ಒಟ್ಟು 38 ಕಡೆಗಳಲ್ಲಿ , 20 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರಿನ ಶ್ರೀ ವೆಂಕಟರಮಣ ದೇವರನ್ನು ನೆನೆದು) ವೈರಿ ವಿದಾರಣ ವೀರ ವೆಂಕಟಪತಿಯಾ ಪ. ಸುಜನಾರ್ತಿ ವಾರಣಾ ಮೃತ್ಯಬ್ಧಿತಾರಣ ಧೀರತನದಿ ಕಠಾರಿ ನಡುವಿಗೆ ಸೇರಿ ದಟ್ಟಿಯನುಟ್ಟು ಕೊಂಕಣ ಸ್ವಾರಿ ಬರುವನ 1 ಪಿಡಿವುತ್ತ ನಡುನಡು- ಮತ್ತಲ್ಲಿ ಮೆರೆವಾ ಸಿರಿನಲ್ಲ ದಾಸರ ಮಸ್ತಕದಿ ಕರ ಪಲ್ಲವವನಿರಿಸೆಲ್ಲರನು ತಡವಿಲ್ಲದಲೆ ಸುಖದಲ್ಲಿ ಸಲಹುವÀ 2 ಮಂಗಳಾಭಿದ ಪಟ್ಟಣಾಧೀಶಾ ಪದ್ಮಾ ಪುರುಷಾ ಶ್ರೀ ವೆಂಕಟೇಶಾ ತುಂಗವಿಧಿ ಮಾಲಿಕಾಭೂಷಾ ಅತಸೀ ಭಾಸಾ ಸ್ಮಿತಪೂರ್ಣಭಾಷಾ ಇಂಗಿತಗಳರಿತೀವ ಸೌಖ್ಯ ತರಂಗಗಳ ಸುರ ಸಾರ್ವಭೌಮ ಕು- ರಂಗ ನಯನಾಲಿಂಗಿತಾಂಗ ಮತಂಗಜಾವರಮೋಹಿರೂಪನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಉದಿಸೀದಾ ರವಿಯು ತಾನುದಿಸಿದ ಪ ಉದಿಸಿದ ರವಿಯು ತಾನೆನಿಸೀ | ಗುರುಮುದಮುನಿ ಮತವ ವಿಸ್ತರಿಸೀ | ಆಹಬುಧಜನರಂತಸ್ಥ ಬಹು ವಿಧ ತಿಮಿರವಒದೆದು ಛೇದಿಸುವಂಥ ವಿಜಯಾರ್ಯ ತರಣಿಯು ಅ.ಪ. ಸುರಮುನಿ ಪಾದವ ಭಜಿಸೀ | ಯುಗವೆರಡರೊಳ್ ಸುರಲೀಲ ನೆನಿಸೀ | ಯುಗಮೂರರೊಳ್ ನಿಕಂಪನೆನಿಸೀ | ಯುಗಮೂರೊಂದರಲಿ ಕರುವೆನಿಸೀ | ಆಹಪುರಂದರ ದಾಸರ ಗೃಹದೊಳಗುದಿಸುತ 1 ಕರಣೀಕ ಶೀನಪ್ಪ ತನು | ತನ್ನವರಪ್ರಿಯ ಸತಿಕೂಸಮ್ಮನು | ಬಲುಪರಿಪರಿ ಸೇವಿಸಿ ವರವನು | ಪೊಂದಿಎರಡೊಂದು ತನಯರುಗಳು | ಆಹಪರಿ ಪಾಲಿಸುತ್ತಲಿ ಪರಿಪರಿ ಭವಣೇಲಿಪೊರೆಯವು ಉದರವ ಸರಿಯಿತು ಕಾಲವು 2 ಬಡತನ ಭವಣೇಲಿ ಬಂದೂ | ಒಂದುಕುಡಿತೆ ಗಂಜಿಗಾಗಿ ನೊಂದೂ | ಛಾಗಿಒಡೆಯನ ಮನೆಯೊಳಗಂದೂ | ಮೆದ್ದುಒಡಲ ತುಂಬಿಕೊಂಡು ಬಂದೂ | ಆಹಬಡಗ ದಿಕ್ಕಿನ ಗಂಗೆ ಮಡುವ ಕಾಣುವೆನೆಂದುಸಡಗರದಲಿ ಪೋದ ಬಡ ಕೂಸೀಮಗದಾಸ 3 ವತ್ಸರ ತರಳ | ತನ್ನಹಿರಯರಿಗ್ಹೇಳದೆ ಪೊಳಲ | ಬಿಟ್ಟುತಿರುಗುತ ತೀರ್ಥ ಕ್ಷೇತ್ರಗಳ | ಮಿಂದುಮರಳಿ ತಾ ಮಾತಾ ಪಿತೃಗಳ | ಆಹಬೆರೆದು ಮಾನವರಂತೆ ಸಂಸಾರ ವೃತ್ತಿಲಿಚರಿಸಿದವೆರಡುಂಟು ವರುಷವ ಕಳೆಯುತ 4 ಮತ್ತೆ ತಾ ವೈರಾಗ್ಯದಲ್ಲಿ | ಹರಿಪೆತ್ತ ಗಂಗೆಯ ಸ್ನಾನದಲ್ಲಿ | ಮನತೆತ್ತು ಗಯಾದೇಶದಲ್ಲಿ | ಪಿಂಡವಿತ್ತು ವಾರಣಾಸಿಯಲ್ಲಿ | ಆಹಉತ್ತಮರ ಸಂಗ ನಿತ್ಯಸ್ನಾನ ಸಂಧ್ಯಕೃತ್ಯವನೆಸಗಿ ಸುಚಿತ್ತದಿ ಮಲಗಿರೆ 5 ಸತ್ಯ ಸ್ವಪ್ನದಿ ನರಹರಿಯು | ತನ್ನಪುತ್ರನೆಬ್ಬಿಸಿದಂತೆ ಪರಿಯು | ದಾಸರಂತೆ ರೂಪವ ತಾಳಿ ಹರಿಯು | ತನ್ನಹತ್ತಿರ ಕರೆಯುತ ಧೊರೆಯು | ಆಹಚಿತ್ತಜ ಪಿತ ಪೆತ್ತ ಸರಿತವ ದಾಂಟಿಸಿಉತ್ತಮ ಕಾಶಿಯ ವ್ಯಾಸರ ಕಂಡವ 6 ಪರಿ ಪರಿಯ | ಆಹಅಚ್ಚ ಕವನ ಪೇಳಿ ನೆಚ್ಚಿನ ಮನದವರಸ್ವಚ್ಛತನಕೆ ತಿದ್ದಿ ಅಚ್ಚ್ಯುತಗಿಂತವ 7 ಎರಡೊಂದನೇ ಬಾರಿ ಪೋಗಿ | ಕಾಶಿಪುರದಿ ಗಂಗಾಸ್ನಾನಕಾಗಿ | ಕೂಡೆಸುರನದಿ ಪೆಚ್ಚಿ ಮೇಲಾಗಿ | ಸಿರಿವರದ್ವಿಜಗಭಿಷೇಕವಾಗಿ | ಆಹಸರಿತವು ಮುಂಚಿನ ಪರಿಯಂತೆ ಪ್ರವಹಿಸೆಸುರನರೋರುಗರೆಲ್ಲ ಪರಿಪರಿ ಕೊಂಡಾಡೆ 8 ತುತಿಸುತಲಲ್ಲಿಂದ ಸೇತು | ಸ್ನಾನರತಿಯಿಂದ ಗೈಯ್ಯುತ ಹೊತ್ತು | ಹರಿಕಥೆಗಳ ಪೇಳಿ ಯಾವತ್ತು | ಜನತತಿಗೆ ಸನ್ಮಾರ್ಗವನಿತ್ತು | ಆಹತೀರ್ಥ ಕ್ಷೇತ್ರಂಗಳ ನತಿಸುತ ದಶಮತಿಮತವ ಬೀರಿದನೀತ ಸುಜನರ ಪೊರೆಯಲು 9 ಸಾರ | ಸೊಳ್ಹಾದಿಗಳ್ ಮೊದಲಾದ ಹಾರ | ದಿಂದಭೇದ ವಾದಿಯ ಮತೋದ್ಧಾರ | ಗೈದುಶ್ರೀಶ ಗೊಪ್ಪಿಸೀದ ಧೀರ | ಆಹನಾದ ಮೂರುತಿ ಗುರು ಗೋವಿಂದ ವಿಠಲನಪಾದವ ಸ್ಮರಿಸುತ್ತ ಮೋದವ ಪಡುತ್ತಿದ್ದ 10
--------------
ಗುರುಗೋವಿಂದವಿಠಲರು
ಏನು ಕಾರಣ ಬಂದೆ ಗಂಗೆ | ನಾನೇನು ಪುಣ್ಯವನು ಮಾಡಿದವನಲ್ಲ ಪ ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ | ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ | ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ | ದೋಷವರ್ಜಿತ ವಾರಣಾಸಿ ಕಡಿಯದಲೆ | ಲೇಸಾಗಿ ತಿಳಿಪುವದು ಭೀಷ್ಮನ ಜನನೀ 1 ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ | ಮಲಜನರ ದೋಷವನು ಕಳೆವೆನೆಂದು ಬಂದ್ಯೋ | ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ | ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ | ನೀರಜ ನಯನೇ 2 ನಿತ್ಯ ಕರ್ಮಗಳು ನೋಡಲಿ ಬಂದ್ಯೋ | ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ | ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ | ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ | ನಿಜವ ತಿಳುಪುವದು ವಿಜಯವಿಠ್ಠಲಸುತೆ 3
--------------
ವಿಜಯದಾಸ
ಕರುಣಾಸಾಗರ ಬಂದೆಯ ಸುದಿನವಿಂದಾನಂದ ಸಂದೋಹನೆವರ ಸಿಂಹಾಸನವೀವೆ ಮಂಡಿಸು ಪದಾಂಭೋಜಂಗಳಂ ಪಾಲಿಸೈಸುರಸಿಂಧೂದಕದಿಂದ ಮುಟ್ಟಿ ತೊಳೆವೆಂ ಹಸ್ತಂಗಳಂ ನೀಡಬೇಕರವಿಂದಾಕ್ಷನೆ ತೋಯವಘ್ರ್ಯವಿದಕೋ ಶ್ರೀ ವೆಂಕಟಾದ್ರೀಶನೇ 1ಮೂರಾವರ್ತಿಯಲಾಚಮಾನಕಿದಕೋ ಕ್ಷೀರಂ ಜಗನ್ನಾಥನೇಸ್ಮೇರಾಸ್ಯಾಂಘ್ರಿ ಕರಂಗಳನ್ನೊರಸುವೆಂ ದಿವ್ಯಂಬರ ಕ್ಷೌಮದಿಂದಾರಿದ್ರ್ಯಾರ್ತಿನಿವಾರಣಾರ್ಥಕೊಲವಿಂ ಮಧ್ವಾಜ್ಯದಧ್ಯಾದಿುಂಪಾರಾವಾರಶಯನ ನಿನ್ನ ಭಜಿಪೆಂ ಶ್ರೀ ವೆಂಕಟಾದ್ರೀಶನೇ 2ಮಧುಪರ್ಕಂ ಮಧುಸೂದನಂಗೆ ನಿನಗೈ ಮತ್ತಾಚಮನೋದಕಂಬುಧರಿಂ ಪೂಜಿಪ ಪಾದಪದ್ಮಯುಗಳಕ್ಕೀ ಪಾದುಕಾಯುಗ್ಮಮಂವಿಧಿುಂದಿತ್ತೆನು ಮೆಟ್ಟಿ ದೇವ ಬಿಜಯಂಗೈ ಮಜ್ಜನಸ್ಥಾನಕಂಸುಧೆಯಂ ನಿರ್ಜರರಿಂಗೆ ಕೊಟ್ಟ ವಿಭುವೇ ಶ್ರೀ ವೆಂಕಟಾದ್ರೀಶನೇ 3ಸ್ನಾನಂ ಶುದ್ಧಜಲಂಗಳಿಂ ದಧಿಮದುಕ್ಷೀರಾಜ್ಯದಿಂ ಶರ್ಕರಾಸ್ನಾನಂ ಪೌರುಷಸೂಕ್ತ ಮಂತ್ರವಿಧಿುಂ ಸ್ನಾನಂ ರಮಾಸೂಕ್ತದಿಂಸ್ನಾನಂ ಸಾಗರ ನಾಲ್ಕರಿಂ ಶ್ರುತಿಗಳಿಂ ವಸ್ತ್ರದ್ವಯಂ ಪಾದುಕಾಶ್ರೀನಾಥಂಗುಪವೀತಯುಗ್ಮವಿದಕೋ ಶ್ರೀ ವೆಂಕಟಾದ್ರೀಶನೇ 4ಶ್ರೀಗಂಧಾಗುರು ಲೇಪನಂ ಮೃಗಮದಂ ಯೋಗೀಂದ್ರ ವಂದ್ಯಾಂಘ್ರಿಯೇಭೋಗದ್ರವ್ಯವಿದೀಗ ಭೂಷಣಚಯಂ ಕಂಠಾಂಗುಲೀಶ್ರೋತ್ರಕುಂಶ್ರೀ ಗೌರೀಪ್ರಿಯಮಿತ್ರ ದಿವ್ಯ ಮಕುಟಂ ಪುಷ್ಪಂಗಳಿಂ ಪೂಜಿಪೆಂಬೇಗಾನಂದವನಿತ್ತು ನಮ್ಮ ಸಲಹೈ ಶ್ರೀ ವೆಂಕಟಾದ್ರೀಶನೇ 5ಓಂ ಬಲಭದ್ರಪ್ರಿಯಾನುಜಾಯ ನಮಃ
--------------
ತಿಮ್ಮಪ್ಪದಾಸರು
ಗಂಗೆ ಸನ್ಮಂಗಳಾಂಗೆ ರಂಗನಂಘ್ರಿಯ ಸಂಗೆ ತುಂಗೆ ಕಾರುಣ್ಯ ಪಾಂಗೆ ಅಸಿತಾಂಗೆ ತಿಂಗಳಾನನೆ ಪ ಪರಮೇಷ್ಟಿ ಪಾತ್ರಜಾತೆ ವರುಣನ್ನ ನಿಜದೈಯಿತೆ ಸುರ ಮುನಿಗಣವಿನುತೆ ವರದಾತೆ ಸರ್ವಖ್ಯಾತೆ ತರಣಿಸುತನ ಉದ್ಧರಿಸಿದೆ ಕರುಣದಿ ಧರೆಯೊಳು ನಿನಗೆ ಎ ದುರುಗಾಣೆ ಶರಣಾ 1 ಭಯ ಪಾಪ ತಾಪದೊರೆ ಜಯ ಜಯ ಗುಣಸಾರೇ ತ್ರಯಭುವನ ಉದ್ಧಾರೆ ಆಯುತಾರ್ಕವರ್ನ ನೀರೆ ನಯವ ಭಕುತಿ ಹೃ ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ 2 ಘನ್ನ ವಾರಣಾಸಿ ಕಾಸಿವನ ಆನಂದ ನಿವಾಸಿ ಪ್ರಣತ ಜನರಘನಾಶ ಮಣಿಭೂಷೆ ಸೌಖ್ಯರಾಸಿ ಅನನುತ ವಿಜಯವಿಠ್ಠಲನ ಮನಸಿನಲಿ ನೆನೆಸುವ ಸಾಧನ ಕೊಡು ವಿರಜೇ 3
--------------
ವಿಜಯದಾಸ
ಗೋವರ್ಧನೋದ್ಧಾರ ಗೋಪಿಕಾಜನಜಾರ ರುಕ್ಮಿಣೀ ಮನೋಹರ ರುಕ್ಮಗರ್ವನಿವಾರ ಚಕ್ರಧರ ಶ್ರೀರಂಗ ಶ್ಯಾಮಲಾಂಗ ಪಾಂಡುಸುತ ಸನ್ಮಿತ್ರ ಮಾಂಡವ್ಯಸನ್ನುತಾ ಖಂಡಲಾರ್ಚನಪಾತೃ ನುತಚರಿತ್ರ ದ್ವಾರಕಾಪುರಿವಾಸ ಧರ್ಮರಕ್ಷಣದೀಕ್ಷ ವೈರಿಶಿಕ್ಷಣದಕ್ಷ ಶ್ರೀಕಟಾಕ್ಷ ದ್ರೌಪದೀ ಮಾನದಾ ಪಾಹಿವರದ | ತಾಪತ್ರಯ ಹರಣ ಭಕ್ತ್ಯಧೀನ | ಆಪನ್ನಿವಾರಣಾಮೋಘ ವಚನ ಭೋ ಪರಂಧಾಮ ಶ್ರೀ ಶೈಲಧಾಮ
--------------
ನಂಜನಗೂಡು ತಿರುಮಲಾಂಬಾ
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ನೀನೆ ಸಜ್ಜನರ ಬಂಧು ಪ ಕರಿಮರಿಬಳಗ ಬಂದೊದಗಿದರೇನು ಪರಿಪರಿ ಕ್ಲೇಶವ ಬಿಡಿಸಲಿಲ್ಲ ಹರಿ ನೀನೆ ಗತಿಯೆಂದರೆ ಆ ಕ್ಷಣದಲ್ಲಿ ಕರಿಬಂಧನ ಪರಿಹರಿಸಿದೆ ಕೃಷ್ಣ 1 ಪಿತರು ಮಾತೆಯರಿದ್ದರೇನು ಸುತರಾಪತ್ತಿಗೊದಗಲಿಲ್ಲ ಗತಿ ನೀನೆಂದರೆ ಧ್ರುವ ಪ್ರಹ್ಲಾದರಿ- ಗ್ಹಿತ ಮಾಡಿದೆ ಶ್ರೀಪತಿ ಪರಮಾತ್ಮ 2 ವಲ್ಲಭರೈವರಿದ್ದರೇನು ವಸನ ದ್ರೌಪದಿಗುಡಿಸಲಿಲ್ಲ ಫುಲ್ಲಾಕ್ಷನೆ ಗತಿಯೆಂದರೆ ನೀ ತಡ- ವಿಲ್ಲದಲಕ್ಷಯ ನೀಡಿದೆ ದೊರೆಯೆ 3 ಮನೆಧನ ಧಾನ್ಯಗಳಿದ್ದರು ಧನಂಜಯ- ನ್ವನವಾಸಗಳನು ಬಿಡಿಸಲಿಲ್ಲ ವನಜಾಕ್ಷನೆ ವಾರಣಾವತಿ ದೊರೆತನ ವಿನಯದಿ ಕೊಟ್ಟಿದ್ದಿಂದಿರಾಪತಿಯೆ 4 ಭವ ಘೋರ ದುರಿತ ಯಮಬಾಧೆಗಳ ತಪ್ಪಿಸುವೋರಿಲ್ಲ ಶ್ರೀರಮಣನೆ ಭೀಮೇಶಕೃಷ್ಣನೆಂದು ಸಾರುವರಿಗೆ ಕರುಣಾವಾರಿಧಿ ಹರಿಯೆ 5
--------------
ಹರಪನಹಳ್ಳಿಭೀಮವ್ವ
ಪಾಲಯಮಾಂ ಪರಮೇಶಚಿತಕಾಲಿ ಸಂತತಮಂಬಿಕೇಶಭೂರಿಲೀಲ ಶಂಕರವಿಯತ್ಕೇಶಕರುಣಾಲಯಹೃತಪಶುಪಾಶಧೃತಶೂಲ ವಿಶಾಲ ಕಪಾಲ ಕರಾಲಕಂ-ಕಾಲಿಕಾಕೂಲ (?) ವಿಲೋಲಾಸ್ಥಿಮಾಲಾ ಪ ವಾರಣಾಸುರ ಚರ್ಮಚೇಲಸುರವಾರಸೇವಿತ ಗಾನಲೋಲಭಕ್ತಾಧಾರ ಸಕಲ ಜಗನ್ಮೂಲನಿರ್ವಿಕಾರ ಮೃಕಂಡು ಕಸಾಲಹಾರ ಹೀರ ಮಂದಾರ ಪಟೀರ ನೀಹಾರಗೋಕ್ಷೀರ ಕರ್ಪೂರ ಸುಧಾರಸಗೌರ1 ವ್ಯೋಮತರಂಗಿಣೀಜೂಟಜಿತಕಾಮಪಾಲಿತ ಸರ್ವಖೇಟವಿತತಾಮಲಾಂಬರ ಪುಷ್ಪವಾಟರಘುರಾಮಪೂಜಿತ ಪಾದಪೀಠಪೂರ್ಣಕಾಮಾತಿಧಾಮಾಭಿರಾಮ ನಿಸ್ಸೀಮಸುತ್ರಾಮ ಮುಖ್ಯಾಮರಸ್ತೋಮಲಲಾಮ 2 ಗೋಪತಿರಾಜಿತುರಂಗಘೋರಪಾಪಾಂಧಕಾರಪತಂಗದಿವ್ಯತಾಪಸಹೃದಯಾಬ್ಜಭೃಂಗವಿಶ್ವವ್ಯಾಪಕನಿಗಮಾಂತರಂಗಯಾಮಿನಿಪಕಲಾಪಾದ್ರಿಚಾಪರಮಾಪತಿರೂಪನಿರ್ಲೇಪ ಕೆಳದಿ ರಾಮೇಶ ಚಿದ್ರೂಪ 3
--------------
ಕೆಳದಿ ವೆಂಕಣ್ಣ ಕವಿ
ಪಾಲಯಮಾಂ ಶ್ರೀ ರಾಮಾ ಮೂಲ ಸುಗುಣ ಶೀಲನೆ ಪ ನೀಳ್ಗರೆವ ಹೃದಯನಿವಾಸಾ ಕಾಲಾಂತಕ ಕರ್ಮನಾಶಾ ಚಾಳಿಕ ಚಿನ್ಮಯ ಸುರೇಶ ಹರೀ ಲೋಲಗುಣಾತೀತನೆ 1 ಚಂಡಕಿರಣ ಕುಲಜರಾಘವಾ ಸುಂದರಶ್ರೀ ಸೀತಾಧವಾ ಛಂಧ ನಿಜಾನಂದ ವೀಯುವಾ ಬಂದಭಯನಿವಾರನೇ ನೀ 2 ದಶಮುಖರಾವಣ ನಿವಾರಣಾ ಅಸುರಾಸುರ ನಿಕ್ರಂದ ನಾ ಋಷಿಯಾಗವ ಕಾಯ್ದ ದೇವಾ 3 ಅಂಬುಜಾಕ್ಷಾನಂತರೂಪಾ ತುಂಬಿಹ ಸದ್ಗುರು ಸ್ವರೂಪಾ ನಂಬಿದ ಭಕ್ತರನೆ ಪಾಲಿಪಾ ಚಿದಂಬರ ಶಾಂತಿದಾಯಕಾ 4
--------------
ಶಾಂತಿಬಾಯಿ
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು ಕಾರುಣ್ಯನಿಧಿ ಹರಿ ಒಲಿವಾ ಅ.ಪ. ಕ್ಷೇತ್ರ ಮಧುರೆ ಗೋಕುಲ ವೃಂದಾವನ ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ ದರ್ಭಶಯನ ಮಧ್ಯಾರ್ಜುನ 1 ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ ಚಿದಂಬರ ವೀರ ರಾಘವ ದೇವ ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ ಒಂದೊಂದು ಕೋಟೀಶ್ವರಾ 2 ಸಿರಿ ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ ವೀರ ನಾರಾಯಣವೋ ಕೇದಾರ ಕುರುಕ್ಷೇತ್ರ ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ 3 ಉದ್ಭವ ಆದಿ ಅನಂತ ಬಲಕ್ಷೇತ್ರ ಪುಂಡರೀಕಾಕ್ಷ ಸುಧಿಯೆಂದು ಕನ್ಯಾಕುಮಾರಿ ಮುದದಿ ಮಹಂಕಾಳಿ ಹಸ್ತಿಪಳಿನಾಥ ಪದ ಮುರಳಿ ತ್ರಿವಿಕ್ರಮ 4 ಕೂರ್ಮ ನೆಲ್ಲನಪ ಧರಣೀಧರ ಚಾಪವಾಣಿ ಕ್ಷೇತ್ರ ಶ್ರೀನಿವಾಸನೆದ ನಿಧಿ ಗೌರೀ ಮನೋಹರ 5 ಶಂಕರನ ಕ್ಷೇತ್ರ ಗೋಗರ್ಭ ಶೇತುವನ ಗಜಾರಣ್ಯ ಓಂಕಾರನಾಥ ದೇವಾ ವೇದಿ ಗೋಪಾಲನಿಧಿ ಅಲಂಕಾರ ಮುಕ್ತಿ ಕ್ಷೇತ್ರ 6 ಮಳೂರಪ್ರಮೇಯ ಶಿವಾ ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ ನೀಲಾರಣ್ಯ ರಾಜವನ ನೈಮಿಷ ಭೋಕ್ತ 7 ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ ಮಹಾಲಕುಮಿ ರಘುನಾಥ ಶಿವಗಂಗೆ ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ 8 ಪೇಳಿದುದಕ್ಕೆ ಆರಿಗೆ ಅಳವಲ್ಲ ನೆನಸೋದು ಮಾನವರು ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ- ಪಾಲಿಸುವ ಕುಲಕೋಟಿಗಳ9
--------------
ವಿಜಯದಾಸ
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು ಸುಜನರ ಹೃದಯ ಪಂ ರಜತಮೋ ದೂರನ್ನ ಪ ಮನ ಸೋಲಿಸುವ ಲಲಾಟ ಫಣಿ ನಮ್ಮನು ನೋಡುವ ವಾರೆ ನೋಟಾ ಹಾಹಾ ಮಕರ ಕುಂಡಲ ಕರ್ಣ ಕದಪು ಆವಿನ ಸೋಲಿಸೆ ನಿತ್ಯಾ 1 ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ ತ್ತುಂಗ ಚಂಪಕ ಕೋಶಾ ನಾಸಾರಸಾ ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ 2 ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ ಜಲಧಿ ಗಂಭೀರಾ ದಂತ ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ ಚರಿಸುವ ಚತುರನ್ನ 3 ಪನ್ನೇರು ಸಂಪಿಗೆ ಪೊಂಗೇ ಜಾಜಿ ಇರುವಂತಿಗೆ | ಹಾಹಾ | ಮಕರಂದಾ ಮಾರಂದೋದಕ ಸುರಿಯಲಿಂದು4 ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ ಮಣಿ ಹರಳಾ | ಹಾಹಾ| ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ 5 ಸುರವಿ ಮಯೂಖಾ ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ | ಕೌಸ್ತುಭ ಮಣಿ ಸಿರಿವತ್ಸ ವನಮಾಲಾ ಉರವೈಜಯಂತಿ ಮಂದಾರ ಹೀರ ಹಾರನ್ನ6 ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ ಸ್ತುತಿಪ ಜನಕೆ ಜೀವಾಳಾ | ಹಾಹಾ | ಪ್ರತ್ಯೇಕವಾಗಿ ತೂಗುತಿಹ ಸರಗಳು ತತ್ತುಲಸಿಧಾಮ ಚಿತ್ರವಾಗಿರೆ ಬಲು 7 ನಖ ಚಂದನಾ ಅಗರಾ ಪಚ್ಚೆ ಘನ ಪರಿಮಳ ಗಂಧ ಸಾರಾ | ಹಾಹಾ | ತನುವಿಗೆ ತನುವು ಲೇಪನವಾದಾ ಸೊಗಸು ವಾ ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ 8 ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ ಕುಸುಮ ಮೃಗ ದೇವ ಉಡಿ ಉಡದಾರಾ | ಹಾಹಾ | ಭವಕಿಂಕಿಣಿ ತಳಲಾವಿ ವಸನ ಬಿರು ತೊಡರು ದೈತ್ಯಾವಳಿ ಹರನನ್ನಾ 9 ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ ಸಂಕಲ್ಪಾ | ಹಾಹಾ| ವಾರಣಾ ಕರದಂತೆ ಹಾರೈಸುಯಿಂತು ನೂ ಚಾರು ಚರಣ ಪೆಂಡೆ10 ನಖ ವಜ್ರಾಂಕುಶ ಚಕ್ರ ಸುಧಿಯಾ ಸುರಿವ ಪೀಠ ಸರಸಾ | ಹಾಹಾ | ತ್ರಿದಶನಾಯಕ ಶಿವ ವಿಧಿಗಳ ಮುಕುಟ ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ 11 ದಹಿಸುವ ಪಾದಾ ಕಾಮ ಕಾನನ ದಹಿಸುವ ಪಾದಾ | ಹಾಹಾ | ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ ಮಾನವಗೆ ಬಂದು ಕಾಣಿಸಿಕೊಂಬನ್ನ12 ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್ ಸ್ವಪ್ನದಲ್ಲಿ ಪ್ರಾಜ್ಞಾದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ | ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ ಆಪಾದ ರತುನ ಮೌಳಿಪರಿಯಂತರಾ13 ಸಂಪಾದಿಸು ಜ್ಞಾನಾ ಭಕ್ತಿ ಕೊಂಡಾಡು ಮುನ್ನಿನಾ | ಹಾಹಾ | ಬಂಧನ ಹರಿಸಿ ಆನಂದವ ಕೊಡುವ ಮು ಕುಂದ ಅನಿಮಿತ್ತ ಬಂಧು ವೆಂಕಟನ್ನ 14 ನಿತ್ಯ ಭಜಿಸುವ ಜನರಿಗೆ ಶೀಲಾ ಪುಣ್ಯ ನಿಜರೊಳಗಿಡುವ ಈ ಕೂಲಾ | ಹಾಹಾ | ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ ವಿಜಯವಿಠ್ಠಲರೇಯಾ ಗಜರಾಜವರದನ್ನಾ 15
--------------
ವಿಜಯದಾಸ
ರಜತಗಿರೀಶ್ವರ ಮಹಾನುಭಾವ ಗಜಚರ್ಮಾಂಬರ ನಮೋ ನಮೋ ಪ ವಿಜಯರಾಮಾರ್ಚಿತ ಪದಕಮಲ ಅಜಸುತ ಸೇವಿತ ನಮೋ ನಮೋ ಅ.ಪ ವಾರಣಾಸಿ ಸುಕ್ಷೇತ್ರ ನಿವಾಸ ಪರಮೋಲ್ಲಾಸ ನಮೋ ನಮೋ ಭೂರಿ ವೈಭವಾನಂದ ವಿಲಾಸ ರವಿಶತಭಾಸಾ ನಮೋ ನಮೋ 1 ನಾದಾಲಂಕೃತ ವರದಾತಾ ಶ್ರೀ ಗೌರಿಯುತ ನಮೋ ನಮೋ ಭಾಗೀರಥೀಪ್ರಿಯ ಲೋಕನುತ ದೇವೇಂದ್ರಾತ ನಮೋ ನಮೋ2 ಮಂಗಳದಾಯಕ ಶಶಿಶಿಖರ ಸಂಗವಿದೂರಾ ನಮೋ ನಮೋ ಮಾಂಗಿರಿ ಶೃಂಗವಿರಾಜಿತಶಂಕರ ಶರಣಶುಭಂಕರ ನಮೋ ನಮೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ