ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾಮರವನು ಹಾಕಿರೆ ಕೋಮಲಾಂಗಿಯರುಶ್ರೀ ಮಹಾಮಾರುತನ ಸ್ಮರಿಸುತ ನೀವೆಲ್ಲರು ಪ. ರಾಮ ನರಹರಿ ಕೃಷ್ಣ ಶ್ರೀಮಹಿಧರಗೆಇಹ ಆಲದೆಲೆಯ ಮೇಲಿದ್ದು ಕ್ರೀಡಿಪಗೆ ಅ.ಪ. ಗೋಪಿ ಪುತ್ರಗೆ ನೀವು 1 ರಾಮ ಕುಳಿತಿರುವ ನಿಜ ಕಾಮಿನಿಯ ಸಹಿತಶ್ರೀ ಮಹೀ ಸಹಿತ ಭೂಮಿಧರನುತಾತಾಮಸರ ನಯನ ಮುನಿ ಕಾಮಿನಿವರ ಪ್ರೀತಶ್ರೀಮಲಸಹಾರ ಸಿರಿಧಾಮ ವಿಖ್ಯಾತ 2 ಸುಂದರಾಂಗಿಯರು ತ್ವರದಿಂದ ಪಾಡುತಲಿಮಂದಾಕಿನಿಯರ ಪ್ರಮುಖರಿಂದ ಸರತಿಗಳೇಮಂದಹಾಸ್ಯಗಳ ಮುಖದಿಂದ ನೋಡುತಲಿಇಂದಿರೇಶನ ಹತ್ತಿರ ಹೊಂದಿ ನಿಲ್ಲುತ್ತಲೆ3
--------------
ಇಂದಿರೇಶರು
ಮೃಗಮೋಹಿನಿಯೊಡನೇಕೋ ಪಂಥ ಪ ಕಾಂತ ಸಿರಿಕಾಂತ ಸುರನಗರಾಧಿಪ ಅ- ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ- ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_ ತಳಿದವಳ ಕಾಯೊ ಸಿರಿಧಾಮ ಗುಣಧಾಮ 1 ಕಳಕಳಿಪ ನೋಟ ಕಾತರಿಪ ವಿರಹದ ಹೂಟ ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ- ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2 ಮೂರಾರವಸ್ಥೆಗಳ ನೀರಿಕಡೆಯನವಸ್ಥೆ ಮಾತಿರುವಳೆ ಬಾಲೆ ನಿನಗೆದ್ದ ಮೇಲೆ ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ ತೋರಿಸಿದನಮರ ಪುರಿಪಾಲ ಸಿರಿಲೋಲ 3
--------------
ಕವಿ ಲಕ್ಷ್ಮೀಶ