ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ 1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ 2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ 3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ 4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ 5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು 6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು 7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತ್ರಯೋದಶಿಯ ದಿವಸ ಲೀಲೆ ಪೇಳುವದೇನೆ ಬಾಲೆ ಪರಮಾತ್ಮನ ಲೀಲೆ ಮೂಡ ಗಿರೀಶನು ಪಾಡಿಲ್ಲದ ಪ್ರಭೆ ಗೂಡಿದ ಮಂಟಪಕ್ಕೇರಿದ ವಿಸ್ತರ1 ಕುಂದಣ ಪೂರಿತವಾ- ಹೇಮದ ಬಂದಿತವ- ಪ್ರಜ್ವಲದಿಂದಿರುವ ಶ್ರೇಷ್ಠವಾಗಿಹ ನಾಗರಹೆಡೆವದನದಿ ಇಷ್ಟದಿ ನೇತಾಡುವ ಸರಮಾಲೆಯ2 ಶುಕಪಿಕ ಮುಂತಾಗಿಹ ಧ್ರುವಮಂಡಲ ಪರಿಯಲಿ ನೋಡುವರತಿ ಚಂದ ಸುತ್ತಲು ಶೋಭಿಪ ಮುತ್ತಿನ ಬಿಂತಿಯ ಪೊತ್ತು ವಿನೂತನವೆತ್ತಿದ ವಿಸ್ತರ3 ಮಿನುಗುವದೋರಂತೆ ಕಾಣುವದೆಲೆ ಕಾಂತೆ ಕಾಣೆನು ಇದರಂತೆ ಚಾತುಷ್ಕಂಬದೊಳೂತು ನಡುವೆಯಿಹ ಕೌತುಕವಾಗಿಹನಾಥರದಾತನ4 ಬರುವನು ಗೋವಿಂದ ಪೊರೆಯುವದಿದು ಚಂದ ಭಕ್ತರ ಕೈಯಿಂದ ಪೊಂಬಣ್ಣದ ದಿವ್ಯಾರತಿ ಕೊಳ್ಳುತ ಇಂಬಾಗಿಹ ಕರುಣಾಂಬುಧಿ ಭರಿತ5 ವೇದವ ಲಾಲಿಪನು ಪ್ರೇಮನಾಗುತ ಸಂಗೀತಗಳನು ಕೇಳುತ ಸುತ್ತುವನು ತಾ ಮಮಕಾರದಿ ಬರುವನು ಮೇಣು ಕೋಮಲಕಾಯವ ಸಂತತ ಮಂಡಿಸಿ ಸಾಮಗಾನ ಲೋಲೋಪ್ತಿಯೊಳಿರುವನು6 ಭಕ್ತರ ಸಮುದಾಯಕೆ ತದನಂತರ ಗೈದೇ- ಕಾಂತ ಸೇವೆಯ ತಾ ಕೈಕೊಂಡ ಸಂತಸದಲಿ ಶ್ರೀಕಾಂತನು ಭಕುತರ ಚಿಂತಿತವೆಲ್ಲ ನಿರಂತರ ಕೊಡುವನು7
--------------
ತುಪಾಕಿ ವೆಂಕಟರಮಣಾಚಾರ್ಯ
ಪರಿಣಯ ಮಹೋತ್ಸವವು ಪ ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು ಕಂಗೊಳಿಪ ರುಚಿರಾಂಬರಾಳಿಯು ಮಂಗಳ ಸುವಾದ್ಯಂಗಳಿಂದಲಿ 1 ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2 ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು ತುಂಬಿರಲು ಸಭೆಯೊಳು 3 ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4 ಮಾಡೆ ದಾನದಕ್ಷಿಣೆಯಾಗಲು ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು ಹರಸೆ ಸಂತೋಷದಿ 5
--------------
ಬೇಟೆರಾಯ ದೀಕ್ಷಿತರು