ಪೇಳೆ ನಿಜಮಂದಿರಖೋಗಿರೆಂದಾ 1 ಎಲ್ಲಾ ಅಮರರೂ ನಿಜವಲ್ಲಾಭಿಯರು ಸಹ ಅಲ್ಲಲ್ಲೆಜನಿಸುತಿಹರೂಫುಲ್ಲಾಕ್ಷತಾ ಮಥುರೆಯಲಿಟ್ಟು ಗೋಕುಲದಿ ಮೆಲ್ಲಾನೆಬೆಳೆಯುತಿರಲುಅಲ್ಲಿದ್ದ ಗೋಪಿಯರು ಯಲ್ಲಾರು ತಾವು ನಿಜವಲ್ಲಾಭೆರೆಂದು ಹರಿಯೋಳ್‍ಎಲ್ಲಾನು ಬಿಟ್ಟು ಅವನಲ್ಲಿಗೆ ಸ್ನೇಹವನು ಉಲ್ಹಾಸಮಾಡುತಿರಲು 2 ವ್ರಜ ಕರ ವೃಂದಾವನದಲ್ಲಿಳುಹಿದಾ 3 ವಂದೀನ ರಾತ್ರಿ ರವಿನಂದಿನಿಯೋಳ್ ಹರಿಯುನಿಂದೂದಲಾಗ ಕೊಳಲುವೃಂದಾದರಾಗಗಳಿಂದಾಲೆ ಕೇಳಿ ವ್ರಜದಿಂದಾವರಾನಿಹರೂಮಂದೀರದೊಳಗೆ ನಿಜ ಕಂದಾರು ನಾಥಗಳು ಛಂದಾದವಸ್ತ್ರಂಗಳುವಂದಾನು ನೋಡದಲೆ ವಂದಾರು ಯಮುನೆಯಲಿಂದಾರುಮೈಯ್ಯ ಮರೆತು 4 ಬಂದೇವು ನಾವು ನಿಜ ಮಂದೀರ ಬಿಟ್ಟು ನಿಮ್ಮ ಸುಂದರಕೊಳಲ ಧ್ವನಿಗೇಛಂದಾದ ಸ್ಮರಣೆ ಸುಖದಿಂದಿತ್ತು ನಮಗೆ ದ್ವಿಜೇಂದ್ರೇತಕಾಯೋ ಯನಲುಅಂದಾವರಾಮಾತು ನಂದಾನುಸೂನ ದಯದಿಂದಾಲೆಕೇಳಿ ಹರಿಯೂಮುಂದಣಿಯಾಗ ಅವರಿಂದಾಲೆ ಕೂಡಿ ದಯದಿಂದಾಲೆನಲಿದು ಮರೆದೂ 5 ಬಂದಾನು ಮಥುರೆಯಲಿ ಕೊಂದಾನು ಮಾತುಳನೆತಂದೀಯಾ ಬಂಧನವ ಬಿಡಿಸೀಸಾಂದೀಪಗಿತ್ತು ಕಂದಾನಸೂನ ಕುರು ನಂದಾರಕೊಲ್ಲಿಸಿದನೂಇಂದ್ರತ್ವ ಜ್ವಾಲೆಗಳೂ ಅಂತಿತ್ತು ರಾಜ ಸುಖ ಸಂದೇಹ ಸಂತೋಷದೀಇಂದ್ರಾದಿ ಸರ್ವಸುರ ಸಂದೇಹ ಪ್ರಾರ್ಥಿಸಿದ ಒಂದೊಂದೆ ಮಹಿಮೆಗಳನೂ 6 ಛಂದಾಗಿ ಮಾಡಿದ್ವಶ ಮಡುಹಿಕರ ವೃಂದಾವಪಾಲಿಸಿದನೂನಂದಾತ್ಮ ಜಾತವು ಒಂದೊಂದೆ ಮಹಿಮೆಗಳ ತಂದೊಮ್ಮೆಮನದಿ ಸ್ಮರಿಸೀಬೆಂದಾವು ಪಾಪಗಳು ಬಂದಾವು ಸೌಖ್ಯಗಳುಸಂದೇಹವಿಲ್ಲನಿದರೋಳ್‍ಕಂದಾರ ಕೊಡುವ ಧನ ವೃಂದಾವು ಪೊರೆವಾ ಮಂದೀರವಿತ್ತು ಸಲಹುವ 7 ಇಂದೆನ್ನ ಮಾನಸದಿ ತಂದಾತ್ಮ ರೂಪವನೂ ಛಂದಾಗಿ ಸಂತೈಸಲೀನಂದಬಾಲಾಷ್ಟಕವನೂ ಇಂದುವಾವರು ಪಠಿಸುವಾ ಇಂದಿರೇಶನು ಪಾಲಿಸುವನೂ 8
--------------
ಇಂದಿರೇಶರು
ಕರುಣಿಸು ದೇವದೇವ ಸೆರಗೊಡ್ಡಿ ಬೇಡುವೆನಭವ ಪರಿಹರಿಸು ಎನ್ನ ಕರುಣಾಳು ಲಕ್ಷ್ಮಿಯ ಜೀವ ಪ ಅಂಬುಧಿಶಾಯಿಯೆ ನಿನ್ನ ಭಜಿಪೆ ಪಾವನ್ನ ಅಂಬುಜಸಂಭವಪಿತನೆ ಕಂಬುಕಂಧರಪ್ರಿಯಸಖನೆ ಅಂಬುಧಿಯಸಂಜಾತೆರಮಣ ಬೆಂಬಲಿಸಿ ಕಾಯೊ ಬಡವನ್ನ 1 ಸುಂದರಕಾಯ ಇಂದಿರೆಯ ಪ್ರಾಣಪ್ರಿಯ ಬಂಧನದ ಬಡತನ ಕಳಿಯೊ ವಂದಿಸಿ ಮರೆಹೊಕ್ಕೆ ಜೀಯ 2 ಈಸೀಸಿ ಸಂಸಾರನಿಧಿಯ ಬೇಸತ್ತು ಬಿಡುವೆನೊ ಬಾಯ ಘಾಸಿ ಮಾಡದೆ ಸಲಹಯ್ಯ 3
--------------
ರಾಮದಾಸರು
ಚಿತ್ತಜನಯ್ಯನ ಚಿಂತಿಸು ಮನವೇಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ಪ ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿಕಾಲಪಾಶದೊಳಿಟ್ಟು ಶೂಲದಿಂದಿರಿವಾಗಪಾಲಿಸುವರುಂಟೆ ಜಾಲವ ಮಾಡದೆ 1 ದಂಡಧರನ ಭಟರು ಚಂಡಕೋಪದಿ ಬಂದುಕೆಂಡದ ನದಿಯ ತಡಿಗೆ ಕೊಂಡೊಯ್ದುಖಂಡಖಂಡವ ಕಿತ್ತು ಕೆಂಡದೊಳಿಡುವಾಗಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ 2 ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡುಕಂಗಳಿಗೆ ಸೀಸವ ಕಾಸಿ ಪೊಯ್ಯಲುತಂಗಿ ಅಕ್ಕ ಬಂದು ಭಂಗವ ಬಿಡಿಸುವರೆಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ 3
--------------
ಶ್ರೀಪಾದರಾಜರು
ಡಂಕವ ಸಾರಿದನೋ ಯಮ ತನ್ನ ನಗರದಿ ಘಂಟೆಯ ನುಡಿಸಿದನು ಪ ಡಂಕಸಾರಿದ ತನ್ನ ತುಂಟದೂತರಿಗ್ವೊ ಯ್ಕುಂಠನ ದಾಸರ ತಂಟೆಯು ಬೇಡೆಂದು ಅ.ಪ ಕಾಲಕಾಲದಿ ಹರಿಯಕಥೆ ಕೀರ್ತ ನಾಲಿಸುವರ ನೆರೆಯು ತಾಳದಮ್ಮಡಿ ಸಮ್ಮೇಳದೊಡನೆ ಆ ನೀಲಶ್ಯಾಮನ ಭಜಿಪರಾಳಿನಾಳನುಕಂಡು ಕಾಲನಾಲುಗಳೆಂದ್ಹೇಳದೆ ಬನ್ನಿರೆಂದು 1 ಮಂದಿರಂಗಳದಿ ವೃಂದಾವನ ದಂದ ಕಂಡಾಕ್ಷಣದಿ ಸಿಂಧುಶಯನ ಬಂಧುಭಕ್ತರ ಮಂದಿರವಿದೆಂದು ಹಿಂದಕ್ಕೆ ನೋಡದೆ ಸಂದ್ಹಿಡಿದೋಡಿ ಪುರ ಬಂದು ಸೇರಿರೆಂದು 2 ಪರರಂಗನೆಯರ ಸ್ಮರಿಸುವ ಪರಮ ನೀಚರನ್ನು ನರಹರಿ ಸ್ಮರಣೆಯ ಅರಿಯದ ಆಧಮರ ಕರುಣಿಸದೆ ತುಸುಮುರಿದು ಮುಸುಕಿಕಟ್ಟಿ ದರದರನೆಳೆತಂದು ಉರಿಯೊಳ್ಪೊಯಿರೆಂದು 3 ಪರದ್ರವ್ಯವಪಹರಿಸಿ ಲಂಚದಿಂದ ಸರುವ ತನ್ನದೆನಿಸಿ ನಿರುತ ಮಡದಿಮಕ್ಕಳೊರೆವ ದುರಾತ್ಮನರ ಗುರುತಳನೆಳತಂದು ಕರಿಗಿದಸೀಸಬಾಯೊಳ್ ವೆರಸಿ ಜನಕಕೊಂಡದುರುಳಿಸಿಬಿಡಿರೆಂದು 4 ವೇಣು ಕರದಿ ಪಿಡಿದು ಬಾಣಾರಿ ಧ್ಯಾನದೊಳಗೆ ಬರೆದು ಜಾನಕೀಶನ ಲೀಲೆ ಗಾನದಿಂ ಪಾಡುತ ಆನಂದಿಪ ಮಹಜ್ಞಾನಿಗಳನು ಕಂಡು ಕಾಣದಂತೆ ಸಿಕ್ಕ ಜಾಣ್ಣುಡಿದೋಡಿರೆಂದು 5 ಇಂದಿರೇಶನದಿನದಿ ಅನ್ನವನು ತಿಂದ ಮೂಢರ ಭರದಿ ತಂದು ಒದೆದು ಮಹಗಂಧಮದು ರ್ಗಂಧನಾರುವ ಮಲತಿಂದು ಬದುಕಿರೆಲೊ ಎಂದು ಮನೆಹೊರಗಿನ ಮಂದಿರದಿಡಿರೆಂದು 6 ವಿಮಲ ತುಳಸೀಮಣಿಯ ಧರಿಸಿ ಅಮಿತ ಮಹಿಮನ ಚರಿಯ ವಿಮಲಮನಸರಾಗಿ ಕ್ರಮದಿ ಬರುವ ಶ್ರೀ ರಾಮದಾಸರ ಪಾದಕಮಲಗಳನು ಕಂಡು ಯಮದೂತರೆನ್ನದೆ ನಮಿಸಿ ಬನ್ನಿರೆಂದು 7
--------------
ರಾಮದಾಸರು
ತಿಳಿವಳಿಕೆಯಲಿ ನಡಿ ಮನುಜಾ ಯಮ-ನಲಿ ಆಗೊ ಭವಣೆಯು ತಪ್ಪದು ನೈಜಾ ಪ. ಸುಳ್ಳು ಮಾತುಗಳಾಡೋರಿಲ್ಲೆ ನಿನ್ನಹಲ್ಲು ಕಿತ್ತಿಸಿ ಕಡಿ ಘಾಕುವರಲ್ಲೆಕಳ್ಳತನವ ಮಾಡೋದಿಲ್ಲೆ ಬೆನ್ನಸೆಳ್ಳಿಯಬ್ಬಿಸೆ ಕೈಯ ಕಡಿಸುವರಲ್ಲೆ 1 ದತ್ತಾಪಹಾರ ಮಾಡೋದಿಲ್ಲೆ ಜಿಂಹ್ವಕತ್ತರಿಸುವರೆಲೊ ಅಂತಕರಲ್ಲೆವೃತ್ತಿಛೇದನ ಮಾಡೋದಿಲ್ಲೆ ನಿನ್ನಎತ್ತಿ ಹಾಕುವರೊ ಕುಂಭೀಪಾಕದಲ್ಲೆ 2 ಪರಸತಿಯರನಪ್ಪೋದಿಲ್ಲೆ ನಿನ್ನಉರಿವ ಉಕ್ಕಿನ ಕಂಭ ತೆಕ್ಕಿಸೋರಲ್ಲೆಮರವಿ ಮೋಸವ ಮಾಡೋದಿಲ್ಲೆ ನಿನ್ನಪರಿಪರಿ ಭವಣಿಯ ಬಡಿಸುವರಲ್ಲೆ 3 ಪ್ರಾಣಹಿಂಸೆಯ ಮಾಡೋದಿಲ್ಲೆ ಕಲ್ಲಗಾಣದೊಳಗೆ ಇಕ್ಕಿ ತಿರಗಿಸೋರಲ್ಲೆಮಾನಿನಿಯರ ನೋಡೋದಿಲ್ಲೆ ಶಸ್ತ್ರಪೋಣಿಸಿ ಕಂಣಾ ಮೀಟಿಸುವರೋ ಅಲ್ಲೆ 4 ಹೇಸಿ ವಿಷಯ ನಂಬೋದಿಲ್ಲೆ ಸೀಸ ಕಾಶಿ ಹೊಯ್ಯುವರೆನೊ ನಿನ್ನ ಬಾಯಲ್ಲೆದೂಷಣ ನಿಂದಗಳಿಲ್ಲೆ ಬಲುದೋಷಿಯೆನ್ನುತ ನಿನ್ನ ಘಾಸಿಪರಲ್ಲೆ 5
--------------
ಐಹೊಳೆ ವೆಂಕಟೇಶ
ದಾರೇನೆಂಬುರೈ|ಹರಿ ಭಕ್ತರಿಗೆ|ದಾರಲ್ಲವೆಂಬುರೈ ಪ ಗುರುವಿನಂಘ್ರಿವಿಡಿದು|ಗುರುತುಕೀಲವರಿತು ನಿಜಾ| ಪರಮಾನಂದ ಸುಖಾ|ಸುರಸನುಂಬುವರಿಗೇ 1 ಕುತ್ಸಿತ ಮಾರ್ಗವನೆಲ್ಲಾ|ಕೊಚ್ಚಿಜರಿದು ಧರಿಯೊಳು| ಅಚ್ಯುತ ಪರದೈವನೆಂದು|ನೆಚ್ಚಿದ ಮಹಿಮೆಗೆ 2 ಮಾಧವ ಮುದ್ರೆಯಿಂದ|ದ್ವಾದಶ ನಾಮವನಿಟ್ಟು| ಪದುಮಾ ತುಳಸೀಸರ|ಹೃದಯದಲ್ಲಿ ಮೆರೆವಂಗೆ 3 ನಷ್ಟನೃಪರಾ ಮನೆಯಾ|ತನಿಷ್ಟೆಯೊಳು ಲೆಕ್ಕಿಸದೆ| ಹುಟ್ಟಿದ ಲಾಭದಲ್ಲಿ|ತುಷ್ಟಿ ಬಟ್ಟಿರುವಂಗೆ 4 ಅವರವರಂತೆ ಲೋಕ|ದವರಿಗೆ ತೋರುತಾ| ವಿವರಿಸಿ ವಿವೇಕ ಹಾದಿ|ಭವದಾ ಬೇರಿಳಿದಂಗೆ 5 ತಾಳದಂಗಡಿಗೆಯ ಸಿಡಿದು|ಮೇಳ ಭಾಗವತರೊಳು| ಶ್ರೀಲೋಲನನು ಪಾಡಿ|ನಲಿದಾಡುತಿಹರಿಂಗೆ 6 ತಂದೆ ಮಹಿಪತಿ ನಿಜಾ|ನಂದನ ಸಾರಿದ ನುಡಿ| ಹೊಂದಿ ಭಾವಭಕ್ತಿಯಿಂದ|ಛಂದವಾಗಿಪ್ಪರಿಂಗೆ7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು
ನೋಡಿದೇ ಶ್ರೀ ವಿಠಲನ ನೋಡಿದೆ ಪ ಕುಂಡಲ ಧರನ ಅ.ಪ. ದಾಸರಂದದಿ ಕಾವಿ ವಸನ | ಹೊದ್ದುಭಾಸೀಸುತಿಹ ಸಿರಿವರನ | ವಸನಮೀಸಲನವನು ತೆಗೆಯಲದನ | ಕಂಡೆಲೇಸಾದ ಶಾಲು ಹೊದ್ದವನ | ಆಹಕಾಶಮೀರದ ಶಾಲು | ಭಾಸುರ ಜರೆ ಖಚಿತಭೂಷಿತ ಹರಿ ಕುಳಿತು | ತೋಷಿಪ ಭಕುತರನ 1 ಸುತ್ತಿಹ ಪಾವಡೆ ಶಿರಕೇ | ಬಲುಸುತ್ತು ಸುತ್ತಿರುವುದು ಅದಕೆ | ಹರಿಮಸ್ತಕ ಛಂದ ಕಾಂಬುದಕೆ | ನೋಡಿಭಕ್ತ ಸಂದಣಿಯ ತೋಷಕ್ಕೆ | ಆಹಸುತ್ತಿಹುದನು ಬಿಚ್ಚೆ | ತುತ್ತಿಸುತಿರಲಾಗಕೃತ್ತಿವಾಸನ ತಾತ | ನೆತ್ತಿ ನೈಜವ ಕಂಡೆ 2 ಪೂಜಾರಿ ತೆಗೆಯಲು ಜರಿಯ | ಶಾಲುಮಾಜಾದೆ ವಿಠಲನ ಪರಿಯ | ಕಂಡೆನೈಜದ ಶ್ರೀವರನ ದ್ವಯ | ಹಸ್ತಯೋಚಿಸಿ ಕಟಿಲಿಹ ಪರಿಯ | ಆಹಸೋಜಿಗತನರೂಪ | ನೈಜದಿ ತೋರುತಪೂಜಾದಿ ಸ್ವೀಕಾರ | ವ್ಯಾಜಾವ ಕಂಡೆನು 3 ನಿರ್ಮಲಾಕೃತಿ ಪೊದ್ದ ಹಾರ | ತುಳಸಿಕಮ್ಮಲ ರ್ಸೂಸುವಧಾರಾ | ಕಾರಒಮ್ಮೇಲಿ ತೆಗೆದರಪಾರ | ದಯಸುಮ್ಮನ ಸರಿಗೀವ ಪೋರ | ಆಹಆಮ್ಮಹ ದೈವನ | ಇಮ್ಮಡಿ ಪ್ರಭೆ ಕಂಡನಿರ್ಮಾಲ್ಯ ತೆಗೆಯುವ | ಕರ್ಮಾಚರಿಸೂವಲ್ಲಿ 4 ಪಾದ | ಸ್ವೀಕರಿಸುವ ಭಕ್ತತೋಕನ ಬಿಂಬೋದ | ಶ್ರೀಕರ ದಳ ತುಳಸಿ 5 ನಾಕ್ಹತ್ತು ಭುವನಗಳ್ಜೋತಿ | ಮತ್ತನೇಕಾನೇಕಾಕಾರ ಜ್ಯೋತಿ | ಗಳೊಪ್ರಕಾಶ ಪ್ರದ ಪರಂಜ್ಯೋತಿ | ಮುಕ್ತಿಪ್ರಕಾರ ದೊಳಗಿವನೆ ಜ್ಯೋತಿ | ಆಹಏಕಮೇವ ಹರಿಗೆ | ಕಾಕಡಾರುತಿ ಮಾಳ್ಪಲೋಕರ ಪೂಜೆಯ | ಸ್ವೀಕರಿಪುದ ಕಂಡೆ 6 ಪಂಚ ಮೋಕ್ಷ ಪ್ರದ ಹರಿಗೆ | ಆಯ್ತುಪಂಚ ವಿಧಭಿಷೇಕ ಆವಗೆ | ಶೇಷಮಂಚಿಕೆ ಕ್ಷೀರಾಬ್ದಿಶಯಗೆ | ಮಧುಸಂಚನ ಮಧ್ವಿದ್ಯ ಹರಿಗೆ | ಆಹಪಂಚಾಮೃತಭಿಷೇಕ | ಸಂಚಿಂತಿಸುವನೀಗೆಸಂಚಿತ ಕರ್ಮವ | ಕೊಂಚವ ಮಾಡುವ 7 ಮಂಗಳ ಮಹಿಮಗ ಸ್ನಾನಾ | ಅವಗಂಗಾ ಪಿತನೆಂಬುದೆ ಮಾನ | ಹಾಗೂಅಂಗಜನಯ್ಯಗೆ ಸ್ನಾನಾ | ಆಯ್ತುಹಿಂಗದೆ ಲೋಕ ವಿಧಾನಾ | ಆಹಸಂಗೀತಲೋಲ ಸ | ತ್ಸಂಗವು ತುತಿಸಲುಸ್ವಾಂಗಾಯನಾಮ ಶು | ಭಾಂಗನು ಮೆರೆದನು 8 ಕಾಯ ವರೆಸಿ | ಬಹುಶಾಸ್ತ್ರೋಕ್ತಿ ಉಡಿಗೆಯ ಉಡಿಸಿ | ಮತ್ತೆರತ್ನಧ್ಯಾಭರಣವ ತೊಡಿಸಿ | ಚೆಲ್ವಕಸ್ತೂರಿ ತಿಲಕವನಿರಿಸಿ | ಆಹವಿಸ್ತøತೀಪರಿಯಲಿ | ಸತ್ಯ ಷೋಡಶ ಪೂಜೆಚತ್ತುರ ಮೊಗನಿಂದ | ಕೃತ್ಯಾನು ಸಂಧಾನ 9 ವೇದ ಘೋಷ ಪೂಜಾ ಮಂತ್ರ | ಬಹುನಾದ ವಿಠಲ ನಾಮ ಮಂತ್ರ | ತುಂಬಿಮೋದ ಪೂರೈಸಿತು ತಂತ್ರ | ಘಂಟೆನಾದದಿಂದಾರುತಿ ಕೃತ | ಆಹಆದರದಿಂದ ಪ್ರ | ಸಾದವು ಸ್ವೀಕೃತಮೋದದಿ ವಿಠಲನ | ಪಾದಾಲಿಂಗಾಂತ್ಯವ 10 ಉತ್ಕøಷ್ಟ ಸುಕೃತದ ಭೋಗ | ಹರಿಇತ್ತನು ಅನುಗ್ರಹ ಯೋಗ | ಸ್ವಂತಹಸ್ತದಿ ಪೂಜಾದಿ ಯೋಗ | ಮಾಳ್ಪಕೃತ್ಯ ಸಂಧಿಸಿದನು ಈಗ | ಆಹಚಿತ್ತಜ ಪಿತ ವಿಠಲ | ಭಕ್ತವತ್ಸಲ ದೇವನಿತ್ತಕಾರುಣ್ಯವ | ತುತ್ತಿಸಲೆನಗಳವೇ 11 ಪಿತೃ ಸೇವಕ ಪುಂಡಲೀಕ | ತನ್ನಕೃತ್ಯದೊಳಿರೆ ನಿರ್ವಲ್ಕೀಕ | ಹರಿವ್ಯಕ್ತ ತನ್ಭಕ್ತ ಪರೀಕ್ಷಕ | ನಾಗೆಭಕ್ತನು ಮನ ಸ್ಥೈರ್ಯಾಲೋಕ | ಆಹಇತ್ತ ಇಟ್ಟಿಗೆ ಪೀಠ | ಮೆಟ್ಟಿ ನಿಂತಿಹ ದೇವಕೃತ್ತಿ ವಾಸಾದ್ಯರಿಂ | ಸ್ತುತ್ಯ ಶ್ರೀ ವಿಠಲನ 12 ದಾಸೀಗೆ ಕಂಕಣವಿತ್ತು | ಹರಿದಾಸರ ರೂಪೀಲಿ ನಕ್ತ | ಕಳೆದಾಶು ದಾಸರ ಶಿಕ್ಷಕರ್ತ | ಮತ್ತೆದಾಸರ ನಿರ್ದೋಷ ವಾರ್ತ | ಆಹದಾಸನೋರ್ವಾ ವೇಶ | ಭೂಷಣ ಕೇಳುತ್ತವಾಸುಕಿ ಶಯನೊಲಿದ | ದಾಸ ಪುರಂದರಗೆ 13 ಮುಯ್ಯಕೆ ಮುಯ್ಯ ತೀರಿತು | ಜಗದಯ್ಯ ವಿಠಲನ್ನ ಕುರಿತು | ಪೇಳಿಕಯ್ಯನೆ ಮುಗಿದರು ತ್ವರಿತು | ದಾಸಮೈಯ್ಯ ಬಿಗಿದ ಕಂಬ ಒಳಿತು | ಆಹತ್ರಯ್ಯ ಲೋಕದಿ ದಾಸ | ಅಯ್ಯನ ಪೆಸರಾಯ್ತುತ್ರಯ್ಯ ಗೋಚರ ಹರಿ | ಪ್ರೀಯ್ಯನಿಗೊಲಿದಂಥಾ 14 ಅಂಡ ಬ್ರಹ್ಮಾಂಡಗಳೊಡೆಯ | ಭಕ್ತಪುಂಡಲೀಕನಿಗೊಲಿದ ಭಿಡೆಯ | ರಹಿತಚಂಡ ಕಿರಣಾನಂತ ಪ್ರಭೆಯ | ಹರಿಮಂಡಿತಿಂದು ಭಾಗ ತಡಿಯ | ಆಹಹಿಂಡು ದೈವರ ಗಂಡ | ಪುಂಡರೀಕ್ಷಾಕನೆಪಿಂಡಾಂಡದೊಳಗಿಹ | ಗಂಡನೆಂದೆನಿಸಿಹಗೆ 15 ಪುರಂದರ ವಿಜಯ ಭಾಗಣ್ಣ | ಮತ್ತೆವರ ಜಗನ್ನಾಥವರ್ಯ | ಬಹುಪರಿಠವಿಸಿತ್ತೆ ಮೃಷ್ಠಾನ್ನ | ದಾಸವರರ ಸೇವಕ ಸೇವಕನ್ನ | ಆಹಪುರಂದರದಾಸರ ದಿನ | ದರುಶನ ವಿತ್ತಿಹೆಅರಿದಾಯ್ತೆನ್ನಯ ಕುಲ | ಪರಮ ಧನ್ಯವೆಂದು 16 ಇಂದು ಭಾಗದಿ ವಾಸ ಜಯ | ಸಿರಿಇಂದಿರೆ ಲೋಲನೆ ಜಯ | ದಾಸಮಂದಗಭೀಷ್ಟದ ಜಯ | ಎನ್ನತಂದೆ ತಾಯಿ ಬಂದು ಜಯ | ಆಹ ಸುಂದರ ಗುರು ಗೋವಿಂದ ವಿಠಲ ಹೃ-ನ್ಮಂದಿರದೊಳು ತೋರಿ | ಬಂಧನ ಬಿಡಿಸುವ 17
--------------
ಗುರುಗೋವಿಂದವಿಠಲರು
ಪಾಲೀಸೊ ಪವಮಾನ | ಜಯಪತಿಬಾಲಾನೆ ಜಗತ್ರಾಣಾ ಪ ಕಾಳೀರಮಣ ಹೃತ್ಕೀಲಾಲಜದಿ ತೋರೊಲೀಲಾಮಾನುಷನ | ಬಾಲ ಗೋಪಾಲನ ಅ.ಪ. ಶ್ವಾಸ ರೂಪಕ ಪ್ರಾಣಾ | ತತುವರಿ | ಗೀಶಾ ಭಕ್ತ ಪೋಷಣ ||ವಾಸೀಸಿ ತ್ರಿವಿಧರೊಳ್ | ತಾಸೀಗ್ವಂಭೈನೂರುಶ್ವಾಸ ಜಪಂಗಳ | ಲೇಸಾಗಿ ನೀ ಗೈದೆ 1 ಸಕಲ ಜಗವು ವ್ಯಾಪ್ತಾ | ಜೀವರ | ಅಖಿಲ ಕರ್ಮದಿ ಶಕ್ತಾ ||ಸೃಕು ಸೃವಾದ್ಯಂಗ | ಪ್ರಕಾರದೊಳಗಿದ್ಯುಕುತಿಯಲಿ ಯಜ್ಞ | ಭೋಕ್ತøವ ಸೇವಿಸುವ 2 ಕೂರ್ಮರೂಪಿ ಜಗಭಾರ | ಪೊತ್ತಿಹೆ | ಪೇರ್ಮೆಯಲಿಂದ ಸಮೀರ ||ಧರ್ಮನನುಜ ಸೂ | ಶರ್ಮಾನ ಬಿಗಿದು ಗೋ-ಧರ್ಮಾ ಕಾಯ್ದ ಭಾವಿ | ಬ್ರಹ್ಮಾನೆ ಸಲಹೆನ್ನ 3 ಬೃಹತೀ ನಾಮಕಗನ್ನಾ | ನಾಗುತ | ಮಹಾ ಪುರುಷ ಸೇವೆಯನ್ನಾ ||ವಿಹಿತ ಮಾರ್ಗದಿ ಗೈದೆ | ಮಹಾ ಮಹಿಮ ವಾಯು ಸಹೋಬಲೌಜ ಭ್ರಾಜ | ಪಾಹಿ ತೇಜೋರೂಪಿ 4 ತರಾತಮದ ಸೊಲ್ಲಾ | ಶ್ರೀಹರಿ | ಗುರು ಗೋವಿಂದ ವಿಠಲಾ ||ಪರಮ ಪರಾಧ್ರ್ಯನುತ | ಪರಮ ರಸನು ಎನುತೊರೆವ ಮರುತ ಪದ | ಸರಸೀರುಹಕೆ ನಮೊ 5
--------------
ಗುರುಗೋವಿಂದವಿಠಲರು
ಪಿಂಗಟ ಬೇಡವ್ವಾ ಪಿಂಗಟ ಸಂಗಟ ಬರುತಾದೆ ತಡಕೊಳ್ಳೆ ಪ ಕಂಗೆಡಿಸಿ ಬಲುಜವನ ದೂತರು ಭಂಗಬಡಿಪುದನು ನೀ ತಾಳೆ ಅ.ಪ ಸುಜನರ ಕಾಲ್ಕಸ ಮಾಡಿದಿ ಕುಜನರ ಮಾತಿಗೆ ಮರುಳಾದಿ ನಿಜವರಿದ್ಹೇಳಲು ಮೋರೆ ಮುರುಕಿಸಿದಿ ಅಜಾಂತಪರಿ ನೀ ಬಳಲುವಿ ನರಕದಿ 1 ನಾಶನ ಕಾಯಕ್ಕೆ ಮೋಹಿಸಿದಿ ಹೇಸದೆ ಪಾಪಕ್ಕೆ ಗುರಿಯಾದಿ ಈಶನ ದಾಸರನು ದೂಷಣ ಗೈದಿ ಸೀಸ ಕಾಸುವ ಯಮ ಯೋನಿದ್ವಾರದಿ 2 ಉನ್ನತಧಮ ತಿಳೀಲಿಲ್ಲ ಗನ್ನಗತಕವಯ ಕಳಕೊಂಡಿ ಇನ್ನೆಲ್ಲಿ ಕ್ಷೇಮ ನಿನಗ್ಹುಚ್ಚು ಇನ್ನರ ಶ್ರೀರಾಮ ಎನ್ನೂ 3
--------------
ರಾಮದಾಸರು
ರಾಮಚಂದ್ರವಿಠ್ಠಲನೆ ನೀನಿವನ ಕಾಮಿತಾರ್ಥಗಳಿತ್ತು ಕಾಪಾಡೊ ಹರಿಯೇ ಪ ಭೂಮಿಜೆಯ ರಮಣ ಸುರಸಾರ್ವಭೌಮನೆ ದೇವಪ್ರೇಮ ಈಕ್ಷಣದಿಂದ ನೋಡೊ ದಯಾಸಾಂದ್ರ ಅ.ಪ. ಗುರುದ್ವಾರವಿಲ್ಲದಲೆ | ಗರುಡವಾಹನ ಕರುಣದೊರಕಲಾರದು ಎಂಬ | ಸ್ಥಿರಮತಿಯನಿತ್ತೂಗುರುಭಕ್ತಿ ಹರಿ ಭಕ್ತಿ | ಕರುಣಿಸುತ ವೈರಾಗ್ಯಸ್ಥಿರಮಾಡಿ ಪಾಲಿಪುದು | ತರತಮದ ಜ್ಞಾನಾ 1 ಪತಿ ಪ್ರೀಯಪ್ರಾಕ್ಕುಕರ್ಮವ ಕಳೆದು ಕಾಪಾಡಬೇಕೋ 2 ಮಧ್ವಮತ ಸಿದ್ಧಾಂತ ಪದ್ಧತಿಯ ತಿಳಿಸುತ್ತಬುದ್ಧಿಪೂರ್ವಕ ನಿನ್ನ ಗುಣರೂಪ ಕ್ರಿಯೆಗಳಾಶ್ರದ್ಧೆಯಿಂದಲಿ ಭಜಿಪ ಸದ್ಬುದ್ಧಿ ಪಾಲಿಸುತಮಧ್ವೇಶ ಇವನ ಹೃನ್ಮಧ್ಯದಲಿ ಪೊಳೆಯೋ 3 ಶರ್ವಾದಿ ದಿವಿಜೇಡ್ಯ ದುರ್ವಿಭಾವ್ಯನೆ ದೇವಸರ್ವತ್ರ ಸರ್ವದಾ ತವಸ್ಮøತಿಯನಿತ್ತೂನಿರ್ವಿಘ್ನತೆಯಲಿವನ ಸಾಧನವ ಪೂರೈಸಿಅಸ್ವತಂತ್ರನ ಬಂಧ ಪರಿಹರಿಸಿ ಕಾಯೋ 4 ಭಕ್ತವತ್ಸಲನೆಂಬೊ ಬಿರಿದುಳ್ಳ ಶ್ರೀಹರಿಯೆಭೃತ್ಯನಿಗೆ ಬಪ್ಪ ಅಪಮೃತ್ಯು ಪರಿಹರಿಸೀಸತ್ಯ ಗುರು ಗೋವಿಂದ ವಿಠ್ಠಲನೆ ನೀನಿವಗೆನಿತ್ಯಾಯು ಪ್ರದನಾಗು ಎಂದು ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು
ಸಲ್ಲದೋ ಎಲೋ ಮಾಯಿ ಸಲ್ಲದೊ ಎಲೊ ಮಾಯಿ ಎಲ್ಲಾ ಒಂದೆಂಬೋದು ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ ಉಕ್ಕಿನ ಮಳಿಯ ರೋಮರೋಮದಲಿ ಬಡಿದು ಬೆಸಸಿ ಸದಾ ಗಂಡುತಗಲಿ ಗಟ್ಟಿ ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ ಕರ ಹೊಯಿದು ನಕ್ಕು ಯಮದೂತರು ನಿನ್ನ ಬಾಧಿಪÀರು 1 ನಿನ್ನ ಕಾಲಲಿ ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ ಮೇಧ್ಯವ ತಿನಿಸುವರು ಅರಗಲ್ಲಿಗೆ ಉದ್ದಿ ಉರುಳ ಬಿಡುವರು ಕೆಂಡದ ಮೇಲೆ ವೊದ್ದಿಸಿ ಪರಿಪರಿ ಭಂಗವಪಡಿಸುವರು 2 ವೈತರಣಿಯೊಳಗದ್ದಿ ಅದ್ರಿಯ ಹರಿ ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ ತೂತು ಮೈಯಿಗೆ ತಂತಿಯ ಪೋಣಿಸಿ ಪೂತಿ ಗಂಧದೊಳು ಹೊರಳಿಸಿ ತಡಿಯದೆ ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ ಮೂತರ ಕುಡಿಸುವರು ಮೀಸಿಯನು ಕಿತ್ತಿ ಘಾತಿಸಿ ನೋಡುವರು ಮಹಾ ಪಾತಕನೆಂದು ವಿಧಿಯ ಮೇಲೆ ಗುದ್ದೋರು 3 ಹೆಡತಲೆಯಿಂದ ನಾಲಿಗೆಯ ತೆಗೆದು ಕ ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ ಒಡಲೊಳು ಸೀಸವರೆದು ಮರದ ಬೇಲೆಯಲಿ ಹೊಡೆದು ಸರ್ರನೆ ಸೀಳೋರು ಕುರಿಯಂತೆ ಕಡಿದು ಈ ಬಗೆ ಮಾಡೋರು ಕೀವಿನ ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ 4 ಮೂಗನು ಕೊಯಿದು ಕವಡಿಯ ಪೋಣಿಸಿ ಚೆ ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ ಝೋಲಿಯ ಹೊಡೆದು ಮಾತುಗಾಲೆ ನಿನ್ನ ತೂಗಹಾಕಿ ಬಾಗಿಸಿ ಇನ್ನೊಮ್ಮೆ ಬೊಗಳೆಂದು ಕುಡಕಾಸಿ ವೇಗನೆ ಬರೆ ಇಡುವರು ದು:ಖದ ಸಾಗರ ಉಣಿಸುವರು ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು 5 ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ ನಾಯಿಗಳಿಂದ ಕಚ್ಚಿಸಿ ಸೂಜೀಯ ಆಯಕ್ಕೆ ಊರುವರು ಮರಕ್ಕೆ ಕಟ್ಟಿ ಊಯಾಲೆ ಆಡುವರು ಇಪ್ಪತ್ತೆಂಟು ನಾಯಕ ನರಕದಲ್ಲಿಟ್ಟು ತೆಗೆಯುವರು6 ಪರಿ ಬಾಧಿಗೆ ಇರೆ ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ ನರಕದೊಳಗೆ ನೂಕಿ ಕಡೆಗಾಣದಂತೆ ವರಲುತಿರೆ ನಗುವರು ನಿರ್ಮಲವಾದ ಮರುತ ಮತದವರು ಪ್ರತಿದಿನ ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ 7
--------------
ವಿಜಯದಾಸ
ಸೀಸ ಪದ್ಯ ರಘುನಾಯಕ ನಿನ್ನ ರಾತ್ರಿ ಹಗಲು ನೆನೆವೆ ರಾಘವಾ ಕೈಪಿಡಿದು ಸಲಹನ್ನನು ಪ ಸೀತಾ ಮನೋಹರಾ | ಶ್ರೀ ರಾಮಚಂದಿರಾ ಪಾತಕಾಮೃಗವಳಿದು | ಪರಮಧೀರಾ 1 ಶಬರಿ ಫಲಗಳ ತಿಂದು | ಶಾಶ್ವತಾ ಫಲವಿತ್ತು ಅಗಣಿತಾಗುಣಧಾಮ | ಆನಂದ ರಾಮ 2 ಸೇತು ಮಾರ್ಗದೊಳಿಂದ | ಆತ ರಾವಣನ ಕೊಂದ ಸೀತೆಯನು ತಂದ ಪ್ರಖ್ಯಾತಮಹಿಮಾ 3 ಲೋಕದೊಳು ನೇಮ ನಿನ್ನ | ಪಾಪಹರ ನಾಮ ವಾಲ್ಮೀಕಿ ಜಪಿಸಿದಾ ಶ್ರೀ ರಾಮನಾಮ 4 ಶ್ರೀ ಕಾಂತ ನರಸಿಂಹ ವಿಠಲಾ | ಸ್ವೀಕರಿಸೈಗಂಧವಾದೇವ 5
--------------
ಓರಬಾಯಿ ಲಕ್ಷ್ಮೀದೇವಮ್ಮ
ಸೀಸಪದ್ಯ ಧರಣಿ ಮೊರೆಯನು ಕೇಳಿ ಸರಸಿಜಾಸನ ಸಕಲ ಸುರರ ಸಹಿತದಿ ಶರಧಿಶಯನಗÀರುಹೆ ವಸುದೇವ ದೇವಕಿ ಸುತನೆನಸಿ ಅಜನಯ್ಯ ವಸುಮತಿಯಲವತರಿಸಿ ಲೀಲೆಯಿಂದ ದುರುಳ ದೈತ್ಯರ ಸದೆದು ಪರಿಪಾಲಿಸಿದ ಸಾಧು ಸುಜನರನ್ನು ನಿಜಭಕ್ತ ಪಾಂಡವರ ನೆಂಟನೆಂದೆನಿಸಿ ಭೂ ಭುಜ ಸುಯೋಧನ ಮುಖ್ಯ ದುರುಳರನ್ನು ಸದೆಬಡಿಸಿದಾ ಬಳಿಕ ಮದದಿ ಕೊಬ್ಬಿದ ಯದು ಬಳಗವನು ವಿಪ್ರಶಾಪದಿಂದ ಕೊಲಿಸಿ ಪದುಮಸಂಭವಜನಕ ಕರಿಗಿರೀಶನು ತನ್ನ ಸದನಕ್ಕೈದಿದ ಸರ್ವವ್ಯಾಪ್ತ ಸರ್ವೇಶ
--------------
ವರಾವಾಣಿರಾಮರಾಯದಾಸರು