ಕೇಳು ಶ್ರೀನಿವಾಸ ಕಷ್ಟವ ತಾಳಲಾರೆ ಶ್ರೀಶ
ಕಂಜಜೇಶ ಪ.
ಮಾತ ಕೇಳದಿರುವ ಮನ ಬಹು
ಕಾತರಗೊಂಡಿರುವ
ರೀತಿಯಿಂದ ಬಹು ಸೋತೆನು ಷಡ್ರಿಪು
ಜಾತ ಬಂಧಿಸಿರುವ 1
ಕಟ್ಟಿ ಸಹಿಸಲಾರೆ ಮೊದಲ
ವಿಠಲ ನೀ ಕೈಬಿಟ್ಟರೆ ಮಾಜದು
ಅಟ್ಟಹಾಸ ತೋರೆ 2
ಉದಯ ಮೊದಲುಗೊಂಡು ನಾನಾ
ವಿಧದಲಿ ಭ್ರಮೆಗೊಂಡು
ಸದಯ ನಿನ್ನ ಪಾದಾಬ್ಜ ನೆನೆಯದೆ
ಚದುರೆಯ ಮನಗೊಂಡು 3
ನಿತ್ಯ ಕರ್ಮವೆಲ್ಲ ಕಂಬಳಿ
ಬುತ್ತಿಯಾಯಿತಲ್ಲ
ಕತ್ತರಿಸಿ ಬ್ರಹ್ಮೆತ್ತಿಯನ್ನು ಪುರು-
ಸಿರಿನಲ್ಲ 4
ತಲ್ಲಣಗೊಳಿಸುವುದು ತುದಿಮೋದ-
ಲಿಲ್ಲದೆ ದಣಿಸುವುದು
ನಿಲ್ಲೆ ನಡೆಯ ಮಲಗೆಲ್ಯು ಬಿಡದು ದೂ-
ರೆಲ್ಲು ಪೇಳಗೊಡದು 5
ಮೆಲ್ಲ ಮೆಲ್ಲನೆದ್ದು ನೀ ಮನ
ದಲ್ಲಿ ಸೇರುತ್ತಿದ್ದು
ನಿಲ್ಲಲು ತೀರಿತಲ್ಲದೆ ಲೋಕ
ದೊಳಿಲ್ಲ ಬೇರೆ ಮದ್ದು 6
ನಿತ್ಯ ನಿನ್ನ ಮುಂದೆ ಸೇವಾ
ವೃತ್ತಿ ಮಾಳ್ಪದೊಂದೆ
ಎತ್ತಾರಕವೆಂದಾಶ್ರಯಿಸದೆ ಮೇ-
ಲೊತ್ತಿ ಬೇಗ ತಂದೆ 7
ಭೃತ್ಯರ ಬಿಡನೆಂದು ಶ್ರುತಿ ಶಿರ
ವೃತ್ತಿ ವಚನವೆಂದು
ಸತ್ಯವೆಂದು ನಂಬಿದ ನೀನರಿಯೆಯ
ಔತ್ತರೆಯ ಬಂಧು 8
ವಿಜಯಸೂತನಿಂದ ಪಾದವ
ಭಜಿಸಿದ ಮ್ಯಾಲೆನ್ನ
ನಿಜ ಜನದೊಳು ಸೇರಿಸುವುದು ಚಿತ
ಸಾಮಜ ವರದನೆ ಮುನ್ನ 9
ಭವ ಪರಿಪಾಲ ಪಾಲಿಸು
ವ್ರಜ ಯುವತಿ ಲೋಲಾ
ಪಾದ ಪಂ-
ಕಜ ಕೊಡು ಗೋಪಾಲ 10