ಶ್ರೀ ಪಾದರಾಜ ಸಂದರ್ಶನದಿ ಸಕಲ ಸಂ
ತಾಪಗಳು ಕಳೆದುವಿಂದು ಪ
ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮ
ಕಾಪಾಡುತಿರುವರೆಂದು ಅ.ಪ
ಪೂರ್ಣರಿದ್ದರು ಲೋಕದಿ
ಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರ
ನಿರ್ಣಯಗಳಿತ್ತರಿವರು 1
ಮಂಗಳಾತ್ಮಕ ನಮ್ಮ ರಂಗವಿಠಲ ಕೃಪಾ
ಪಾಂಗ ಪಾತ್ರರು ಪೂಜ್ಯರು
ಕಂಗಳಿಗೆ ಹಬ್ಬವಿದು ಮಂಗಳಕೆ ಸಾಧನವು
ಹಿಂಗಿತೆಮ್ಮಯ ಕೊರತೆಯು 2
ಜ್ಞಾನ ಭಂಡಾರವನು ಲೋಕಕೀಯಲು ಶುದ್ಧ
ಮಾನಸ ಪ್ರಸನ್ನರಿವರು
ಮೌನಿವರ ವ್ಯಾಸತೀರ್ಥರಲಿ ಪರಮಾದರದಿ
ಜ್ಞಾನಧಾರೆಯ ಕರೆದರು 3