ಒಟ್ಟು 14 ಕಡೆಗಳಲ್ಲಿ , 10 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಓ ಎನ್ನಬಾರದೇ ಹರಿಯೆ | ಶ್ರೀಯರಸನೇ ನೀನೇ ಗತಿಯೆಂದು ಅನ್ಯ ಉ| ಪಾಯವನರಿಯದ ಬಾಲಕ ಕರೆದರೆ ಪ ಹಾಲವ ಬೇಡುವ ಮೊರೆಯಿಡಲುಪಮನ್ಯು ಆ | ಬಾಲಗ ಧ್ವನಿ ದೋರಿದಂತೆ | ಚಾಲವರಿದು ಸರೋವರದಲಿ ಕರೆದ ಶುಂ| ಡಾಲಗೆ ಧ್ವನಿ ದೋರದಂತೆ | ವ್ಯಾಳ್ಯೆಕ್ಕ ಒದಗೆಂದು ರಾತ್ರಿಲಿ ಕರೆದ ಪಾಂ| ಚಾಲಿಗೆ ಧ್ವನಿ ದೋರಿದಂತೆ | ಕಾಲಕಾಲಕ ಬಂದು ಮೊರೆಯಿಡೆ ಸುರಮುನಿ | ಜಾಲಕ ಮೈದೋರಿ ಧ್ವನಿ ದೋರಿದಂತೀಗ 1 ಆವಾಗ ಧ್ವನಿದೋರಿದಂತೆ | ಗೋವ ಮೇಯಿಸಿ ತೆರಳಲು ಗೊಲ್ಲರೊದರುವ ಭಾವಕ ಧ್ವನಿದೋರಿದಂತೆ | ದೇವ ನೀಮರಿಯಾಗೆ ಹುಂಕರಿಸ್ಸೊದರಲು | ಆವಿಗೆ ಧನಿ ದೋರಿದಂತೆ | ಕಾವನೈಯ್ಯನೆ ನಿನ್ನ ನೆನೆದ ಗೊಲ್ಲತೆರಾ | ಜೀವನ ಹಿತವಾಗಿ ಧನಿದೋರಿದಂತೀಗ 2 ಬಂದೂಳಗಕ ನಿನ್ನ ಪಾಂಡವರೊದಲು | ನಿಂದು ನೀ ಧನಿದೋರಿದಂತೆ | ಇಂದಾದಾ ಕಲಿಯುಗದ ದಾಸರ ಮಾತಿಗೆ | ಬಂದು ನೀ ಧನಿ ದೋರಿದಂತೆ | ಕಂದನಳುವ ಧ್ವನಿ ಕೇಳುತ ಜನನಿ ಅ | ನಂದದಿ ಧನಿದೋರುವಂತೆ | ತಂದೆ ಮಹಿಪತಿ - ನಂದನ ಪ್ರಭು ಗೋ | ವಿಂದ ಮುಕುಂದೆನ್ನ ಸಲಹೆಂಬ ಮೂಢನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ನೀ ಯಾಕ ಮನವೇ ಚಿಂತಿಸಿ ಬಳಲುವೆ ಬರಿದೇ | ಶ್ರೀಯರಸನ ಮೊರೆ ಹೋಗದೇ ಪ ಸಾಧುರಾ ಸಂಗ ಜರಿದು ಕುಜನರ ನೆರೆವಿಡಿದು | ಮೇದಿನಿಯೊಳು ನಿನ್ನ ನೀ ಮರೆದು 1 ಇರಲು ಮುಳ್ಳಿನಾಗ್ರದಲಿ ಹೀನ ಕೀಟಕಾವಳಿ | ಪೊರೆವಾನಿತ್ತು ಆಹಾರದಯಲೀ 2 ಮನುಜರಿಗೆ ತಲೆವಾಗಿ ಗೇಣು ವಡಕಲಾಗಿ | ಮನಸಾ ಹಿಡಿವರೇ ಪರರು ಹೋಗಿ 3 ಹುಟ್ಟಿಸಿದಾ ದೇವನು ಹುಲ್ಲು ಮೇಯಿಸುವನೇನು | ಅಷ್ಟಾಸಾಯಸ ಬಡದಿರು ನೀನು 4 ಅನುದಿನ ಗುರುಮಹಿಪತಿ ಚರಣಾ | ತಂದಿದಿರುಡುವ ನಿಧಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪವಮಾನ-ಪಾವನಾ ಜಗಜ್ಜೀವನ ಪ ಶಿವ ಖಗಪತಿ ಅಹಿಸುರ ವಂದಿತಪದ ಅ.ಪ ಸೇವಾ ಕೃಷ್ಣ ಸಾಧನಾ ಕಾವಕರುಣಿ ಕಿಂಪುರುಷ ಖಂಡಾಧಿಪ ಕಾವಳದೊಳು ನಿನ್ನವರನು ಕಾಯ್ದೆ ಭೂವಳಯದೊಳವಿದ್ಯೆಯನಳಿಸಿದ ಸದ್ವರ್ತನು ನೀನೆನ್ನನುದ್ಧರಿಸಯ್ಯ 1 ಶರಧಿ ಹಾರಿದೆ | ಕೌರವ ಕಲಿಯಾ ನೀ ಗದೆಯಿಂ ಛೇದಿಸಿದೆ ಧಾರುಣಿಯೊಳು ಯತಿಪುಂಗವನೆಂದೆನಿಸಿದೆ ನಿರುತದಿ ರಾಮರ ಕಾರ್ಯವ ಸಾಧಿಸಿ ವಿರಥರ ಮಾಡಿದೆ ಅತಿರಥರುಗಳ ಹರಿಸರ್ವೋತ್ತಮ ತರತÀಮ ಸತ್ತತ್ವಗ ಳರುಹಿದ ಸದ್ವರ್ತನು ನೀನೆ 2 ರಾಮಪದಕುಮುದಸೋಮ ಭೀಮಾ ರಿಪುಕುಲ ಧೂಮ ನಿಸ್ಸೀಮ ಶ್ರೀಮದಾನಂದಮುನಿ ಸಾರ್ವಭೌಮ ಭೂಮಿಜೆ ಕುರುಹ ಶ್ರೀರಾಮರಿಗರ್ಪಿಸಿ ಅ ಮಹ ಬಕ ಕೀಚಕರ ಸಂಹರಿಸಿ ತಾಮಸ ಗ್ರಂಥವನಳಿಸಿ ಜನಕೆ ಸದ್ಬೋಧೆ ಇತ್ತ ಗುರು ಪೂರ್ಣಬೋಧನೆ 3 ದ್ರೋಣಾಚಲವ ತಂದ ಪ್ರಾಣ ಎಣೆಯುಂಟೆ ಬಲದೊಳು ನೀನೆ ನಿಸ್ಸೀಮ ಕಾಣೆನೊ ಜಗದಿ ಪರಮಹಂಸರ ಪ್ರಾಣ ಪ್ರಾಣಿಗಳೊಳಗೆ ಮುಖ್ಯಪ್ರಾಣನೆಂದೆನಿಸಿದೆ ಕ್ಷೋಣಿಯೊಳು ಕುರುಸೇನೆ ಸಂಹರಿಸಿ ಕ್ಷೀಣವಾಗುತಲಿಹ ಸುಜನರ ಮನಸ ತ್ರಾಣ ಮಾಡಿ ಸತ್ಪ್ರಮಾಣಗಳಿತ್ತೆ4 ಋಜುಪುಂಗವ ದೇವಾ ಹನುಮಾ ಗಜಪುರಾಗ್ರಣಿ ಕೌರವನಿಗೆ ನೀ ಕಾಲಯಮ ಕುಲಿಶ ನಿಸ್ಸೀಮ ಅಜಪದ ಪಡೆದಿ ಶ್ರೀ ಆಂಜನೇಯನೆ ವಿಜಯಸಾರಥಿನೊಲಿಸಿ ಪೂಜಿಸಿ ಸೃಜಿಸಿ ಮರೆದೆ ಸಚ್ಛಾಸ್ತ್ರದಿಂದ ಈ ಚತುರ್ದಶಭುವನಾಚಾರ್ಯನೆನಿಸಿದೆ 5 ಖೂಳ ಅಕ್ಷಕುವರನ ಹರಿಸೆ ಖಳರ ಕಾಳೋರಗ ಬಾಧೆ ಲೆಕ್ಕಿಸದೆ ಖಳ ಭೂದೈತ್ಯರ ಬಾಧೆ ಹರಿಸಿದೆ ಬಾಲತನದಲಿ ಭಾನುಮಂಡಲ ಹಾರಿದೆ ಲೋಲತನದಿ ಸತಿಗೆ ಪೂವಿತ್ತೆ ಶೀಲಮೂರುತಿ ಮಾಯ ಜಾಲ ಹರಿಸಿ ಜಗಖ್ಯಾತನಾದೆ ಯತಿದಶಪ್ರಮತಿಯೆ 6 ಮಾರುತಿ ಧೀಮಂತಮೂರುತಿ ಭಾರತದಿ ಭೂಭಾರನಿಳುಹಿದ ಖ್ಯಾತಿ ಸಾರ ಶ್ರೀ ಬಾದರಾಯಣಗೆ ಅತಿಪ್ರೀತಿ ಅರಿಪುರ ವೈಶ್ವಾನರನಿಗರ್ಪಿಸಿ ವಾರಣಪುರದೊಳು ಅತಿರಥನೆನಿಸಿ ದುರ್ವಾದಿಮತ್ತಗಜಸಿಂಹನಾಗಿ ನೀ ನಿವ್ರ್ಯಾಜÀದ ಭಕ್ತಿಯ ಹರಿಗರ್ಪಿಸಿದೆಯೊ 7 ಹನುಮಾ ಭೀಮಾ ಆನಂದ ಮುನಿಪಾ ಆ ವಾನರಾಧಿಪಾ ಗಜಪುರಾಧಿಪ ಯತಿಪಾ ಧ್ಯಾನನಿರತ ರಾಮಪದದಿ ಮಾನಸದಲ್ಲಿ ಯದುಪತಿಯ ಪೂಜಿಸಿ ದೀನಜನರುದ್ಧಾರಮಾಡಿ ಸದ್ಬೋಧೆ ಯನಿತ್ತ ಮಧ್ವಮುನಿಯೆ 8 ರಾಮಾಲಿಂಗನ ಮಾಡಿದಾ ರೋಮ ರೋಮಕೆ ಕೋಟಿಲಿಂಗವ ಸೃಜಿಸಿದಾ ಶ್ರೀಮಧ್ಯಗೇಹಾರ್ಯಸೂನುವೆಂದೆನಿಸಿದಾ ಆ ಮಹಾರ್ಣವ ಲಂಘಿಸಿದಾ ಧೀರಾ ಭೀಮಭಯಂಕರ ದ್ರೌಪದೀಪ್ರಿಯಕರ ಈ ಮಹಿಮೆಯೊಳಾರೆಣೆಯೋ ನಿನಗೆ ನಿ ಸ್ಸೀಮನಹುದೋ ಯತಿಸಾರ್ವಭೌಮನೆ 9 ಸುರಜೇಷ್ಠಾನಸ್ತ್ರ ಮಾನಿಸಿದಾ| ಜರೆಯನ ಸೀಳಿ ನಿರಪರ ಸೆರೆಯ ಬಿಡಿಸಿದಾ ಧರೆಯೊಳ್ ಸುರಶ್ರೇಷ್ಠನೆಂದೆನಿಸಿದಾ ಭರದೊಳು ಭರತೆಗೆ ಕುಶಲವ ತಿಳಿಸಿ ಕರುಳಮತಿಯಿಂ ಸತಿಯ ಸಂತೈಸಿ ದುರುಳ ಭಾಷ್ಯಂಗಳ ತತ್ತ್ವವನಳಿಸಿದಾ ಪರಮದಯಾಂಬುನಿಧಿ ಶ್ರೀಮದಾನಂದ 10 ರಕ್ಷಕ ನೀನೆ ಸಜೀವ ಲಾಕ್ಷ್ಯಾಗಾರದ ಬಾಧೆÉಯಿಂ ರಕ್ಷಿಸಿ ಮೆರೆದಯ್ಯ ಈ ಕ್ಷಿತಿಯೊಳು ದೈತ್ಯ ಶಿಕ್ಷಕನೆನಿಸಿದೆ ತಕ್ಷಣ ಸಿಂಹಿಕೆ ಕುಕ್ಷಿಯ ಸೀಳ್ದೆ ಭಿಕ್ಷೆಯಿಂದ ನಿನ್ನವರನು ಕಾಯ್ದೆ ದಕ್ಷನಹುದೊ ನೀನಚ್ಯುತ ಪ್ರೇಕ್ಷರಿಂ ದೀಕ್ಷೆಯ ವಹಿಸಿ ಸತ್ಸಿಕ್ಷಕನಾದ್ಯೊ 11 ನೀ ರಂಜಿಸಿ ಮೆರೆದೆಯೊ ಗುರು ಮಧ್ವಾರ್ಯ ಧೀರ ಕೇಸರಿಕುವರ ಪುರುಷಾಮೃಗವ ಸಾಧಿಸಿ ತಂದ ಶೂರ ಈ ಧರಾವಲಯದಿ ತೋರಿದೆ ತತ್ವಸಾರ ತೋರಿ ಭಕ್ತಿ ಶ್ರೀರಾಮರ ಪದದಿ ಕಂ ಸಾರಿಯ ಸೇವಿಸಿ ಭಾರವನಿಳುಹಿದೆ ಸಾರಿದೆ ಹರಿಸರ್ವೋತ್ತಮ ತರತಮಭೇದವನರುಹಿದ ಪರಮದಯಾಳೊ12 ಅಂಜನೆ ಕುವರಾ ಧೀರಾ ಕುಂಜರಪುರದ ಅರಿಗಳಂಜಿಸಿದ ಶೂರ ಧರಣಿ ದುರ್ಮದಾಂಧರ ದುರ್ವಾದ ಪಂಕಜೋದ್ಭವನ ಪದವ ಪಡೆವೆ ನೀ ಅಂಜದೆ ಗದೆಯಿಂ ಕೊಂದೆ ಕುರುಪನ ಮಂಜುಳವಾಣಿಯ ಜಗಕೆ ಇತ್ತು ನೀ ರಂಜಿಸಿ ಮರೆದೆಯೊ ಗುರುಮಧ್ವಾರ್ಯ 13 ರೋಚಕ ನಾಮಕನೆನಿಸಿ ಪು ರೋಚನನ ಕಾರ್ಯವನೆಲ್ಲಾ ಕೆಡಿಸಿ ಪಾಜಕ ಕ್ಷೇತ್ರ ಪವಿತ್ರ ಮಾಡಿದೀ ಖೇಚರಮಾರ್ಗದಿ ನೆಗಹಿ ನಿ ಶಾಚರರೆÉಲ್ಲರ ಸದೆದೆ ಗದೆಯಿಂ ಸೂಚಿತ ಗ್ರಂಥ ವಿರಚಿಸಿ ಜಗಕೆ ನೀ ಗೋಚರಿಸಿದೆಯೊ ತ್ರಿಜಗಾಚಾರ್ಯ 14 ರಣದೊಳು ಘುಣಿವಿರೂಪಾನೆತ್ತಿದೆ ಬಾಣಸಿಗನೆನಿಸಿ ಮತ್ಸ್ಯದೇಶವ ಸೇರ್ದೆ ಕ್ಷೋಣಿಯೊಳು ಗುಣವಾರಿಧಿ ಎನಿಸಿದೆ ಗಣನೆ ಇಲ್ಲದೆ ಗಿರಿಯನೆಗಹಿದೆ ಹಣಿದೆ ಹಿಡಿಂಬಾಸುರನ ಸೀಳಿದೆ ಮಣಿಮಂತಾದಿ ದುರಾತ್ಮರಿಗೆ ನೀನಂತಕನೆನಿಸಿದೆ ಶಾಂತಮೂರುತಿಯೆ15 ವಿಜಯರಥಕೆ ನೀ ಕೇತುನಾಥ ವಿಜಯಸಾರಥಿಯಾ ದೂತ ವಿಜಯದಶಮಿಯೊಳ್ ಜನಿತ ಸೋಜಿಗ ತೋರಿ ಸಂಜೀವನ ತಂದೆ ಆ ಜಗಜಟ್ಟಿಗಳೆಲ್ಲರ ಸದೆದೆ ಈ ಜಗದೊಳು ಸರಿಗಾಣೆ ಜಗದೊ ಳು ಜಗದ್ಗುರುವಹುದೋ ನೀ ಗುರುಪೀಳಿಗೆಗೆ16 ಮಂಗಳಮೂರುತಿ ಮಾರುತಿ ಸೌಗಂಧಿಕ ನೆವದಿ ಮರುತನೊಳ್ ನೀ ಸೆಣೆಸಿದಿ ಶೃಂಗಾರ ಗೋಪಿನಂದನನ ಸ್ಥಾಪಿಸಿದೆ ಭಂಗಿಸಿ ವನವನು ಉಂಗುರವನು ತಂದೆ ಸಂಗರ ಹನುಮನೊಳ್ ನೀಡಿ ಮೋಹ ತೋರ್ದೆ ಅಂಗಜಪಿತನ ಇಂಗಿತವರಿತು ಭಂಗಿಸಿದೆಯೊ ದುಶ್ಯಾಸ್ತ್ರಂಗಳನು 17 ಕೇಸರಿ ಕ್ಷೇತ್ರ ಜನಿತಾಭೂಸು ರ ಸುತನ ಭೀತಿಯ ನೀ ಬಿಡಿಸಿದೆ ವಸುಮತಿಯೊಳು ಸುರಶ್ರೇಷ್ಠನೆಂದೆನಿಸಿದೆ ಕೋಸಲನಗರಾಧೀಶನ ಪ್ರೀಯ ವಾಸುದೇವಗರ್ಪಿಸಿದೆ ಅಧ್ವರ್ಯ ಶ್ರೀಶನಾಜ್ಞೆಯ ತಾ ಶಿರದಿ ಧರಿಸಿ ಪ್ರ ಕಾಶ ಮಾಡ್ದೆ ಸರ್ವಮೂಲಗ್ರಂಥವ 18 ಶ್ವಾಸನಿಯಾಮಕನೆನಿಸಿದೆ ಪ್ರ ಯಾಸವಿಲ್ಲದೆ ವನವಾಸಂಚರಿಸಿದೆ ಶ್ರೀ ವ್ಯಾಸರಿಗೆ ಅತಿಮೋದವ ಪಡಿಸಿದೆ ಶ್ರೀಶನಾಜ್ಞೆಯಲ್ಲಿ ಕೀಶನಾಗಿ ನಿಂದು ನಿಶಾಚರರೆÉಲ್ಲರ ಸದೆದೆ ಗದೆಯಿಂದ ಶ್ರೀಶನೆ ಸರ್ವೋತ್ತಮನೆಂಬ ಸತ್ಸಿದ್ಧಾಂತವ ತೋರಿದ ಸದ್ಗುಣಪೂರ್ಣ 19 ಸರ್ವಜೀವರ ತ್ರಾಣ ಪ್ರಾಣ ಗರ್ವಿಸಿದವರೊಳು ನೀ ಗರ್ವ ಹರಣ ಸರ್ವಜ್ಞಾಚಾರ್ಯ ಗುರುವರೇಣ್ಯ ಪೂರ್ವದೇವರ ಗರ್ವವನಿಳುಹಿ ಸರ್ವ ಕೌರವರ ಪಡೆಯನು ಸವರಿದೆ ಉರ್ವಿಯೊಳು ಜನಿಸಿದ ದುರ್ಮದಾಂಧರ ಗರ್ವಹರಣಮಾಡಿ ಕರುಣವ ತೋರಿದೆ 20 ಶ್ರೀರಾಮನೇಕಾಂತ ಭಕ್ತ ಶೌರಿಯ ಆಜ್ಞೆಯಿಂ ಸರ್ವಕಾರ್ಯಸಕ್ತ ಧಾರುಣಿಯೊಳು ಸಚ್ಛಾಸ್ತ್ರಕರ್ತ ಹಾರಿದೆ ಶರಧಿಯ ಅಣುಮಹದ್ರೂಪದಿ ತೋರಿದೆ ಶಕ್ತಿಯ ಗಿರಿ ತರುತೃಣವತ್ ಸಾರಿದೆ ಧರಣಿಯ ಸುರಜನುಮದಿ ನೀ ಬೀರಿದೆ ಸುಜನಕೆ ತತ್ವಾಮೃತವ 21 ಕಾಶಿ ಕಂಚುಕವ ಧರಿಸಿದೆ ಕಾಶ್ಯಪಿಯೊಳು ಕಾವಿಶಾಟಿಯ ಧರಿಸಿದೆ ಕೀಶತನದಿ ಹರಿಕಾರ್ಯವ ಸಾಧಿಸಿ ಜಗ ದೀಶಕುಲದೊಳು ಜನಿಸಿ ಮೆರೆದೆ ವೇದ ವ್ಯಾಸ ಪದಕಮಲ ಮಧುಪ ಜಗಖ್ಯಾತನಾ ದ ಶ್ರೀ ಮಧ್ವಸೂರ್ಯನೆ 22 ಸುಗ್ರೀವಗಭಯ ಕೊಡಿಸಿದಾ ಮ ಹೋಗ್ರರಾದ ದ್ವೇಷಿಗಳ ಸವರಿದಾ ಸ ಮಗ್ರ ಸಿದ್ಧಾಂತ ರಚಿಸಿದಾ ವಿಗ್ರಹದೊಳು ಧಾತಾಸ್ತ್ರವ ಮಾನಿಸಿ ಅಗ್ರಹರಿಪುಕುಲ ಕಾಲನೆಂದೆನಿಸಿ ಉಗ್ರವಾದಿಗಳ ದುರಾಗ್ರಹ ವಿಗ್ರಹ ಶೀಘ್ರದಿ ಮಾಡಿ ಅನುಗ್ರಹವಿತ್ತೇ23 ಸೋಮಕುಲದೊಳು ನೀನೆ ಅತಿ ಬಲವಂತ ಈ ಮಹಿಯೊಳು ರೌಪ್ಯಪೀಠದಿ ಜನಿತ ರಾಮಾಂಗನೆಯ ಪ್ರೇಮದ ದೂತ ಸೋಮಶೇಖರನ ಕೇದಾರಕಟ್ಟಿದ ಸ್ವಾಮಿಗೆ ಪ್ರಕೃತಿಯ ಮಾಯವ ಪೇಳ್ವ ಕೇಸರಿ ಎನಿಸಿದೆ 24 ಮಾರ್ಜಾಲರೂಪವ ಧರಿಸಿದೆ ನೀ ನರ್ಜುನಾಗ್ರಜಾದಿಗಳ ಪೊರೆದೇ ನೀ ಸರ್ಜಿಸಿ ತೋರ್ದೆ ಸತ್ಸತ್ವಗಳೆಲ್ಲ ಘರ್ಜಿಸಿ ಅರ್ಜುನನ ರಥದಲಿ ನೆಲೆಸಿದೆ ಮೂರ್ಜಗಜಟ್ಟಿಗಳೆಲ್ಲರ ಸದೆದೆ ವರ್ಜಿಸಿ ಅರಿಷಡ್ವರ್ಗಗಳೆಲ್ಲವ ದುರ್ಜಯವಾದಕೆ ಘರ್ಜನೆ ಮಾಡಿದೆ 25 ವಾಯುಕುವರ ಅಸುವರ ಕಾಯಜನಯ್ಯನ ಅತಿಪ್ರೀಯಾ ಶೂರಾ ಜೀಯಾ ನೀನಿತ್ತೆ ಸದ್ಗ್ರಂಥವಿಸ್ತಾರಾ ಕಾಯಕಭಕುತಿ ಶ್ರೀರಾಮರಿಗರ್ಪಿಸಿ ಮಾನಸದಲಿ ಯದುಪತಿಯ ಪೂಜಿಸಿ ಮಾಯಮತವ ನಿರಾಕರಿಸಿ ವಾಚದಿ ಶ್ರೀಯರಸನ ಮೆಚ್ಚಿಸಿದೆ ಯತೀಂದ್ರ 26 ವಾತಜಾತ ಹನುಮಂತ ಖ್ಯಾತ ದ್ವಾಪರದಿ ದ್ರೌಪದೀಕಾಂತ ಭೂತಳದೊಳು ಯತಿನಾಥ ಅತಿಶಾಂತ ಧತಾಜನಕ ಶ್ರೀ ವೇಂಕಟೇಶನ ಪ್ರೀತಿಪಾತ್ರ ಶ್ರೀಕೃಷ್ಣನಂಘ್ರಿಗೆ ಖ್ಯಾತನಾದೆ ಸೂತ್ರಾರ್ಥಪೇಳಿ ಕೃಪಾಪಾತ್ರನಾದೆ ಶ್ರೀ ಬಾದರಾಯಣಗೆ27
--------------
ಉರಗಾದ್ರಿವಾಸವಿಠಲದಾಸರು
ಬಾಯಿಂದಾಗುವುದು ಭವಾಭವ ತಿಮ್ಮ ರಾಯನ ನಾಮವ ನುಡಿಯುತಲಿರು ಜೀವಾ ಪ. ರಸನೆಯ ಗೆಲಿದರೆ ವಿಷಯ ನಿವರ್ತಿಸಿ ವಶವಾಹುದಿತರೇಂದ್ರಿಯಗಳೆಂದು ವಸುದೇವ ಸುತನು ವಾಸವಿಗೆಂದು ನುಡಿಯ ಧ್ಯಾ- ನಿಸುತ ಜಾಗೃತನಾಗು ಮುಸುಕಿನೊಳಿಹ ಜೀವಾ 1 ಭವ ಕಂಡು ನಿಂದೆಯ ಮಾಡಿ ಪಿಕವದು ಕೊಂಡಾಡುವುದಾ ಮಾಡದಿದ್ದರೆ ನಗೆಗೀಡಾಹುದಿದರಿಂದ 2 ಮಧ್ವವಲ್ಲಭನಿಗರ್ಪಿತವಾದ ನೈವೇದ್ಯ ಶುದ್ಧ ತೀರ್ಥ ತುಳಸಿಯ ಸಹಿತ ಮೆದ್ದರೆ ಬಹಿರಂತಃ ಶುದ್ಧಿಯಾಗುವುದು ನಿ- ಷಿದ್ಧ ಭಕ್ಷಣದಿಂದ ನೀಚನೆಂದೆನಿಸುವ 3 ಶ್ರೀಯರಸನ ಜಿಹ್ವೆಯಲಿ ಪೊಗಳಲು ಯಮ ರಾಯನಾಳ್ಗಳು ನೋಡಲಂಜುವರು ಮಾಯಾ ಪ್ರಪಂಚದಿ ಮರುಳಾದ ಜನರೊಳು ನ್ಯಾಯವಾಡಲು ನಾನಾಪಾಯವ ಘಟಿಸುವ 4 ಕ್ಷೇತ್ರ ಕಳತ್ರಾದಿಗಳ ಬಿಟ್ಟು ತಿರುಗುವ ತೀರ್ಥಯಾತ್ರೆಯ ಮಾಡುವುದಕಧಿಕಾ ಸ್ತೋತ್ರದಿಂದ ಶ್ರೀ ಕಳತ್ರನ ಕರುಣೈಕ ಪಾತ್ರರ ಮಾಳ್ಪ ವಿಚಿತ್ರ ಸನ್ನಹವಾದ 5 ಹಲವು ಕರ್ಮದ ಶಾಸ್ತ್ರ ನೆಲೆಯರಿಯದೆ ತ- ತ್ಫಲವಾಗಬೇಕೆಂಬ ಛಲವಿಡೀವ ಕಲಿಯೊಳಗುದಿಸಿದ ಜನರಿಗೆ ಗತಿಯಾಗಿ ಜಲಜನಾಭನ ನಾಮ ನೆಲೆಯಾಗಿ ನುಡಿವಂಥ 6 ನಾಮಕೀರ್ತನೆಗೈಯ್ಯೆ ನಲಿವುತ ಬಹ ನಮ್ಮ ಶ್ರೀಮಹೀಯರಸ ವೆಂಕಟರಾಜನು ಕಾಮಿತಾರ್ಥವ ನೀಡಲ್ಲಧಿಕ ಸಾಧನವಿದು ಪಾಮರತೆಯ ಬಿಟ್ಟು ಪರಮಾರ್ಥದ ಗುಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ. ನಿರಂಜನ ತಾ ಲೀಲೆಯಿಂದ1 ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ 2 ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ3 ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ 4 ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ 5
--------------
ವ್ಯಾಸರಾಯರು
ಶೇಷ-ರುದ್ರದೇವರು ಪಾದ ಭೂ- ಪಾದ ಪ. ಹರಿಗೆ ಹಾಸಿಗೆಯಾಗಿ ಹರುಷಪಡುವ ಪಾದ ಹರಿಯ ಮಂದಿರಲ್ಲಿ ಇರುವ ಪಾದ ಹರ ಪುರಂದರರಿಗೆ ಪೂಜ್ಯವಾಗಿಹ ಪಾದ ಪಾದ 1 ವಾರುಣಿ ದೇವಿಗೆ ವರನೆನಿಸಿದ ಪಾದ ಶ್ರೀ ರಾಮಗೆ ಕಿರಿಯನಾದ ಪಾದ ಘೋರ ಇಂದ್ರಾರಿಯ ಸಂಹರಿಸಿದ ಪಾದ ಪಾದ 2 ವಾಯುದೇವರು ಜೊತೆಗೆ ವಾದವಾಡಿದ ಪಾದ ನೋಯದೆ ಭೂಮಿಯನು ಪೊತ್ತಿಹ ಪಾದ ಶ್ರೀಯರಸನ ಪಾದಪದ್ಮ ಸೇವಿಪ ಪಾದ ಸುರರು ಪಾದ 3 ಸಪ್ತೆರಡು ಭುವನದಲಿ ಗುಪ್ತವಾಗಿಹ ಪಾದ ಚಿತ್ತದಭಿಮಾನಿಗೆ ಸೇವಕನಾದ ಪಾದ ಮತ್ತೆ ಮನ ಅಹಂಕಾರ ತತ್ವದೊಡೆಯನ ಪಾದ ಪಾದ 4 ಘೋರರೂಪವ ತೊರೆದು ಸೌಮ್ಯವಾಗಿಹ ಪಾದ ಸೇರಿದವರನು ಪೊರೆವ ಶ್ರೇಷ್ಠ ಪಾದ ಹಾರೈಸಿ ಗೋಪಾಲಕೃಷ್ಣವಿಠ್ಠಲನ ಪಾದ ಪಾದ 5
--------------
ಅಂಬಾಬಾಯಿ
ಹನುಮಂತ ಬಲವಂತ ಅತಿ ಗುಣವಂತಾ | ಇನ ಶಶಿ ಶಿಖಿನೇತ್ರ ರೂಪ ಚರಿತ್ರ | ವನಚರ ಪುಂಗವ ಸನಕ ಸನಂದನ | ವಿನುತ ಹರಿಚರಣನನುದಿನ ಜಪಿತಾ ಪ ಗಜ ಕಂಠೀರಾ | ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ | ಶ್ರೀಯರಸನ ನಾಮ ಸವಿದ ನಿಸ್ಸೀಮ | ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು | ಮಾಯಾಛಾಯಾ ಗ್ರೀಯಾ ನೋಯ | ಸಾಯಬಡದ ಸೀತೆಯ ಮುಂದೆ ನಿಂದು | ಕೊಂಡ ಸ | ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ 1 ವರ ಕುಂತಿನಂದನಾ ಕಲಿಯ ಭಂಜನಾ | ಉರಗ ಭಂಜನಾ | ಉರಿತಾಪ ಪರಿಹಾರ | ಕರುಣ ಸಾಗರಾ | ದುರುಳ ಕೀಚಕರ ಹಿಡಂಬಕಾಂತಕ | ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ | ಗುರುವರ ಸುತದಿನ | ಕರಜನುವರದೊಳು | ಪರಿ ಪರಿಹರಿಸಿದೆ ಸಮರಾ 2 ಆನಂದತೀರ್ಥನಾಗಿ ಅತಿ ಹರುಷಯೋಗಿ ಕಾನನ ಪರಮತಾ ದಹಿಸಿದ ಖ್ಯಾತಾ | ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ | ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ | ಜ್ಞಾನಾಹೀನಾ ದೀನಾ ಜನಾ | ಮಾನಿಸಫಲದಾನಾ ನಿರತ ನಿಧಾನಾ | ಶ್ರೀನಿಧಿ ವಿಜಯವಿಠ್ಠಲ | ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು 3
--------------
ವಿಜಯದಾಸ
ಹರಿಯನ್ನು ಒಲಿಸಿಕೊಡೋ ಮಾರುತಿರಾಯಾಹರಿಯನ್ನು ಒಲಿಸಿಕೊಡೊ ಪ ಪರಿ ಮುಖದಿಂದಲೆಸರುವರು ಕಾಣಬೇಕೆಂಬರು ನೋಡೋ ಅ.ಪ. ಪರಮಭಕ್ತ ನೀನೆಂದೂ ಎಂದೆಂದೂಹರಿಯ ಮೀರನೆಂದು ಒರೆವರು ಮನದಂದುಮೊರೆಯು ನನ್ನದು ಇಂದುಹರಿಗೆ ನಿವೇದಿಸು ಕರುಣಾಸಿಂಧು 1 ಒಡೆಯ ರಾಮಗೆ ನೀ ದೂತ ಎಂದಿಗೂ ಆತನಡೆಸುವ ನಿನ್ನ ಮಾತಬಡವ ನಾನೊಬ್ಬನು ಕಡು ಕರುಣೆಯ ಭಿಕ್ಷೆಕೊಡು ಎಂದು ಬೇಡುವೆನೆಂದು ನೀ ತಿಳಿಸುತ 2 ಹಾಯಗೊಡರು ಜೀಯಾ ಬಾಗಿಲದಲಿಕಾಯುವ ಜಯ ವಿಜಯಾಶ್ರೀಯರಸನ ಕಾಂಬುಪಾಯವ ಕಲಿಸಿಬಡಪಾಯೆನಗೆ ನೀ ನೀಡುತ ಕಯ್ಯಾ 3 ಸದಯನೆ ಕರುಣ ಬಂತೆ ಸಂಸಾರದಿಕುದಿಸುವದೆನ್ನ ಚಿಂತೆಗದುಗಿನ ವೀರನಾರಾಯಣನೆನ್ನೊಳು ಸದಾಕಾಲದಿ ಹೃದಯದಿ ನಿಲುವಂತೆ 4
--------------
ವೀರನಾರಾಯಣ
ಊರ್ವಶಿ :ಸಿಂಧುಶಯನ ವನದಿಂದಇಂದಿರೇಶ ಮುದದಿಂದ ಮೌನಿಮುನಿ-ವೃಂದದಿಂದ ಸ್ತುತಿವಂದನೆಗೊಳ್ಳುತ 1ಏಸುಲೋಭಿಯೊ ತಿಮ್ಮಶೆಟ್ಟಿ ಒಂದುಕಾಸಿಗೆ ಮಾರುವ ರೊಟ್ಟಿದಾಸರ ಕೂಡಿ ಜಗಜಟ್ಟಿ ಬಹುದೇಶವ ತಿರುಗುವ ಶೆಟ್ಟಿದೂಷಣಾರಿ ಪಾದಾಶ್ರಿತಜನರಭಿ-ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ 2ದೊಡ್ಡವನೈ ಮಹಾರಾಯ ಹಳೆದುಡ್ಡಿಗೆ ನೀಡುವ ಕೈಯಅಡ್ಡಿಗೈದರೆ ಬಿಡನಯ್ಯ ಇವಬಡ್ಡಿಕೇಳುವ ತಿಮ್ಮಯ್ಯದಡ್ಡುಕೇಸಕ್ಕಿಯ ಮಡ್ಡಿಪ್ರಸಾದವಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ 3ತಿರುಪತಿಗೆ ಪ್ರತಿಯಾಗಿ ಪಡುತಿರುಪತಿಯೆಂದಿಹಯೋಗಿಮೆರಸುವನೈ ಸ್ಥಿರವಾಗಿ ಶ್ರೀವರವೆಂಕಟ ಲೇಸಾಗಿಶರಣರು ಏನೆಂದು ಸಂತೋಷಿಪಕರುಣಾಕರ ಚಪ್ಪರ ಶ್ರೀನಿವಾಸನು 4ಈ ಪರಿಯಲಿ ಒಲಿದಿಪ್ಪಾ ಬಹುವ್ಯಾಪಾರಿ ತಿಮ್ಮಪ್ಪಾಕಾಪಟ್ಯರಿಗೆ ತಾನೊಪ್ಪನಮ್ಮಗೋಪಾಲಕಜಗದಪ್ಪಶ್ರೀಪರಮಾತ್ಮ ನಾನಾಪರಿ ವಿಭವದಿಗೋಪುರದಲಿ ತಾ ವ್ಯಾಪಿಸಿ ನಿಂದನು 5ರಂಭೆ : ನಾರೀವರ್ಯಾರಮ್ಮ ನೋಡಲುಸಾರಹೃದಯರಮ್ಮತೋರಣಛತ್ರಚಾಮರ ಬಿರುದುಗಳಿಂದಭೂರಿವಿಭವದಿಂದ ಸಾರಿಬರುವರಮ್ಮ1ಕರದಿ ಕಲಶವಿಹುದು ಶಾಲಿನನಿರಿ ಮುಂದಿರುತಿಹುದುಬೆರಳಿನೊಳುಂಗುರುವರದ್ವಾದಶನಾಮಧರಿಸಿ ಸಮಂತ್ರೋಚ್ಚರಿಸುತ ಬರುವರು 2ಮಂದಿಗಳೊಡ್ಡಿನಲಿ ಬರುವರುಮಂದಸ್ಮಿತದಲಿಚಂದದಿ ಜನಗಳಸಂದಣಿಮಧ್ಯದಿಇಂದಿರೆಯರಸನ ಧ್ಯಾನದಿ ಬರುವರು 3ಹಿಂಗದೆ ಬರುತಿಲ್ಲಿ ಮನಸಿನಇಂಗಿತವರಿತಿಲ್ಲಿಬಂಗಾರದ ಭೂಷಣಸಮುದಾಯದಿಅಂಗಜಪಿತನಿಗೆ ಶೃಂಗಾರಗೈವರು 4ವಿಪ್ರೋತ್ತಮರ ಗುಣ-ಕೆಂತು ಸೈರಣೆಯಾಂತು ನಾನಿರಲಿಚಿಂತಿತಾರ್ಥವನೀವ ಲಕ್ಷ್ಮೀ-ಕಾಂತ ಶ್ರೀನಿವಾಸನಂಘ್ರಿಯಸಂತಸದಿ ಪೂಜಾದಿ ಸತತಿ-ಯಾಂತಕೊಂಡಿಹೇಕಾಂತಭಕ್ತರು 1ಒಂದು ಭಾಗ ಪುರಾಣಿಕರು ತಾವೆಂದುಕೀರ್ತಿಯನು ಧರಿಸಿ ಮ-ತ್ತೊಂದು ಭಾಗದಿ ಜೋಯಿಸರುತಾವೆಂದು ಧರ್ಮವನು ಪಾಲಿಸಿಸಿಂಧುಶಯನನ ಚಾರುಚರಣ-ದ್ವಂದ್ವಕಾನತರಾಗಿ ಲೋಕದಿವಂದ್ಯರೆನಿಸಿಯಾನಂದ ಪರರಿವ-ರೆಂದು ಶ್ರೀಗೋವಿಂದ ನಡೆಸುವ 2ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿವಾದಗೈವ ಕುವಾದಿಗಳ ಮನ-ಭೇದಿಸುತ ನಿಜವಾದ ಮಾರ್ಗವಶೋಧನೆಗೆ ತಾವೈದಿಸುವ ಮಹಾಸಾಧುಗಳಿಂದ ದೃಢವಾದ ಮಾತಿದು 3ಅಂಬುಜಾಕ್ಷಿಯೇನೆಂಬೆಮೇಗರೆಡಂಭಮಾತಲ್ಲ ಧನಿಯ ಕು-ಟುಂಬವೆನುತಲಿ ತುಂಬ ಕೀರ್ತಿಯಗೊಂಬರೆ ಎಲ್ಲ ಸಂತಸಸಂಭ್ರಮದಿ ವೇದ್ಯಾಂಬುನಿಧಿಯಲಿತುಂಬಿರುವರೀ ಕುಂಭಿನಿಯೊಳು ಜ-ಸಂಬಡುವುದು ವಾಸಿಷ್ಠಗೋತ್ರಜ-ರೆಂಬ ವಿಪ್ರಕದಂಬಪೂಜ್ಯರು 4ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆಆಲೋಚಿಸಲರಿದಾ ಕಮಲಾಲೋಲನಮಹಾಲೀಲೆ 2ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇಮೂರ್ಲೋಕದೊಳಗೆ ಇಂಥಲೀಲೆಯ ನಾನರಿಯೆ 3ಫಾಲೇಂದು ಕುಂದದ ವರ್ಣಕೋಲು ಚಾಮರಗಳನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು 4ಚಂಡವೈಶ್ವಾನರನ ತೇಜಾಖಂಡದಿಂದೋರಂತೆಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ 5ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿಆದಿನಾರಾಯಣ ಮದುಸೂದನನೆ ಮುದದಿ 6ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರುನಾದಿನಿ ಕೇಳಿದರ ಪರಿಯನೀ ದಯದಿಂದುಸುರು 7ದೇವನಾಗಮನವೆಲ್ಲನೂದೀವಟಿಗೆ ಸೇವೆಯೆಂದು ಪೇಳುವರುಭಾವುಕರು ಮನದೊಳಂದು 1ಕೇಳಿದರೆ ಆಲಸಾಯನವನು ಸುರಿದುಆಯತವನು ವರ್ಣಿಸುವಡೆ ಬಾಯಿಯುಸಾವಿರ ಸಾಲದುಶ್ರೀಯರಸನ ಮಹಿಮೆಯರಿವದಾರಿಗಳವಲ್ಲ 3ಜಯಜಯ ಭಕ್ತಸುಪೋಷಣ ಜಯಜಯದೈತ್ಯವಿನಾಶನಜಯಜಯ ಜಾಹ್ನವಿತಾತ ಜಯಜಯ ಜಗದಾತಜಯಜಯ ರವಿಶತತೇಜ ಜಯಜಯಆಶ್ರಿತ ಸುರಭೂಜಜಯಜಯ ನಾದದಿಯೇರ್ದ ನಿರ್ಭಯತೋರುತ ಒಲಿದು 4* * *ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ-ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ 1ಸೇವೆಯ ಕೈಕೊಳ್ಳು ಎನುತಡ್ಡಬಿದ್ದರು ನೋಡೆ ತಂಗಿ ಭಕ್ತಿಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ-ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ 3ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ-ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ 4ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥಮೌರಿಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ-ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ 6ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ-ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ 7ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ-ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ 8ಚಿತ್ತೈಸಿದನಿಲ್ಲಿನಿತ್ಯಉತ್ಸಹಲೋಲ ನೋಡೆ ತಂಗಿ ಭಕ್ತ-ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ 9ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ 10ಯಾವಾಗಲು ಬರುವವನಲ್ಲ ಧನಿಯೆಂದುನೋಡೆ ತಂಗಿ ನಮ್ಮದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ 11ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ-ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12ಭೂರಿಕದಳಿಚೂತಪನಸ ಫಲಗಳನ್ನುನೋಡೆ ತಂಗಿ ಮಹಾ-ಮೇರುವಿಗೆಣೆಯಾದ ಮೇರ್ವೆಶೃಂಗಾರವ ನೋಡೆ ತಂಗಿ 13ಸುತ್ತುಮುತ್ತಲು ಝಲ್ಲಿಗಳಾನಂದವ ನೋಡೆ ತಂಗಿ ಅದ-ರೊತ್ತಿಲಿರುವ ಪಲ್ಲವ ಪೂಗಳ ಮಾಲೆ ನೋಡೆ ತಂಗಿ 14ಮೇಲೆ ಕಟ್ಟಿರುವ ಪತಾಕೆನಿಶಾನಿಯ ನೋಡೆ ತಂಗಿ ಸಾಲು-ಸಾಲಿನ ಅಂಕಣದೊಳಗಿಹ ಬೊಂಬೆಯ ನೋಡೆ ತಂಗಿ 15ಬಾಣಬಿರುಸು ಜೇನುಂಡೆಯ ಶಬ್ದವ ನೋಡೆ ತಂಗಿ ವೀಣಾ-ವೇಣುಸುಗಾನ ಸಂಗೀತ ಮನೋಹರ ನೋಡೆ ತಂಗಿ16ತಾಳಮೃದಂಗ ಸುಸ್ವರ ರಂಜಿತದಿಂದ ನೋಡೆ ತಂಗಿ ಗಣಿ-ಕಾಲತಾಂಗಿಯರ ಗಾಯನದಭಿನಯನ್ನು ನೋಡೆ ತಂಗಿ 17ಕಾಲುಂಗುರ ಗೆಜ್ಜೆಗಳಕಟ್ಟಿಕುಣಿವರು ನೋಡೆ ತಂಗಿ ತಮ್ಮಮೇಲುದನೋಸರಿಸುತ್ತ ಮೋಹಿಸುವರು ನೋಡೆ ತಂಗಿ 18ಕಂತುಪಿತನು ಇಲ್ಲಿ ನಿಂತನು ವಿಭವದಿ ನೋಡೆ ತಂಗಿ ತದ-ನಂತರದಲಿ ಆರತಿಯನುಗೊಂಡನು ನೋಡೆ ತಂಗಿ 19ಭೂತಪದೊಳಗೀ ನೂತನವೆಲ್ಲುಂಟು ನೋಡೆ ತಂಗಿ ಹರಿ-ಪ್ರೀತರಾಗಿರುವನಾಥರ ಸೇವೆಯ ನೋಡೆ ತಂಗಿ 20ವೇದೋದ್ಧಾರಕ ನಿನ್ನ ಪಾದವೇ ಗತಿಯೆಂದುನೋಡೆ ತಂಗಿ ಮಹಾ-ಸಾಧುಗಳತ್ತಲು ಕಾದುಕೊಂಡಿರುವರು ನೋಡೆ ತಂಗಿ 21ಚರಣನಂಬಿದ ತನ್ನ ಶರಣರ ಪೊರೆಯೆಂದುನೋಡೆ ತಂಗಿ ತಾನುತ್ವರಿತದಿ ಬಂದನು ಉರುತರ ತೋಷದಿ ನೋಡೆ ತಂಗಿ 22ಮನೆಮನೆಗಳ ಸಮ್ಮುಖದಲ್ಲಿ ದೀಪವ ನೋಡೆ ತಂಗಿ ಎಲ್ಲಾಜನಗಳು ಕೈಗಳ ಮುಗಿದು ನಿಂದಿರುವರು ನೋಡೆ ತಂಗಿ 23ರಾಜ ಬೀದಿಯೊಳು ವಿರಾಜಿಪ ತೋರಣನೋಡೆ ತಂಗಿ ಸುರ-ಭೂಜದಂತಿಹ ಮಹಾಸೋಜಿಗಕುರುಜವ ನೋಡೆ ತಂಗಿ24ಕಂತುಜನಕನಿಲ್ಲಿ ನಿಂತು ಪೂಜೆಯಗೊಂಡನೋಡೆ ತಂಗಿ ತದ-ನಂತರದಲಿ ಮನಸಂತೋಷಪಡಿಸಿದ ನೋಡೆ ತಂಗಿ 25ಮುಂದೆ ಬರುವ ಜನಸಂದಣಿಗಳ ಮಧ್ಯ ನೋಡೆ ತಂಗಿ ಇ-ನ್ನೊಂದು ಗೂಡಿನ ಪರಿಯಂದವ ನೀನಿತ್ತ ನೋಡೆ ತಂಗಿ 26ಮಾಣಿಕ್ಯರಾಸಿಯಮಾಣದೆಇಟ್ಟರೊ ನೋಡೆ ತಂಗಿ ಸರಿ-ಗಾಣೆ ಈ ಗುಡಿಗೆ ಜಾಣೆ ನೀ ಮನವಿಟ್ಟು ನೋಡೆ ತಂಗಿ 27ಮೂಡಿತೊ ಸೂರ್ಯನ ಕಿರಣಗಳೆಂಬಂತೆನೋಡೆ ತಂಗಿ ಇಂಥಗೂಡಿನೊಳಗೆ ದಯಮಾಡಿ ಸೇವೆಯಗೊಂಡ ನೋಡೆ ತಂಗಿ28ತರುಣಿಯರನ್ನಳೆಯಿತ್ತ ಶರಧಿಯಂತುಕ್ಕುತನೋಡೆ ತಂಗಿ ಭೂರಿ-ಹರುಷದಿಂ ಬರುವ ಭಕ್ತರನೇಕರು ನೋಡೆ ತಂಗಿ 29ಹರಿಯೇ ನೀ ಎಮ್ಮಯ ಪೊರೆಯೆಂದು ಭಕ್ತಿಯೊಳ್ನೋಡೆ ತಂಗಿ ಬಂದುಚರಣಕಾನತರಾಗಿ ಅರಿಕೆಯ ಗೈವರು ನೋಡೆ ತಂಗಿ 30ಮಕ್ಕಳನರಸಿ ಮಾತೆಯು ಪೋಗುವಂದದಿನೋಡೆ ತಂಗಿ ಮಹಾ-ರಕ್ಕಸವೈರಿಯು ದಯಮಾಡಿ ಪೊರಟನು ನೋಡೆ ತಂಗಿ 31ಪರಮಪುರುಷ ಭೂರಿವಿಭವದಿ ಬರುವುದನೋಡೆ ತಂಗಿ ಬಾಣಬಿರುಸುಗಳೆಲ್ಲವು ಸುರುಸುರುಯೆಂಬುದು ನೋಡೆ ತಂಗಿ 32ಫಲ್ಲನೆ ಹೊಳೆಯುವ ಹಿಮಕರಜ್ಯೋತಿಯನೋಡೆ ತಂಗಿ ಮನಘಲ್ಲೆನಿಸುತ್ತಿಹ ಬೆಡಿಖಂಬಧ್ವನಿಯನು ನೋಡೆ ತಂಗಿ 33ಭುಗಿಲು ಭುಗಿಲು ಧಗಧಗಲೆನ್ನುತಲಿದೆ ನೋಡೆ ತಂಗಿ ಕಿ-ಡಿಗಳನುಗುಳುವ ವಸನಪ್ರಕಾಶವ ನೋಡೆ ತಂಗಿ 34ಈ ರೀತಿಯ ವಿಭವದಿ ಏರಿದ ಮೇರ್ವೆಯ ನೋಡೆ ತಂಗಿ ರತ್ನ-ದಾರತಿಯಗೊಂಡನು ಶ್ರೀನಿವಾಸನು ನೋಡೆ ತಂಗಿ 35ಲೋಕದೊಳಗೆ ನೂತನವಿದೊಂದನು ನೋಡೆ ತಂಗಿ ಅ-ನೇಕ ಮಕ್ಕಳುಗಳ ನೇತಾಡಿಸುವದ ನೋಡೆ ತಂಗಿ 36ಪುತ್ರೋತ್ಸವ ಫಲಗಳು ದೊರಕಿದ ಕಾರಣ ನೋಡೆ ತಂಗಿ ಇದು-ಪುತ್ರ ಫಲಾವಳಿ ಹರಕೆಯಂಬರು ಕಾಣೆ ನೋಡೆ ತಂಗಿ 37ಇಳಿದನು ಇಂದಿರೆಯರಸನು ಮೇರ್ವೆಯ ನೋಡೆ ತಂಗಿ ರಥ-ದೊಳಗಿದ್ದ ಪರತತ್ವರೂಪನು ಸಹಿತಲಿ ನೋಡೆ ತಂಗಿ 38ಮಾಣದೆಭಕ್ತರ ಮಮತೆಯ ಕಾರಣ ನೋಡೆ ತಂಗಿ ಮುಖ್ಯ-ಪ್ರಾಣರಲ್ಲಿಗೆ ಪೋದರಿಬ್ಬರು ಒಂದಾಗಿ ನೋಡೆ ತಂಗಿ 39ಅವರಿವರಂತಲ್ಲ ದೊರೆ ಹನುಮಂತನು ನೋಡೆ ತಂಗಿ ಪಟ್ಟ-ದರಸನ ಸಹಿತಿಲ್ಲಿ ಇಳಿಸಿದನಲ್ಲವೆ ನೋಡೆ ತಂಗಿ 40ಹನುಮನ ಸೇವೆಯ ಕೈಕೊಂಡು ಕರುಣದಿನೋಡೆ ತಂಗಿ ಮತಘನವಾದ ಶೇಷತೀರ್ಥವ ನೋಡಿ ಬಂದನು ನೋಡೆ ತಂಗಿ41* * *ಬಂದನು ತ್ರೈಜಗದೀಶ ನಡೆ-ತಂದನು ರವಿಕೋಟಿಭಾಸ ಸರ್ವೇಶ ಪ.ಪಲ್ಲಂಕಿಯಲಿ ತಾನೇರಿ ಭಕ್ತ-ಸುಲ್ಲಭ ಸುತ್ತುಬರುವನೆಲೆ ನಾರಿಸಲ್ಲಲಿತಾರ್ಥ ಋಗ್ವೇದ್ಯಜುರ್ವೇದವ-ನೆಲ್ಲವ ಲಾಲಿಸಿ ಉಲ್ಲಾಸದೊಳಗೆ 1ಸಂಗೀತನರ್ತನಗಳನು ಪೂರ್ಣ-ಮಂಗಲಕರ ವೀಣಾವೇಣುಗಾನವನುಶೃಂಗಾರ ಪದ್ಮಮೃದಂಗ ಸರ್ವಾದ್ಯಪ್ರ-ಸಂಗದಿ ಒಲಿಯುತಗಜನಕನು 2ಕಪಟನಾಟಕಸೂತ್ರಧಾರಿ ಸರೀ-ಸೃಪಗಿರಿರಾಜ ದಾನವಕುಲವೈರಿಅಪರೂಪವಾದ ಮಂಟಪದಲಿ ಮಂಡಿಸಿಕೃಪೆಯ ಬೀರಿದನು ಸೇವಿಪ ಭಕ್ತರಿಂಗೆ 3ಭಕುತರಾಯಾಸವನೆಲ್ಲ ತನಶಕುತಿಯಿಂದಲಿ ಬಿಡಿಸಿದನದನ್ನೆಲ್ಲಅಖಿಳಭಯಗಳ ನಿವಾರಿಸಿ ತೆಗೆಯುತ್ತಮುಕುತಿದಾಯಕನು ಗೃಹಾಂತರಕ್ಕೈದಿದನು 4ಇಂದ್ರಾದಿ ದೇವತೆಯರನು ಅರ್ಧ-ಚಂದ್ರಶೇಖರಪ್ರಮಥಾದಿ ಗಣವನುಇಂದುಗೋವಿಂದನು ಚಂದದಿ ಸಂತುಷ್ಟಿ-ಹೊಂದಿಸಿ ಸರ್ವಾನಂದವ ತೋರ್ದನು 5ಆದ್ಯಂತ ಭಕ್ತರ ನೋಡಿ ಶ್ರೀಪ್ರ-ಸಾದವ ನೀಡಿ ಭಕ್ತರ ಒಡನಾಡಿಮುದ್ದುಮೋಹದ ಮಡದಿಯರ ಸಮೇತದಿಗದ್ದುಗೆಯಲಿ ಸಾನ್ನಿಧ್ಯ ತೋರಿದ ಕಾಣೆ 6ಈ ರೀತಿಯಲಿ ಶ್ರೀಹರಿಯು ನಾನಾಭೂರಿವಿಭವದ ಶೃಂಗಾರ ಶೋಭಿತವುನೀರೆ ಪಂಚಮಿ ಶುಭವಾರದ ದಿವಸದಸಾರಉತ್ಸಹ ಪೂರ್ಣ ತೋರಿಸಿ ಪೊರೆದನು7ಆರತಿಯನು ಎತ್ತಿದಳು ಜಯ-ಭೇರಿರವದಿ ಆಕಾಶನ ಮಗಳುವಾರಿಧಿಶಯನ ಮುರಾರಿ ಶ್ರೀಲಕ್ಷ್ಮೀ-ನಾರಾಯಣನ ಸಾಕಾರವನ್ನು ನೋಡಿ 8
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗದುಶ್ಚಿತ್ತ ವೃತ್ತಿಯನೀಗಿನಿಶ್ಚಿತನಾಗಿಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ 1ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀನಳಿನನೇತ್ರನ್ನ ನಾಮಾವಳಿಗಳಿಂದಸಲೆ ಅವನಂಘ್ರಿಕಮಲಕರ್ಪಿಸದೆ ಸದಾಲಲನೆಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ2ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆಅತಿಥÀರೊಳೀತನ ನಂಟನೆಂದರೆಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆಗತಿಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ3
--------------
ಪ್ರಸನ್ನವೆಂಕಟದಾಸರು