ಭೂಮ ಇಡುಬಾರೆ ದ್ರುಪದರಾಯನರಸಿ
ಭೀಮಧರ್ಮಾರ್ಜುನ ನಕುಲ ಸಾದೇವ
ದ್ರೌಪದಿ ಕುಳಿತ ಎಲೆಗೆ ಪ
ಮಂಡಿಗೆ ಗುಳ್ಳೋರಿಗೆಯು ಬುಂದ್ಯ ಚಕ್ಕುಲಿ ಕರ್ಜಿಕಾಯಿ
ಚೆಂದದ ಶಾಲ್ಯಾನ್ನ ಶಾವಿಗೆಫೇಣಿಗಳು ಎಣ್ಣೋರಿಗೆಯು1
ಹಪ್ಪಳ ಸಂಡಿಗೆಯು ಶಾವಿಗೆ ಬಟ್ಟಿವಿ ಮಾಲತಿಯು ಗೌಲಿ
ಬಟ್ಟಲೋಳ್ ತುಂಬಿಟ್ಟು ಪರಡಿ ಪಾಯಸಘೃತ ಸಕ್ಕರೆಯು 2
ಕುಸುಮ ಮಲ್ಲಿಗೆ ಮುಡಿದು ನಡೆದು
ಬಂದು ಭೀಮೇಶಕೃಷ್ಣ ಸಖರ್ಹೊಂದಿ ಕುಳಿತರು ಕೃಷ್ಣೆಸಹಿತ3