ಎದೆ ಒಡೆದು ಏಕೆ ನೀ ಹೆದರುತಿ ಮನವೆ
ಪಾದ ಭಜನೆ ಹೃದಯದಲಿರೆ ಪ
ಅಖಿಲ ಜನಗಳ ಪೊರೆವ ಹರಿಯು ಕರ್ತನಾಗಿರಲು
ಸಕಲ ಜಗಬೋಧಗುರು ಸನ್ನಿಧಿ ಇರಲೂ
ಸಕಲ ಬ್ರಹ್ಮಾದಿ ದೇವತೆ ಬಂಧು ಬಳಗಿರಲು
ನಿಖಿರವಿಲ್ಲದೆ ಚಿತ್ತ ನೀನು ಈ ಪರಿಯಿಂದಾ 1
ಮುದದಿಂದ ಶ್ರೀ ಲಕ್ಷ್ಮೀ ಮಹಾತಾಯಿ ತಾ -----
-----ದಮಲ ಜ್ಞಾನಿಗಳ ಸಂಬಂಧ ವಿರಲೂ
ಕುದುರೆಯಂದದಿ ಮನಸು ಕ್ರೂರರಾರ್ವರಕೂಡಿ
ಒದರಿ ಪರಿಪರಿಯಲ್ಲಿ ಚಿಂತೆಯೊಳಗಾಗಿ 2
ಪರಮಾತ್ಮ ಪರಬ್ರಹ್ಮ ಪರಲೋಕ ಬಾಂಧವನು
ಪರಿಪರಿಯ ಷೋಷಿಸುವ ಭಾರಕನು ಇರಲು
ಅರಿತು ನೀ ಚನ್ನಾಗಿ ಹರಿ ಹೊನ್ನ ವಿಠ್ಠಲನ ಸ್ಮರಣೆಯಲಿ
ನಿರುತ ಇರೆ ಸಕಲ ಸಂಭ್ರಮವು 3