ವೆಂಕಟೇಶ ನೀ ಕರುಣಿಸಿ ಮಾನಸ ಶಂಕೆಯೆಲ್ಲವ ಓಡಿಸು
ವಂಕುಬೂದಿಯ ಬಿಡಿಸುತ ನಿನ್ನಯ ಕಿಂಕರಾಶ್ರಯ ಕೊಡಿಸು ಪ.
ಎಷ್ಟು ಬಂದರೂ ತೃಪ್ತಿಯ ಪಡದ ಕ-
ನಿಷ್ಟ ಭಾವನೆಯಿಂದಲೀ
ಭ್ರಷ್ಟನಾದೆನು ಬಹು ವಿಧವಾಕೃತ
ನಿಷ್ಠುರಾಗ್ನಿಯ ಹೊಂದಲಿ
ಕೃಷ್ಣ ನೀ ಕರಪಿಡಿವುತ ಕರುಣಾ
ದೃಷ್ಟಿಸಂಗತ ಧೀರತೆಯಿಂದಲಿ 1
ಗಾರುಗೊಂಡೆನು ಶ್ರೀಶನೆ
ಸೇರಿದುದಂಗದಿ ದಿನ ದಿನ
ಮೀರಿತೊ ಗ್ರಹವಾಸನೆ
ಮಾರನಂದನ ಎನ್ನ. . . . . .ತಿ
ಭಾರವೆ ಭವವಾರುದಿ ಶೋಷನೆ 2
ಸರ್ವದಾ ನಿನ್ನ ಪಾದಾಂಬುಜರತಿ
ಇರ್ವರೊಂದನೆ ಪಾಲಿಸು
ಮರ್ಮವೆಂದಿಗು ಮನಸಿಗೆ ಘಟಿಸದೆ
ನಿವ್ರ್ಯಳೀಕದಿ ಲಾಲಿಸು
ಸರ್ವಲೋಕ ಸುಖಾಕರ ಫಣಿಪತಿ
ಪರ್ವತಾಲಯ ಪರಮ ಕೃಪಾಕರ 3