ಸಾಕು ನೀನೋಬ್ಬನೆ ಲೋಕನಾಯಕನೆ
ಯಾಕನ್ಯ ದೈವವ ಭಜಿಸುವ ಸುಮ್ಮನೆ ಪ.
ಸೂನು ಪರಮಾದರದಿಂದ
ನೀಕರಿಸುತ ಯದು ಬಲಿ ಸಹಾಯವನು
ಶ್ರೀಕರ ನೀನೊಬ್ಬನೆ ಸಾರಥಿಯಾಗೆ
ಸಾಕೆಂದವರ ಬೊಮ್ಮನೆ ವೈರಿಗಳನ್ನು
ವ್ಯಾಕುಲಗೊಳಿಸಿ ಭೂಮಿಪನಾದ ಸುಮ್ಮನೆ 1
ನಿಖಿಳ ದೈವಗಳೆಲ್ಲ
ತಾನಾಗಿ ಪರಮಾನುಕೂಲರಾಗುವರು
ಏನೆಂದು ಪೇಳ್ವದಿನ್ನು ಸಕಲ ಸುರ
ಪಾದ ಪದ್ಮ
ಧ್ಯಾನ ಮಾನವನಿತ್ತು ಪಾಲಿಸೆನ್ನನು 2
ಅಖಿಳಾಂಡಕೋಟಿ ಬ್ರಹ್ಮಾಂಡ ನಾಯಕನೆಂದು
ನಿಖಿಳ ದೈವಗಳು ನಿನ್ನನೆ ಪೊಗಳುವವು
ಸಕಲಾರ್ಥದಾಯಿ ನೀನು ನಾಮ ಸ್ಮøತಿ
ಸುಖವನ್ನೆ ಪಾಲಿಸಿನ್ನು ಉದಯಗಿರಿ
ಶಿಖಿರ ಸಂವಾಸನುಮಾನವ್ಯಾಕಿನ್ನು 3