ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋರಿ ಬಂದೆನೊ ನಾನು ಪತಿ ನಿನ್ನ ಪ ಘೋರ ಸಂಸಾರದಿಂದ ಪಾರು ಮಾಡುವಿಯೆಂದು ಅ.ಪ. ಸರ್ವ ಪ್ರಾಣಿಗಳಲ್ಲಿ ಸರ್ವವಸ್ತುಗಳಲ್ಲಿ ಸರ್ವೇಶ ಹರಿಯ ಕೂಡಿ ಸರ್ವದಾ ಇರುವೆಯೆಂದು 1 ಅಂಜಾನೆ ಗರ್ಭದಿ ಸಂಜಾನಿತ ನೀನಾಗಿ ಕಂಜನಾಭನ ಮನ- ರಂಜಾನೆ ಮಾಡಿದೆಯೆಂದು 2 ದಾನವಾಂತಕನಿಂದ ಸ- ನ್ಮಾನಿತನಾದಂಥ ದೀನರಕ್ಷಕ ಭೀಮ- ಸೇನ ವಿಕ್ರಮನೆಂದು 3 ಹೀನಬುದ್ಧಿಯ ಬಿಡಿಸಿ ದೀನ ಸುಜನರಿಗೆ ಜ್ಞಾನ ಮಾರ್ಗವ ತೋರಿ- ದಾನಂದತೀರ್ಥನೆಂದು 4 ಶ್ರೀ ರಂಗೇಶವಿಠಲಗೆ ಸಮ ರ್ಯಾರಿಲ್ಲವೆಂತೆಂದು ಈರೇಳು ಜಗದೊಳು ಸಾರುತಿರುವೆಯೆಂದು 5
--------------
ರಂಗೇಶವಿಠಲದಾಸರು
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು