ನಿರ್ಭಯವಾಯ್ತಿನ್ನು ಎನಗೆ ರತ್ನ
ಗರ್ಭ ಲಕ್ಷ್ಮಿಕಾಂತ ಹೊಣೆಯಾದ ಮನೆಗೆ ಪ.
ಮೂರಾವಸ್ತೆಗಳಲ್ಲಿ ಕಾವ
ವಾರಿಧಿ ವಾಸ ಸ್ವಭಕ್ತ ಸಂಜೀವ
ಕ್ರೂರ ವೈರಿಗಳು ದುರ್ಭಾವ
ದೂರ ಹಾರಿಸಿ ಸುಖವನ್ನು ತಾನೆ ತಂದೀವ 1
ಕರ್ಣಾಮೃತರಸ ಸುರಿದು ನಿತ್ಯ
ಸ್ವರ್ಣಲಾಭ ಧಾರೆ ಸುಲಭದಿ ಕರದು
ನಿರ್ನಿತ ದೋಷವ ತರಿದು ದು-
ಗ್ದಾರ್ಣವ ಮಂದಿರ ತೋರುವ ಬಿರುದು 2
ವಿಧಿಭವ ಶಕ್ರಾದಿರಾಜ ಹೃದ್ಗತ
ಸದನದಿ ನೆಲೆಗೊಂಡಾಶ್ರೀಕಲ್ಪಭೂಜಾ
ಸದೆವ ವೈರಿಗಳ ಸಮಾಜ ಬೇಗ
ಒದಗಿ ಪಾಲಿಪ ನಮ್ಮ ವೆಂಕಟರಾಜ 3