ಒಟ್ಟು 134 ಕಡೆಗಳಲ್ಲಿ , 53 ದಾಸರು , 120 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ಸಿದ್ಧಗುರುತ್ರಿಪುರಾಂತಕ
ನೀನೆ ದೀನಜನ ಬಂಧೂ ದಯಾರಸ ಸಿಂಧೂ ಪ ದಿವಿಜರ ಸಮುದಾಯವಿದ್ದರೇನು ಅವನ ವ್ಯಾಳೆಗೆ ಒದಗಲಿಲ್ಲಾ ಅವನಿವಲ್ಲಭ ಅವ್ಯಯವೆಂದರೆ ಅವಸರಕ್ಕೊದಗಿ ಕಾಯದೇ ಕೃಷ್ಣಾ 1 ಭೂತ ಪರಿವಾರವಿದ್ದರೇನು ಆತನ ಅಭಂಗಕ್ಕೆ ಒದಗಲಿಲ್ಲಾ ಪೂತಾತ್ಮ ಪುರುಷೋತ್ತಮನೆಂದರೆ ಚಾತುರ್ಯದಿಂದ ಸಲಹಿದೆ ಕೃಷ್ಣಾ 2 ಚತುರಾಸ್ಯಾದಿಗಳು ಇದ್ದರೇನು ಶ್ರುತಿಯಹಾನಿರೆ ಒದಗಲಿಲ್ಲಾ ಚತುರಾತ್ಮ ಸಿರಿಪತಿ ಉರಗಾದ್ರಿ ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ3
--------------
ವಿಜಯದಾಸ
* ಇದೆ ಇದೆ ಉಡುಪಿಪುರ ನಮ್ಮ ಪದುಮನಾಭನು ನೆಲೆಸಿರುವ ಮಂದಿರ ಪ. ಬಂದ ಆಯಾಸಗಳೊಂದು ಕಾಣಿಸದಿನ್ನು ಸಿಂಧು ತಡಿಯಲಿಪ್ಪ ಪಟ್ಟಣ ನೋಡೆ ಸುಂದರ ಗೋಪುರ ಅಂದವಾಗಿಹ ಬೀದಿ ಬಂದೆವೆ ಗುರು ಹಿರಿಯರ ಕೃಪೆಯಿಂದ 1 ಮೊದಲೆ ತೋರುವುದು ಶ್ರೀ ರಾಘವೇಂದ್ರ ಮಠ ಅದರ ಬದಿಯಲ್ಲೆ ಕೃಷ್ಣಪುರ ಮಠವು ಅದರೆದರಲ್ಲೆ ಶಿರೂರು ಶ್ರೀಗಳ ಮಠ ಎದುರೆ ಕಾಣುವುದೆ ಕನಕ ಮಂಟಪವು 2 ಕಿಂಡಿಯಲ್ಲಿ ನೋಡಿ ಪುಂಡರಿಕಾಕ್ಷನ ಕಂಡು ವಂದಿಸಿ ಮಹಾದ್ವಾರಕೆ ಬನ್ನಿ ಮಂಡೆ ಬಾಗಿಸಿ ಬನ್ನಿ ಮಹಾಪ್ರದಕ್ಷಿಣಿಗಾಗಿ ಕಂಡು ಸಾಗಿರಿ ಮುಂದೆ ಕಾಣೂರು ಮಠವ 3 ಎರಡನೆಯ ಬೀದಿಯಲಿ ಬಲದ ಮಹಾದ್ವಾರ ಗಿರಿಜೆಯರಸ ಚಂದ್ರೇಶ್ವರನ ಗುಡಿ ಎರಗಿ ಮುಂದ್ವರಿಯೆ ಎಡದಲ್ಲಿ ಸೋದೆಯ ಮಠ ಅ ದರ ಪಕ್ಕವೆ ಪುತ್ತಿಗೆ ಮಠ ನೋಡಿ 4 ಬರಬರುತ ಬೀದಿ ಎರಡು ಪಕ್ಕಗಳಲ್ಲಿ ಇರುವ ಅಂಗಡಿ ಸಾಲು ವ್ಯಾಸಾದಿ ಮಠಗಳ್ ನಿರರುತಿ ಕೋಣದಿ ಆದಮಾರು ಮಠ ಅ ದರ ಪಕ್ಕವೆ ಪೇಜಾವರ ಮಠವೆನ್ನಿ 5 ಮುಂದೆ ಒಂದೆರಡ್ಹೆಜ್ಜೆಯಿಂದ ಬರಲು ಅಲ್ಲಿ ಸುಂದರವಾದ ಪಲಿಮಾರು ಮಠ ಅಂದ ನೋಡುತ ಸಾಗಲರ್ಧ ಪ್ರಥಮ ಬೀದಿಯಿಂದ ಬಲಗಡೆ ತಿರುಗೆ ಅನಂತೇಶ್ವರ 6 ಚತುರ ಬೀದಿಯ ಮಧ್ಯೆ ರಾಜಿಸುತಿಹ ಗುಡಿ ಅತಿ ಉನ್ನತವಾದ ಗರುಡಸ್ಥಂಭ ಪ್ರಥಮ ಪ್ರದಕ್ಷಿಣೆ ದ್ವಾರ ದರ್ಶನಗಳು ಗತಿಸಿ ಪೋದುವು ನಮ್ಮ ಪಾಪರಾಶಿಗಳು 7 ನಡೆಯಿರಿ ನಡೆಯಿರಿ ಕೃಷ್ಣನ ಮಠದೆಡೆ ಬಡಿಯುತಲಿಹರು ನಗಾರಿಗಳು ತಡೆಯದೆ ತೆಗೆವರು ಮಹಾದ್ವಾರವೀಗಲೆ ಒಡೆಯ ಕೃಷ್ಣನ ನೋಡ ಬಲ್ಲಿರೆಲ್ಲ 8 ಬೆಳಗು ಝಾವದ ನಾಲ್ಕು ತಾಸಿನ ಭೇರಿಯು ಒಳಗೆ ಪೋಗಿರಿ ಎಂದು ಕೂಗುತಿದೆ ಬಲು ಬೇಗ ಸ್ನಾನ ಮಾಡುತ ಮಧ್ವಸರಸಿನೋಳ್ ಚಲುವ ಕೃಷ್ಣನ ನೋಡ ಬನ್ನಿರೆಲ್ಲ 9 ಮುನಿವರರೆದ್ದು ಸ್ನಾನವಗೈದು ಉಷಃಕಾಲ ಘನಪೂಜೆಗೈದು ಪೊಂಗಲು ದೋಸೆಯ ಮುನಿವರದಗೆ ನೈವೇದ್ಯವರ್ಪಿಸಿ ತಮ್ಮ ಮನದಣಿಸುತ್ತಲಾನಂದಿಪರು 10 ಬಾಲತೊಡಿಗೆಯನಿಟ್ಟ ಬಾಲರೂಪನ ನೋಡಿ ನೀಲಮೇಘಶ್ಯಾಮ ನಿರ್ಮಲಾತ್ಮ ಆಲಯದೆಡಬಲ ಗರುಡ ಮುಖ್ಯಪ್ರಾಣ ಓಲೈಸೆ ಗೋಪಾಲಕೃಷ್ಣವಿಠಲನ 11
--------------
ಅಂಬಾಬಾಯಿ
ಅಂಕಿತ-ಗಿರಿಧರಸುತ ಗುರುಮಹೀಪತಿರಾಯಾ | ಕೊಡು ಎನಗೆ ಸುಮತಿಯಾ ಪ ಭಕ್ತರ ಸುರಧೇನು | ಐಗಳಿ ವೃತ್ತಿಯನು | ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು | ಮಾಡಲು ತಿಮ್ಮವ್ವನು 1 ಭಾಸ್ಕರ ಮುನಿ ಬಂದು | ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು | ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು | ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | 2 ಸತಿಪತಿಗಳ ಚಿತ್ತಾ | ಆಗುದು ಎನೆ ವನಿತಾ | ನಮಿಸಲು ಗುರುತಾತ | ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ 3 ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು | ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು | ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು | ಉಪದೇಶವ ಕೊಟ್ಟು 4 ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ | ನಾನಾ ಬಯಕೆಗಳು | ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು | ಮುಗಿದವು ಹಸ್ತಗಳು 5 ಭ್ರೂಮಧ್ಯದ್ವಿದಳದಾ | ದ್ವಾರವ ತ್ಯಜಿಸುತ್ತಾ | ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ | ಪಂಕಜದೊಳಗಿದ್ದ 6 ನಿತ್ಯ ಪ್ರಭೆಯು ಅನುದಿನಾ | ಕಾಣುತ ಸಂಪೂರ್ಣಾ | ತಿಳಕೊಂಡ್ಯೋ ಪ್ರವೀಣಾ | ದಿಂದಲೇ ಭಯಹರಣಾ 7 ಅಂತಹದು ಬೇಗ | ನೋಡೆಂದನು ಅನಘಾ | ನಿನ್ನಲ್ಲೇ ಈಗಾ | ದುಷ್ಕøತ ತರುನಾಗಾ 8 ಆಗುದು ನಿರ್ಧಾರಾ | ನಿನ್ನುದರದಿ ಕುವರಾ | ಸಂಶಯ ಬಿಡು ಅದರಾ | ಭಕ್ತರ ಸಹಕಾರಾ 9 ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ | ಸತ್ಪುರುಷರೆನಿಸುತಾ | ಇರಲು ದಯವಂತಾ | ವೇಧಿಯು ಬಂತೆನುತಾ 10 ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ | ಧಾಮಾ ಮಾಡಿದೆ ನಿಷ್ಕಾಮಾ | ಬಟ್ಟರು ಬಹುಪ್ರೇಮಾ | ಗುರುಸಾರ್ವಭೌಮಾ 11 ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ | ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ | ಬಂದ್ಯೋ ಮಹಾತ್ಯಾಗಿ | ಬರಲು ವರಯೋಗಿ12 ಕರೆದೊಯ್ದರು ಸ್ತುತಿಸಿ | ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ | ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ | ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ 13 ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ | ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ | ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ | ತಿಳಿದ್ಯೋ ಸುಕುಮಾರಾ 14 ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು | ಸತಿಸುತ ಪರಿವಾರವು | ಭಕ್ತರ ಸಮುದಾಯವು | ಮೃಷ್ಟಾನ್ನ ಭೋಜನವು 15 ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು | ಫಕ್ಕನೆ ವಿನಯದಿ ಮೃದು ಮಾತಾಡಿದಳು | ಸತ್ಪುರುಷರಿಳೆಯೊಳು | ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು | ಆದೀತೆಂದೆನಲು16 ಸೊಸಿಯೊಳು | ತುಕ್ಕವ್ವ ತಿಳಿಸಲು | ಕೈಯ್ಯನೆಳೆಯಲು | ನೋಡುತ ಬೆರಗಾದಳು 17 ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ | ಕೊಟ್ಯೋ ಗುಣರಾಶಿ | ಕೊಂಡ್ಯೋ ಸುಖವಾಸಿ | ಬಹು ನರಕದ ವಾಸಿ 18 ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ | ಸಾಧಕರೊಳಗೆಣೆಯೆ | ದುರಿತಾಂಧ ದ್ಯುಮಣಿಯೆ | ಕುಹಕರಿಗೇನ್ಹೊಣೆಯೆ | ವರಸತ್ವದ ಗುಣಿಯೆ 19 ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ | ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ | ಬಹು ಭಕ್ತರ ಪೊರೆದೆ | ತಡಮಾಡಗೊಡದೆ20
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆತ್ಮ ನಿವೇದನೆ ಇಂದು ಪಾವನವಾಗಿರೊ | ಇಂದಿರಾ ರಮಣನ್ನ ದಿನ ವ್ರತವ ಮಾಡಿ ಪ ಅನುಜ ನಿಜಾಂಗನೆ | ತನಯರು ನೆರೆಹೊರೆ ಮನ ಜನಕೆ | ಸಿರಿ | ದಿನ ತ್ರಯವನು ಅನುಸರಿಸಿರೆಂದು 1 ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು | ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು | ತಾ ಕೂಗಿ ಸುಖದಲ್ಲೀ | ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ2 ಹರಿದಿನದಲ್ಲಿ ನೀರು ಬೆರಳಲಿ ಸುರಿದಾ | ಭೂಸುರನು ಚಾಂಡಾಲನು ನಿರುತದಲೀ | ವರಗೋಮಾಂಸ ನರಕಾ | ನರಿ ನಾಯಿರಾಸ | ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು 3 ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ | ಏನೇನು ಸಂಕಟ ತಾನೊದಗೆ | ಆನಂದ ಮತಿ ಈವಾ ಶ್ರೀನಾಥನ ದಿವಸ | ಧಾನ್ಯದಲಿಟ್ಟು ನಿದಾನಕೆ ಗತಿ ಎಂದು 4 ಇತರ ದಿವಸದಲ್ಲಿ ಅತಿಶಯದಿಂದಲೀ | ಕೃತ ಕರ್ಮಗಳು ವಿಹಿತವಹುದೂ | ರತಿಪತಿಪಿತನ ಅಪ್ರತಿವಾಸರದಲ್ಲೀ | ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು 5 ಎಲೆ ಹಾಕದೆ ಜಾಗರವ ಬೇಸರದಲೆ | ಲವಲವಿಕೆಯಿಂದ ಕವಿಗಳೊಡನೆ | ತವಕದಿಂದಲಿ ಪಾಡುತ ಗಾಯನ ಶುದ್ಧಾ | ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು6 ದಶಮಿ ವಂದು ಏಕಾದಶಿ ಎಂಟು ತಿಳಿದು | ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ | ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ | ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ 7 ಏಳೊಂದು ವತ್ಸರದ ಮೇಲೆ | ವತ್ಸರ ಬಿಟ್ಟು ವಾಲಾಯ ಉಳಿದವರು | ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ 8 ಆವಾದಾದರ ಬಿಡದಿರೀ | ಕೇವಲ ಸಾಧನವೂ | ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ | ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ 9
--------------
ವಿಜಯದಾಸ
ತತ್ವವಿವೇಚನೆ ಅಂತರಂಗದ ಕದವು ತೆರೆಯಿತಿಂದು ಪ ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ 1 ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ 2 ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ 3 ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು 4 ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ 5
--------------
ವಿಜಯದಾಸ
(ಉ) ಆತ್ಮನಿವೇದನಾ ಕೃತಿಗಳು ಎಂದಿಗೊ ಕಂದನ ಪಾಲಿಸುವದು ಇನ್ನೆಂದಿಗೊ ಪ ಅಂದಿನಿಂದಲಿ ನಿನ್ನ ಸುಂದರ ಸೇವೆಗೆ ಬಂದು ಬೇಡುವೇನೋ ಮುಕುಂದ ಮಾಧವಾ 1 ಸಾಧು ಸಜ್ಜನರೊಳು ಭೇದವಳಿದು ನಿಜ ಪಾದವ ಕಾಣುವ ಬೋಧೆ ಆನಂದ 2 ವಾರವಾರ್ಚಿತ ಹರಿ ದಾಸ ತುಲಸಿರಾಮಾ ದೇಸಿಕ ನಿನ್ನ ನಿಜ ದಾಸನಾಗುವುದು3
--------------
ಚನ್ನಪಟ್ಟಣದ ಅಹೋಬಲದಾಸರು
(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು
(ಧನ್ವಂತ್ರಿಯ ಪ್ರಾರ್ಥನೆ) ವೇದ ವೇದ್ಯ ವೈದ್ಯನಾದನು ಭಕ್ತಜನ್ಮಾದಿ ವ್ಯಾಧಿಗಳನ್ನು ಬಾಧಿಸಿ ದುಗ್ಧ ಮಹೋದಧಿ ಮಥಿಸಿದ ಸಮಯದಿ ಪಾರಿಜಾ ತೋದಯವಾದ ಮೇಲಾದರದಿ ಪ. ಧೀರದಿತೆಯಸುರಾರಿ ನಾಯಕರೆಲ್ಲ ಸೇರಿ ಕ್ಷೀರಾಂಬುಧಿ ತೀರದ ತಡೆಗಾಗಿ ಭಾರಿ ಮಂದರವೆತ್ತಿ ತಾರಲಾರದೆ ಮಧ್ಯ ದಾರಿಯೊಳಗೆ ಬಿದ್ದು ಚೀರಲಂದು ನೀರದನಿಭ ಕೃಪೆದೋರಿ ಬಂದಲ್ಲಿ ಸ- ರ್ಪಾರಿಯ ಶಿರದ ಮೇಲೇರಿಸಿ ಗಿರಿಯ ಗಂ- ಭೀರ ರವದಿ ಮುಂದೆ ಸಾರಿದ ಸುರಮೋದ- ಕಾರಿ ಸಂಸ್ಕøತಿ ಭಯವಾರಣನು 1 ಅಮರದೈತ್ಯರ ಭುಜ ಭ್ರಮಣೆಗೆ ನಿಲ್ಲದ ಕ್ಷಮೆಯಧರನ ಕಂಡು ಸುಮನಸ ಗಣಕಾಗಿ ಕಮಠಾವತಾರದಿಂದಮಿತಭಾರವ ಲಕ್ಷ್ಮೀ ರಮಣ ಬೆಂಬನಿಂದಲಾಕ್ರಮಿಸಿದ್ದನೂ ಕ್ಷಮೆಯಿಂತು ತೋರಿ ಸಂಭ್ರಮದಿಂದ ಸುರಕಲ್ಪ- ದ್ರುಮಕಂಠರತ್ನ ಚಂದ್ರಮ ಮುಖ್ಯರುದಿಸಲು ರಮೆಯೊಂದು ರೂಪದಿ ನಮಿಸುತ್ತ ಬರೆ ತನ್ನ ರಮಣೀಯ ಮದುವಿಯಾ ಕ್ರಮವ ತೋರಿ 2 ಇಂತು ವಿವಾಹದನಂತರದಲಿ ಶ್ರೀ- ಕಾಂತನು ದೇವರ್ಕಳಂತವರಿತು ನಿ- ಬೋಧ ಚಿನ್ಮಯನು ನಿರ್ಭಯದಿ ಧ- ನ್ವಂತರಿಯಾದುದನೆಂತೆಂಬೆನು ಕಂತುಕೋಟಿಯ ಗೆಲುವಂತೆ ಸಕಲ ಸುಜ ನಾಂತರ್ಬಹಿರ್ಗತ ಸಂತಾಪಗಳ ಬಲ- ವಂತದಿಂದಲಿ ಕಳವಂಥ ಮೂರುತಿಯಾಗಿ ನಿಖಿಳ ವೇದಾಂತೇಶನು 3 ಕುಂಡಲ ಹಾರ ವನರುಹಾಂಬಕ ವಲ್ಲುಹಾಸ ಕೌಸ್ತುಭಧರ ಕರಿ ಕರೋರುತರ ಕ್ಷಣಿತ ಕಿಂಕಿಣಿ ಕಾಂಚೀವರ ಮಂಜೀರಾ ಸುನಸ ಸುಂದರದಂತ ಶುಭನೀಲಕೇಶಾಂತ ವನಜ ಸಂಭವನೀಗರುಹುತಾಯುರ್ವೇದಾಂತ ನೆನೆಸುವವರಪಮೃತ್ಯುಹಾರಿ ರೂಪವ ತೋರಿ ವಿನಯದಿ ವಿಬುಧಾರ ಸೇರಿದನು 4 ಪಾತಕ ಸಂಘಾಧಾರದಿಂದ್ಯಮಪರಿ ವಾರವೆಂದೆನಿಪತ್ತಿ ಸಾರವ ಸ್ಮಾರಕ್ಷಯೋರಗಜ್ವರಕಫ ಗೂರು ಪ್ರಮೇಹಾದಿ ವಾರಕ ವರಸುಖ ಕಾರಕನು ಥೋರ ಕರದಿ ಸುಧಾಪೂರಿತ ಕಲಶವ ತೋರಿ ದಾನವ ಮೋಹಕಾರಿ ನಾರಾಯಣಿ ಸ್ತ್ರೀ ರೂಪದಿಂದ ದೈತ್ಯಾರಿಗಳಿಗೆ ಕೊಟ್ಟ ಧೀರ ವೆಂಕಟ ಶಿಖರಾರೂಢನು 5
--------------
ತುಪಾಕಿ ವೆಂಕಟರಮಣಾಚಾರ್ಯ
2. ಶನೀಶ್ವರ ದಂಡಕ ಮಾಸ ಮಾನಿನಿ ಒಡಲು ಹಿಂಡು ನೆಟ್ಟನೆ ಹಗೇವದಲ್ಲಿದ್ದ ನಿಜಧಾನ್ಯ ಪಟ್ಟೆಂದು ಚಲಿಪುದು ಪರಿಪರಿಯ ವಸನಗಳು ಇಟ್ಟಲ್ಲಿ ನೆಲೆಸಿಹವಾಗಿಕಾಣಿಸದು ಅಟ್ಟೀವಹುಲಿಕರಡಿಉರಿಬಿಸಿಲು ಘನವಾಗಿ ಮಟ್ಟ ಮಧ್ಯಾಹ್ನದಲಿ ನೀರಡಿಸಿ ಕುಳಿತಿರಲು ಆರಿ[ಹ] ರೈ[ಕಾ]ವರಿಲ್ಲೆಂದು ಸಾರಸಂ [ಬಡುತ] ಕಾಡಿ [ಮೊರೆ]ಯಿಡೆ ನಿನ್ನ ಮೋಡಿ [ಮೆರೆವುದು] ಜರ್ಝರಿ ಭೂತ[ಂಗಳೆಲ್ಲಂ] ಬಿಟ್ಟು ಈ ದಂಡಕಂ ಹನ್ನೊಂದು ಬಾರಿ ಶನಿವಾರವೈದರಲಿ ಪಠಿಪರ್ಗೆ ಹನ್ನೊಂದನೆ ರಾಶಿಯೊಳಿರ್ದ ಫಲವನಿತ್ತು ಚೆಲುವ ವೇಲಾಪುರದ ವೈಕುಂಠ ವಿಠಲನ ಭಕ್ತನೆಂದೆನಿಸಿ ನಿನ್ನ ಪೆತ್ತ ಮಾತೆಯ ಪೆಸರನೆನಿತ ಧನ್ಯರಂ ಮಾಡಿಸದೆ ಅನ್ಯಾಯ[ಹಂ] ಕಾರಗಳಿಗಂಜಿ ನೀ ಬಿಡದೆ ನಿನ್ನ ಮನಬಂದ ರೀತಿಯಲಿ ಬಾಧಿಸದೈಯಾ ಸನ್ಮುನಿವಂದ್ಯ ಸರ್ವೇಶ್ವರಾನಂದ ಸಂಚಾರಿರವಿಸೂನು ಯಮ ಸಹೋದರ ವೀರಧರ್ಮ ಪರಿಪಾಲನೆ ಶನೈಶ್ವರ ಮಹಾರಾಯನೆ ತ್ರಾಹಿ ತ್ರಾಹಿ ನಮಸ್ತೆ ನಮಸ್ತೆ ನಮಃ ಶ್ರೀ ಕೃಷ್ಣಾರ್ಪಣಮಸ್ತುಃ
--------------
ಬೇಲೂರು ವೈಕುಂಠದಾಸರು
ಅಗಜೆ ನಿನ್ನೊಗೆತನದ ಸೊಗಸನೇನೆಂಬೆ ಜಗವೆಲ್ಲ ನಗುವಂತೆ ಹಗರಣವೆ ತೋರಿಸುವೆ ಪ. ಕೆಂಗಣ್ಣು ಕೊನೆಮೀಶೆ ಅಂಗವೆಲ್ಲ ವಿಭೂತಿ ಗಂಗೆ ಶಿರದಲಿ ಬಹು ಭುಜಂಗ ಭೂಷಣನು ತುಂಗ ತ್ರಿಶಿಖಿವ ಪಿಡಿದು ರಂಗನಟನಂತಿರುವ ಅಂಗ ಪೂಜೆಯಗೊಂಬ ಇಂಗಿತೇಶನು ಪತಿಯು 1 ಗೌರಿಯ ಮಗನಾರುಮುಖಿ ಕರಿವದನ ಮತ್ತೋರ್ವ ಮರುಳುಭೂತಗಳೆಲ್ಲ ಪರಿವಾರವು ಸುರನಾಥನರಸಿ ಶಚಿ ಗುರು ಮಹಿಳೆ ತಾರಾದಿವರೆ ನಿನ್ನ ಪರಮ ಸೌಂದರಿಯಕಿದು ಸರಿಯೆಂತು 2 ಶತ್ರುಜಯ ಸೌಭಾಗ್ಯ ಪುತ್ರ ಮಿತ್ರ ಕಳತ್ರ ಚಿತ್ರ ಸುಖದಾಯ ಸರ್ವತ್ರ ಪೂಜ್ಯೆ ಸುತ್ರಾಮಗೊಲಿದೀ ಜಗತ್ರಯವ ಪೊರೆವಸುರ ಮಿತ್ರ ವೆಂಕಟಪತಿಯ ಪಾತ್ರನೆಂತ್ವಧುವಾದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅದ್ರಿಸಂಭವೆ ಸರ್ವಸಂಭ್ರಮದೊಳುಭಾದ್ರಪದ ಶುದ್ಧ ತದಿಗೆಯ ದಿವಸದಿಸದ್ರಾಜಮಾರ್ಗದಿ ನಡೆತರಲುನಡೆತರೆ ಸತ್ಯಭಾಮೆ ರುಕ್ಮಿಣಿಯೊಳೀಭದ್ರೆ ಯಾರೆಂದು ನುಡಿದಳು 1 ಕೋಟಿ ಸೂರ್ಯಕಾಂತಿಯ ನವರತ್ನ ಕಿರೀಟಾಗ್ರದಿ ಚಂದನ ರೇಖೆಯಮೀಟೆನೆ ತಳೆದು ಬಾಹವಳಾರೆ ಅಕ್ಕಕೈಟಭವೈರಿಯ ಸತಿಕೇಳೆ ಮಧುಕೈಟಭ ದಾನವರ ಗೆಲಿದ ಶಶಿಜೂಟನ ವಲ್ಲಭೆ ಶಂಕರಿ ಶಾಕಂಬರಿಯೀಕೆ ಕಾಣೆ 2 ಸತಿ ಕೇಳೆಚಂಡಾಮುಂಡಾಸುರರನು ಗೆಲಿದು ಭೂಮಂಡಲವ ಕಾಯ್ದ ದೇವಿ ಭವಾನಿಯೀಕೆ ಕಾಣೆ 3 ವೀರಮುದ್ರಿಕೆ ಕಂಕಣ ಕಡಗವದೋರೆ ಹಿಂಬಳೆ ದಂಡು ಮುತ್ತಿನಹಾರವ ಧರಿಸಿ ಬಾಹವಳಾರೆ ಅಕ್ಕನಾರಾಯಣನರಸಿ ನೀ ಕೇಳೆಧೀರನಿಶುಂಭನ ಗೆಲಿದಮರರ ಪರಿವಾರವ ಪೊರೆದ ಪರಶಿವೆ ಪರಮೇಶ್ವರಿ ಕಾಣೆ 4 ಮೆರೆವೇಕಾವಳಿಗುಂಡಿನಸರಪರಿಪರಿ ಚಕ್ರಸರ ನಕ್ಷತ್ರದಸರಗಳ ಧರಿಸಿ ಬಾಹವಳಾರೆ ಅಕ್ಕಕರಿವರದನ ಅರಸಿ ನೀ ಕೇಳೆಧುರದೊಳೆ ಧೂಮ್ರಾಕ್ಷನ ವಧಿಸಿದಗಿರಿರಾಜ ಕುಮಾರಿ ಮಂಗಳಗೌರಿ ದೇವಿ ಈಕೆ ಕಾಣೆ5 ಅಚ್ಚ ಮುತ್ತಿನ ಸರಗಳ ನಡುವೆಪಚ್ಚೆಯ ರತುನದ ಪಂಚಸರಗಳನಿಚ್ಚಳದಿ ಧರಿಸಿ ಬರುವವಳಾರೆ ಅಕ್ಕಅಚ್ಚುತನ ಅರಸಿ ನೀ ಕೇಳೆಅಚ್ಚರಿಯನೆ ಶುಂಭ ನಿಶುಂಭರಕೊಚ್ಚಿದ ರುದ್ರಾಣಿ ಶಿವೆ ಶರ್ವಾಣಿ ಈಕೆ ಕಾಣೆ 6 ಚೆಂಗಾವಿಯ ಸೀರೆಯನುಟ್ಟುರಂಗುರತುನದೊಡ್ಯಾಣವನುಟ್ಟುಭೃಂಗಕುಂತಳನರ್ತಿಸೆ ಬಾಹಳಾರ ಅಕ್ಕಅಂಗಜನ ಮಾತೆ ನೀ ಕೇಳೆಸಂಗರದಲಿ ರಕ್ತಬೀಜನ ಗೆಲ್ದಗಂಗಾಧರನರಸಿ ಕಾಳಭುಜಂಗವೇಣಿ ಈಕೆ ಕಾಣೆ 7 ಝಗಝಗಿಸುವ ಕುಂಕುಮರೇಖೆಮಗಮಗಿಸುವ ಮೃಗಮದ ತಿಲಕದಿಅಗಿಲುಗಂಧದೊಳೊಪ್ಪುತ ಬಾಹಳಾರೆ ಅಕ್ಕನಗಧರನಂಗನೆ ನೀ ಕೇಳೆಜಗಳದೆ ಮಹಿಷನ ಮಿಗೆ ಮರ್ದಿಸಿದಗಣಿತ ಸನ್ಮಹಿಮಾಸ್ಪದೆ ಸರ್ವೇಶ್ವರಿ ಈಕೆ ಕಾಣೆ8 ಕೆಂದಾವರೆಯಂದವ ನಿಂದಿಪಬಂಧುರಪದದಂದುಗೆ ಕಲಿರೆನೆಕುಂದಣದ ಸರಪಣಿಯಿಟ್ಟು ಬಾಹಳಾರೆ ಅಕ್ಕಮಂದರಧರನಂಗನೆ ಕೇಳರ-ವಿಂದಜ ಸಂಕ್ರಂದನಮುಖಿ ಸುರವೃಂದವ ಪೊರೆವ ಮಾಹೇಶ್ವರಿ ಈಕೆ ಕಾಣೆ 9 ಮರುಗ ಮಲ್ಲಿಗೆ ಸುರಗಿ ಸೇವಂತಿಗೆಪರಿಮಳಿಸುವ ಸಂಪಗೆ ಕೇದಗೆ-ಯರಳನೆ ಮುಡಿದು ಬಾಹವಳಾರೆ ಅಕ್ಕಮುರಹರನಂಗನೆ ನೀ ಕೇಳೆವರ ಕೆಳದಿಯ ಪುರದೊಳು ನೆಲಸಿದವರದ ರಾಮೇಶ್ವರನಂಗನೆ ಪಾರ್ವತಿ ಈಕೆ ಕಾಣೆ 10
--------------
ಕೆಳದಿ ವೆಂಕಣ್ಣ ಕವಿ
ಆರು ಬಲ್ಲರು ಹರಿಹರಾದಿಗಳ ಮಹಿಮೆಯನು ಪ ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲಅ ಶೌರಿ 1 ಬಲಿಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-ಗಿಲ ಕಾಯ್ದನಚ್ಯುತನು ಅನುಗಾಲದಿಬಲು ಭುಜನು ಬಾಣಾಸುರನ ಗೃಹ ದ್ವಾರವನುಬಳಸಿ ಕಾಯ್ದನು ಹರನು ವರವ ತಾನಿತ್ತು 2 ಭೋಗಿಶಯನನು ಆಗಿ ಭೋಗಿಭೂಷಣನಾಗಿವಾಗೀಶನಾಗಿ ಸೃಷ್ಟಿಸ್ಥಿತಿಲಯಕ್ಕಾಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆಕಾಗಿನೆಲೆಯಾದಿಕೇಶವನ ಮಹಿಮೆಯನು 3
--------------
ಕನಕದಾಸ
ಆರುತೀಯ ಬೆಳಗಿರೀಗ ನಾರಿಯೇರು ಶ್ರೀನಿವಾಸಗಾರುತೀಯ ಪ. ಆರುತೀಯ ಬೆಳಗಿರೀಗ ಸಾರಸಾಕ್ಷ ಪದ್ಮಿನೀಯ ಸೇರಿ ಲಕುನಿಯಿಂದ ಮೆರೆವೊ ಮೂರುಲೋಕದೊಡೆಯ ಕೃಷ್ಣಾ ಅ.ಪ. ಮೀನನಾಗಿ ವೇದ ತಂದು ದಾನವರ ವಂಚಿಸುತ್ತ ಯಾನದಲ್ಲಿ ಭೂಮಿ ತಂದ ದೀನರಕ್ಷಕ ನಾರಸಿಂಹಗೆ 1 ಚಲುವ ಬ್ರಹ್ಮಚಾರಿಯಾಗಿ ಛಲದಿ ಕ್ಷತ್ರಿಯೇರ ಕೊಂದು ಒಲಿವ ಶಿವನ ಬಿಲ್ಲ ಮುರಿದು ನಲಿದು ಬಂದ ಗೋಪಿಕಂದಗಾ 2 ನಾರಿಯೇರ ವ್ರತವನಳಿದು ತೆÉೀಜಿಯೇರಿ ಮೆರೆವ ಧೀರ ವಾರವಾರ ಪೂಜೆಗೆಂದು ಶೂರ ಶ್ರೀ ಶ್ರೀನಿವಾಸಗಾರುತೀಯ 3
--------------
ಸರಸ್ವತಿ ಬಾಯಿ
ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ ನಾಭನ ಮಡದಿಗೆ ಪ ಸಿಂಧು ನೋಡುತ ಕೃಷ್ಣಗೆ ನಂದಗೋಪಕುಮಾರಗೆ 1 ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ ಸುರರೊಳು ಕೃಷ್ಣಗೆ ಇಲ್ಲ ಸಮರೆಂತೆಂಬುದನು ಜಗಕೆಲ್ಲ ತೋರಿದ ದೇವಿಗೆ 2 ವಾರವಾರದಿ ಚಾರುಪದಯುಗ ಸಾರಿಭಜಿಸುವ ಜನರಿಗೆ ಆ- ಪಾರ ಸೌಖ್ಯಗಳೀವ ಕಾರ್ಪರ ನಾರಸಿಂಹನ ರಾಣಿಗೆ3
--------------
ಕಾರ್ಪರ ನರಹರಿದಾಸರು