ಅಂತರಾತ್ಮನ ದ್ಯಾನವನ್ನು ಅಂತರಂಗದಿ ಮಾಡೋ ನೀನು
ಸಂತತ ನಿರ್ಮಲನಾಗಿ ನಲಿದಾಡು ಮನವೆ ಪ
ನರದೇಹಕ್ಕೆ ಬಂದು ನೀನು
ಇರುವಂಥಾ ಸಾರ್ಥಕವೇನು
ಗುರುಕರುಣಕವಚವ ತೊಟ್ಟು
ಕರ್ಮವ ಸುಟ್ಟು
ಮಾಯಾ ಮೋಹವೆಲ್ಲವ
ತರಿದು ಷಢ್ವೈರಿಗಳ ಶಿರವನು
ಸರಸ ಹೃದಯದಿ ಮೆರೆವ ಜ್ಯೊತಿಯ ಬೆಳ
ಗಿರುವ ಕೋಟಿಪ್ರಕಾಶದÀಂತಿಹ 1
ಬಿಡದೆ ಶ್ರೀ ಗುರುವಿನ ಪಾದಾ
ಪಿಡಿದು ನಿತ್ಯಾನಂದ ಬೋಧಾ
ಕಡಲ ತೆರೆಯೊಳು ಮಿಂದು ಕಾಮನ ಕೊಂದು
ಅಡಿಗಡಿಗೆ ತತ್ವಾಮೃತರಸ
ನಡುವಿರಳು ಶೀತ ಕಿರಣಕೋಟಿಯ
ಪಡೆಯಕಟ್ಟಿದ ತರಣಿಯಂತಿಹ 2
ಮಂದಮತಿಯ ಕಳೆದು ಚಿದಾ
ನಂದನ ಶ್ರೀ ದಿವ್ಯಪಾದ ಹೊಂದಿ ಬ್ರಹ್ಮಾ
ನಂದರಸವಾ ಬಿಡದೆ ಸೇವಿಸುವ ಶಿವಾ
ನಂದವನು ಕೈಕೊಂಡು ವಿಮಲಾ
ನಂದ ದತ್ತಾತ್ರೇಯನೊಳಾಡುವಾ
ಎಂದಿಗೂ ಆಳವಿಲ್ಲದಾತ್ಮನ
ಚಂದವನು ನೋಡುತ್ತನಿನ್ನೊಳು 3