ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಶ್ರೀಕರವು ಪ ಭೂಪತಿಯಂದದಿ ಭೂಮಿಯಾಳುವುದು ಕಾಪಾಡುತಿಹುದು ಲೋಕಿಗರಅ.ಪ ಆಳುವಾರುಗಳು ಆಚಾರ್ಯರುಗಳು ಪೇಳಿದರಿದರಾಂತರ್ಯವನು ಕೇಳುತ ಬಾಳಿದ ಬಹು ಭಾಗವತರ ಪಾಳಯವದು ತಾಂ ಪರಮಪದ 1 ಅಭಿಮತದಿಂದಲಿ ಮುನಿಗಳು ಮೂವರು ವಿಭವದಿಂದಲದ ಸಲಹಿದರು ಉಭಯ ವೇದಗಳ ಅಮೃತವರ್ಷದಿಂ ಸು ರಭಿತ ಕುಸುಮಗಳರಳಿದವು 2 ಶಂಖ ಸುದರ್ಶನ ಲಾಂಛನ ಭುಜಗಳಲ ಲಂಕಾರದ ಹನ್ನರೆಡು ನಾಮಗಳು ಪಂಕಜ ತುಳಸೀಮಣಿ ಪವಿತ್ರಗಳು ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು 3 ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ ಕ್ಷೇತ್ರ ತೀರ್ಥಗಳು ಪಕ್ವಫಲ ಶ್ರೋತೃಗಳಿಗೆ ಮಧುರಾದತಿಮಧುರವು ಖ್ಯಾತಿಯ ವಿಜಯರಾಘವ ಕೃತಿ-ಪ್ರ- ಖ್ಯಾತಿಯ ಅಣ್ಣಂಗಾರ್ಯ ಕೃತಿ4 ನಿತ್ಯ ನೈಮಿತ್ತಿಕ ತಿರುವಾರಾಧದಿ ನವ್ಯ ತದೀಯದ ಕೈಂಕರ್ಯ ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ [ದರ್ಥಿ]ಪಾರಾಯಣ ಪರಮಾನಂದ 5 ಶ್ರೀರಂಗ ವೆಂಕಟ ವರದ ನಾರಾಯಣ [ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ ಓರಂತನುದಿನ ಧ್ಯಾನ ಗಾನಗಳು [ಬೀರುವವು] ತೃಪ್ತಿಕರ ಸುಧಾನಿಧಿ 6 ಜಾಜೀ ಕೇಶವ ಜಗವ ಪಾಲಿಸಲು ಮಾಜದೆ ಮಾಡಿದ ಉಪಕೃತಿಯು ರಾಜಿಪ ಚರಣಗಳಾಶ್ರಿತರಿಗೆ ಸವಿ ಭೋಜನವೀವುದು ಹರಿಯೆಡೆಯೊಳ್ 7
--------------
ಶಾಮಶರ್ಮರು
ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು