ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ ಗುಷ್ಟ ಭಜಿಸುವ ನಿಷ್ಠ ಜನರ ಉಚ್ಚಿಷ್ಟ ಎನಗದು ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ ನರಲೋಕದ ಸುಖ ಪರಿಪರಿಯಲ್ಲಿ ಅರಿದೆನದರೊಳು ಪರಮ ಸೌಖ್ಯ ಎಳ್ಳರೆ ಅನಿತಿಲ್ಲ ಬರಿದೆ ಜನನ ಮರಣ ಪರಿಯಂತಾ ದುರಿತ ಧರೆಯೊಳಗೆ ನಿಂದಿಸಲಾರೆ ಸಾಕು ಶರಣು ಹೊಕ್ಕೆನು ಕರುಣಪಾಂಗನೆ ಕರವಿಡಿದು ಸಲಹೋ 1 ಆವುದುಂಟದು ದೇವ ಮಾಣಿಸು ಈ ವರವ ಕೊಂಡು ನಾ ಒಂದನು ವಲ್ಲೆ ಭಾವಶುದ್ಧ ವಾಕ್ಯವೆ ನಿಶ್ಚಯವೊ ಮಾನವ ಕಾವ ನೈಯನೆ ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ 2 ಹಡಗದೊಳಗಿಂದ ತಡಿಯದೆ ಬಂದಾ ಕಡಗೋಲ ನೇಣ ಪಿಡಿದ ಪಡುವಲಾ ಗಡಲ ತೀರದ ಉಡುಪಿನಲಿ ನಿಂದ ಅಡಿಗಡಿಗೆ ಪೂಜೆ ಬಿಡದೆ ಯತಿಗಳಿಂ ಉಘಡ ವಿಜಯ ವಿಜಯವಿಠ್ಠ ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ3
--------------
ವಿಜಯದಾಸ
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ನೋಡಿದೆನು ತಿರುವೆಂಗಳೇಶನಾ ಮಾಡಿದೆನು ಭಕುತಿಯಲಿ ವಂದನೆ ಬೇಡಿದೆನು ಕೊಂಡಾಡಿ ವರಗಳ ನಾಡೊಳಗೆ ಈಡಿಲ್ಲದಪ್ಪನಾ ಪ ಘನಸುಂದರ ಜ್ಞಾನ ತೀರ್ಥ ಆನಂದ ಧನ ವರಹಾ ವೈರಾಗ್ಯನಿಲಿ ರ ತುನ ಚಂದ್ರಮ ವರಧÀರ್ಮ ನಾರಾ ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ ರುಣ ವೃಷಭ ಶ್ರುತಿ ಗರುಡ ಸರ್ಪ ಜನತ ಪೂಜಿಪ ಸುರ ಸುಧಾನಂತ ಇನಿತು ಪೆಸರುಳ್ಳ ಪುಷ್ಕರಾದ್ರಿಯಾ1 ಖಗನ ಪೆಗಲಲಿ ನಗವ ತಂದ ಜಗದೊಳು ಸುವರ್ಣಮುಖರಿ ನಿ ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು ಝಗಝಗಿಸುದೆ ನೋಳ್ಪ ಜನರಿಗೆ ಹಿಮ್ಮೊಗವಾಗಿ ಪೋದವು ಯುಗ ಯುಗ ಕಥಾಭೇದ ಬಗೆಬಗೆ ಪೊಗಳಿದರೆ ನೆಲೆಗಾಣೆ ಅನುದಿನಾ 2 ಸರಸ್ವತಿಗೆ ಮುನಿಯಿಂದ ಶಾಪವು ಬರಲು ಭರದಲಿ ಬಂದು ವಿರಜಾ ಸರತಿಯೊಳು ಬೆರಸಿದಳ್ ತಪದಲಿ ಹರಿಯ ಕರುಣವ ಪಡೆದು ಪ್ರತಿದಿನ ಸ್ಮರಸಿದವರಿಗೆ ಪುಣ್ಯವೀವುತ ಸರುವ ಸರೋವರಧಿಕವೆನಿಪ ಸುಂ ದರ ಸ್ವಾಮಿ ಪುಷ್ಕರಣಿಯನು ತ್ರಿ ಕರಣ ಬಲು ಒಂದಾಗಿಬಿಡದಲೆ 3 ಎರಡೈದು ಪ್ರಾಕಾರ ಗೋಪುರಾ ಎರಡೈದು ದ್ವಾರಗಳು ಕಟ್ಟಿದಾ ಮಕರ ತೋರಣ ಧರೆಗೆ ಮಟ್ಟಿದ ಎಡಬಲದ ಪೂ ಸರಗಳೊಪ್ಪಲು ದ್ವಾರಪಾಲಕರಿ ರುತಿಪ್ಪರಲ್ಲೆಲ್ಲಿ ಕಾವುತಾ ನಿಕರ ತುಂಬಿರೆ ಪರಿಪರಿಯ ಮಂಟಪಗಳಿಂದಾ 4 ಭಂಗರಹಿತ ಬಂಗಾರಮಯವಾದಾ ತುಂಗ ಆನಂದ ನಿಲಯ ವಿಮಾನಾ ಕಂಗಗಳಿಗೆ ಬಲು ತೇಜಿಃಪುಂಜದಿ ಹಿಂಗದಲೆ ಗೋಚರಿಸುತದೆ ನರ ಸಿಂಗ ಮೂತ್ರ್ಯಾದಿಗಳು ಪ್ರಾಣ ಭು ಜಂಗಧರಾದಿ ದಿಕ್ಪಾಲರೆಲ್ಲರು ಸಂಗ ಮತಿಯಲಿ ವಾಸವಾಗಿರೆ ಮಂಗಳಾಂಗ ಪ್ರಿಯಾಂಗ ಪ್ರಿಯನಾ 5 ಮುಕ್ತಿ ಬೀದಿಗಳೆರಡು ವಿ ರಕ್ತಿ ಜ್ಞಾನ ಸತ್ಕರ್ಮ ಬಲು ದೃಢ ಭಕ್ತಿಯೋಗವು ಯಾವ ತ್ಯಾಗ ಸಂ ವ್ಯಕ್ತ ರಾಗವು ಈಪರಿ ಸು ಉಕ್ತಿ ದ್ವಾದಶ ಸಾಲ ಬೀದಿಗ ಳುಕ್ತ ಜನ ಸಂಚರಿಸುತ್ತಿಪ್ಪರು ಶಕ್ತನೊಬ್ಬನೆ ಜಗದೊಳೀತನೆ ವ್ಯಕ್ತ ಅವ್ಯಕ್ತದಲಿ ಚಿತ್ರವಾ 6 ಲೋಕೇಶ ಲೋಕಪಾಲಕರು ಖಗ ಕಾಕೋದರ ಗಂಧರ್ವ ಸನಕಾದಿ ಲೋಕ ಚಕ್ಷು ಸೀತಾಂಶು ಉದಿಸಿದರು ಏಕಾಂತನು ವಾಯುನಂದನ ಪಾಕಶಾಸನ ಸೌಮ್ಯ ಗುರು ಕವಿ ನಾಕಜನ ಮಿಗಿಲಾದ ಭಕ್ತರು ಏಕಗುಣವಾರಂಭಿಸಿ ಅ ನೇಕ ಗುಣದಲಿ ಭಜಿಸುತಿಪ್ಪುದಾ7 ಸಾರಿದರೆ ನೆಲೆದೋರದು ಕಂ ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ ಧಾರುಣಿಲಿ ಮಧ್ಯದಲಿದಕೆ ಎ ದಿರುಗಾಣೆನು ಎಲ್ಲಿ ಚರಿಸಲು ಮಾರುತನು ತಾನೊಬ್ಬ ಬಲ್ಲ ವಿ ಸ್ತಾರವಿದರ ವಿಚಾರ ಮತಿಯಲಿ8 ಧೀರ ಜಗದೋದ್ಧಾರ ರಿಪು ಸಂ ಹಾರ ನಾನಾವತಾರ ನವನೀತ ಜಾರ ಶಿರೋಮಣಿ ಶ್ರೀ ನಾರಿಯರರಸನೆ ತಾ ಭಕ್ತ ಚ ಕೋರ ಚಂದ್ರಮ ಪೂರ್ಣ ಸುಂದರ ಸಾರ ಭವಾರ್ಣವತಾರ ಕಾರಣ ವೀರ ವಿತರಣ ಶೂರನೆನಿಪನ್ನ ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ 9 ಈ ವೈಲಕ್ಷಣವುಳ್ಳ ದೊರೆತನ ಈ ವೈಭವ ಸರ್ವೋತ್ತಮನೆಂಬದು ಈ ವೈಭೋಗ ಸಾಕಲ್ಯವಾಗಿದೆ ಈ ವೈಯಾರವು ಈತಗಲ್ಲದೆ ಈ ವೈಕುಂಠನ ನೋಡುವುದು ಮಹಾ ಈ ವೈದಿಕದ ಭಾಗ್ಯಕ್ಕೆಣೆಯೆ ಈ ವೈಧಾತ್ರಿಗೆಯಿವನು ಪೇಳಿದ ಈ ವೈಚಿತ್ರವ ಕೇಳಿ ಮನದಲಿ 10 ರನ್ನಮಯ ಕಿರೀಟ ಕುಂಡಲ ಕರ್ಣ ಕಸ್ತೂರಿನಾಮ ಪಣೆಯಲಿ ಕೆನ್ನೆ ಚಂಪಕ ನಾಸದಂತ ಪ್ರ ಸನ್ನ ವದನಾಂಭೋಜಲೋಚನಾ ಚಿನ್ನಸರ ಉಡುದಾರ ಸರಿಗೆ ಮೋ ಹನ್ನ ಪೀತಾಂಬರ ನೂಪುರಗೆಜ್ಜೆ ಸನ್ನಿಧಿಗೆ ನಡೆತಂದು ದೇವವರೇ ಣ್ಯನಂಘ್ರಿಯ ನೆನೆದೆ ಚೆನ್ನಾಗಿ 11 ಮೆರೆವ ಉತ್ಸವ ವಾಹನಂಗಳು ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ ಎರಡೊಂದು ವಿಧದವರುಯಿಲ್ಲಿಗೆ ಬರುವರೈ ಅವರವರ ತಕ್ಕದು ಹರಿಯ ಫಲವನು ಕೊಡುವನಿಲ್ಲದೆ ಅರಮರೆ ಇಲ್ಲಿದಕೆ ಎಂದಿಗು ಮೊರೆವ ನಾನಾ ವಾದ್ಯ ರಭಸ ವಿ ಸ್ತರಿಸ ಬಲ್ಲೆನೆ ನೂತನೂತನಾ 12 ರಥದ ಸಂಭ್ರಮವಾರು ಬಲ್ಲರು ಪ್ರತಿಗಾಣೆ ಈ ಪೃಥ್ವಿಯೊಳಗೆ ಅ ಪ್ರತಿ ಸಾಹಸಮಲ್ಲ ತನ್ನಯ ಸತಿಯೊಡನೆ ಪರುಠವಿಸಿ ಪೊಳೆವುತ್ತ ಚತುರ ಬೀದಿಯ ಸುತ್ತಿ ಸುಮನಸ ತತಿಯ ಸಂಗಡ ಬರುವ ಭರ ಉ ನ್ನತವ ಗುಣಿಸುತ್ತ ನಲಿನಲಿದು ಅ ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ13 ರಾಜರಾಜೇಶ್ವರ ನಿರಂತರ ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ ಮೂಜಗದೊಳು ಈ ನಿಧಿಯಲಿದ್ದ ಸೋಜಿಗವೆ ಮತ್ತೆಲ್ಲಿಯಿಲ್ಲವು ರಾಜಶೇಖರ ಬಲ್ಲವನೊಬ್ಬನೆ ಮಾಜದಲೆ ಸಜ್ಜನರು ಸತ್ಕರ್ಮ ಬೀಜಮಂದಿ ಮಾಡಿಬಿಡಲೆ 14 ದರ ಸುದರಶನ ಪಾಣಿ ತನ್ನ ಸಂ ದರುಶನವೆಮಗಿತ್ತು ಘನ ಆ ದರ ಪಾಲಿಸಿ ಸಂಚಿತಗಾಮಿ ಪಠಿಸಿ ಪ್ರಾರಬ್ಧವೇ ತೀರಿಸಿ ಕರುಣದಿಂದಲಿ ದಿವ್ಯರೂಪದ ಗುರುತು ತೋರುವ ಅಂತರಂಗದಿ ಪರಮಪಾವನ ವಿಜಯವಿಠ್ಠಲ ಪೊರೆವ ಪ್ರೀತಿಲಿ ಬಂದು ಮರಿಯದೆ15
--------------
ವಿಜಯದಾಸ