ಮರೆಯದೆ ಶ್ರೀಹರಿಯಮನದಲಿ ಸ್ಮರಿಸೊ
ಗುರುಹಿರಿಯರ ಅನುಗ್ರಹವನು ಗಳಿಸೊ ಪ
ಇಂದಿರೆ ರಮಣನ
ಅನುದಿನ ಮಂದರ ಧರನಾ 1
ಬಗೆ ಬಗೆಯಲಿ ಶ್ರೀ ಭಗವಂತನ ಪಾದ
ಯುಗವನು ನೆರೆನಂಬಿಯಿ-----ಎಂದೆಂದೂ 2
ಪರಿಪರಿ ನವವಿಧ ಭಕ್ತಿಯು ಸಾಧಿಸಿ
ಪರ ಬ್ರಹ್ಮ ಪರಮಾನಂದನ 3
ಶರಧಿಶಯನನ ಶಾಂತ ನಿಧಾನನ
ಅರವಿಂದ ನಯನನ ಹರಿಗೋವಿಂದನಾ 4
ದಿನಕರ ಕೋಟಿತೇಜ ವಿಲಾಸನ
ಮಾನವ ರಕ್ಷಕನಾ 5
ಚಿತ್ತವು ಚಲಿಸದೆ ಚಿನ್ಮಯ ರೂಪನ
ನಿತ್ಯಾನಂದನ ನಿಗಮಗೋಚರನಾ 6
ಭಾವಜನಯ್ಯನ -----
ಭಾವನಕೊಲಿದ ಜನ ಹೃದಯದಿ ಕುಣಿದಾಡುವ ನಾ7
ಜ್ಞಾನಾನಂದನ ಜ್ಞಾನಿಗಳರಸನ
ಧೇನು ಪಾಲಕ ಜಗದೀಶನ ಮುಕುಂದನ 8
ಮಾಧವ ಮುನಿ ಗೋವಂದ್ಯನ
ಶರಣರ ಪೊರೆವಾ ಬಿರುದಿರುವ ದೇವನಾ 9
ಇನಕುಲ ಭೂಷಣನ ವಿಶ್ವಲೋಕೇಶನ
ದನುಜಾಂತಕ ಶ್ರೀ ದಾಮೋದರನಾ 10
ಪಾಂಡವ ಪಕ್ಷಕನ ಪರಮಾಣು ರೂಪ
ಬ್ರಹ್ಮಾಂಡನಾಯಕ ಕೋದಂಡಧರನ ಇಂದೂ 11
ವಾರಿಧಿ ಬಂಧನ ವೈದೇಹಿ ತಂದನ
ಮೀರಿದ ರಕ್ಕಸರ ಮದಿಸಿದವನಾ 12
ಪನ್ನಗ ಶಯನ `ಹೆನ್ನ ವಿಠ್ಠಲನ '
ಉನ್ನತ ಚರಿತನ ಇನ್ನು ಹರುಷದಲಿ 13