ಶ್ರೀನಿಕೇತನ ಸರ್ವಪತಿಯು ಸಕಲ ಸಜ್ಜನಾನಂದ
ಕರುಣಾ ಮೂರುತಿಯ ಕಂಠೇಧೃತ ಸತಿಯ
ಮಣಿ ಮಯ ಪೀಠದಿ
ಧ್ಯಾನಿಸಿ ಪರಮಾನುರಾಗದಿ ಪಾಡುತ
ಮಾನಿಸಿ ಕರೆವೆ ಮುದದಿಂದ ಶೋಭಾನೆ 1
ಸಕಲ ಲೋಕಾಧಿನಾಥ ದೇವಾ
ವಿಧಿ ನಾವ
ವಿಕಸಿತ ಮುಖ ಕಂಜಭಾವ ಭಕ್ತರ ಸಂಜೀವ
ಕುಂಡಲ ಶುಭ ಮುರುವಿಲಾಸಿತ
ಕಪೋಲ ಸುಶೋಭಿತ ಕರುಣದಿ
ಭಕುತಿಯನಿತ್ತು ದಯವಾಗು 2
ಕಂಧರಲಂಬಿ ವನಮಾಲಾ ಮಧ್ಯಸ್ಥ
ಕೌಸ್ತುಭೇಂದಿರಾಸಕ್ತ ವಕ್ಷೋಲೀಲ
ಕರುಣಾಲವಾಲ ಬಂದಹರಾರಿದ
ರೆಂದಿವರ ಶುಭಾನಂದ ಕಾದಿದರ
ಸುಂದರ ಶುಭಕರ
ನಿಂದೀ ಮಂಟಪಕೆ ದಯವಾಗು 3
ವಿಧಿಯಾಸನಾದ ಕಂಜನೆ
ಗದಾ ಗಂಭೀರ ವೃತ್ತ
ನಾಭ ವಾಸಃ ಶೋಭ
ಕರ ಭೋರ್ವಬ್ದಾಭ
ಶುಭ ಪದಯುಗ ಕಂಜವ
ಹೃದಯದಿ ತೋರುತ
ಸದಯದೊಳಗರಿಗಳ ಸದೆವುತ ಹಸೆಗೆ ದಯವಾಗು 4
ಮೂರ್ತಿ ಸುರವರ ನುತಕೀರ್ತಿ
ಶ್ರೀನಿಧಿ ಪರಿಹರಿಸಾರ್ತಿ ಪರಿಪೂರಿಸುತರ್ಥಿ
ದೀನ ಬಂಧು ಸ್ವಜನಾನುಕಂಪ ಕರ್ಣಾನುಜಸಾರಥಿ
ಶೇಷ ಗಿರೀಶ ಸುಮ್ಮಾನವ್ಯಾಕಿನ್ನು ಹಸೆಗೇಳು 5