ಸಾಕು ಸಾಕು ಬಿಡು ಬಡಿವಾರಾ ನಮ್ಮ
ಶ್ರೀಕರ ದಾಸರ ಬಿಡಲಾರಾ ಪ.
ಚಂಚಲಾಕ್ಷಿಯೊಳ್ ಚದುರತೆ ತೋರುತ
ಮಂಚದ ಮೇಲ್ಕುಳ್ಳಿರಲಂದು
ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ
ಪಂಚ ಬಾಣ ಪಿತ ವಂಚಿಸನೆಂದಿಗು 1
ಶಂಭುಮುನಿಯು ಕೋಪಾಡಂಬರವನು ತೋರಿ
ಅಂಬರೀಷಗೆ ಶಾಪವ ಕೊಡಲು
ನಂಬಿದ ಭಕ್ತ ಕುಟುಂಬಿ ಸುದರ್ಶನ
ನೆಂಬಾಯುಧದಿಂದ ಸಂಬಾಳಿಸಿದನು 2
ಎಲ್ಲ ವೇದಶಿರಗಳಲಿ ನೋಡೆ ಸಿರಿ-
ನಲ್ಲ ವೆಂಕಟಗಿರಿವರ ಹರಿಗೆ
ಎಲ್ಲವು ಸರಿಮಿಗಿಲಿಲ್ಲದೆ ತೋರುವ
ಖುಲ್ಲ ದೈವಗಣವಿಲ್ಲೆ ಸೇರುವವು 3