ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದಳೇನೆಂದಳೋ ಪ ನಿನ್ನೊಳು ಸೀತೆ ಹನುಮಯ್ಯ ಅ ಜನಕನರಮನೆಯಲ್ಲಿ ಜನಿಸಿ ಸುಖದಲ್ಲಿರಲುಧನು ಮುರಿದು ಕೈಹಿಡಿದು ತನ್ನಘನ ಪದವಿಯನು ಬಿಟ್ಟು ವನವ ಸೇರಿದನೆಂದುವನಿತೆ ತಪಿಸುತೆ ಮನದಿ ನೊಂದು 1 ಕುರುಹಿನುಂಗುರವನು ತರಳಾಕ್ಷಿಗಿತ್ತಾಗತಿರುಳಿಗಿಂತಧಿಕವೇ ಕರಟವೆಂದುಬೆರಳಿಂದ ಚಿಮ್ಮಿದಳೆ ಅಶೋಕವನದಾಚೆಗೆನಿರುತ ಸಂತಾಪದಲಿ ಮನದಿ ನೊಂದು 2 ಸೇತುವೆಯ ಕಟ್ಟಿ ಸಿಂಧುಗೆ ವಿಭೀಷಣಾಗ್ರಜಾತ ಲಂಕಾಧಿಪನ ವಧಿಸಿಸೀತೆಯನು ಸೆರೆಯಿಂದ ಬಿಡಿಸಿದ್ದೆ ಆದರೆನಾಥಾದಿಕೇಶವಗೆ ಬಲು ಬಿರುದು ಎಂದು3
--------------
ಕನಕದಾಸ
ನಿತ್ಯ ಶುಭ ಮಂಗಳಂ ಮಹಾ ಮಂಗಳಂ ಪ ನತ ಧೇನುಗೆಮೌನಿಗೆ ಶಬ್ದ ಮೌನಿಗೆದಾನಿಗೆ ಮುಕ್ತಿ ದಾನಿಗೆ 1 ಭವ ಕಾಲಗೆಶೀಲಗೆ ಭಕ್ತ ಶೀಲಗೆಮೂಲಗೆ ಸರ್ವ ಮೂಲಗೆ 2 ಬಂಧಗೆ ಹರ ಬಂಧಗೆನಂದಗೆ ಆನಂದಗೆಸಿಂಧುಗೆ ಜ್ಞಾನ ಸಿಂಧುಗೆಚೆಂದಗೆ ಚಿದಾನಂದಗೆ 3
--------------
ಚಿದಾನಂದ ಅವಧೂತರು