ದಾಸರಾಯಾ ತಂದೇ ಮುದ್ದು ಮೋಹನ | ದಾಸರಾಯ ಪಶೇಷನ ಸಮ ನೀ ದಾಸರ ಪಾಲಿಸೆಭಾಸುರ ಕರಿಗಿರಿ ವಾಸಿಸಿದೆ ನೀ ಅ.ಪ.
ಕರಿಗಿರಿ ಗುಹೆಯಲಿ ಎರಡೈದ್ವತ್ಸರವರ ತಪ ಗೈದ ಪರೋಕ್ಷವ ಪಡದೇ 1
ಪಾಪಿಗಳುಸುರುವ ತಾಪದ ವಚನಕೆಕೋಪಿಸದಲೆ ನೀ ಪಾಲಿಸುವೀಯಾ 2
ಇಂದಿಗೆ ಸಂದವು ವಿಂಶದ್ವತ್ಸರಕುಂದದೆ ಸಾಕಿದೆ ಪರಮಾರ್ಥೇಂದುವ 3
ವತ್ಸರ ವದ್ಯ ಸುಫಾಲ್ಗುಣ ಪಂಚಮಿಯಲಿ ಮಾರುತಿಯನು ಸ್ಥಾಪಿಸಿದೇ 4
ಭಾರತೀಶ ಮುಖ್ಯ ಪ್ರಾಣಾಂತರ್ಗತಗುರು ಗೋವಿಂದ ವಿಠ್ಠಲ ಪರನೆಂದು ಸಾರಿದೆ 5