ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖಪರವಯ್ಯಾ ಶ್ರೀಹರಿಲೀಲೆ ವೈಜಯಂತಿ ಕೌಸ್ತುಭ ವನಮಾಲಾ ಶ್ರೀವತ್ಸಾಂಕನ ದಾವನಕೊರಳೊಳು ಕೇವಲ ಗುಂಜಾಮಾಲಾ ತ್ರಿಜಗಜ್ಜನ್ಮಾದಿಗಳಿಗೆ ಮೂಲಾ ಜನಾರಿಗೆನಿಸುವ ಕಾಲಾ ಭಜಿಪರ ಭಾಗ್ಯೋದಯಕಾನಂದ ವ್ರಜದೊಳೀಗೋಪಿಯ ಕಂದಾ ಶ್ರೀದವಿಠಲ ಕೇಳು ಸುರತಸುಶೀಲಾ ರಾಧಾಮನೋನುಕೂಲಾ ಸಾಧಿಸಿ ವೃಂದಾವನದಲ್ಲಿ ಪೊಂಗೊಳಲೂದುವ ಗಾನವಿಲೋಲ
--------------
ಶ್ರೀದವಿಠಲರು