ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿನೋಡಿ ಜನ ಮಾಡುವ ಪರಿಯ ಮುಕ್ತಿಯ ಮಾರ್ಗವ ಯುಕ್ತಿಯನರಿಯದೆ ಭಕ್ತ ನಾನೆಂದಾಡುವರ್ಹೊರಿಯ ಧ್ರುವ ಚಕ್ಕಮಲಕು ಭಕ್ತಿಯ ನೋಡಿ ಉಕ್ಕಿ ದೋರುತಲ್ಯದ ಬಲಗೂಡಿ ಮಿಕ್ಕ ಮಾನವರಿಗೆ ದಯಮಾಡಿ 1 ಡಂಭದೋರು ವನೇಕಚಂದ ಗುಂಭಹೇಳನು ಸರಕ್ಕನೆ ಬಂದು ಕೊಂಬುಕೊಡುವ ಮಾತಿಗೆ ಬಂದರೆ ನಂಬದೆ ಹೋಗುವರತ್ತತ್ತ ಹಿಂದ 2 ಹೊಟ್ಟಿನಮ್ಯಾಲೆ ಸಾರಿಸಿದಂತೆ ನಿಷ್ಠೆನೋಡಿ ಜನ ಮೋಹಿಸುವಂತೆ ಘಟ್ಟಿಸುತ ತಮ್ಮ ಹೊಟ್ಟೆಯ ಹೊರೆದರು ಮುಟ್ಟ ಭಜಿಸುವ ಗುಟ್ಟುದೋರಿದಂತೆ3 ರಚ್ಚಿಗೆ ಬಂತು ಭಕ್ತಿ ಇದೇ ಬಹಳ ಹೆಚ್ಚು ನಮ್ಮದೆಂದು ಮಾಡುರು ಮ್ಯಾಳಿ ಮತ್ಸರದೊಳಗಿದ್ದು ಸಚಲಸ್ನಾನ ಮಾಡಿದೆವೆಂದು ಹೇಳುರು ನಿರ್ಮಲ4 ನಗೆ ಬರುತ್ತದೆ ಭಕ್ತಿಯ ಕಂಡು ಜಗದೊಳಗೆಲ್ಲ ಇದೇವೆ ಭಂಡು ಸುಗಮ ಸುಪಥ ಬ್ಯಾರದೆ ಎಂದು ಮಹಿಪತಿ ಘನಬೆರೆದು ಸದ್ಗುರು ಬಲಗೊಂಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭವ ಬಂಧವೂ ಪಗಂಗಾಜನಕ ಖಗೊತ್ತುಂಗ ತುರಗನೆ ದೇವ ರಂಗಾಪುರಾಗಾರನೆ ಸ್ವಾ'ು ಅ.ಪದುರಿತ ಕೋಟಿಗಳ ಪರಿಹರಿಸಿ ರಕ್ಷಿಪ ನಿನ್ನ ಬರಿನಾಮಸ್ಮರಣೆಯೊಂದುಪರಿಪರಿಯ ಭವದ ಕೋಟಲೆಯ ಬಿಡಿಸುವ ನಿನ್ನ ಚರಿತೆಯ ಶ್ರವಣವೊಂದುಅರಿತರಿಯದೆಸಗಿದಘರಾಶಿಯ ದ'ಸಿ ನಿನ್ನ ಶರಣಜನ ಸಂಗವೊಂದುಇರಲಿವನು ಬಯಸಿ ಬೇಡುವೆನೆಂದು ನಿನ್ನ ಸಿರಿಚರಣದೆಡೆಗೈದಿ ಸಂತಸದಳೆದುನಿಂದೂ 1ಆವಜನ್ಮಾರ್ಜಿತದ ಸುಕೃತ ಪರಿಪಾಕವೊ ದೇವ ನಿನ್ನಯ ಕರುಣವೋಸಾವಧಾನದಿ ನಿನ್ನ ನೆನೆದು ಪೂಜಿಸಿ ನುತಿಪ ಸೇವಕರ ಪ್ರೇಮದೊಲವೋಜೀವರಾಶಿಗಳೊಳುದುಸಿ ಮಡಿಯೆ ಪುಟ'ಟ್ಟ ಭಾವಬಂದೀ ಬಣ್ಣವೋಆವುದನು ತಿಳಿಯದಜ್ಞನನು ನಿನ್ನವರೊಯ್ದು ಪಾವನಕ್ಷೇತ್ರವನು ಪೊಗಿಸಿದತಿಶಯವೋ 2ಗುರು ವಾಸುದೇವಾರ್ಯನಾಗಿ ಚಿಕನಾಗಾಖ್ಯಪುರದಿ ಮ'ಮೆಯ ತೋರ್ದೆಯೈಕರೆದಜ್ಞರಜ್ಞತೆಯ ಪರಿದು ಸುಜ್ಞಾನ ಸುಧೆಯೆರೆದು ನೀನೆ ಪೊರೆದೆಯೈಪರದೇಸಿ ವೇಷದಿಂ ಮೂಢ ಜನರಿಗೆ ಭಕ್ತಿುರವ ಕೈಸಾರಿಸಿದೆಯೈಮರೆಯೊಕ್ಕೆ ನಾನು ತಿಮ್ಮದಾಸ ದೇವ ಪರಾಕು ಕರ'ಡಿದು ಕಾಯಬೇಕೆನ್ನ ವೆಂಕಟರಮಣ 3
--------------
ತಿಮ್ಮಪ್ಪದಾಸರು
ಶಶಿವದನೇರೆಲ್ಲ ದಿವಸಿವ್ರತವ ಮಾಡಿರೇ ಶಶಿಧರನ ಮಡದಿಯಾ ಭಜಿಸಿ ಪಾಡಿರೇ ಪ ಕತ್ಲೆರಾಯನ ಪತ್ನಿಯೂ | ಸುಪುತ್ರನ್ನ ಪಡೆಯಲೂ ಇತ್ತಳು ವಸ್ತ್ರಗಳನ್ನು ಚೆಂದದಿ ದ್ವಿಜರಿಗೆ ಕೊಡಲೂ ಪಡೆದಳು ಪುತ್ರನಾ ಬುಧರು ಕಾಳಿಂಗ ನೆಂದು ಕರೆದರು ಪರಿ ಪರಿವಿಧದಿಂದ ರಾಜರು ಹರುಷಗರೆದರೂ 1 ಗಿರಿಕಾನನದಿ ಚಲಿಸಿ | ಮೃಗವ ಸಂಹರಿಸೀ ಬಾಲಕನೂ | ಬರುತಿರಲು ಬಾಲಕನು ವ್ಯಾಘ್ರದ ದನಿಕೇಳಿ ಮೂರ್ಛೆಗೈದು ಮೃತನಾದನು 2 ಮೃತನಾದ ಸುತಗೆ | ಸತಿಯ ಕೊಡಬೇಕೆಂದು ಸಾರಿಸಿದ ಸತತ ದ್ರವ್ಯ ಕೊಡುವೆನೆಂದು ಮಾತ ನಾಡಿದೆ ದ್ವಿಜನಸುತನ ಸತಿಯ ತ್ಯಜಿಸಿ ಹೋಗಿರಲು ನಿಜಸುತಗೆ ಭಗಿನಿಯ ಕೊಡುವೆನೆಂದು ನುಡಿದಾನು 3 ಬೆಳ್ಳಿ ಬಂಗಾರ ಸಹಿತ ನಮಗೆ ಇರುವೋದೂ ಕನ್ನಿಕೆಗೆ ಮಾಂಗಲ್ಯ ಬಂಧನ ಮಾಡಿಹೋದಾರು 4 ರಾಜನು ಹೋಗುವಾಗ | ಸೊಸಿಯಮನೆಗೇಳೆಂದನು ಪತಿಯ ಬಿಟ್ಟು ಹ್ಯಾಂಗೆ ಮನೆಗೆ ಬರುವೋದೆಂದಳು ಪತಿಯ ಬಿಟ್ಟು ಬಂದರೆ ಪತಿವ್ರತವು ಇರುವೋದೆ ಹಿತವು ಬಯಸಿ ಬಂದರೆ ಸದ್ಗತಿಯು ದೊರೆವುದೇ 5 ಒಂದು ದಿನ ಸುಂದರಿ ಬಂದವರ ಕೇಳಿದಳು ಇಂದು ದಿವಸಿ ವ್ರತವು ಅಂದರು ಹಿಂದೆ ಗೌರಿಪೂಜಿಸಿದೆ ಮುಂದೆ ವ್ರತವನು ಬಂಧು ಬಳಗೆ ಇಲ್ಲದಲೆ ಮಾಡುವುದೇನು 6 ನಾರುಬತ್ತಿ ನೀರು ಎಣ್ಣೆ ಗೌರಿಗೆ ಮಾಡಿದಳು ಅಪಾರ ಸದಿಗೆ ಮುರಿದುಗೌರಿ ಪೂಜಿಸಿದಳು ಹರತಾ ಭಂಡಾರ ಒಡೆದು ಹರುಷಗರೆದನು ವರ ಕಾಳಿಂಗ ಕ್ಷಣ ದೊಳೆದ್ದು ಮಾತಾಡಿದನು ಪತಿಯಸಹಿತಾಗಿ ತಮ್ಮ ಗೃಹಕೆ ಬಂದರು ಸತತ ನಾರಸಿಂಹನ ಸ್ಮರಣೆ ಮಾಡಿದರು 7
--------------
ಓರಬಾಯಿ ಲಕ್ಷ್ಮೀದೇವಮ್ಮ