ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ಕಂದರ್ಪಜನಕ ದೇವ ಪ. ನಂದಕಂದನೆ ನಿನ್ನ ಮಂದಮತಿ ನಾನೆಂತು ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ. ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ ಉತ್ತಮ ಪಥವ ತೋರೋ ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ ಭೃತ್ಯಸಂಗದಲಾಡಿಸೊ | ಸತತ 1 ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ ವಿಶ್ವೇಶ ದೇಹದೊಳಗೆ ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ ವಿಶ್ವಮಯ ಜೀವಕೀವೆ | ಕಾವೆ 2 ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ ಮತ್ತೆಲ್ಲ ಕಾರ್ಯ ಮಾಳ್ಪೆ ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ ವ್ಯಾಪ್ತನಾಗಿರುವೆ ಜಗದಿ | ಮುದದಿ 3 ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ ಇದ್ದೆನೆಗೆ ರೂಪ ತೋರೋ ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು ಒದ್ದು ತಾಪತ್ರಯವನು | ನೀನು 4 ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ ಮಾನಸದಲೆನಗೆ ನೀಡೋ ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ ಸಾನುರಾಗದಲಿ ಸಲಹೋ ಎಲವೋ 5
--------------
ಅಂಬಾಬಾಯಿ
ಸನುಮತವೆಂಬುದಿಲ್ಲ ಅನುನಯವಿಲ್ಲ ಪ ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ ಪಂಚದ ಸುಖದೊಳು ಪಂಚೇಂದ್ರಿಯಗಳಾ ಹಂಚುತೆ ಮನವನು ಚಂಚಲಗೈದುವಲ್ಲ ಅಂಚೆಯಿಲ್ಲದ ಸರಸಿಯಂತಾಗಿಯೆನ್ನ 1 ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು ಹರಿಗೆರಗುವ ಶಿರವು ಗರುವವ ಬಯಸಿದೆ 2 ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ ಕರ್ಣ ಠಕ್ಕು ಕೌಳಿಯ ಮೆದುಳು ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ 3 ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್