ನಾಲಿಗೆ ತುದಿಯಲ್ಲಿ ರಾಮ ಎಂಬೊ ನಾಮ
ವ್ಯಾಳಿಗೆ ಒದಗಿಸೋ ಹರಿಯೆ ಮರಿಯೆ ಪ
ಕಾಲನ ದೂತರು ಕಠಿಣರೆ ಸರಿ
ವ್ಯಾಳಿಯು ಹೇಳಿ ಕೇಳಿ ಬರುವದಲ್ಲ
ಆಲಯದವರ ಶಕುತಿಯಲ್ಲೇನೋ
ಲಾಲಿಸಬೇಕೇನೊ ಎನ್ನ ಬಿನ್ನಪ 1
ಕಾಲನ ಸ್ಥಿತಿಯೆಂತು ಮೇಷದ ಗುಂಪಿಗೆ
ತೋಳದ ಪರಿಯೆಂದು ನಾ ಕೇಳಿ ಬಲ್ಲೆ
ಕಾಳು ಕಪಟೆ ತಿಂಬ ಮೂಷಕಗಳಿನ್ನು
ಕಾಲ ಭುಜಂಗದಂತೆ ಕಂಡು ಬಲ್ಲೆನೊ2
ಹೇಸಿ ವಿµಯವೆಂಬಾ ಮಡಿವಿನೊಳಗೆ ವೈದು
ಮೋಸಗೊಳಿಸುವ ಸ್ಥಿತಿಯು ಮನಸಿನ
ಪರಿ ತಿಳಿದಿನ್ನು
ಈ ಸಮಯಕ್ಕೆ ನಾಮ ಒದಗಿಸಯ್ಯ 3