ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ದೇವ ತೋರು ದಯವ ಪ ಕಾವದೇವ ನೀನೆ ಎನ್ನ ಕೈಯಪಿಡಿದು ಕಾಯೊ ಅಭವ ಅ.ಪ ಧ್ಯಾನಿಪ ಭಕ್ತ ದೀನರಭಿಮಾನಿ ನೀನೆ ಕರುಣಿಸೊ ದೀನಸ್ವರದಿ ಬೇಡಿಕೊಂಬೆ ಮಾನರಕ್ಷಿಸಿ ಪೊರೆಯೊ ಜೀಯ 1 ನೀಗಿಸಲು ದುರ್ಬವಣೆಯನು ಬಾಗಿ ನಿಮ್ಮ ಮರೆಯ ಹೊಕ್ಕೆ ಭೋಗಿಶಯನ ಬಾಲನನ್ನು ಬಗಲೊಳಿಟ್ಟು ಸಲಹು ಜೀಯ 2 ಭಾಮೆಮಣಿಯ ಸಮಯಕೊದಗಿ ಪ್ರೇಮದಿಂದ ಮಾನ ಕಾಯ್ದಿ ಸ್ವಾಮಿ ನೀನೆ ಗತಿಯು ಎನಗೆ ಪ್ರೇಮದಿಂದ ಕಾಯೊ ಶ್ರೀರಾಮ 3
--------------
ರಾಮದಾಸರು
ಲೋಕನಾಯಕಿ ಹೆಣ್ಣಾ ನೋಡಮ್ಮ ಸತ್ಯ ಲೋಕೇಶ ಬೊಮ್ಮನೀಕೆ ಮಗನಮ್ಮ ಪ. ಶೋಣಿತ ಶುಕ್ಲ ಸಂಮ್ಮಂಧಗಳಿಲ್ಲ ಇಂಥಾ ಜಾಣತನವು ಬೇರೊಬ್ಬಗಿಲ್ಲ ವಾಣೀಶ ಶಂಭು ಮುಖ್ಯ ಸುರರೆಲ್ಲ ತತ್ವ ಕಾಣದೆ ನಿತ್ಯಮೆಣೀಸುವವರಲ್ಲ 1 ಮೂಢ ದೈತ್ಯರ ಮೋಹಿಸಲಿಕಂದು ಒಳ್ಳೆ ಪಾಡಾದ ಸಮಯಕೊದಗಿ ಬಂದು ಮೂಡಿ ಸುಧೆಯ ಕಲಶ ತಂದು ತಡ ಮಾಡದೆ ಸುರರಿಗಿಕ್ಕಿದಳಂದು 2 ಶಿವನು ಮರಳುಗೊಂಡ ಶೃಂಗಾರಸಾರ ಭುವನೈಕರಕ್ಷ ದೀನಮಂದಾರ ಪವನವಂದಿತೆ ಪದ್ಮೆಗಾಧಾರ ನಿತ್ಯ ನವಯವ್ವನೆಗೆ ನಾವು ಪರಿವಾರ 3 ಭಸ್ಮೋದ್ಧೂಳಿತ ದೇಹಭವನಂದು ವರವ ಭಸ್ಮಾಸುರನಿಗಿತ್ತೋಡುವ ಬಂದು ವಿಸ್ಮಯಗೊಂಡು ನೀನೆ ಗತಿಯೆಂದು ಪೇಳೆ ಭಸ್ಮಗೈದಳು ದೈತ್ಯಾಧಮನಂದು 4 ನಾಗಗಿರಿಯ ಶಿಖರದ ಮೇಲೆ ನೆಲೆ ಯಾಗಿ ಶೋಭಿಪಳತ್ಯದ್ಭುತ ಬಾಲೆ ಶ್ರೀಗುರು ಶಿವಮುಖ್ಯ ಸುರಪಾಲೆ ದಯ ವಾಗಿ ತೋರ್ಪಳು ತನ್ನ ಶುಭಲೀಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ದುರಿತಪರಿಹರಿಸು ರಂಗಾಪರಮಪಾತಕರು ಬಂದರು ನೆರೆದು ರಂಗಾಪ.ಪ್ರತ್ಯಕ್ಷ ಜೀವನ ಶವಕೆ ಯಮನ ಚಾರಕರುಮುತ್ತಿ ಕೊಲುವಂತೆ ಕಾಣಿಸುತದೆ ದಯಾಳುಕರ್ತನೀನಲ್ಲದಿನ್ನೊಬ್ಬ್ಬೊಡೆಯಕಾಲಮೃತ್ಯು ವಿನಯದೆಶೂಲನರಪಂಚವದನ1ನೀನರಸನೆನಗಾಗಿ ಇನ್ನೊಬ್ಬ ನೀಚರಿಗೆದೀನನಾಗುವುದುಚಿತೆ ಕರುಣಗುಣ ಖಣಿಯೆಮಾನನಿನ್ನದು ಅವಮಾನ ನಿನ್ನದು ಪಾಂಡವಮಾನಿನಿಯ ಸಮಯಕೊದಗಿದ ಭಕ್ತ ಬಂಧು 2ಮರೆಹೊಕ್ಕೆ ದಾಸವತ್ಸಲನೆಂಬ ಬಿರುದು ಕೇಳಿರುವೆ ತಪ್ಪಿಸಿಕೊಳಲುಬೇಡ ಭುವನೇಶಉರಗಗಿರಿವಾಸ ಪ್ರಸನ್ವೆಂಕಟೇಶ ಸಂಹರಿಸು ಅಪಕಾರಿಗಳ ಸಲಹು ಸಜ್ಜನರ 3
--------------
ಪ್ರಸನ್ನವೆಂಕಟದಾಸರು