ವಂಚನೆಲ್ಲಿಹುದಯ್ಯ ವೈಕುಂಠಪತಿ
ಗೊಂಚನೆಲ್ಲಿಹದಯ್ಯ ಪ
ವಂಚನೆಲ್ಲಿಹ್ಯದು ವಿರಂಚಿತಾತನಿಗೆ
ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ
ಚರಣದಾಸರೆಂದು ಪಾಂಡವರ
ತುರಗಕಾಯ್ದ ನಿಂದು
ನರಗೆ ಬೆಂಬಲನಾಗಿ ತಿರುಗಿದ ಧುರದಲಿ
ಜರ ಮರೆಯಾಗದೆ ಪರಮಕರುಣಾಕರ 1
ಜಾಗುಮಾಡುತಲಿವ ಭಕ್ತರ
ಯೋಗಕ್ಷೇಮ ತಿಳಿವ
ನೀಗದಂಥ ಮಹಾಭೋಗಭಾಗ್ಯವಿತ್ತು
ಬಾಗಿಲ ಕಾಯ್ದನು ಸಾಗರನಿಲಯ 2
ಜಾರನೆನಿಸಿಕೊಂಡ ಒಲಿದು
ಚೋರನೆನಿಸಿಕೊಂಡ
ತೋರಿದವರ ಮನಸಾರ ವರವಿತ್ತು ಭೂ
ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3