ತತ್ವಮತವೇ ಮತವು ಸಾತ್ತಿ ್ವಕರಿಗೆ ಪ
ನಿತ್ಯ ನಿರ್ಮಲರಾದ ಮುಕ್ತಿಜೀವರಿಗೇ ಅ.ಪ
ಶ್ರೀವನಿತೆ ಮತಿಗೆ ವಾರಿಜಸಂಭವಾ
ಆವಂಗಜರಿಪು ಮನಕೆ ಅಹಂಕಾರದಲಿ
ಯೀವಿಧ ದಶೇಂದ್ರಿಯಕೆ ಸೂರ್ಯಾದಿಗಳು ಎಂಬೋ 1
ಪಂಚಭೇದವನು ತರತಮಗಳನು ತಿಳಿಯುತಂ
ವಂಚನಾದಿಗಳಿಂದ ರಹಿತರಾಗಿ
ಪಂಚ ಸಂಸ್ಕಾರದಿಂ ಪರಿಶುದ್ಧರಾಗುತೆ ಪ್ರ-
ಪಂಚವನು ದಾಟಿರುವ ಪರಮ ಭಕ್ತರಿಗೆ 2
ವನ್ನು ಒಂದೇ ಬಗೆಯ ಗೈದು ಮುದದಿ
ಪನ್ನಗಾದ್ರಿನಿವಾಸ ಗುರುರಾಮ ವಿಠಲನ ಅ-
ಹರ್ನಿಶಿಯು ಬಿಡದೆ ಪೂಜಿಸುವ ಸುಜನರಿಗೆ 3