ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ
ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ
ಗೃಂಥಾರ್ಥ ಜ್ಞಾನ
ವಿಷಯವ ನೆನೆಸದಂದದಿ
ಮಾಡೋ ವನಜನಾಭನ ಪ್ರೀಯ ಅ.ಪ
ಮುನಿವರ್ಯ ಮನವಾಚಾಕಾಯಾ ದಿಂದ
ಅನುದಿನ ನಡೆಯುವ ಕ್ರಿಯಾ ಶ್ರೀ
ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು
ಯನಗೆಂದು ಮುಗಿವೆನು ಕೈಯಾ ಆಹಾ
ಭವ ವನಧಿ
ದಾಟಿಸುವ ಸಜ್ಜನರ ಸಂಗವ ಕೊಡು 1
ಶ್ರೀಕಾಂತನಶ್ವತ್ಥ ರೂಪ
ದಿಂದ ಒಲಿದು ಬಂದು ನಿಂತು ಭಕ್ತ
ವೃಂದವ ಪಾಲಿಪ ನಿರುತ ಆಹ
ಇಂದುಮೌಲಿ ಮುಖರಿಂದ ಸಹಿತನಾಗಿ
ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2
ಶ್ರೀ ಕಾರ್ಪರಾಗಾರ
ಬಹುಶರಣು ಜನರಿಗೆ ಮಂದಾರ
ನರಹರಿಯನೊಲಿಸಿದಂಥ ಧೀರಾ ಆಹಾ
ಕರುಣ ಶರಧೆಯನ್ನ ದುರಿತಗಳೋಡಿಸಿ
ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3