ಏನೆಂದು ಬಣ್ಣಿಪೆನೆ ಈ ನವ್ಯವಿಗ್ರಹನೆ
ಮನದನ್ನನಾದನೆ ವನಜನಯನೆ
ತೊಳೆದಕೆಂಡದ ಕಾಂತಿ ಮೊಳದುದ್ದ ಮೋರೆಯು
ಕೊಳಗುಳದ ಮನವಿತ್ತು ಮೊಳಗುತಿಹನು
ಕತ್ತಿಯನು ಪಿಡಿದೆತ್ತಿ ಉತ್ತಮಾಶ್ವವ ಹತ್ತಿ
ಅತ್ಯಂತ ರೋಷದಿಂ ಸುತ್ತುತಿಹನು
ಕೊಲೆಗೆ ಹೇಸದ ವÀರನೆ ಪಲಜನರ ಕಡಿದವನೆ
ಕಲಿತಾನೆ ಎನುತಿಹನೆ ಕಲ್ಕಿಯಿವನೆ
ಇಂತಿರ್ಪ ವರಗೆ ಮನಸೋತು ನಾನು
ಕಾಂತನೆಂದಾಡಿದೆನು ಪೇಳ್ವುದೇನು
ಶಾಂತಗುಣ ಶೇಷಾದ್ರಿನಿಲಯ ತಾನು
ಸಂತತವು ಭಕ್ತರನು ಸಲಹನೇನು