ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಭಜಿಸು ದುರಿತಗಳಲ್ಲವು ತ್ಯಜಿಸು ಪ ಯದುಪತಿ ಕಥಾ ಬುಧರಿಗೆ ಎರೆದು ಸಾಧುವಕೀಣ್ಯರ ಮಮತೆಯ ‌ಘಳಿಸು 1 ಕವಿವರರೆನಿಸಿದ ಇವರ ಸುವಚನವಾ ಸವಿಯನು ಸಂತತ ಭಾವದಿ ಗ್ರಹಿಸು 2 ಕುಂಭಿಣೆ ತಳದೊಳು ಧನ್ಯನೆಂದೆನಿಸಲು 3 ಮಾನವಿ ನಿಲಯರ ನೀನೊಲಿಸುತಘುನ ಮಾನವ ಜನ್ಮ ಸಾರ್ಥಕಗೊಳಿಸು 4 ಶಾಮಸುಂದರ ಪ್ರೇಮವ ಪಡೆದಾ ಈ ಮಹಾ ಮಹಿಮರ ಸೇವಕನೆನಿಸೋ 5
--------------
ಶಾಮಸುಂದರ ವಿಠಲ
ಶೃತಿ ಪ್ರತಿಪಾದ್ಯನೆ | ಕೃತಿದೇವಿ ರಮಣನೆವಿತತ ವಿಶ್ವದಪಾಲ | ಮೃತ ಶಿಶು ಪರಿಪಾಲ ಪ ಮತ್ರ್ಯರ ಬೀಷ್ಟವ | ಸಾರ್ಥಕಗೊಳಿಸುವಪಾರ್ಥ ಸಾರಥಿಯೆ | ಕೀರ್ತಿಸಲರಿಯೆಮೂರ್ತಿಯ ಕಾಣುವ | ವಾರ್ತೆ ಇರಲಿ ದೇವಸೂಕ್ತ ಮೇಯ ಅ | ಸಕ್ತಿ ಪ್ರದಾತಾ ಅ.ಪ. ಪರಿ ಗುಣ ಜಾಲ | ದರಿವನೆ ಕೊಡು ಕೋಲಧರಿಸಿಹೆ ವನಮಾಲಾ | ಶರಣರ ಪಾಲ1 ಪರಿ ಭಕ್ತರನ | ಪೊರೆದ ಮೋಹನ್ನ 2 ಪಟು ಭಟಗಾನಂದ | ಘಟಿಸಲು ಮುಕುಂದಕುಟಿಲ ರಹಿತ ಛಂದ | ಪಟುತರ ವ್ಯಾಪ್ತಿಂದಛಟ ಛಟ ಕಂಬದಿಂದ | ಪುಟ ನೆಗೆಯುತ ಬಂದದಿಟ ಗುರು ಗೋವಿಂದ | ವಿಠಲ ಆನಂದ 3
--------------
ಗುರುಗೋವಿಂದವಿಠಲರು
ಹೋಗುತಾದೋ ಹೊತ್ತು ಹೋಗುತಾದೋ ಸಾಗಿ ಮುಂಚೆ ಮತ್ತೆ ತಿರುಗಿ ಬಾರದಂತೆ ಪ ಹಿಂದಿನ ಸುಕೃತದಿಂದ ಒದಗಿದಂಥ ಸುಂದರಮಾದ್ಹೊತ್ತು ಎಂದೆಂದು ಸಿಗದಂತೆ 1 ಅರ್ತುಕೊಂಡವರಿಗೆ ಸಾರ್ಥಕಗೊಳಿಸುತ್ತ ಮರ್ತಕರಿಗೆ ಮತ್ತೆ ಗುರ್ತು ತೋರದಂತೆ 2 ಎಷ್ಟೆಷ್ಟೋ ಯೋನಿಯೊಳ್ಹುಟ್ಟ್ಹುಟ್ಟಿ ಬಲಗೋ ಳಿಟ್ಟು ಪಡೆದ ಹೊತ್ತು ನಷ್ಟವಾಗುತ ವ್ಯರ್ಥ 3 ಅಘನಾಶಗೊಳಿಸಿ ಬಹು ಮಿಗಿಲಾದ ಪದವೀನ ಸಿಗದಂಥ ವಸ್ತಿದು ಅಗಲಿ ತಾ ಸುಮ್ಮನೆ 4 ನೇಮವಲ್ಲೆಲೋ ಮತ್ತೆ ಆ ಮಹ ಸಮಯವು ಪಡಿ 5
--------------
ರಾಮದಾಸರು