ಶ್ರೀರಮಾಧವಾಶ್ರೀತಜನಪಾಲಿತ
ಮಾರಕೋಟಿರೂಪ ವಾರಿಧಿಶಯನ
ಮುರಾರಿ ಕೇಶವ ಶ್ರೀಮ-
ನ್ನಾರಾಯಣ ನೀರಜದಳಲೋಚನಪ.
ಮಾನುಷತ್ವವಾಂತ ಸಮಯದಿ
ಹೀನ ಭೋಗದ ಚಿಂತೆ ನಾನು
ನೀನೆಂಬಾಭಿಮಾನದಿ ಮನಸು ನಿ-
ಧಾನವಿಲ್ಲದೆ ಅನುಮಾನದಿಂದಿಹುದೈ
ಏನು ಕಾರಣ ಹೃದಯನಳಿದೊಳು
ನೀನೆ ನೆಲಸಿಕೊಂಡೀ ನರಯೋನಿಗೆ
ನೀನೆ ಬರಿಸಿಯವಮಾನ ಬಡಿಸುವದು
ಊನವಲ್ಲವೆ ಪದದಾಣೆ ಸತ್ಯವಿದು1
ಬಾಲಕತನದೊಳಗೆ ಕಾವ್ಯದ
ಶೀಲವಿತ್ತೆಯೆನಗೆ ಕೀಳುಮಾಡದೆ ಯೆನ್ನ
ಬಾಲಭೂಷಿತಂಗಳ ಕೇಳೈ
ಶ್ರೀಲಕ್ಷ್ಮೀಲೋಲ ವೆಂಕಟರಾಯ
ಕಾಲಕಾಲಪ್ರಿಯ ಪಾಲಿಸೊಲಿದು ಕರು-
ಣಾಲವಾಲ ನತಪಾಲಶೀಲ ಮುನಿ
ಜಾಲವಂದ್ಯ ವನಮಾಲದಾರಿ ಜಗ
ಮೂಲಸ್ವರೂಪ ವಿಶಾಲ ಗುಣಾರ್ಣವ2
ಹಿಂದಾದುದನರಿಯೆ ಇದರಿಂ
ಮುಂದಾಗುವುದು ತಿಳಿಯೆ ಹಿಂದು
ಮುಂದಿಲ್ಲದೆ ಬಂಧನದೊಳು ಬಲು
ನೊಂದೆನೈ ನಿನಗಿದು ಚಂದವೆ ಶ್ರೀಹರಿ
ತಂದೆ ತಾಯಿ ಬಂದು ಬಾಂಧವ ಬಳಗ ನೀ
ನೆಂದು ನಿನ್ನಯ ಪದದ್ವಂದ್ವವ ಭಜಿಪಾ
ನಂದಸುಜ್ಞಾನದಿಂದೆಂದಿಗೂ ಸುಖ
ದಿಂದಿರುವಂದದಿ ತಂದೆ ನೀ ಪಾಲಿಸು3
ಧಾರಿಣಿಗಧಿಕವಾದ ಮೆರೆವ ಕು
ಮಾರಧಾರೆಯ ತಟದ ಚಾರುನೇತ್ರಾವತಿ
ತೀರ ಪಶ್ಚಿಮ ಭಾಗ ಸಾರಿ
ತೋರುವ ವಟಪುರದೊಳು ನೆಲಸಿಹ
ವೀರ ವೆಂಕಟಪತಿ ವಾರಿಜನಾಭ ಖ-
ರಾರಿ ತ್ರಿದಶಗಣವಾರವಂದ್ಯ ಭಾ-
ಗೀರಥೀಪಿತ ದುರಿತಾರಿ ದೈತ್ಯಸಂ-
ಹಾರಿ ಶ್ರೀಲಕ್ಷ್ಮೀನಾರಾಯಣ ಹರಿ4