ಒಟ್ಟು 7 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರು ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1 ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2 ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3
--------------
ಗೋಪತಿವಿಠಲರು
ಸ್ಮರಣೆ ಮಾತ್ರದಿ ಸ್ವತಂತ್ರ ದೊರಕುವುದು ಜಗದೊಳಗೆ ಶ್ರೀಹರಿ ಸ್ಮರಣೆ ಪ ಸ್ಮರಣೆ ಮಾತ್ರ ಸ್ವತಂತ್ರವೆಂದರೆ ಪರಮ ಭಗವದ್ಗೀತೆ ಅಪ್ಪಣೆ ಕರುಣಾಸಾಗರ ದಧಿಯಚೋರನೂ ಶರಣುಪಾರ್ಥಗೆ ಅರುಹು ಮಾಡಿಹ 1 ಸುಲಭದಿಂದಲಿ ಶ್ರವಣಮನನಾಗೀ ಜಗದೊಳಗೆ ನಿನಗೆ ಫಲಿತವಾಗೊ ನಿಧಿ ಧ್ಯಾನಾಗೀ ಕೊಲುಮೆತಿತ್ತಿಯನೂದಲಾಗುವ ಫಲವು ಕಂಡು ಕಾಣದಿರುವೆಯೊ ಕಲೆಯ ತೊಟ್ಟನು ನೀ ಗಲಾ ಪರಸುಳುಹಿನೊಳಗೆ ಹೊಕ್ಕಿ ಮಾಡೊ 2 ಬೆಂಗಳೂರಿಗೆ ಪೋಗಿ ನಿಂದಲ್ಲಿ ವೋ ಮಾಯಜೀವಾ ಮಂಗಳಾಂಗ ಶುಭಾಂಗಣದಲ್ಲಿ ತಂಗಿ ತಾನೆ ನಿಮಿಷ ನಿಮಿಷಕೆ ಸಂಗಮೇಶ್ವರನಾಗಿ ನಿಜದಾ ಬಂಗೆಲೆಯೊಳಗಿರುವ ತುಲಶೀರಾಮತಾ ನಿಜಲೀಗನೇಳಿದ 3
--------------
ಚನ್ನಪಟ್ಟಣದ ಅಹೋಬಲದಾಸರು
ಆಚರಸ ನೀ ಬಾಚರಸ ನೀ ಈಚಿಯೊಳುಕಟ್ಟಿರುವ ಪೆಸರಿದ ನೆರೆದು ಸುವಾಚ್ಯ ಸಂಪನ್ನಸತ್ಕೀರ್ತಿಕರನೆನಿಪ ಲಿಂಗರಸ ಪೂರ್ಣ ಪುರುಷ |ಶ್ರೀಚಂದ್ರಮೌಳಿಪದಾಂಬುಜಮಧುಪ........... ದೇ ನಾಮ ಗುಜಾಯಿ ಗರ್ಭಜ......... ಸಪ್ತ ಋಷಿಗಳವತಾರನೆಂಬ ತೇಜೆನಿಸಿದ ರಾಶಿಗೆ1xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'(ಹಿರಿಯ) ಮಗ ಮುದ್ದಣ ಖೊಬ್ಬರಸ ಕಮಲರಸ.............ಹಿ ರಮಣ ಮೋಬರಸ ಬಾಲರಸ ತಿಪ್ಪರಸಸಿರಿವಂತರಿವರು ಪೂರ್ವಜ ಲಿಂಗರಸನಸತಿಗುಜಾಯಿಕುವರರೆನಿಸಿ | ಮೆರೆವ ಸಿಂಧಾಪುರದಿ ಕರಣಿಕಿರ್ಪಪ್ರತಿಸೃಷ್ಟಿ ಕರ್ತಾ ವಿಶ್ವಾಮಿತ್ರ ಗೋತ್ರಜ ಸಂಗಮೇಶ್ವರನ ಕೃಪಾಪಡೆದಹರ್ನಿಶಿ ಭಕ್ತರೆನಿಸಿಹನರಲೋಕದಿ2
--------------
ಜಕ್ಕಪ್ಪಯ್ಯನವರು
ಪ್ರಜೋತ್ಪತ್ತಿ ಸಂವತ್ಸರ ಸ್ತೋತ್ರ148ರಾಜ ರಾಜೇಶ್ವರಗೆ ರಾಜರಾಜೇಶ್ವರಿ ಪತಿಗೆರಾಜೀವಭವಪಿತಗೆ ಶರಣು ನಮೋ ಶ್ರೀಪದ್ಮನಾಭನಿಗೆಪಪ್ರಭವಾದಿ ಷಷ್ಠಿ ಸಂವತ್ಸರದಿ ಪ್ರಾಬಲ್ಯ ಪೆಚ್ಚಿವುದು ಈ ವರುಷಸುಪ್ರಜೋತ್ಪತ್ತಿ sಸಾಧು ಕ್ಷೇಮಕರ ಯೋಜನೆಗಳಿಗೆ ಸುಸಂಸ್ಕøತರುಪ್ರಾರಂಭಿಸುವುದಕೆ ಅನುಕೂಲ ಅಧಿಕಾರವರ್ಗವುಈ ರೀತಿ ತಿಳಿವುದು 1ಸಂವತ್ಸರ ರಾಜ ಸೂರ್ಯ ಮಂತ್ರಿಯೂ ಸಹ ತಂದತರ್ಯಾಮಿಸೂರಿಪ್ರಾಪ್ಯಘೃಣಿಯುಸರ್ವವಿಧದಲ್ಲು ದಯೆ ಪಾಲಿಸುವನವನಾಯಕರೊಳು ಸಹ ಇದ್ದುಸರ್ವೇಶ ಶ್ರೀಪ ಪದ್ಮನಾಭನು ಸ್ಮರಿಸುವವರ ಸುರಧೇನುವು 2ಸುಖಪೂರ್ಣ ಚಿನ್ಮಯನು ನಿತ್ಯತೃಪ್ತನುಪಜÕನ್ಯನೊಳುಇದ್ದು ಮಳೆಗರೆವಶ್ರೀಹರಿ ಅರ್ಕವಿಧು ಗ್ರಹನಕ್ಷತ್ರಗಳೊಳ್ಇದ್ದು ಜ್ಯೋತಿಹರಿಬೆಳಕುಕೊಡುವ ಮಕ್ಕಳು ಮೊಮ್ಮಕ್ಕಳು ಸುಖವೀವ ಶ್ರೀರಮೇಶನುವೇದನಾಯಕಿ ಎಂಬ ಉಮೆಯರಸನ ಸಂಗಮೇಶ್ವರೊಳಿದ್ದು 3ಸರ್ವವಾಂಛಿತವೀವ ಸರ್ವಸ್ಥ ಲಕ್ಷ್ಮೀರಮಣ ಸರ್ವೋತ್ತಮನುಸರ್ವಕಲ್ಯಾಣ ಸುಗುಣಾರ್ಣವನು ನಿದÉರ್ೂೀಷನುವಾಂಛಿüಸುವವರು ಪರವಿತ್ತಸ್ಥೇಯಪರನಿಂದಾ ವ್ಯಭಿಚಾರರೇತಸ್ಸÀ್ಸಂಗಮ ತ್ಯಜಿಸಲೇಬೇಕು 4ಬಾಲ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ದೈವಭಕ್ತಿಮತ್ತು ಸಾಧುನೀತಿಗಳಪಾಠಗಳ ಬೋಧಿಸುವುದು ಅಧಿಕಾರವರ್ಗದವರು ಮಾಡಲೇಬೇಕುಇಳೆಯಲ್ಲಿ ಪ್ರಜಾಕ್ಷೇಮ ಅಭಿವೃದ್ಧಿ ಆಗಲಿಕ್ಕೆ ಇದುಉಪಾಯ ಹರಿದಯದಿ 5ವಸುಂಧರೆಯಲ್ಲಿ ಇನ್ನು ಬೆಳೆಯುವುದು ಪ್ರಜಾ ಉಪಯೋಗಆಗಿ ಮಿಕ್ಕದ್ದೇ ಪರದೇಶಕೆ ಕೊಡಬಹುದುಆಸುರೀ ಸಂಪತ್ತು ಬೆಳಸದೆ ದೈವಿ ಸಂಪತ್ತೇ ಗುರಿಯಾಗಿ ಸರ್ವರುತಮ್ಮ ತಮ್ಮ ಸಮಯಗಳ ನೀತಿಗಳ ಆಚರಿಸಲುರಾಷ್ಟ್ರ ಲೋಕಗಳಿಗೆ ಲಾಭ 6ಎನ್ನ ಮಾತುಗಳಲ್ಲ ಇವು ಕ್ಷೇಮಕರ ಪ್ರಜೋತ್ಪತ್ತಿಸ್ವಾಮಿಶ್ರೀಪದ್ಮನಾಭ ಶ್ರೀನಿವಾಸ ನುಡಿಸಿದವುಎನ್ನನ್ನು ಎನ್ನವರನ್ನು ಸರ್ವಲೋಕಜನರನ್ನುರಕ್ಷಿಸಲಿ ಶ್ರೀಹರಿ ಸರ್ವದಾ 7
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಭವಾನಿ ಕ್ಷೇತ್ರಸ್ತ ಸಂಗಮೇಶ್ವರ ಸ್ತೋತ್ರ76ಸಂಗಮೇಶ್ವರ ಶರಣು ಸದಾಶಿವಸಂಗಮೇಶ್ವರ ರಂಗ ಶ್ರೀಪತಿಯರ ಅಚಲಭಕ್ತಿಯನಿತ್ತುಭಂಗವಿಲ್ಲದೆ ಪರಿಪಾಲಿಸೋ ಎನ್ನ ನೀ ಪರಮ್ಯ ಭವಾನಿ ಕಾವೇರಿ ಸಂಗಮದಲಿ |ಉಮೆ ಸಹಿತದಿ ನಿಂತು ಎಮ್ಮ ಪಾಲಿಸುತಿ ನೀ || 1ಅಮರಸುಮನಸವೃಂದಾರಾಧ್ಯನೇ |ಷಣ್ಮುಖ ಗಜಮುಖತಾತಕೃಪಾನಿಧೆ2ಶುದ್ಧ ಸ್ಪಟಿಕಾಮಲ ನಿರ್ಮಲ ಕಾಯನೆ |ದುಗ್ಧ ಸಾಗರ ಭವಶೇಖರ ಶಂಕರ |ಸ್ನಿಗ್ಧ ಲೋಹಿತ ಜಟಾಜೂಟಿ ಗಂಗಾಧರ |ಮೃತ್ಯುಂಜಯಅಹಿಭೂಷಣಶರಣು3ಅಸಿತ ಲೋಹಿತ ಸಿತ ಶ್ಯಾಮ ವಿಧ್ಯುನ್ನಿಭ |ಭಾಸಿಪ ಪಂಚ ಸುವದನ ತ್ರಿಲೋಚನ |ಈಶಾನಮಃ ದೇವನೇ ವೇದ ನಾಯಕಿ ಪತಿಯೇ |ಅಜಪಿತಪ್ರಸನ್ನ ಶ್ರೀನಿವಾಸಗೆ ಪ್ರಿಯ4
--------------
ಪ್ರಸನ್ನ ಶ್ರೀನಿವಾಸದಾಸರು