ಒಟ್ಟು 10 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದನಾದರು ಕೊಡದಿದ್ದರೆ ನಿನ್ನ ಪದಕಮಲವ ನಂಬಿ ಭಜಿಸುವದೆಂತೊ ಪ ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನಬೇಸರಿಸಿ ಬೇಡ ಬಂದುದಿಲ್ಲವಾಸುದೇವನೆ ನಿನ್ನ ದಾಸರ ದಾಸರದಾಸರ ದಾಸ್ಯವ ಕೊಡು ಸಾಕೆಂದರೆ 1 ಸತಿಸುತರುಗಳ ಸಹಿತನಾಗಿ ನಾಹಿತದಿಂದ ಇರಬೇಕೆಂಬೊದಿಲ್ಲಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನಕಥಾಮೃತವನೆ ಕೊಡು ಸಾಕೆಂದರೆ 2 ಸಾಲವಾಯಿತೆಂದು ಸಂಬಳ ಎನಗೆಸಾಲದೆಂದು ಬೇಡ ಬಂದುದಿಲ್ಲನಾಲಗೆಯಲಿ ನಿನ್ನ ನಾಮದುಚ್ಚರಣೆಯಪಾಲಿಸಬೇಕೆಂದು ಬೇಡಿದೆನಲ್ಲದೆ3 ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದುಬಡವನೆಂದು ಬೇಡ ಬಂದುದಿಲ್ಲಒಡೆಯ ನಿನ್ನಡಿಗಳಿಗೆರಗುವುದಕೆ ಮನಬಿಡದಿಹದೊಂದನು ಕೊಡು ಸಾಕೆಂದರೆ4 ಆಗಬೇಕು ರಾಜ್ಯಭೋಗಗಳೆನಗೆಂದುಈಗ ನಾನು ಬೇಡ ಬಂದುದಿಲ್ಲನಾಗಶಯನ ರಂಗವಿಠಲ ನಾ ನಿನ್ನ ಬಾಗಿಲ ಕಾಯುವ ಭಾಗ್ಯ ಸಾಕೆಂದರೆ5
--------------
ಶ್ರೀಪಾದರಾಜರು
ಕುಶಲವರೆ ಲಾಲಿಸಿರಿ ಕಥೆಯನೆಲ್ಲವ ಪೇಳ್ವೆ ಕುಶಲಮತಿಗಳೇ ನಿಮ್ಮ ಕೌತುಕವು ಸಹಜವಲೆ 1 ಬಿಸರುಹಾಕ್ಷನ ಚರಿತೆ ಚಿತ್ರತರಮಹುದಲ್ತೆ ಉಸುರುವೆನು ಪೂರ್ವ ವೃತ್ತಾಂತವನು ನಾ ಮೊದಲೆ 2 ಅಸುರರುಪಟಳದಿಂದ ವಸುಧೆ ಭಾರವು ಹೆಚ್ಚೆ ಬಿಸಜಭವಮುಖ ಸುರರ ಮೊರೆ ಕೇಳಿ ಮನ ಮೆಚ್ಚೆ 3 ಬಿಸಜನೇತ್ರನು ತಾನು ದಶರಥನ ಸುತನೆನಿಸಿ ವಸುಮತಿಯಲುದಿಸಿ ಸಜ್ಜನರ ಸಂತಸಗೊಳಿಸಿ 4 ಹಸುಳೆತನದಲಿ ಅಸುರೆ ತಾಟಕಿಯ ಸಂಹರಿಸಿ ಕುಶಿಕಸುತನಧ್ವರವ ಕಡು ರಕ್ಷಣೆಯ ಮಾಡಿ 5 ಅಶಮವಾಗಿದ್ದಹಲ್ಯೆಯ ತಾನುದ್ಧರಿಸಿ ಅಸಮಾಕ್ಷಚಾಪವನು ಲೀಲೆಯಲಿ ತುಂಡರಿಸಿ 6 ಕರ ಪದ್ಮವನು ಗ್ರಹಿಸಿ ಎಸೆವೆರಡು ರೂಪದಲಿ ಘನಲೀಲೆ ಪ್ರಕಟಿಸಿ 7 ಕುಶಲದಿಂ ಯುವರಾಜ ಪಟ್ಟಕ್ಕೆ ಸನ್ನಾಹ ವೆಸೆದಿರಲು ವಿಧಿಲೀಲೆಯೇನೆಂಬನಾಹ 8 ದಶರಥನ ಕಿರುಮಡದಿ ಪಡೆದ ವರಕನುವಾಗಿ ಸತಿ ಅನುಜ ಸಹಿತನಾಗಿ 9 ವಸುಮತಿಯೊಳವತರಿಸಿ ಬಂದ ಕಾರ್ಯವ ನೆನೆದು ಅಸಮ ನಾಟಕ ಸೂತ್ರಧಾರಿ ಅಡವಿಗೆ ನಡೆದು 10 ಎಸೆವ ಗಂಗೆಯ ದಾಟಿ ಗುಹನನ ಧನ್ಯನಗೈದು ಋಷಿ ಭರದ್ವಾಜರಿಂ ಸತ್ಕಾರವನು ಪಡೆದು 11 ವಸುಮತೀಧರ ಚಿತ್ರಕೂಟದಲಿ ನಿಂತಿರಲು ಅಸಮ ಭಕ್ತವರೇಣ್ಯ ಭರತ ತಾನೈತರಲು 12 ಬಿಸಜಾಂಘ್ರಿ ಸಂಪೂತ ವರ ಪಾದುಕೆಗಳನಿತ್ತು ಕುಶಲಮತಿ ತಾನವನ ಕಳುಹಿ ಯೋಚಿಸಿ ಮತ್ತು 13 ಪೆಸರಾಂತ ದಂಡಕಾ ವನ ಪ್ರವೇಶವ ಮಾಡಿ ಅಸುರರನೇಕರು ಅಂತಕನ ಬಳಿದೂಡಿ14 ಋಷಿವರ್ಯ ಶರಭಂಗಗೀಕ್ಷಣದಿ ಸುಗತಿಯನು ಹಸನಾಗಿ ಕರುಣಿಸಿದ ಬಳಿಕ ಕುಂಭೋದ್ಭವನು 15 ಒಸಗೆಯಿಂದಿತ್ತ ದಿವ್ಯಾಸ್ತ್ರಂಗಳ ಸಂಗ್ರಹಿಸಿ ಪಸರಿಸಿಹ ವಿಲಸಿತದ ಪಂಚವಟಿಯಲಿ ನೆಲಸಿ 16 ಒಸಗೆಯಿಂದಿರೆ ಬಂದ ಶೂರ್ಪನಖಿಗತಿಭಂಗ ವೆಸಗಿ ಸೋದರನಿಂದ ಶೋಭಿಸೆ ಶುಭಾಂಗ 17 ಮಾಯಾ ಮೃಗಾಕಾರ ದಸುರ ಮಾರೀಚನಂ ಸಂಹರಿಸಿ ರಘುವೀರ 18 ಅಸಮ ಸೋದರ ಸಹಿತ ಆಶ್ರಮಕ್ಕೈತಂದು ದೆಸೆದೆಸೆಯೊಳರಸೆ ತನ್ನರಸಿ ಕಾಣದಿರಲು 19 ಹುಸಿವೇಷದಿಂ ಬಂದ ಖಳ ಕುಲಾಗ್ರಣಿಯಿಂದ ಶಶಿಮುಖಿಯು ಹಗರಣವಾಗಿರಲು ನಿತ್ಯಾನಂದ 20 ದೆಸೆಗೆಟ್ಟವನ ಪರಿಯಲತಿಶಯದಿ ಶೋಕಿಸುತ ದೆಸೆದೆಸೆಯೊಳರಸುತ್ತಾ ಬಸವಳಿದು ತಾ ಬರುತ 21 ಎಸೆವವರ ಋಷ್ಯಮೂಕಮತಂಗಾಶ್ರಮದಿ ಬಿಸಜಾಪ್ತಸುತನ ಕಂಡವನೊಡನೆ ತಾ ಮುದದಿ 22 ಉಸುರಿ ವಾಲಿಯ ವಧೆಗೈವೆನೆಂದಭಯವನು ಎಸೆವ ವಿಲಸಿತ ಮಹಿಮ ಕರಿಗಿರೀಶನು ತಾನು 23
--------------
ವರಾವಾಣಿರಾಮರಾಯದಾಸರು
ದುರಿತ ವಿದೂರ ಪ ತಾಪಸ ಪ್ರಿಯ ನಿಜದಾಸ ಮಂದಾರಾ ಅ.ಪ ನಾ ಸತ್ಯರೊಳಭಿಮಾನಿಯಾಗಿದ್ದು ಸಕಲ ವಾಸನೆಗಳ ಕೊಂಡು ಎಲ್ಲ ಜೀವರ ಅಭಿ- ಲಾಷೆಗಳರಿತು ಸುಖಗಳೀವುತ ಸರ್ವಾ- ವಾಸನಾಗಿಹ ಇಂದಿರೇಶ ಕೃಪಾಳೊ 1 ಘೃತ ಯುತ ಗುಗ್ಗುಳ ಸಂಮಿಳಿತ ಕೃಷ್ಣಾಗರು ಮಿ- ಶ್ರೀತ ಧೂಪವ ಶ್ರೀಸಹಿತನಾಗಿ ನೀ ಕೈಕೊ- ಳ್ಳುತ ಭಕ್ತರಿಗೀಪ್ಸಿತ ವರವೀವನೆ 2 ವಾಸನೆಯರಿತು ಸರ್ವಭೂತದಲಿ ನಿ- ವಾಸುದೇವನಿಗೆ ಸುವಾಸನೆಯಾವದು ವಾಸುಕಿ ಶಯನ ಶ್ರೀಗುರುರಾಮ ವಿಠಲಾ 3
--------------
ಗುರುರಾಮವಿಠಲ
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಪ ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಅ.ಪ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ನಿತ್ಯ 1 ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು ದೊರಕಿದ ಸ್ಥಳದಲ್ಲಿ 2 ಸಲಿಲ ಭೂಗಿರಿ ಲತೆ ನಾನಾ-ವೃಕ್ಷ ಮೃಗ ಪಕ್ಷಿ ಕಾನನ-ಮುಕ್ತ ಸ್ಥಳಗಳವ್ಯಾಕೃತ ಗಗನ, ತೃಣ- ಪಾವಕ ತರು ಪವನ-ಆಹ ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ ನೆಲೆಯ ನೀ ನಲವಿಂದ ತಿಳಿದು ಆವಾಗಲು3 ವಿಶ್ವ ಮತ್ಸ್ಯಾದಿ, ತೇಜೊ ರಾಶಿ ಹಯಗ್ರೀವಾದಿ, ಜೀವ ರಾಶಿಯೊಳಿದ್ದು ಅನಾದಿ ಸರ್ವ ದೇಶ ಭೇದಿಸುವಂಥ ವೇದಿ-ಆಹ ಮೂರ್ತಿ ಶ್ರೀಶ ರಂಗನೆಂದು ನಿತ್ಯ 4 ಸಪ್ತಾವರಣ ದೇಹದಲ್ಲಿ, ದಶ ಸಪ್ತ ದ್ವಿಸಹಸ್ರ ನಾಡಿಯಲಿ, ದಶ ಸಪ್ತ ದ್ವಿಸಹಸ್ರ ರೂಪದಲಿ ಹರಿ ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ5 ಜೀವರಿಂದತ್ಯಂತ ಭೇದ, ಪ್ರತಿ ಜೀವಾಂತರದಲ್ಲಿ ಮೋದನಾಗಿ ಯಾವಾಗಲಿರುತಿಹ ವೇದ-ದಲ್ಲಿ ಪೇಳುವುದು ಸತ್ಯಂಭಿದಾ-ಆಹ ಈ ವಿಧ ವೇದಾರ್ಥ ಸಾವಧಾನದಿ ತಿಳಿದು ಶ್ರೀ ವಾಯುಮತದ ಸುಕೋವಿದರೊಡಗೂಡಿ 6 ಶ್ರೀಕೇಶವನೆ ಮೂಲರಾಶಿ, ಶ್ರುತಿ- ಏಕೋ ನಾರಾಯಣ ಆಸೀತ್ ನಾನಾ ಲೋಕ ಸೃಷ್ಟಿಪ ಧಾತನಾಸೀತ್, ಜಗ ದೇಕತಾರಕ ಉಪದೇಶೀ-ಆಹ ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉ- ತ್ತುಂಗ ಗುಣಾಂತರಂಗ, ಕಾ ಳಿಂಗ ಸರ್ಪನ ಮದಭಂಗ, ಭು ಜಂಗಶಯನ ಅಮಲಾಂಗ-ಆಹ ಮಂಗಳ ಇಡಾ ಪಿಂಗಳ ಸುಷುಮ್ನ ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ 8 ಹೃದಯಸ್ಥಾನದಲಿದ್ದ ಮೂರ್ತಿ, ಬಲು ಅದುಭುತಾತನ ದಿವ್ಯಕೀರ್ತಿ, ಅದು ಪದುಮುಜಾಂಡದಿ ಪರಿಪೂರ್ತಿ ತರು ವುದಕೆ ಬೇಕು ವಾಯು ಸಾರಥಿ-ಅಹಾ ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ ಪದುಮಕೋಶದಲ್ಲಿ ಸದಮಲಾತ್ಮಕನನ್ನು 9 ಧರೆಯನಳೆದ ದಿವ್ಯ ಚರಣ, ಅದು ಮೆರೆವುತಿಹುದು ಕೋಟಿ ಅರುಣನಂತೆ ಪರಿಪೂರ್ಣ ಭರಿತವು ಕಿರಣ, ಸ್ಮರಿ- ಪರಿಗೆ ಮಾಡುವುದು ಕರುಣ-ಆಹ ತರಣಿಯಂಥ ನಖದಿ ಸುರನದಿಯನು ಹೆತ್ತ ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು 10 ಪೆರಡು ಜಾನು ಜಂಘೆ ಘನ್ನ ಸುರು- ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ ವರ ರೇಖೆಯಿಂದಲೊಪ್ಪುವನ, ಜಘನ ಪರಮ ಶೋಭಿತ ಸುಂದರನ-ಆಹ ಕದಳಿ ಕಂಬ ಇರುವೂರು ಶೋಭಿಸೆ ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು 11 ಗಜವೈರಿಯಂತಿಪ್ಪ ಮಧು ಬಲು ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ ನಿಜಘಂಟೆ ಘಣರೆಂಬೊ ವಾದ್ಯ, ಕು ಬುಜೆ ಡೊಂಕ ತಿದ್ದದನಾದ್ಯ-ಆಹ ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ ಕುಕ್ಷಿ ನಿಜಪೂರ್ಣ ಸಖನನ್ನು 12 ಉದರ ತ್ರಿವಳಿ ನಾನಾ ಹಾರ ದಿವ್ಯ ಪದಕ ಪವಳದ ವಿಸ್ತಾರ ರತ್ನ ಮುದದಿಂದ ಧರಿಸಿದ ಧೀರ ಸುಂದರ ವಾದ ಕಂಬುಕಂಧರ-ಆಹಾ ಪದುಮಜ ಭವರಿಂದ ತ್ರಿದಶರು ತಿಳಿಯುತ್ತ ಸದಾಕಾಲ ಧ್ಯಾನಿಪ ಹೃದಯಾಂಬರವನ್ನು 13 ಸಿರಿವತ್ಸ ಕೌಸ್ತುಭಹಾರ, ಮೇಲೆ ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ ವೈಜಯಂತಿ ಮಂದಾರ, ಗುರು ತರವಾದ ಭುಜ ಚತುರ-ಆಹ ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ ಬೆರಳು ನಕ್ಷತ್ರದ ಅರಸಿನಂತೆ ನಖ14 ಕರಚತುಷ್ಟಯದಲ್ಲಿ ಶಂಖ, ಚಕ್ರ ವರಗದೆ ಪದುಮು ನಿಶ್ಶಂಕನಾಗಿ ಧರಿಸಿ ಮೆರೆವೊ ಅಕಳಂಕ, ದುರು ಳರ ದಂಡಿಸುವ ಛಲದಂಕ ಆಹ ಬೆರಳು ಮಾಣಿಕದುಂಗುರ ಕಡಗ ಕಂಕಣ ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ15 ಅಗರು ಚಂದನ ಗಂಧÀಲೇಪ, ಕಂಬು ಸೊಗಸಾದ ಕಂಠಪ್ರತಾಪ, ಮಾವು ಚಿಗುರಲೆ ಕೆಂದುಟಿ ಭೂಪ, ನಸು ನಗುವ ವದನ ಸಲ್ಲಾಪ-ಆಹ ಮಗನಾಗಿ ತಾನು ಗೋಪಿಗೆ ವದನದೊಳು ಅಗಣಿತ ಮಹಿಮನ್ನ 16 ಮುಗುಳು ಮಲ್ಲಿಗೆ ಮೊಗ್ಗೆ ದಂತ ಪಙÂ, ಜಗವ ಮೋಹಿಸುವ ಸುಶಾಂತ ಜಿಹ್ವೆ ನಿಗಮಕೆ ವೇದ್ಯವಾದಂಥ ಬಲು ಬಗೆಯಿಂದ ನಡೆಸುವ ಪಂಥ-ಆಹ ಪೊಗಳಲಾರದು ವೇದ ಖಗವಾಹನನ ಮಹಾ ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು 17 ಪೊಳೆವೊ ವಿದ್ಯುತ ಕಪೋಲ, ನೀಲೋ- ತ್ಪಲದಳ ನೇತ್ರ ವಿಶಾಲ, ದಿವ್ಯ- ತಿಲಕವನಿಟ್ಟ ಸುಫಾಲ, ನೀಲಾ- ಚಲಕಾಂತಿ ತನುರುಹ ಜಾಲ-ಆಹ ಕುಂಡಲ ಕರ್ಣದೊಲುಮೆಯ ಚೆಲುವಿಕೆ ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ 18 ಶುಭ ನೋಟ, ಕಂಗ- ಳೆರಡ ಚೆಲುವಿಕೆ ಮಾಟಕಿನ್ನು ಅರವಿಂದ ಸರಿಯಿಲ್ಲ ದಿಟ ಅಲ್ಲಿ ತರಣಿ ಚಂದ್ರಮರ ಕೂಟ-ಆಹ ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ 19 ಹೊಳೆವ ಹುಬ್ಬುದ್ವಯ ಸ್ಮರನ ಚಾಪ- ತಲೆ ತಗ್ಗಿಸುವಂಥ ರಚನ ಫಾಲ- ದಲ್ಲಿಟ್ಟು ತಿಲಕ ಸುಂದರನ ಲೋಕ- ಕಳವಳಗೊಳಿಸುವ ಸುಗುಣ-ಆಹ ನಲಿವ ವದನದಲ್ಲಿ ಅಳಿಗಳಂತೊಪ್ಪುವ ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು 20 ರೂಪ ಶೃಂಗಾರ ವಿಲಾಸ ಉಡು- ಭೂಪ ನಾಚುವ ಮುಖಹಾಸ ವಿಶ್ವ ರೂಪ ಧೃತ ಸ್ವಪ್ರಕಾಶ ಸರ್ವ ವ್ಯಾಪಕಾಖಿಳ ಜಗದೀಶ-ಆಹ ತಾಪಸರಿಗೆ ಕರುಣಾಪಯೋನಿಧಿ-ಅಣು ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ21 ಕೋಟಿಮಾರ್ತಾಂಡ ಸಂಕಾಶ ಕಿ ರೀಟಕ್ಕೆ ಅಸಮ ಪ್ರಕಾಶ ಎಲ್ಲು ಸಾಟಿಗಾಣೆನು ಲವಲೇಶ ಕಪಟ- ನಾಟಕ ಶ್ರೀ ಲಕುಮೀಶ-ಆಹ ನಖ ಲಲಾಟ ಪರಿಯಂತ ನೋಟದಿಂದಲೆ ಈಶ ಕೋಟಿ ಸಹಿತನಾಗಿ 22 ಕಾಮಾದಿಗಳನೆಲ್ಲ ತರಿದು ಮುಕು- ತೀ ಮಾರ್ಗವನ್ನೆ ನೀನರಿದು ಅತಿ- ಪ್ರೇಮದಿ ಗುರುಗಳ ನೆನೆದು ಹೇಮ ಭೂಮಿ ಕಾಮಿನಿಯರ ಜರಿದು-ಆಹ ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ ಯುಗ್ಮ ನಿತ್ಯ 23
--------------
ವಿಜಯದಾಸ
ನಾರಾಯಣ ತನ್ನ ನಂಬಿದ ಭಕುತರ ಕಾರುಣ್ಯದಿ ಕಾವ ಪ ಮಾರುತಿ ಸಹಿತನಾಗಿ ತಾನೀ ಶರೀರದೊಳಿಹ ದೇವ ಅ.ಪ ಅನಿರುದ್ಧನು ತಾ ಸಕಲ ಚರಾಚರ ಸೃಷ್ಟಿಯ ಗೈವ ವನಧಿಶಯನ ಪ್ರದ್ಯಮ್ನನು ಬ್ರಹ್ಮಾಂಡವ ಪಾಲಿಸುವ ತ್ರಿನಯನನಂತರ್ಗತ ಸಂಕರ್ಷಣ ತಾನು ಲಯವನು ಗೈವ ವಾಸುದೇವ ಸುಜೀವರಿಗೆ ಮೋಕ್ಷವನೀವ 1 ನರಸಿಂಹ ರೂಪದಿ ಹರಿಯು ಭಕುತ ಪ್ರಹ್ಲಾದನ ಕಾಯ್ದ ಸಿರಿ ರಾಮನು ತಾನಾಗಿ ಬಂದು ದಶಶಿರನ ಭಂಜಿಸಿದ ದುರುಳ ಕಂಸನ ನಿಗ್ರಹಿಸಲು ಯದು ವಂಶದೊಳುದಿಸಿ ಬಂದ ಪರಾಶರಾತ್ಮಜನಾಗಿ ವರವೇದ ವಿಭಾಗವ ಗೈದ 2 ವರಾಹ ನರಹರಿರೂಪವ ತಾ ಕೊಂಡ ಇಚ್ಛೆಯಿಂದಲಿ ವಟುವಾಗಿ ಕೊಡಲಿಯ ಪಿಡಿದ ಪ್ರಚಂಡ ಸಿರಿ ಕೃಷ್ಣ ದಿಗಂಬರನಾಗಿ ಕಂಡ ಸ್ವಚ್ಛ ಅಶ್ವವೇರಿದ ರಂಗೇಶವಿಠಲ ಬಿನಗು ದೈವರ ಗಂಡ 3
--------------
ರಂಗೇಶವಿಠಲದಾಸರು
ಪದ್ಯ ಅಥಃ ಪ್ರಥÀಮೋಧ್ಯಾಯ ಪಾದ ವಾರಿಜಕೆರಗುತ ನೀರಜ ಮುಖಿ ಸರಸ್ವತಿಯಾ || ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ ಚಾರು ಕಥೆಯಾ ಪ ಸುರಮುಖಿವಂದಿತ ಸರಸಿಜ ಭವಪಿತ ಶರಧಿ ಕರಿವರದಾ | ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು ವರವ ಪಾಲಿಸು ದಯದಿಂದ 1 ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ ಪುರಹರ ವಂದಿತೆ ಖ್ಯಾತೆ || ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ ಗರಿಯೆ ವರವ ಸುಖದಾತೆ 2 ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ ನೆರೆನಂಬಿದೆನು ಮುದಿಂದ || ಹರಿಸುಚರಿತ್ರವು ಅರುಹಲು ಎನ್ನಗೆ ಸ್ಥಿರ ಬುದ್ಧಿಕೊಡು ವಾಯುಕಂದ 3 ಗಿರಿಜೇಶ ಶಚಿಪತಿ ಸುರತತಿಗೆರಗುವೆ ಪರಮ ಸುಭಕ್ತಿ ಪೂರ್ವಕದಿ || ಹರಿದಾಸ ವರ್ಗಕೆ ಶುಭನೀಡಲೆನಗೆಂದು ಶಿರಬಾಗಿ ಬೇಡುವೆ ಮನದಿ 4 ಘನತರ ನೈಮಿಷವನದೊಳು ವಾಸಿಪ ಮುನಿ ಸೂತನಲ್ಲಿಗೆ ಬಂದು | ವಿನಯದಲಿ ವಿಜ್ಞಾಪನ ಮಾಡಿಕೊಂಡರು ಶೌನಕಾದಿಗಳೆಲ್ಲ ನಿಂದು 5 ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ | ವ್ರತದಾವದ್ಹೇಳಿರೆನುತ || ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು ಕಥಿಸಿದನಾಗೆತಿ ಸೂತಾ 6 ಛಂದದಿ ಕೇಳಿರಿ ಒಂದೆ ಮನದಿ ಈಗಾ | ನಂದದಿ ನಾರದ ತಾನೂ || ಹಿಂದಕ್ಕೆ ಈತೆರ ನಂದನ ಗೋ ವಿಂದನ ಪ್ರಶ್ನೆ ಮಾಡಿದನೂ 7 ಕಾರುಣ್ಯದಿಂದಲಿ ಸಾರಸೋದ್ಭವಕು | ಮಾರ ನಾರದ ಮುನಿವರಗೆ || ಶೌರಿ ಪೇಳಿದ ಕಥೆ ಸಾಧುವೆ ಮೋದದಿ ನಿಮಗೆ 8 ವರಸುರ ಲೋಕಾದಿ ಚರಿಸುತ್ತನಾರದ | ಹರುಷದಿ ಭೂಮಿಗೆ ಬರಲು || ನರರತಿ ಕಷ್ಟದಿ ಮರುಗುವದಂ ನೋಡಿ | ಪೊರೆಟರು ಹರಿಗ್ಹೇಳಿ ಕೊಳಲು 9 ಪದುಮಜ ಸುತ ನಾರದ ಮುನಿ ವೇಗದಿ | ವಿದುಧರ ವಂದಿತನಾದ || ಯದುಪನಲ್ಲಿಗೆ ಬಂದು ಮುದಮನದಿಂದಲಿ | ವಿಧ ವಿಧದಲಿ ಸ್ತುತಿಗೈದಾ 10 ಅಗಣಿತ ಮಹಿಮನೆ ತ್ರಿಗೂಣ ವರ್ಜಿತ ತ್ರಿವಿಕ್ರಮನೆ || ಪೊಗಳುವ ತವ ಪದಯುಗಕೆರಗುತ ನಾನು ಜಗದುತ್ವತ್ತಿ ಕಾರಣನೆ 11 ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ | ಮಗನ ಮಗಳ ಮದುವ್ಯಾದಿ || ಮಗನ ಮಗನ ವರಪಡೆದಾತನ ಜೈಸಿ ಮಗನ ಮಗನ ನೀನು ತಂದಿ 12 ಸಿಂಧುಜರಿಪ್ರಸಖ ನಂದನ ಕೊಂದನ | ತಂದೆಯ ತಂದೆಯಾ ಸುತೆಯಾ || ನಂದಿನಿಯಳಿಗಾಗಿ ನೊಂದಿದಿ ನೀ ನರ ರಂದದಿ ಕವಿಗಣಗೇಯಾ 13 ಘನ್ನ ಮಹಿಮ ನಿನ್ನ ಅನಂತ ಚರಿಯವ ಬಣ್ಣಿಸ ಬಲ್ಲೆನೆ ದೇವಾ || ಪನ್ನಗರಾಜಗಾಗಣ್ಯವಾಗಿಪ್ಪುದು ಮನ್ನಿಸು ಎನ್ನ ಬಿನ್ನಪವಾ 14 ಬಾ ಮುದ್ದು ನಾರದನೆ ಬಾ ಮುನಿವರ್ಯನೆ ಬಾ ಮೂರು ಭುವನ ಸಂಚಾರಿ ನೇಮದಿಂದಲಿ ನಿನ್ನ ಕಾಮಿತ ಪೇಳೀಗ ಪ್ರೇಂದಿಂದಲಿ ವೀಣಾಧಾರಿ 15 ಮುರಹರ ನಿನ್ನಗೆ ಅರಿಯದ ವಾರ್ತೆಯು | ಧರಣಿ ತ್ರಯದಿ ಉಂಟೇನೋ || ನರರತಿ ಕಷ್ಟದಿ ಮರುಗುತಲಿಪ್ಪರು ಹರಿಪೇಳಿದಕುಪಾಯವನು 16 ಸತ್ಯಲೋಕೇಶನ ಪುತ್ರನೆ ನಿನ್ನಯ | ಉತ್ತಮ ಪ್ರಶ್ನೆಗೆ ನಾನು || ಚಿತ್ತೈಸು ಮುನಿವರ ನೀನು 17 ನಾರದ ಶ್ರೀ ಸತ್ಯನಾರಾಯಣ ವ್ರತ ಧಾರುಣಿಯೊಳಗಿನ ಜನರು ಆರು ತಮ್ಮ ಪರಿವಾರದಿಂದಲಿ ಗೈಯ್ಯೆ ಭೂರಿ ಸೌಖ್ಯದಿ ಮೆರೆವರೋ 18 ದೇವನೆ ಈ ನಿನ್ನ ಸೇವಕನಿಗೆ ಸತ್ಯ || ದೇವನೆ ವ್ರತದ ವಿಧಾನ || ಸಾವಧಾನದಿ ಪೇಳು ಭಾವ ಜಪಿತ ಏಕೋ ಭಾವದಿ ಕೇಳುವೆ ಮುನ್ನ 19 ಬುಧನುತ ನಾರದ ಘೃತಕ್ಷೀರ ಶರ್ಕರ | ಕದಳಿ ಗೋಧೂ ಮಾದಿಗಳನು || ಪದುಳದಿಂದಲಿ ಸುಪಾಕಗೈದು ಮೇಣ್ ವಿಧ ವಿಧ ಪಕ್ವಾದಿಗಳನು 20 ಪರಮ ಭಕ್ತಿಯಲಿಂದ ಪರಿವಾರ ಸಹಿತದಿ ಧರುಣಿಸುರನ ಪರಿಮುಖದಿ ತುರಧೂಳಿಕಾಲದಿ ಪರಿಪರಿ ಪೂಜಿಸಿ ಹರಿಗರ್ಪಿಸಲಿ ಬೇಕು ಮುದದಿ 21 ಈರೀತಿಗೈವರ ಕೋರಿಕೆಯನು ದಯ | ವಾರಿಧಿ ಶಾಮಸುಂದರನೂ || ನಿತ್ಯ ವಾರಿಜಸಹಿತದಿ ಸೇರಿ ತಾ ನಲಿದಾಡುತಿಹನೂ 22 ಇತಿ ಪ್ರಥಮೋಧ್ಯಾಯ ಸಂಪೂರ್ಣಂ ಅಥಃ ದ್ವಿತೀಯೋಧ್ಯಾಯಃ ಅತಿ ಮೋದದಿಂದಲಿ ಮತಿಯುತರೆ ಈಗ ಪೃಥವಿಯೊಳಗೆ | ಪೂರ್ವದಲಿ || ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ ಕಥಿಸುವೆ ಹಿತದಿಂದ ಕೇಳಿ 1 ಕಾಶಿಯೊಳಗೆ ಒಬ್ಬ ಭೂಸುರ ಬಡತನ ಕ್ಲೇಶದಿ ವಾಸಿಸುವದನು || ಶ್ರೀಶ ಅವನ ನೋಡಿ ಪೋಷಿಸಲು ವೃದ್ಧ ವೇಷದಿ ಮಾತನಾಡಿಸಿದನು 2 ಭೂತವಕದಿ ವಿಪ್ರನಾಥನೆ ತವ ಮುಖ ಪಾಥೋಜ ಬಾಡಿದ ಬಗೆಯಾ ಈ ತೆರ ದುಃಖದಿ ನೀ ತಿರಗುವಂಥ ಮಾತು ಪ್ರೀತಿಲಿ ಪೇಳಯ್ಯಾ 3 ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ | ಸ್ಥಿತಿಯಾ ಲಾಲಿಸು ಮನದಿಂದಾ || ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ ಅತಿ ಬಡತನ ದೆಶೆಯಿಂದಾ 4 ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ | ಥಟ್ಟನೆ ನೀ ಪೇಳುಪಾಯಾ || ಘಟ್ಪ್ಯಾಗಿ ನಿನ್ನ ಉತ್ಕøಷ್ಟ ಪಾದಾಂಬುಜ ಮುಟ್ಟಿ ಸೇವಿಪೆ ಮಹರಾಯಾ 5 ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ | ಕಡಲಜಪತಿ ಕವಿಗೇಯಾ || ಕಡುದಯದಲಿ ಪೇಳ್ದ ಬಡತನ ಕಳೆಯುವ ಪೊಡೆವಿಯೊಳಿದ್ದ ಉಪಾಯಾ 6 ಸಾರುವೆ ಕೇಳಯ್ಯ ಮಾರಜನಕ ನಿಜ | ನಾರಾಯಣನ ಸು ವ್ರತವಾ ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು ದಾರಿದ್ರ್ಯ ಹರಿ ದೂರಗೈವಾ 7 ಮುದುಕನ ನುಡಿಕೇಳಿ ಮುದಮನದಿಂದಲಿ ಸದನಕ್ಕೆ ದ್ವಿಜ ಬಂದು ತಾನೂ ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ ವಿಧ ವಿಧದಲಿ ಮಾಡಿದನೂ 8 ಹರುಷದಿ ಈ ರೀತಿ ಧರಣಿ ದೇವನು ಮಾಡೆ | ಶಿರಿಸತಿ ಸುತರಿಂದ ತಾನೂ || ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ ಪಥ ಹಿಡಿದನೂ 9 ಸೂತರೆ ಅತ್ಯಂತ ಕೌತುಕವಾಗಿಹ ಧಾತ ಪಿತನ ಈ ವ್ರತವು ಭೂತಳದೊಳಗೆಂತು ಖ್ಯಾತಿಯ ಪೊಂದಿತು ಪ್ರೀತಿಲಿ ಪೇಳಿರಿ ನೀವು 10 ಸತಿಸುತ ಪರಿವಾರ ಸಹಿತಾ ಅತಿ ಹಿತದಲಿ ಮನೋರಥ ಪೂರೈಸುವ ಈ ವ್ರತ ಮಾಡುತಿರಲಾಗತ್ವರಿತಾ 11 ಚರಣನೋರ್ವನು ಶಿರದಿ ಕಾಷ್ಟಭಾರವ ಧರಿಸಿ ಮಾರಲು ಬೀದಿಗಳಲಿ ಬರುತಿರೆ ಮಾರ್ಗದಿ ಧರಣಿದೇವನೆ ಮಂ ದಿರ ಕಂಡ ಪರಮ ಮೋದದಲಿ 12 ಶ್ರೀನಿವಾಸನ ಘನಧ್ಯಾನದಿಂರ್ಚಿಪ ಕ್ಷೋಣಿ ಸುರನ ನೋಡಿ ಜವದಿ ಮಾನವ ಕೇಳಿದ ಏನಿದೆಂದೆನು ತಲಾಕ್ಷಣದಿ 13 ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು ಶುದ್ಧ ಮನದಿ ಚರಣೋಧ್ಭವ ಗೈದನಿ ಶುದ್ಧನ ಪಾದಾರ್ಚನವಾ 14 ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ ಪರಮ ಸೌಜನ್ಯದಿ ಇದ್ದು ಕೊನೆಗೆ ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ ಶಿರಿಶಾಮಸುಂದರನ ಪುರಿಗೆ 15 ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ ಅಥಾಃತೃತೀಯೋಧ್ಯಾಯ ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ ಪೆಸರಾದ ಇನ್ನೊಂದು ಕಥೆಯಾ ಉಸುರುವೆ ಕೇಳ್ವರ ವ್ಯಸನವು ಪರಿಹಾರ ಪುಸಿಯಲ್ಲಿ ಈ ನುಡಿ ಖರಿಯಾ 1 ವರ ಉಲ್ಕಮುಖನೆಂಬ ಧರಣೀಶನೋರ್ವನು ಹರುಚದಿಂದಲಿ ತನ್ನ ಹಿತದಾ ಶರಧಿ ತೀರದಿ ನಿಜ ಹರಿಯನ್ನು ಪೂಜಿಸುತಿರ್ದ 2 ಕ್ಷೋಣಿಪಾಲಕನಿದ್ದ ಆ ನದಿತೀರದಿ | ವಾಣಿಜ್ಯ ಮಧುನಾಯಕನೂ || ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ ಧಾನವೇನೆಂದು ಕೇಳಿದ 3 ಭೂಮಿಪಾಲಕ ಮಧುನಾಮಕ ವೈಶ್ಯನ ಆ ಮೃದು ನುಡಿಕೇಳಿ ಜವದಿ ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ ನೇಮವ ಪೇಳ್ವ ಸಮ್ಮುದದಿ 4 ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ ಲಕ್ಕುಮಿಯುತ ಮುದದಿಂದ ಮಕ್ಕಳೆನಗಾಗಲು ಚಕ್ರಿಯ ಸುವೃತ ಅಕ್ಕರದಲಿ ಮಾಳ್ಪೆನೆಂದ 5 ಈ ರೀತಿ ಧೃಡ ಬ್ಯಾಪಾರಿಯು ತಾಗೈದು ಶೌರಿ ಪ್ರಸಾದ ಸ್ವೀಕರಿಸಿ || ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ ನಾರಿಯ ಮುಂದೆ ವಿಸ್ತರಿಸಿ 6 ಸತಿ ಶಿರೋಮಣಿ ಲೀಲಾ ವತಿಯು ತನ್ನ ಮಂದಿರದಿ || ಪತಿ ಕರುಣದಿ ಗರ್ಭ ವತಿ ತಾನಾದಳಾಕ್ಷಣದಿ 7 ಹತ್ತನೆ ಮಾಸದ ಉತ್ತಮ ಪುತ್ರಿಯ ಪೆತ್ತಳು ಆ ನಾರಿ ತಾನೂ || ಅತ್ಯಂತ ಸನ್ಮುದ ಚಿತ್ತನಾಗಿ ಸಾಧು ಮರ್ತನು ಹರಿವ್ರತವನ್ನು 8 ಸತಿ ಲೀಲಾವತಿ ತನ್ನ ಪತಿಗಭಿವಂದಿಸಿ ನಿಂದು || ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು ಪತಿ ವ್ರತ ಮಾಡಬೇಕೆಂದು 9 ಸುದತಿಯ ನುಡಿಕೇಳಿ ಮಧುನಾಮಕ ಸಾಧು ವಿಧಿಸಿದ ಸುತೆ ಕಲಾವತಿಯಾ || ಮದುವೆಯ ಕಾಲದಿ ಉದುಪನರ್ಚಿಪೆನೆಂದು ಮುದದಿಂದ ಪೇಳ್ದನುಪಾಯಾ 10 ಪರಿಪರಿ ಸೌಖ್ಯದಿಂದಿರುತಿರೆ ವೈಶನ ತರುಳೆಗೆ ಪೂರ್ಣಯೌವನವು | ಬರಲು ಮಾಡಿದ ತಕ್ಕವರ ತಂದು ಲಗ್ನವ ಮರೆತು ಬಿಟ್ಟನು ಹರಿವ್ರತವಾ 11 ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ ಜಾಮಾತನೊಡನೆ ವ್ಯಾಪಾರಾ ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ ಆ ಮಹಾಪುರ ರತ್ನಸಾರಾ&ಟಿbs
--------------
ಶಾಮಸುಂದರ ವಿಠಲ
ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ ಗೃಂಥಾರ್ಥ ಜ್ಞಾನ ವಿಷಯವ ನೆನೆಸದಂದದಿ ಮಾಡೋ ವನಜನಾಭನ ಪ್ರೀಯ ಅ.ಪ ಮುನಿವರ್ಯ ಮನವಾಚಾಕಾಯಾ ದಿಂದ ಅನುದಿನ ನಡೆಯುವ ಕ್ರಿಯಾ ಶ್ರೀ ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು ಯನಗೆಂದು ಮುಗಿವೆನು ಕೈಯಾ ಆಹಾ ಭವ ವನಧಿ ದಾಟಿಸುವ ಸಜ್ಜನರ ಸಂಗವ ಕೊಡು 1 ಶ್ರೀಕಾಂತನಶ್ವತ್ಥ ರೂಪ ದಿಂದ ಒಲಿದು ಬಂದು ನಿಂತು ಭಕ್ತ ವೃಂದವ ಪಾಲಿಪ ನಿರುತ ಆಹ ಇಂದುಮೌಲಿ ಮುಖರಿಂದ ಸಹಿತನಾಗಿ ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2 ಶ್ರೀ ಕಾರ್ಪರಾಗಾರ ಬಹುಶರಣು ಜನರಿಗೆ ಮಂದಾರ ನರಹರಿಯನೊಲಿಸಿದಂಥ ಧೀರಾ ಆಹಾ ಕರುಣ ಶರಧೆಯನ್ನ ದುರಿತಗಳೋಡಿಸಿ ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3
--------------
ಕಾರ್ಪರ ನರಹರಿದಾಸರು
ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ ದೀನನಾಥ ಸುಮ್ಮನೆ ನಿಂತು ನೋಡುವಿ ಪ. ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ ಒಡೆಯ ನಿನ್ನಡಿಗಳ ಪೊಗಳುವ ಪಾಡಿ ನುಡಿವ ಕಾರ್ಯಕೆ ಬಾಡಿ ಬಳಲುತ ನಾ ನಿತ್ಯ ನೋಡುತ ಬಡವನ ಬಿಡದಿರು ಕಡಲಶಯನ ನಿಜ ಮಡದಿ ಸಹಿತನಾಗಿ ಶ್ರೀಶನೆ ಕೃಪೆ ಕಂಜಕರ ಶ್ರೀನಿವಾಸನೆ1 ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು ನೋವ ನೀಡದೆ ಕಾವ ಬಿರುದನು ಭವ ಸಾರÀ ನೀ ಮರೆವುದು ನೀತಿಯೆ ಎನ್ನ ನೀ ವಿಧ ಮಾಳ್ಪುದು ಖ್ಯಾತಿಯೆ ಪಾವನ ಚರಿತ ಪುರಾಣ ಪುರುಷ ಮಹ ದೇವ ನೀ ಕರಪಿಡಿದೆನ್ನನು ಕರು- ಣಾವಲಂಬನವಿತ್ತು ಪೊರೆವುದು 2 ದುರುಳ ಭಾವನೆಯಿಂದ ಸರಿದು ಹೋಗುವ ಪಂಚ ಕರಣಕೆ ನೀನರಸನಲ್ಲವೆ ಭಕ್ತಾ- ಭರಣಕೆ ನಿನ್ನೊಳಿರಿಸು ಮಾರ್ಗವನಂತ:- ಕರಣಕೆ ತರಿದು ಪಾಪಗಳನು- ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ ಚಕ್ರಧರ ಸಕಲಾನಂದ ಕಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ಮದಾನಂದ ತೀರ್ಥ ಹನುಮ | ಭೀಮನಿನ್ನ ಸಮಾನ ಪುರುಷರುಈ ಮೂಜಗದೊಳಿಲ್ಲವೆಂದು ಶ್ರೀ ರಾಮಸಹಭೋಜನವನೀಯನೆ? ಪಹರಿವಿರಿಂಚಿ ಸಹಾಯದಿಂದ | ಹರನುತ್ರಿಪುರವನಳಿಯಲಾಗ |ಬರಿದೆ ಕೊಂಡಾಡಿದರು ಸರ್ವರು |ಅರಿಯದೆಯೆ ನಿನ್ನ ಸಾಹಸ ||ಶರಧಿಲಂಘಿಸಿ ದಾನವರನು ತರೆದುಸೀತೆಗೆ ಉಂಗುರವಿತ್ತು |ಪುರವನುರುಹಿ ಹರಿಯಡಿಗೆ ಆಕುರುಹತಂದು ಮುಟ್ಟಿಸಿದೆಯೊ 1ಸಾಸಿರದ ತನ್ನ ಪೆಡೆಯ ನಡುವೆ | ಈಸುಸಚರಾಚರವನೆಲ್ಲ |ಸಾಸಿವೆಯಂದದಲಿ ಇಟ್ಟಾ | ಶೇಷನ-ಮೂಲರೂಪದ ||ಆ ಶಕುತಿಯನು ತೋರಿಸಲುದಶಾಸ್ಯನೆಳೆಯುವ ಸೌಮಿತ್ರಿಯನುದಾಶರಥಿಯ ಬಳಿಗೆ ತಂದು | ನೀ ಸಲಹಿದೆ ಜಗವರಿಯಲು 2ತನ್ನ ಜನನಿಯೊಬ್ಬಳಿಗೆಸುಪರ್ಣಬಳಲಿ ಸುಧೆಯ ತರಲುಇನ್ನು ಪೊಗಳುತಿಹುದು ಲೋಕ | ನಿನ್ನಂತೆ ದೂರದಲಿಹ ||ಉನ್ನತದ ಶತಯೋಜನಗಲದ | ಅನ್ಯರು ತರಲಾರದ ಸಂಜೀ |ವನ್ನ ಗಿರಿಯ ತಂದು ಕಪಿಗಳನ್ನು ಕಾಯ್ದೆ ತವಕದಿಂದ 3ಸಕಲ ಪ್ಲವಗನಿಕರ ರಾಮನ | ತ್ರಿಕರಣಸೇವೆಯನು ಮಾಡಿ |ಮುಕುತಿ ಬೇಡಲಿತ್ತು ನಿನಗೇನು | ಬೇಕೆಂದುಕೇಳಲು ನೀನು ನಾ ||ಲುಕು ಪುರುಷಾರ್ಥಗಳಜರಿದು| ಭಕುತಿಯಕೊಡು ಎನಲು ನವಕನಕದ ಮಾಲೆ ಕೊರಳಿಗಿಟ್ಟು ಜಾ | ನಕಿರಮಣನುನಿನ್ನ ಪೊಗಳಿದ 4ಶರಧಿಯ ಮಥನದೊಳುದಿಸಿದ |ಗರಳಜಗತ್ತನು ಅಂಜಿಸೆಸಿರಿಯರಸನ ಪೆರ್ಮೆಯಿಂದ | ಸುರಿದುಅದನು ಜೀರ್ಣಿಸಿಕೊಂಡ ||ಮಾರುತನವತಾರ ವೃಕೋ | ದರನೆ ನೀನು ಎಂದರಿಯದೆಮರುಳ ಕೌರವರಿಕ್ಕಿದ ವಿಷವ | ಭರದಿಉಂಡು ತೇಗಿದುದರಿದೆ ? 5ಅವನಿಭಾರಕೆ ಮುಖ್ಯರಾದ | ಕವುರವ ಕೀಚಕಾದಿಗಳನುಬವರಮುಖದಿ ನಗುತ ಗೆಲಿದು |ಹವಿಯ ಕೃಷ್ಣಾನಿಗರುಪಿಸಿದಿವಿಜರೆದುರುಗೊಳಲುಅವರ|ನವರತಾರತಮ್ಯದಿ ಮನ್ನಿಸಿ |ಪವನಲೋಕದೊಳು ಮೆರೆದೆ ದ್ರವುಪದಿಯ ಸಹಿತನಾಗಿ 6ಸುರಾಸುರರ ಸಂಗ್ರಾಮದಲಿ |ಅರಿವಿಪ್ರಚಿತ್ತಿಯ ನೀನು ಕೊಲ್ಲಲು |ವಿರಿಂಚಿ-ಹರರ ವರದಿಂದವನೆ |ಜರಾಸಂಧನಾಗಿ ಇಳೆಯೊಳು |ಅರಸುಗಳನು ಕಾಡಲವನ ಸರನೆ ಸೀಳಿ ಪಶುವಿನಂತೆಹರಿಗೆ ಅರ್ಪಿಸಲವನು ಸಕಲಾ | ಧ್ವರಕ್ಕಿಂತಲು ತೃಪ್ತನಾದ 7ನಡುಮನೆಯೆಂಬ ಸಾಧುದ್ವಿಜನ | ಮಡದಿಯಬಸಿರಿನಲಿ ಉದಿಸಿಕಡು ಕುಮತದ ಮಾಯಿಗಳನು | ಅಡಿಗಡಿಗೇ ಸಚ್ಛಾಸ್ತ್ರದಿ ||ತಡೆದು ಆನಂದ ಶುಭಗುಣಗಳ | ಕಡಲುಹರಿಸರ್ವೋತ್ತಮನೆಂದುಒಡಂಬಡಿಸಿ ಸ್ವಮತವನ್ನು | ಪೊಡವಿಯೊಳಗೆಸ್ಥಾಪಿಸಿದೆಯೊ ನೀ 8ಮರುತ ನಿನ್ನವತಾರ ತ್ರಯವ | ನರಿತುಭಜಿಪಗೆ ಶ್ವೇತದ್ವೀಪ |ದರುಶನವನೆ ಮಾಡಿಸಿ ಶ್ರೀ |ಪುರಂದರವಿಠಲೇಶನ |ಕರುಣಕಟಾಕ್ಷದಿಂದ ವೈಕುಂಠ ಪುರದಿ ಅನಂತಾಸನದಲಿ |ಪರಮಾನಂದವ ಪಡೆಸಿ ಹೊರೆವೆ |ಪರಿಪರಿಯ ಭೋಗಗಳನಿತ್ತು 9
--------------
ಪುರಂದರದಾಸರು
ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪಐದು ಮುಖ ಐದು ಈರೈದು ಕಣ್ಣುಗಳಿಂದ |ಐದು ಪಣೆಯೊಳಗಗ್ನಿ ಕಿಡಿಯುದುರುತ ||ಐದೆರಡು ತೋಳು ಭುಜಗಳ ಒಲೆದಾಡಿಸುತ |ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |ಮೇಲೆ ಒರಲುವ ಭೂತಗಣ ಸಹಿತದಿ ||ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2ಲಂಡದಾನವರ ಶಿರಗಳ ತರೆದು ಬಿರುದಿನ |ರುಂಡಮಾಲೆಯ ಧರಿಸಿ ಆರ್ಭಟಿಸುತ ||ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |ಪುಂಡರೀಕಾಕ್ಷನ ತೋರು ತೋರೆನುತ 3ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |ಕರಿಜಡೆಗಳನೆಲ್ಲ ಕೆದರಿಕೊಳುತ ||ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|ಭರಣಸಹಿತಾಗಿ ಬಾಗಿಲಿಗೆ ಬಂದಿದೆಕೊ4ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |ಮದನಾರಿಯೆಂಬಂಥ ಬಲಭೂತವು ||ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |ಒದಗಿ ಬಂದಿಹನಿದೊ ಪುರಂದರವಿಠಲ 5
--------------
ಪುರಂದರದಾಸರು