2. ನಮ್ಮಾಳ್ವಾರ್
ವಕುಳಾಭರಣನೆ ಶರಣೆಂಬೆ
ಸಕಲ ಬಂಧು ನೀ ಸಲಹೆಂಬ ಪ
ನಿಖಿಲ ಲೋಕಿಗರ ಶಿಶುನಡೆನೂಕಿದೆ
ಅಕಳಂಕನೆ ಶಠಗೋಪ ನೀನಾದೆ ಅ.ಪ
ನಾಥನಾಯಕಿಯೆ ಕಾರಿಕುಮಾರ
ಪೂತನೆ ಸೇನಾಪತಿಯವತಾರ
ಪಾತಕಹರ ತಾಮ್ರಪರ್ಣಿತೀರ
ಕೀರ್ತಿ ಪಡೆದ ಸುರಪೂಜ್ಯನುದಾರ 1
ಪದುಮ ಪವಿತ್ರನಂದದ ಪ್ರಭೆನೋಡಿ
ಮಧುರಕವಿಯು ಬರೆ ಮುದಗೂಡಿ
ಅದುಭುತ ಮಂತ್ರವನೊರೆದೆ ಹರಿಯಪಾಡಿ
ಸದಮಲ ಸೇವಕನಲಿ ಮನೆಮಾಡಿ2
ಹದಿನಾರು ವರುಷಾಹಾರವಿಲ್ಲದೆ
ಬದಿರಾಂಧ ಮೂಕನಾದ ಮುನಿ
ವಿಧಿ ಪಿತನದುಭುತಧ್ಯಾನ ಮೈಗೂಡಿ
ಸುಧೀಂದ್ರ ಶುಭದ ಅಮೃತಪದ 3
ನಾಥಗೊಲಿದು ತಿರುವಾಯ್ಮೊಳಿಯನು
ಪ್ರೀತಿಯೊಳುಪದೇಶವ ಗೈದು
ಪಾತಕ ಹರಿಸುತ ಪರಿಸರ ಪೊರೆಯುತ
ದಾತಾರಂ ಸುಖದಾತಾರಂ 4
ಮಧುರಾಪೀಠವು ನೀರೊಳು ಮುಳುಗಲು
ವಿಧಿಯಿಲ್ಲದೆ ಪಂಡಿತರೊರಲಿ
ಅಧಿಕರಿಸುತ ತವ ಪದಗಳಿಗೆರಗೆ
ಮಧುರವಾಣಿಯಿಂ ಹಾಡಿದ 5
ಹತ್ತಾಳ್ವಾರರ ಶರೀರವಾಗಿ
ಪೆತ್ತಿಹ ಪರಮೌದಾರ ಮುನಿ
ಎತ್ತಲು ಹರಿಗುರು ಸರ್ವೋತ್ತಮರೆನು
ತುತ್ತುಮಪದವಿಯ ಮಾರ್ಗವತೋರಿದ6
ಆದಿವೈಷ್ಣವ ದೀಕ್ಷಾಚಾರ್ಯ
ವೇದವ ದ್ರಾವಿಡದೊಳು ಪೇಳ್ದೆ
ಶ್ರೀಧರಸನ್ನಿಧಿಯೊಳಗಿದ ಪಠಿಸಲು
ಸಾದರದೊಲಿವಂ ಜಾಜೀಶಂ 7