ತೆರಳಿದರು ವ್ಯಾಸತತ್ವಜ್ಞರಿಂದು
ಪುರುಷೋತ್ತಮನ ಗುಣಗಳರುಪಿ ಸುಜನರಿಗೆ ಪ
ವರ ರೌದ್ರಿನಾಮ ಸಂವತ್ಸರದ ಶ್ರಾವಣ
ಪರಪಕ್ಷ ಅಷ್ಟಮಿ ಭಾನುವಾರ
ಭರಣಿ ನಕ್ಷತ್ರ ಪ್ರಾತಃಕಾಲದಲಿ ಸೋಮ
ಪಾದ ಸನ್ನಿಧಿಗೆ 1
ಭಾಗವತ ಮೊದ
ಲಾದ ಶಾಸ್ತ್ರಗಳ ಕೀರ್ತನೆಗೈಯುತಾ
ಪಾದೋದಕವ ಶಿರದಿ ಧರಿಸುತಿಪ್ಪ ವರಘತಿ
ರೋಧಾನಗೈಸಿ ಪರಗತಿ ಮಾರ್ಗವನು ತೋರಿ 2
ಸೋಜಿಗವಿದಲ್ಲ ಸಜ್ಜನರನುದ್ಧರಿಸುವುದು
ನೈಜ ಜಗನ್ನಾಥ ವಿಠ್ಠಲನ ಪಾದ
ರಾಜೀವಯುಗಳ ನಿವ್ರ್ಯಾಜದಲಿ ಭಜಿಪ ಪ್ರ
ಯೋಜನನೊರೆದಿತರ ವ್ಯಾಪಾರ ತೊರೆದು 3