ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಮಹಿಮಗೆ ಮಂಗಳಾರತಿಯ ಎತ್ತಿದರು 1 ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ 2 ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ 3 ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ 4 ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ 5 ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ 6 ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ 7 ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ 8 ಗೋಪಿ ಮುದ್ದಾಡಿದ ಬೆಳಕು ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ 9 ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ 10 ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ 11
--------------
ವಾದಿರಾಜ
ಏಳಯ್ಯ ಸ್ವಾಮಿ ಏಳಯ್ಯ ಪ ಏಳು ಇಂದ್ರಾದಿ ಸುರಾಳಿಗಳೆಲ್ಲ ನಿ- ನ್ನೂಳಿಗ ಬಯಸಿ ಕಾದಿರುವರೊ ಕೃಷ್ಣಾ ಅ.ಪ ವಕ್ಕಿತನಯ ಬೇಗ ಏಳಯ್ಯ ಜಾಕೃತಿ ತೋರುವೆ ಏಳಯ್ಯ 1 ಮುರಿದ ಮಹಾತ್ಮನೆ ಏಳಯ್ಯ ತರುಣಿಯರೊಡನೆ ರಾಸಕ್ರೀಡೆಯಾಡಿದ ಪರಮ ರಸಿಕನೀನು ಏಳಯ್ಯ 2 ಬಲ್ಲಿದನು ನೀನಂತೇಳಯ್ಯ ನಿಲ್ಲಿಸುವರೆ ಬೇಗ ಏಳಯ್ಯ 3 ದೇವಿ ಕೈ ಪಿಡಿಯಲು ಏಳಯ್ಯ ಭಾವಜಪಿತ ಕೃಷ್ಣ ಏಳಯ್ಯ 4 ನರಗೆ ಸಾರಥಿಯಾಗಿ ಜಯವ ಕೊಡಿಸಿ ಯುಧಿ | ಷ್ಠಿರಗೆ ಪಟ್ಟವಗಟ್ಟು ಏಳಯ್ಯ ನರನಂತೆ ನಟಿಸಿ ದಾಸರ ಪರಿಪಾಲಿಪ | ಗುರುರಾಮ ವಿಠಲನೆ ಏಳಯ್ಯ 5
--------------
ಗುರುರಾಮವಿಠಲ